Sunday, May 18, 2025
  • ನಮ್ಮ ಬಗ್ಗೆ
  • ಸಂಪರ್ಕಿಸಿ
  • Privacy Policy
  • Disclaimer
  • Login/Register
KMS
  • Home
  • Special Story
  • ರಾಜ್ಯ
  • ರಾಷ್ಟ್ರ
  • ರಾಜಕೀಯ
  • ವಿಶ್ಲೇಷಣೆ
  • ಅಂಕಣ
  • ಶಿಕ್ಷಣ
  • ಉದ್ಯೋಗ
  • ಸಂದರ್ಶನ
Sunday, May 18, 2025
  • ನಮ್ಮ ಬಗ್ಗೆ
  • ಸಂಪರ್ಕಿಸಿ
  • Privacy Policy
  • Disclaimer
  • Login/Register
KMS
Banner
  • Home
  • Special Story
  • ರಾಜ್ಯ
  • ರಾಷ್ಟ್ರ
  • ರಾಜಕೀಯ
  • ವಿಶ್ಲೇಷಣೆ
  • ಅಂಕಣ
  • ಶಿಕ್ಷಣ
  • ಉದ್ಯೋಗ
  • ಸಂದರ್ಶನ
KMS
KMS
  • Home
  • Special Story
  • ರಾಜ್ಯ
  • ರಾಷ್ಟ್ರ
  • ರಾಜಕೀಯ
  • ವಿಶ್ಲೇಷಣೆ
  • ಅಂಕಣ
  • ಶಿಕ್ಷಣ
  • ಉದ್ಯೋಗ
  • ಸಂದರ್ಶನ

@2022 - All Right Reserved. Designed and Developed by PenciDesign

ಅಂಕಣ

ಎಲ್ಲರನ್ನೂ ಅಪ್ಪಿಕೊಳ್ಳುವ ಕುವೆಂಪು ಸಾಹಿತ್ಯ ಪ್ರಜ್ಞೆ

by KM Shivaraju December 28, 2023
written by KM Shivaraju December 28, 2023 1 comment 1 minutes read
Share 4FacebookTwitterPinterestEmail
273
ಲೇಖನ:ಡಾ ಸುಬ್ರಹ್ಮಣ್ಯ ಸಿ. ಕುಂದೂರು

ಕನ್ನಡ ಸಾಹಿತ್ಯ ಪರಂಪರೆಯನ್ನು ವಿವೇಚನೆಗೆ ಒಡ್ಡುವಾಗ ಕುವೆಂಪು ಅವರ ವಿಚಾರಧಾರೆಗಳು ಮಹತ್ವವಾಗಿ ಕಾಣಿಸುತ್ತವೆ ಮತ್ತು ಕುವೆಂಪು ಅವರ ಸಾಹಿತ್ಯ ಪ್ರಜ್ಞೆಯು ಕಾಲದ ಹಂಗಿಗೆ ಒಳ ಪಡದೆ ಪ್ರತಿಯೊಬ್ಬರನ್ನು ಅಪ್ಪಿಕೊಳ್ಳುವ ಮತ್ತು ಸಾಹಿತ್ಯದ ಸಾಂಸ್ಕೃತಿಕ ತಿಳುವಳಿಕೆಯನ್ನು ನೀಡುವ ಮೀಮಾಂಸೆಯಂತಿದೆ.

ವಸಾಹತುಶಾಹಿಯ ಕಾಲಮಾನದಲ್ಲಿ ಕನ್ನಡ ಸಾಹಿತ್ಯಕ್ಕೆ, ಸರ್ವೋದಯದಂತಹ ದರ್ಶನಿಕ ತತ್ವವನ್ನು ನೀಡುವ ಮೂಲಕ ದೇಶಿಯ ಅಭಿವ್ಯಕ್ತಿಯನ್ನು ವಿಚಾರ ಕ್ರಾಂತಿ ಮತ್ತು ವಿಶ್ವಮಾನವ ತತ್ವದ ನೆಲೆಯಿಂದ ಮಂಡಿಸಿದ ಕವಿ ಕುವೆಂಪು.

ದಟ್ಟವಾದ ಮಲೆನಾಡಿನ ಮಡಿಲಿನಲ್ಲಿ ಬೆಳೆದ ಕುವೆಂಪು ಅವರಿಗೆ ನೆಲದ ಕಟುವಾದ ಘಮಲು ಕಲಾಭಿವ್ಯಕ್ತಿಯ ಸತ್ವವಾಗಿ ಸೃಜಿಸಿದ್ದನ್ನು ಕಾಣಬಹುದು. ವಸಾಹತುಶಾಹಿ ಆಳ್ವಿಕೆಯ ನೆಲೆಯಿಂದ ದಕ್ಕಿದ ಪಾಶ್ಚಾತ್ಯ ಚಿಂತನೆಗಳು ಹಾಗೂ ಸಾಹಿತ್ಯ ಮಾದರಿಯನ್ನು ಕನ್ನಡಕ್ಕೆ ನಮ್ಮದಾಗಿ ಒಗ್ಗಿಸಿಕೊಂಡು ಸಾಂಸ್ಕೃತಿಕವಾದ ಗುಣಾತ್ಮಕತೆಯನ್ನು ರೂಪಿಸಿದ ಕೀರ್ತಿ ಕುವೆಂಪು ಅವರಿಗೆ ಸಲ್ಲುತ್ತದೆ.

ಆಧುನಿಕವಾಗಿ ನಾವು ತಾಂತ್ರಿಕತೆಯನ್ನು ಅಪ್ಪಿಕೊಂಡು ಮಾತು ಹಾಗೂ ಸೃಜನಾತ್ಮಕತೆಯನ್ನು ಕಳೆದುಕೊಂಡು ಬಡವಾಗುತ್ತಿರುವಾಗ ಕುವೆಂಪು ಅವರ ಸಾಹಿತ್ಯದ ತಾತ್ವಿಕತೆಯಾಗಿರಬಹುದು, ಲೋಕದ ಘಟನೆಗಳನ್ನು ಕಾವ್ಯ, ಕಥನವಾಗಿ ದುಡಿಸಿಕೊಂಡ ಬಗೆಯೆಲ್ಲವು ನಮ್ಮ ಬದುಕಿನ ದಾರಿಗೆ ಚಿಕಿತ್ಸಕತೆಯನ್ನು ನೀಡಬಲ್ಲದು.

ದುಡಿಯುವ ಸಮುದಾಯಗಳು ದಾಸ್ಯದಿಂದ ಬಿಡುಗಡೆಯಾಗಬೇಕು

ಇಪ್ಪನೇ ಶತಮಾನದಲ್ಲಿ ಕನ್ನಡ ನೆಲದಲ್ಲಿ ಉಂಟಾದ ಪಲ್ಲಟವನ್ನು ಸಾಂಸ್ಕೃತಿಕ ಪ್ರಜ್ಞೆಯಾಗಿ ವಿವೇಚಿಸುವ ಕುವೆಂಪು ಸಾಹಿತ್ಯದ ರೂಪಗಳು ಇಂದಿಗೂ ಮಹತ್ವವೆಸುತ್ತವೆ. ನಮ್ಮ ಜನ, ಜನರ ಭಾಷೆ, ನೆಲ, ಜಲದ ಅಭಿವ್ಯಕ್ತಿಯನ್ನು ಜನ ಮುಖಿಯಾಗಿಸುವ ವಿವೇಚನೆಯನ್ನು ವಸಾಹತುಶಾಹಿಯ ಪ್ರತಿಯಾಗಿ ಕಟ್ಟುವ ಕಾರ್ಯವನ್ನು ಮಾಡುತ್ತಾರೆ.

ಮುಖ್ಯವಾಗಿ ದುಡಿಯುವ ಸಮುದಾಯಗಳು ದಾಸ್ಯದಿಂದ ಬಿಡುಗಡೆಯಾಗಿ ಸ್ವಂತಿಕೆಯನ್ನು ಕಾಣಬೇಕು ಯಾರ ಹಂಗಿಗೂ ಒಳಗಾಗಬಾರದು ಅನ್ನುವುದು ಕುವೆಂಪು ಅವರ ದೃಷ್ಟಿಯಾಗಿತ್ತು. ಕೃಷಿ ಮತ್ತು ಅದರ ಶ್ರಮ ಮೀಮಾಂಸೆಯನ್ನು ಬಿಗುವಾಗಿ ಲೋಕದ ಮುಂದಿಡುವುದನ್ನು ನೇಗಿಲ ಯೋಗಿ ಎಂಬ ಪದ್ಯವು ಧ್ವನಿಸುತ್ತದೆ.

ಭಾರತೀಯ ಸಾಹಿತ್ಯ ಪರಂಪರೆಯನ್ನು ನಮ್ಮ ನೆಲದ ಭಾಗವಾಗಿಯೇ ಕಟ್ಟುವ ಪೂರ್ಣದೃಷ್ಟಿಯನ್ನು ಹೊಂದಿದ್ದ ಕುವೆಂಪು ಅವರ ಲೋಕದೃಷ್ಟಿಯು ಜೀವನ ಮೌಲ್ಯವನ್ನು ಧ್ಯಾನಿಸಿದ್ದಂತಿದೆ.

ಮದುಮಗಳು, ಹೆಗ್ಗಡತಿ, ಮಲೆನಾಡ ಚಿತ್ರಗಳಂತಹ ಕಥನಗಳು ಬಹುಮುಖ್ಯವಾಗಿ ಆಧುನಿಕತೆ ಮತ್ತು ದೇಶೀಯತೆಯನ್ನು ಮುಖಾಮುಖಿಯಾಗಿಸಿ ಮಾನವ ಜೀವನದ ಸಾಂಸ್ಕೃತಿಕ ಅಭಿವ್ಯಕ್ತಿಯನ್ನು ಮಲ್ಲಿಗೆಯ ಹೂವು ಪೋಣಿಸಿದಂತೆ ಪೋಣಿಸಿದ್ದು, ಇಂದಿನ ಅನೇಕ ಬರಹಗಾರರಿಗೆ ಮಾದರಿಯನ್ನು ಸ್ಪೂರ್ತಿಯನ್ನು ನೀಡಿದೆ.

ಕುವೆಂಪು ಬರೆದ ಶಿಶುಗೀತೆ, ನಾಟಕ, ವಿಮರ್ಶೆ, ಪ್ರಬಂಧ, ಕಥನ, ಕಾವ್ಯಗಳೆಲ್ಲವೂ ಕನ್ನಡ ಪರಂಪರೆಗೆ ಬಹುದೊಡ್ಡ ಕೊಡುಗೆಯನ್ನು ಒದಗಿಸಿತ್ತಲ್ಲದೆ ಕನ್ನಡ ಭಾಷೆಗೆ ಚಲನಶೀಲತೆಯನ್ನು ತಂದು ಕೊಟ್ಟಿದನ್ನು ಮರೆಯುವಂತಿಲ್ಲ.

ಹೆಚ್ಚಿನ ಸುದ್ದಿಗಾಗಿ ಈ ಕೆಳಗಿನ ಲಿಂಕ್ ಕ್ಲಿಕ್  ಮಾಡಿ

ಸದ್ದಿಲ್ಲದೆ ಆಪರೇಷನ್ ಕಮಲ

ಕನ್ನಡ ನಾಮಫಲಕ ಅಳವಡಿಕೆಗೆ ಸುಗ್ರೀವಾಜ್ಞೆ

ಕಾನೂನು ಕೈಗೆತ್ತಿಕೊಂಡರೆ ಸಹಿಸುವುದಿಲ್ಲ

Share this:

  • WhatsApp
  • Post
  • Tweet
  • Print
  • Email
bengalurudr. subramnya c. kunduruK V PuttappakarnatakakmskmskannadaKuvempuliterature
Share 4 FacebookTwitterPinterestEmail
KM Shivaraju

previous post
ಫಲಾನುಭವಿಗಳಿಗೆ ನೇರ ನಗದು ವರ್ಗಾವಣೆ
next post
ಕಾನೂನು ಕೈಗೆತ್ತಿಕೊಂಡರೆ ಸಹಿಸುವುದಿಲ್ಲ

You may also like

ಇತಿಹಾಸ ಮರೆಯದ ಕೌತುಕದ ಕ್ಷಣಗಳು..

April 21, 2025

ಕೇಂದ್ರ ಮಂತ್ರಿ ಕುಮಾರಣ್ಣನ ಲೇಟೆಸ್ಟು ಸಂಕಟ

February 17, 2025

ಅಮಿತ್ ಷಾ ಆಟ ಬಲ್ಲವರಾರು?

February 3, 2025

ಬಿಜೆಪಿ ಭಿನ್ನರಿಗೆ ಚುನಾವಣೆಯ ಕನಸು?

January 27, 2025

ನಿಖಿಲ್ ಇಲ್ಲಿಗೆ ಕುಮಾರಣ್ಣ ದಿಲ್ಲಿಗೆ

January 20, 2025

ಕೊತ ಕೊತ ಕುದಿಯುತ್ತಿದ್ದಾರೆ ಜಾರ್ಕಿಹೊಳಿ

January 6, 2025

ವಿಜಯೇಂದ್ರ ಸೇಫ್ಟಿಗೆ ನಡ್ಡಾ ಬರುತ್ತಿದ್ದಾರೆ

December 23, 2024

ಕಾಂಗ್ರೆಸ್ ಹಡಗಿಗೆ ಕೃಷ್ಣ ಹತ್ತಿದ ಕತೆ

December 10, 2024

ಬಿಜೆಪಿ ಬೆಕ್ಕಿಗೆ ಗಂಟೆ ಕಟ್ಟುವುದು ಹೇಗೆ?

December 9, 2024

ಯಡಿಯೂರಪ್ಪ ನೋವು ಷಾ ಕಿವಿಗೆ ಬಿತ್ತು

December 2, 2024

1 comment

ಕನ್ನಡ ಕುಲ ತಿಲಕ

ಕೆ ಎಂ ಪ್ರಕಾಶ್ ಕುಂದೂರು December 28, 2023 - 9:03 am

ಒಂದು ಉತ್ತಮವಾದ ಲೇಖನ ಅಭಿನಂದನೆಗಳು

Reply

Leave a Comment Cancel Reply

Save my name, email, and website in this browser for the next time I comment.

Social Networks

Facebook Twitter Instagram Linkedin Youtube Email Rss

KMS Analysis

  • ಶತ್ರು ದೇಶದ ಕ್ಷೇಮಕ್ಕಾಗಿ ಕಾಂಗ್ರೆಸ್ ಮಿಡಿಯುತ್ತಿದೆ : ಹೆಚ್ ಡಿಕೆ ಟೀಕೆ

    May 16, 2025
  • ಮೇ 20ಕ್ಕೆ ಕಾಂಗ್ರೆಸ್ ಸರ್ಕಾರದ ಸಾಧನಾ ಸಮಾವೇಶ

    May 15, 2025
  • ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ವರದಿ ಅನುಷ್ಠಾನಕ್ಕೆ ಸಿದ್ದರಾಮಯ್ಯ ಕಸರತ್ತು

    May 8, 2025
  • ಭಯೋತ್ಪಾದನೆ ನಿಗ್ರಹ: ಪ್ರಧಾನಿ ಮೋದಿಗೆ ಸಂಪೂರ್ಣ ಬೆಂಬಲ ಘೋಷಿಸಿದ ದೇವೇಗೌಡರು

    May 6, 2025
  • ಜಾತಿಗಣತಿ ವರದಿ ದತ್ತಾಂಶ ಮರುಪರಿಶೀಲನೆಗೆ ನಿರ್ಧಾರ

    April 18, 2025

Categories

  • Special Story (179)
  • ಅಂಕಣ (101)
  • ಉದ್ಯೋಗ (237)
  • ದಿನ ಭವಿಷ್ಯ (110)
  • ರಾಜಕೀಯ (1,581)
  • ರಾಜ್ಯ (1,870)
  • ರಾಷ್ಟ್ರ (1,842)
  • ವಿಶ್ಲೇಷಣೆ (183)
  • ಶಿಕ್ಷಣ (318)
  • ಸಂದರ್ಶನ (11)

About Us

ನೈಜ ಹಾಗೂ ವಿಶ್ವಾಸಾರ್ಹತೆಯ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರವಾದ ಸುದ್ದಿ, ಅಭಿಪ್ರಾಯಗಳ ಪ್ರಕಟಣೆಯ ವೆಬ್ ತಾಣ. ಕರ್ನಾಟಕ ರಾಜ್ಯದ ಪ್ರಚಲಿತ ವಿದ್ಯಮಾನಗಳು, ರಾಜಕೀಯ, ನಾಡು, ನುಡಿ, ಜಲ ವಿಚಾರಗಳಲ್ಲದೆ, ದೈನಂದಿನ ಆಗು-ಹೋಗುಗಳು, ವಿವಿಧ ಜಿಲ್ಲೆಗಳ ಪ್ರಮುಖ ವಿಚಾರಗಳ ಭಿತ್ತರಕ್ಕೆ ಹೆಚ್ಚು ಒತ್ತು ನೀಡುವುದು. ನಮ್ಮ ಕುರಿತು ಹೆಚ್ಚಿನ ವಿವರ ಪಡೆಯಲು ಇಲ್ಲಿ ಇಲ್ಲಿಕ್ಲಿಕ್‌ ಮಾಡಿ

Facebook Twitter Linkedin Youtube Email Vimeo Rss

Politics

  • ಶತ್ರು ದೇಶದ ಕ್ಷೇಮಕ್ಕಾಗಿ ಕಾಂಗ್ರೆಸ್ ಮಿಡಿಯುತ್ತಿದೆ : ಹೆಚ್ ಡಿಕೆ ಟೀಕೆ

    May 16, 2025
  • ಮೇ 20ಕ್ಕೆ ಕಾಂಗ್ರೆಸ್ ಸರ್ಕಾರದ ಸಾಧನಾ ಸಮಾವೇಶ

    May 15, 2025
  • ಅತಿಥಿ ಶಿಕ್ಷಕರು ಮತ್ತು ಉಪನ್ಯಾಸಕರ ಗೌರವ ಸಂಭಾವನೆ ಪರಿಷ್ಕರಣೆ

    May 15, 2025

KMS Special

  • ಮೇ 20ಕ್ಕೆ ಕಾಂಗ್ರೆಸ್ ಸರ್ಕಾರದ ಸಾಧನಾ ಸಮಾವೇಶ

    May 15, 2025
  • ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ವರದಿ ಅನುಷ್ಠಾನಕ್ಕೆ ಸಿದ್ದರಾಮಯ್ಯ ಕಸರತ್ತು

    May 8, 2025
  • ‘ಗಂಗಾರತಿ’ ಮಾದರಿ ಕೆಆರ್‌ಎಸ್ ಬಳಿ ‘ಕಾವೇರಿ ಆರತಿ’

    May 3, 2025
  • Facebook
  • Twitter
  • Linkedin
  • Youtube
  • Email
  • Telegram
KMS
  • Home
  • Special Story
  • ರಾಜ್ಯ
  • ರಾಷ್ಟ್ರ
  • ರಾಜಕೀಯ
  • ವಿಶ್ಲೇಷಣೆ
  • ಅಂಕಣ
  • ಶಿಕ್ಷಣ
  • ಉದ್ಯೋಗ
  • ಸಂದರ್ಶನ

Read alsox

ಇತಿಹಾಸ ಮರೆಯದ ಕೌತುಕದ ಕ್ಷಣಗಳು..

April 21, 2025
Sign In

Keep me signed in until I sign out

Forgot your password?

Password Recovery

A new password will be emailed to you.

Have received a new password? Login here

ಕೆಎಂಎಸ್‌ ಕನ್ನಡ ವಾಟ್ಸಪ್‌ ಗ್ರೂಪ್‌ಗೆ ಸೇರಿ