Saturday, March 7, 2026
  • ನಮ್ಮ ಬಗ್ಗೆ
  • ಸಂಪರ್ಕಿಸಿ
  • Privacy Policy
  • Disclaimer
  • Login/Register
KMS
  • Home
  • Special Story
  • ರಾಜ್ಯ
  • ರಾಷ್ಟ್ರ
  • ರಾಜಕೀಯ
  • ವಿಶ್ಲೇಷಣೆ
  • ಅಂಕಣ
  • ಶಿಕ್ಷಣ
  • ಉದ್ಯೋಗ
  • ಸಂದರ್ಶನ
Saturday, March 7, 2026
  • ನಮ್ಮ ಬಗ್ಗೆ
  • ಸಂಪರ್ಕಿಸಿ
  • Privacy Policy
  • Disclaimer
  • Login/Register
KMS
Banner
  • Home
  • Special Story
  • ರಾಜ್ಯ
  • ರಾಷ್ಟ್ರ
  • ರಾಜಕೀಯ
  • ವಿಶ್ಲೇಷಣೆ
  • ಅಂಕಣ
  • ಶಿಕ್ಷಣ
  • ಉದ್ಯೋಗ
  • ಸಂದರ್ಶನ
KMS
KMS
  • Home
  • Special Story
  • ರಾಜ್ಯ
  • ರಾಷ್ಟ್ರ
  • ರಾಜಕೀಯ
  • ವಿಶ್ಲೇಷಣೆ
  • ಅಂಕಣ
  • ಶಿಕ್ಷಣ
  • ಉದ್ಯೋಗ
  • ಸಂದರ್ಶನ

@2022 - All Right Reserved. Designed and Developed by PenciDesign

ಅಂಕಣಶಿಕ್ಷಣ

ಶ್ರೀಕೃಷ್ಣನಂತಾಗಲು ಶಂಖಮುದ್ರೆ

by cklbkrish April 21, 2024
written by cklbkrish April 21, 2024 0 comments 3 minutes read
1FacebookTwitterPinterestEmail
613

ಗಂಟಲಿನ ಸಮಸ್ಯೆ, ತೊದಲುವಿಕೆ ನಿವಾರಣೆಗೆ ಸಹಕಾರಿ

ದೇವಸ್ಥಾನದ ಬಾಗಿಲುಗಳನ್ನು ತೆರೆಯಲು, ಪೂಜೆಯ ವೇಳೆಗೆ ದೇವರನ್ನು ಜಾಗೃತಿಗೊಳಿಸಲು ಶಂಖವನ್ನು ಊದಲಾಗುತ್ತದೆ. ಶಂಖನಾದ ಶುಭ ಸಂಕೇತ, ಆಧ್ಯಾತ್ಮಿಕತೆಯ ಸಂಕೇತ, ದೇವರು ಮತ್ತು ಭಕ್ತರ ನಡುವಿನ ಸಂಬಂಧವನ್ನು ಗಟ್ಟಿಗೊಳಿಸುವ ಸಂಕೇತವಾಗಿದೆ. ದ್ವಾಪರದಲ್ಲಿ ಕೃಷ್ಣನನ್ನು ತಲುಪಿವಿಕೆಗೆ ಶಂಖವನ್ನು ಗುರುತಾಗಿ ಬಳಸಲಾಗುತ್ತಿತ್ತು. ಇವತ್ತಿಗೂ ದೇವರ ಕೋಣೆಯಲ್ಲಿ ಶಂಖವನ್ನಿಟ್ಟು ಪೂಜಿಸುವುದ ವಾಡಿಕೆ. ಶಂಖದಿಂದ ಬಂದರೆ ಮಾತ್ರ ತೀರ್ಥ ಎಂಬ ಗಾದೆ ಮಾತು ಇದೆ. ಶಂಖಕ್ಕೆ ಇರುವ ಮಹತ್ವವಿದು.

ಹೊರ ಜಗತ್ತಿನಲ್ಲಿ ಕಾಣಸಿಗುವ ಈ ಶಂಖುವಿನ ಪ್ರಯೋಜನಗಳೇ ಇಷ್ಟಿರಬೇಕಾದರೆ, ಆ ಶಂಖದ ಅಂಶವನ್ನು ನಮ್ಮೊಳಗೆ ಆವಾಹಿಸಿಕೊಂಡಾಗ ಇನ್ನೂ ಉತ್ತಮ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು. ಇದನ್ನೇ ಅದ್ವೈತ ಎಂದು ಕರೆದರೆ ತಪ್ಪಾಗಲಾರದು. ಹೊರಗೆ ಕಾಣುವ ಶಂಖವನ್ನು ಯೋಗ ಮುದ್ರೆಯ ಮೂಲಕ ಹಸ್ತಮುದ್ರೆಯಲ್ಲಿ ಶಂಖ ಮುದ್ರೆಯನ್ನು ರೂಪಿಸಿಕೊಳ್ಳಬಹುದು. ಇದು ಸಂಪೂರ್ಣ ನರಮಂಡಲವನ್ನು ಶುದ್ದೀಕರಿಸುವುದು. ಹೇಗೆ ದೇವಾಲಯದ ಬಾಗಿಲು ತೆರೆಯುವ ಮುನ್ನ ಶಂಖನಾದ ಮಾಡಲಾಗುತ್ತದೆಯೋ ಹಾಗೆಯೇ ಆಧ್ಯಾತ್ಮಿಕ ಜಾಗೃತಿ ಮೂಡಿಸಿಕೊಳ್ಳುವ ಮೊದಲು ಶಂಖ ಮುದ್ರೆಯನ್ನು ಮಾಡಬೇಕಾಗುತ್ತದೆ. ಈ ಮುದ್ರೆಯನ್ನು ದೇವತಾ ಆರಾಧನೆ ಮತ್ತು ಧ್ಯಾನ ಅಭ್ಯಾಸಗಳಲ್ಲಿ ಸಾಮಾನ್ಯವಾಗಿ ಬಳಸಲಾಗುವುದು.

ಲೋಕಸಭೆ ಚುನಾವಣೆಗೆ 5.47 ಕೋಟಿ ಮತದಾರರು

ವೇದಗಳಲ್ಲಿ ಶಂಖವು ಶುದ್ಧತೆಯ ಸಂಕೇತವಾಗಿದೆ. ನೀವು ಶಂಖವನ್ನು ಊದಿದಾಗ ಅದು ಸಂಪೂರ್ಣವಾಗಿ ಖಾಲಿಯಾಗಿರುತ್ತದೆ. ಅದ್ಭುತವಾದ ಧ್ವನಿಯನ್ನು ಗಾಳಿಯೊಂದಿಗೆ ಸೃಷ್ಟಿಸುತ್ತದೆ. ಅದೇ ರೀತಿ ವೇಗವಾದ ಸಂವಹನಕ್ಕಾಗಿ ನರಗಳನ್ನು ಶುದ್ಧೀಕರಿಸುವ ಮೂಲಕ ಆಂತರಿಕ ಕರುಹುಗಳನ್ನು ಸುಧಾರಿಸಲು ಈ ಮುದ್ರೆಯನ್ನು ಮಾಡಬೇಕಾಗುವುದು. ಶಿವ ಸಂಹಿತೆಯಲ್ಲಿ ಮಾನವನ ದೇಹದಲ್ಲಿನ ಒಟ್ಟು ನಾಡಿಗಳ ಸಂಖ್ಯೆ 72 ಸಾವಿರವೆಂದು ಹೇಳಲಾಗಿದೆ. ಈ ಶಂಖಮುದ್ರೆಯನ್ನು ಮಾಡುವ ಮೂಲಕ ಈ ನಾಡಿಗಳು ಶುದ್ಧವಾಗುತ್ತವೆ.

ಶಂಖಮುದ್ರೆ ಮಾಡುವ ವಿಧಾನ:

ಎಡಗೈನ ಹೆಬ್ಬೆರಳನ್ನು ನಿಮ್ಮ ಬಲ ಅಂಗೈನಲ್ಲಿ ಇರಿಸಿ, ನಿಮ್ಮ ಬಲಗೈನಿಂದ ಎಡಗೈ ಹೆಬ್ಬೆರಳಿನ ಸುತ್ತಲೂ ನಾಲ್ಕು ಬೆರಳುಗಳನ್ನುಸುತ್ತಿಕೊಳ್ಳಿ. ನಿಮ್ಮ ಎಡಗೈ ಹೆಬ್ಬೆರಳು ಮತ್ತು ಬೆರಳುಗಳನ್ನು ಆಕಾಶದ ಕಡೆ ತಿರುಗಿಸಿ ಬಲಗೈನ ಹೆಬ್ಬೆರಳು ಎಡಗೈನ ಮಧ್ಯದ ಬೆರಳನ್ನು ಸ್ಪರ್ಶಿಸುತ್ತಿರಲಿ. ನಿಮ್ಮ ಕೈಗಳು ಈಗ ಶಂಖದಂತೆ ಕಾಣುವುದನ್ನು ಗಮನಿಸಿ. ಈ ರೀತಿ ಬೆರಳುಗಳ ಜೋಡಣೆಯನ್ನು ಹಿಡಿದುಕೊಳ್ಳಿ. ಯಾವುದೇ ಧ್ಯಾನಸ್ಥ ಸ್ಥಿತಿಯಲ್ಲಿ ಕುಳಿತುಕೊಂಡು ಈ ಮುದ್ರೆಯನ್ನು ಮಾಡಬಹುದು.  ಮುದ್ರೆಯು ಎದೆಯ ಮಧ್ಯ ಭಾಗದಲ್ಲಿ ಕೇಂದ್ರೀಕೃತವಾಗಿರಲಿ. ಅಂಜಲಿ ಮುದ್ರೆಗೆ ಪರ್ಯಾಯವಾಗಿ ಈ ಮುದ್ರೆಯನ್ನು ಮಾಡಬಹುದು. ಈ ಮುದ್ರೆ ಮಾಡುವಾಗ ಉಸಿರಾಟದ ಮೇಲೆ ಗಮನ ಕೇಂದ್ರೀಕರಿಸಿ ಹಾಗೂ ಓಂ ಕಾರವನ್ನು ಪಠಿಸಿ ಕಣ್ಣುಗಳನ್ನು ಮುಚ್ಚಿ. ಕೈಗಳನ್ನು ಬದಲಿಸಿ, ಶಂಖಮುದ್ರೆಯನ್ನು ಮಾಡಬಹುದು.

ಯಾವುದೇ ಪೂಜಾ ಕಾರ್ಯಗಳನ್ನು ಪ್ರಾರಂಭಿಸುವ ಮೊದಲು ಶಂಖಮುದ್ರೆಯನ್ನು ಮಾಡುವುದು ಒಳ್ಳೆಯದು. ಅಲ್ಲದೆ, ವಿಶುದ್ಧಿ ಚಕ್ರವನ್ನು ಉತ್ತೇಜಿಸಲು ಶಂಖಮುದ್ರೆಯನ್ನು ಅಭ್ಯಾಸ ಮಾಡಬಹುದು. ಗಂಟಲಿನ ಸಮಸ್ಯೆಯನ್ನು ದೂರ ಮಾಡುತ್ತದೆ. ತೊದಲುವಿಕೆ ನಿವಾರಣೆ ಮಾಡುತ್ತದೆ. ಭಾಷಣವನ್ನು ಸುಧಾರಿಸುತ್ತದೆ. ಧ್ವನಿಯನ್ನು ಸ್ಪಷ್ಟಪಡಿಸುವುದು. ಆತ್ಮವಿಶ್ವಾಸವನ್ನು ಹೆಚ್ಚು ಮಾಡುವುದು. ಗಂಟಲಿನ ಸೋಂಕಿಗೆ ಚಿಕಿತ್ಸೆಯಾಗಿ ಈ ಮುದ್ರೆ ಕಾರ್ಯನಿರ್ವಹಿಸಲಿದೆ. ಶಂಖಮುದ್ರೆ ಪ್ರತಿದಿನ ಮಾಡುತ್ತಾ ಓಂಕಾರವನ್ನು ಪಠಣೆ ಮಾಡುವುದರಿಂದ ಪುನರ್ ಯೌವ್ವನ ಮರುಕಳಿಸಲಿದೆಯಂತೆ. ಥೈರಾಡ್ ಗ್ರಂಥಿ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸಲು ಸಹಕಾರಿ.

ಚರ್ಮದ ತುರಿಕೆ ಮತ್ತು ಕೆಂಪು ದದ್ದುಗಳು ನಿವಾರಣೆ

ಶಂಖಮುದ್ರೆ ನಿತ್ಯ ಮಾಡುವುದರಿಂದ ಚರ್ಮದ ತುರಿಕೆ ಮತ್ತು ಕೆಂಪು ದದ್ದುಗಳು ನಿವಾರಣೆಯಾಗಲಿವೆ. ಪಿತ್ತ ದೋಷ ಕಡಿಮೆಯಾಗಲಿದೆ. ಜೀರ್ಣಾಂಗದ ವ್ಯವಸ್ಥೆ ಉತ್ತಮವಾಗಿ ಕಾರ್ಯನಿರ್ವಹಿಸುವುದಲ್ಲದೆ, ಹಸಿವು ಕಳೆದುಕೊಂಡವರು ಈ ಮುದ್ರೆಯನ್ನು ಅಭ್ಯಾಸ ಮಾಡುವ ಮೂಲಕ ಸಮತೋಲಿತ ಆಹಾರ ಸೇವಿಸುವಂತಾಗುತ್ತಾರೆ. ಈ ಮುದ್ರೆಯನ್ನು ಮಾಡುವಂತಹ ಸಂದರ್ಭದಲ್ಲಿ ಬೆನ್ನು ಮತ್ತು ಕುತ್ತಿಗೆಯನ್ನು ತಗ್ಗಿಸಬಾರದು. ನಿದ್ರಾಹೀನತೆಯಿಂದ ಬಳಲುವವರು. ದೇಹದಲ್ಲಿನ ಇತರೆ ನೋವುಗಳಿಂದ ಬಳಲುತ್ತಿರುವವರು ಈ ಮುದ್ರೆಯನ್ನು ಅಭ್ಯಾಸ ಮಾಡುವುದರಿಂದ ಸಮಸ್ಯೆಗಳು ದೂರವಾಗಲಿವೆ.

ಶಂಖಮುದ್ರೆಯನ್ನು ಬೆಳಗಿನ ವೇಳೆ ಅಭ್ಯಾಸ ಮಾಡುವುದರಿಂದ ಹೆಚ್ಚು ಪ್ರಯೋಜನ ಪಡೆಯಬಹುದು. ದೇಹದೊಳಗಿನ ಗಾಳಿಯನ್ನು ಶುದ್ಧೀಕರಿಸುವುದಲ್ಲದೆ. ಸಕಾರಾತ್ಮಕ ಭಾವನೆ ಹೆಚ್ಚು ಮಾಡುವುದು. ಈ ಮುದ್ರೆಯನ್ನು 15 ನಿಮಿಷದಿಂದ ಒಂದು ಗಂಟೆಯವರೆಗೆ ಮಾಡಬಹುದು. ಹೆಚ್ಚು ನಿರ್ಧಿಷ್ಟವಾಗಿ ಭ್ರಮರಿ ಪ್ರಾಣಾಯಾಮದಿಂದ ಪ್ರಾರಂಭಿಸಿದರೆ ಒಳಿತು. ಆ ನಂತರದಲ್ಲಿ ವಿವಿಧ ಪ್ರಾಣಾಯಾಮಗಳೊಂದಿಗೆ ಅಭ್ಯಾಸ ಮಾಡಬಹುದು. ನಿಮ್ಮನ್ನು ಶಾಂತಗೊಳಿಸಿಕೊಂಡು ಸುತ್ತುವರೆದ ಹೆಬ್ಬೆರಳು ಮುತ್ತು ಎಂದೂ, ಬೆರಳು ಮತ್ತು ಹಸ್ತವನ್ನು ಶಂಖದ ಗೋಡೆಯೆಂದು ಕಲ್ಪಿಸಿಕೊಳ್ಳಿ. ಅದು ನಿಮ್ಮೊಂದಿಗೆ ಪ್ರೀತಿಯ ಸಂಪರ್ಕವನ್ನು ಹೆಚ್ಚಿಸಲಿದೆ. ನಿಮಗೆ ಅಗತ್ಯವಿರುವ ಎಲ್ಲ ಸಹಾಯ ಮತ್ತು ಭದ್ರತೆಯನ್ನು ನೀಡುತ್ತದೆ.

ಈ ಮುದ್ರೆಯು ಮನಸ್ಸು ಮತ್ತು ದೇಹವನ್ನು ವಿಶ್ರಾಂತಿ ಮಾಡಲು, ರಕ್ತಪರಿಚಲನೆ ಸುಧಾರಿಸಲು, ಶಕ್ತಿಯ ಮಟ್ಟವನ್ನು ಹೆಚ್ಚಿಸಲು ಸಹಕಾರಿಯಾಗಲಿದೆ. ವಯಸ್ಸಿನ ಅಂತರವಿಲ್ಲದೆ, ಸಮಯದ ಕಡಿವಾಣವಿಲ್ಲದೆ, ಮಾಡಬಹುದಾದ ಮುದ್ರೆಯಾಗಿದ್ದು, ಇದರಿಂದ ಹೆಚ್ಚಿನ ರೀತಿಯ ಅಡ್ಡ ಪರಿಣಾಮಗಳು ಸಂಭವಿಸುವುದಿಲ್ಲ.

ಯಾರು, ಯಾವಾಗ ಮಾಡಬಾರದು

ಅದಾಗಿಯೂ ಮಣಿಕಟ್ಟು, ಅಂಗೈ ಅಥವಾ ಬೆರಳುಗಳಲ್ಲಿ ಗಾಯಗೊಂಡವರು ಈ ಮುದ್ರೆ ಮಾಡುವುದನ್ನು ತಪ್ಪಿಸಬೇಕು. ಶೀತ ಪ್ರದೇಶಗಳಲ್ಲಿ ವಾಸಿಸುವವರು ಅಥವಾ ಕಡಿಮೆ ರಕ್ತದೊತ್ತಡ, ಶೀತ ಮತ್ತು ಕೆಮ್ಮಿನಿಂದ ಬಳಲುವವರು ಕೂಡ ಈ ಮುದ್ರೆ ಅಭ್ಯಾಸ ಮಾಡಬಾರದು. ಅಲ್ಲದೆ, ಚಳಿಗಾಲದ ತಿಂಗಳುಗಳಲ್ಲಿ ಅಭ್ಯಾಸ ಮಾಡಬಾರದು, ಏಕೆಂದರೆ ಈ ಮುದ್ರೆಯು ದೇಹದ ಉಷ್ಣತೆಯನ್ನು ಕಡಿಮೆ ಮಾಡುವುದು.

ಮಹಾಭಾರತದಲ್ಲಿ ಶ್ರೀಕೃಷ್ಣ ಶಂಖಧಾರಿಯಾದುದರಿಂದಲೋ ಅಥವಾ ಶಂಖಮುದ್ರೆಯನ್ನು ತನ್ನೋಳಗೆ ಅವಾಹಿಸಿದ್ದರಿಂದಲೋ ಎಂತಹುದೇ ಕೆಟ್ಟ ಪರಿಸ್ಥಿತಿಯಲ್ಲೂ ಕೋಪಗೊಳ್ಳಲಿಲ್ಲ. ಎಲ್ಲವನ್ನೂ ಸಮಾಧಾನಚಿತ್ತದಿಂದ ಅಳೆದು ತೂಗಿ ಸತ್ಯ ಪರಿಪಾಲನೆ ಮಾಡಲು ಸಾಧ್ಯವಾಗಿತ್ತು. ಹಾಗಾಗಿ ನೀವು ಪ್ರತಿನಿತ್ಯ ಶಂಖಮುದ್ರೆಯನ್ನು ಅಭ್ಯಾಸ ಮಾಡುವ ಮೂಲಕ ನಿಮ್ಮೊಳಗಿನ ಕೋಪವನ್ನು ನಿಗ್ರಹಿಸಿ, ಕೃಷ್ಣತ್ವನ್ನು ಜಾಗೃತಿಗೊಳಿಸುವಂತಾಗಲಿ.

ದೇಹದ ತೂಕದ ಸಮತೋಲನಕ್ಕೆ ಶೂನ್ಯ ಮುದ್ರೆ

Share this:

  • Share on WhatsApp (Opens in new window) WhatsApp
  • Post
  • Tweet
  • Print (Opens in new window) Print
  • Email a link to a friend (Opens in new window) Email
calm mindhelpfulLord KrishnapeacefulShankhamudrathroat problem
1 FacebookTwitterPinterestEmail
cklbkrish

previous post
ಲೋಕಸಭೆ ಚುನಾವಣೆಗೆ 5.47 ಕೋಟಿ ಮತದಾರರು
next post
ದಿನ ಭವಿಷ್ಯ : ಸೋಮವಾರ, 22 ಏಪ್ರಿಲ್ 2024

You may also like

1.32 ಲಕ್ಷ ಕೋಟಿ ರೂ. ಸಾಲದ ಸಿದ್ದರಾಮಯ್ಯ ಬಜೆಟ್

March 6, 2026

ಯಡಿಯೂರೋತ್ಸವಕ್ಕೆ 114 ರ ಟಾರ್ಗೆಟ್

March 2, 2026

ಜಾತಿ ವ್ಯವಸ್ಥೆಗೆ ಸಿದ್ದರಾಮಯ್ಯ ತೀವ್ರ ಕಳವಳ

February 28, 2026

ಅಮೆರಿಕದ ಫಿಲಡೆಲ್ಫಿಯಾದಲ್ಲಿ ’ಅಕ್ಕ’ ಬೆಳ್ಳಿ ಹಬ್ಬ

February 27, 2026

ಭ್ರಷ್ಟಾಚಾರ ಪಠ್ಯ ನಿಷೇಧ: ಸುಪ್ರೀಂಕೋರ್ಟ್

February 26, 2026

ಮನರೇಗಾ ಮರುಸ್ಥಾಪನೆ ಹೋರಾಟ ಬೆಂಬಲಿಸಿ

February 23, 2026

ಉಚಿತ ಗ್ಯಾರಂಟಿಗಳು ದೇಶದ ಅಭಿವೃದ್ಧಿಗೆ ಮಾರಕ

February 19, 2026

ಗ್ಯಾರಂಟಿ ಉಳಿಕೆ ಹಣ ಎಂಎಸ್‌ಐಎಲ್ ಚಿಟ್ಸ್‌ನಲ್ಲಿ ಹೂಡಿ

February 7, 2026

ವಿಬಿ-ಜಿ-ರಾಮ್-ಜಿ ಕಾಯ್ದೆ ಕುತಂತ್ರ ವಿರೋಧಿಸಿ

February 6, 2026

ಡ್ರಗ್ಸ್ ಮುಕ್ತ ಕರ್ನಾಟಕ ನಿರ್ಮಾಣ ಸರ್ಕಾರದ ಗುರಿ

February 5, 2026

Social Networks

Facebook Twitter Instagram Linkedin Youtube Email Rss

KMS Analysis

  • ಯಡಿಯೂರೋತ್ಸವಕ್ಕೆ 114 ರ ಟಾರ್ಗೆಟ್

    March 2, 2026
  • ಬಿಹಾರ ಚುನಾವಣಾ ಫಲಿತಾಂಶ ಬಳಿಕ ಸಿದ್ದರಾಮಯ್ಯ ದೆಹಲಿಗೆ

    October 25, 2025
  • ಜಾತಿಗಣತಿ ವೇಳೆ ಒಕ್ಕಲಿಗ ಎಂದೇ ಬರೆಸಲು ಶ್ರೀಗಳ ಕರೆ

    October 6, 2025
  • ಡಿ.ಕೆ. ಸುರೇಶ್ ಗೆ ಜಾರಿ ನಿರ್ದೇಶನಾಲಯದ ನೋಟಿಸ್

    June 17, 2025
  • ಕರ್ನಾಟಕದಲ್ಲಿ ಹೊಸದಾಗಿ ಜಾತಿಗಣತಿ

    June 12, 2025

Categories

  • Special Story (404)
  • ಅಂಕಣ (108)
  • ಉದ್ಯೋಗ (315)
  • ದಿನ ಭವಿಷ್ಯ (110)
  • ರಾಜಕೀಯ (1,902)
  • ರಾಜ್ಯ (2,213)
  • ರಾಷ್ಟ್ರ (2,183)
  • ವಿಶ್ಲೇಷಣೆ (189)
  • ಶಿಕ್ಷಣ (381)
  • ಸಂದರ್ಶನ (11)

About Us

ನೈಜ ಹಾಗೂ ವಿಶ್ವಾಸಾರ್ಹತೆಯ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರವಾದ ಸುದ್ದಿ, ಅಭಿಪ್ರಾಯಗಳ ಪ್ರಕಟಣೆಯ ವೆಬ್ ತಾಣ. ಕರ್ನಾಟಕ ರಾಜ್ಯದ ಪ್ರಚಲಿತ ವಿದ್ಯಮಾನಗಳು, ರಾಜಕೀಯ, ನಾಡು, ನುಡಿ, ಜಲ ವಿಚಾರಗಳಲ್ಲದೆ, ದೈನಂದಿನ ಆಗು-ಹೋಗುಗಳು, ವಿವಿಧ ಜಿಲ್ಲೆಗಳ ಪ್ರಮುಖ ವಿಚಾರಗಳ ಭಿತ್ತರಕ್ಕೆ ಹೆಚ್ಚು ಒತ್ತು ನೀಡುವುದು. ನಮ್ಮ ಕುರಿತು ಹೆಚ್ಚಿನ ವಿವರ ಪಡೆಯಲು ಇಲ್ಲಿ ಇಲ್ಲಿಕ್ಲಿಕ್‌ ಮಾಡಿ

Facebook Twitter Linkedin Youtube Email Vimeo Rss

Politics

  • 1.32 ಲಕ್ಷ ಕೋಟಿ ರೂ. ಸಾಲದ ಸಿದ್ದರಾಮಯ್ಯ ಬಜೆಟ್

    March 6, 2026
  • ಬರ ಎದುರಾಗಲಿದೆ: ಕರ್ನಾಟಕಕ್ಕೆ ಕೇಂದ್ರದ ಎಚ್ಚರಿಕೆ

    March 4, 2026
  • ಯುದ್ಧ ಪ್ರದೇಶದಲ್ಲಿ ಸಿಲುಕಿದ ಸಚಿವ, ಶಾಸಕರು

    March 2, 2026

KMS Special

  • 1.32 ಲಕ್ಷ ಕೋಟಿ ರೂ. ಸಾಲದ ಸಿದ್ದರಾಮಯ್ಯ ಬಜೆಟ್

    March 6, 2026
  • ಬರ ಎದುರಾಗಲಿದೆ: ಕರ್ನಾಟಕಕ್ಕೆ ಕೇಂದ್ರದ ಎಚ್ಚರಿಕೆ

    March 4, 2026
  • ಯುದ್ಧ ಪ್ರದೇಶದಲ್ಲಿ ಸಿಲುಕಿದ ಸಚಿವ, ಶಾಸಕರು

    March 2, 2026
  • Facebook
  • Twitter
  • Linkedin
  • Youtube
  • Email
  • Telegram

@2020 - All Right Reserved. Designed and Developed by Karnatakabest.com

KMS
  • Home
  • Special Story
  • ರಾಜ್ಯ
  • ರಾಷ್ಟ್ರ
  • ರಾಜಕೀಯ
  • ವಿಶ್ಲೇಷಣೆ
  • ಅಂಕಣ
  • ಶಿಕ್ಷಣ
  • ಉದ್ಯೋಗ
  • ಸಂದರ್ಶನ

Read alsox

1.32 ಲಕ್ಷ ಕೋಟಿ ರೂ. ಸಾಲದ ಸಿದ್ದರಾಮಯ್ಯ...

March 6, 2026
Sign In

Keep me signed in until I sign out

Forgot your password?

Password Recovery

A new password will be emailed to you.

Have received a new password? Login here

ಕೆಎಂಎಸ್‌ ಕನ್ನಡ ವಾಟ್ಸಪ್‌ ಗ್ರೂಪ್‌ಗೆ ಸೇರಿ