Saturday, March 7, 2026
  • ನಮ್ಮ ಬಗ್ಗೆ
  • ಸಂಪರ್ಕಿಸಿ
  • Privacy Policy
  • Disclaimer
  • Login/Register
KMS
  • Home
  • Special Story
  • ರಾಜ್ಯ
  • ರಾಷ್ಟ್ರ
  • ರಾಜಕೀಯ
  • ವಿಶ್ಲೇಷಣೆ
  • ಅಂಕಣ
  • ಶಿಕ್ಷಣ
  • ಉದ್ಯೋಗ
  • ಸಂದರ್ಶನ
Saturday, March 7, 2026
  • ನಮ್ಮ ಬಗ್ಗೆ
  • ಸಂಪರ್ಕಿಸಿ
  • Privacy Policy
  • Disclaimer
  • Login/Register
KMS
Banner
  • Home
  • Special Story
  • ರಾಜ್ಯ
  • ರಾಷ್ಟ್ರ
  • ರಾಜಕೀಯ
  • ವಿಶ್ಲೇಷಣೆ
  • ಅಂಕಣ
  • ಶಿಕ್ಷಣ
  • ಉದ್ಯೋಗ
  • ಸಂದರ್ಶನ
KMS
KMS
  • Home
  • Special Story
  • ರಾಜ್ಯ
  • ರಾಷ್ಟ್ರ
  • ರಾಜಕೀಯ
  • ವಿಶ್ಲೇಷಣೆ
  • ಅಂಕಣ
  • ಶಿಕ್ಷಣ
  • ಉದ್ಯೋಗ
  • ಸಂದರ್ಶನ

@2022 - All Right Reserved. Designed and Developed by PenciDesign

ರಾಜ್ಯರಾಷ್ಟ್ರ

ಪವಿತ್ರಾಗೌಡ ಎ1, ನಟ ದರ್ಶನ್ ಎ2

by KM Shivaraju September 4, 2024
written by KM Shivaraju September 4, 2024 0 comments 2 minutes read
0FacebookTwitterPinterestEmail
459

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ 17 ಆರೋಪಿಗಳ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಕೆ

ಬೆಂಗಳೂರು : ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ತನಿಖೆ ನಡೆಸಿದ್ದ ಪೊಲೀಸರು ನಟ ದರ್ಶನ್ ಅವರ ಆಪ್ತೆ ಪವಿತ್ರಗೌಡ ಸೇರಿದಂತೆ 17 ಮಂದಿ ವಿರುದ್ಧ ನ್ಯಾಯಾಲಯಕ್ಕೆ  ಇಂದು ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ.

ದೋಷಾರೋಪ ಪಟ್ಟಿಯಲ್ಲಿ ದರ್ಶನ್ ಅವರನ್ನು 2ನೇ ಆರೋಪಿ ಮಾಡಿದ್ದರೆ, ಪವಿತ್ರಗೌಡ ಮೊದಲ ಆರೋಪಿಯಾಗಿದ್ದು, ಉಳಿದ 15 ಆರೋಪಿಗಳ ಪಾತ್ರವನ್ನು ಉಲ್ಲೇಖಿಸಲಾಗಿದೆ.

ಸಾಕ್ಷ್ಯಧಾರ, ಸಾಂಧಾರ್ಭಿಕ, ತಾಂತ್ರಿಕ, ವೈಜ್ಞಾನಿಕ ಹಾಗೂ ಇತರೆ ಸಾಕ್ಷಾಧಾರ ಸೇರಿ 3991 ಪುಟಗಳ ಪ್ರಾಥಮಿಕ ದೋಷಾರೋಪ ಪಟ್ಟಿಯನ್ನು 24ನೇ ಎಸಿಎಂಎಂ ನ್ಯಾಯಾಲಯಕ್ಕೆ  ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು ಸಲ್ಲಿಸಿದ್ದಾರೆ.

ರೇಣುಕಾಸ್ವಾಮಿ ಕರೆತರುವುದರಿಂದ ಶರಣಾಗತಿ ಮಾಡಿಸುವ ತನಕ ಪ್ರತಿ ಹಂತದಲ್ಲಿ ದರ್ಶನ್ ಪಾತ್ರವಿದೆ ಎಂದು ಆರೋಪ ಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ.

ಈ ಕೊಲೆ ಪ್ರಕರಣವನ್ನು ಬಿಎನ್ಎಸ್ಎಸ್ ಕಾಯ್ದೆ ಪ್ರಕಾರ ತನಿಖೆ, ಮಹಜರು ಪ್ರಕ್ರಿಯೆ ನಡೆಸಲಾಗಿದೆ. ಪವನ್ ಮೂಲಕ ಚಿತ್ರದುರ್ಗದಿಂದ ರೇಣುಕಾಸ್ವಾಮಿ ಅವರನ್ನು ದರ್ಶನ್ ಕರೆಸಿರುವುದು.

 ರಾಘವೇಂದ್ರಗೆ ಹೇಳಿ ರೇಣುಕಾಸ್ವಾಮಿಯನ್ನು ಪವನ್ ಅಪಹಣ ಮಾಡಿಸಿದ್ದಾರೆ. ಅಪಹರಣಾ ನಂತರ ಆತನ ಮೇಲೆ ಹಲ್ಲೆ ಮಾಡುವಾಗ ದರ್ಶನ್ ಬಟ್ಟೆಯ ಮೇಲೆ ರೇಣುಕಾಸ್ವಾಮಿಯ ರಕ್ತದ ಕಲೆಗಳು ಪತ್ತೆಯಾಗಿದೆ.

ರೇಣುಕಾಸ್ವಾಮಿ ಮೇಲೆ ಹಲ್ಲೆ ಮಾಡುವ ಮುನ್ನ ದರ್ಶನ್ ಪಬ್ ಒಂದರಲ್ಲಿ ಕುಳಿತಿದ್ದರು. ನಂತರ ಪವಿತ್ರಾ ಮನೆಗೆ ಹೋಗಿ ಆಕೆಯನ್ನು ಕರೆದುಕೊಂಡು ಪಟ್ಟಣಗೆರೆ ಶೆಡ್ ಗೆ ತೆರಳಿದ್ದಾರೆ.

ಶೆಡ್ ನಲ್ಲಿ ರೇಣುಕಾಸ್ವಾಮಿಯ ಮೇಲೆ ಹಲ್ಲೆ ಮಾಡಿದ ದರ್ಶನ್, ನಂತರ ಪಬ್ ಗೆ ಮರಳಿದ್ದಾರೆ. ಆಗ ಇತರೆ ಹಲ್ಲೆ ಕೋರರು ರೇಣುಕಾಸ್ವಾಮಿ ಪೋಟೋಗಳನ್ನು ದರ್ಶನ್ ಮೊಬೈಲ್ ಗೆ ಕಳುಹಿಸಿದ್ದಾರೆ.

ಮತ್ತೆ ಪಬ್ ನಿಂದ ಶೆಡ್ ಗೆ ಹೋಗಿ ಅಲ್ಲಿಂದ ಆರ್ ಆರ್ ನಗರದ ತಮ್ಮ ಮನೆಗೆ ಬಂದು ಬಟ್ಟೆ ಬದಲಾಯಿಸಿದ್ದಾರೆ. ಬೆಳಿಗ್ಗೆ ಬನಶಂಕರಿಯಲ್ಲಿರುವ ತಮ್ಮ ಪತ್ನಿ ವಿಜಯಲಕ್ಷ್ಮೀ ಅವರ ಮನೆಗೆ ತೆರಳಿದ್ದು, ಅಲ್ಲಿ ಪೂಜೆ ಮುಗಿಸಿ ನಂತರ ಮೈಸೂರಿಗೆ ತೆರಳಿದ್ದಾರೆ.

    ತಮ್ಮ ಫಾರಂ ಹೌಸ್ ನಿಂದ ಹೋಟೆಲ್ ಗೆ ತೆರಳಿ, ಅಲ್ಲಿಂದ ಶೂಟಿಂಗ್ ಮುಗಿಸಿ ಮತ್ತೆ ಹೋಟೆಲ್ ಗೆ ವಾಪಾಸ್ಸಾಗಿದ್ದಾರೆ. ಇದೆಲ್ಲದರ ಸಿಸಿಟಿವಿ, ಟವರ್ ಲೋಕೇಷನ್ ದೊರೆತಿದೆ ಎಂದು ಆರೋಪ ಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ.

    ಪ್ರತಿ ಹಂತದಲ್ಲಿ ದರ್ಶನ್ ನೋಡಿದ್ದ ಸಾಕ್ಷಿದಾರರ ಹೇಳಿಕೆಗಳು, ನಟ ಚಿಕ್ಕಣ್ಣ ಸೇರಿದಂತೆ ಅನೇಕ ಸಾಕ್ಷಿಗಳ ಹೇಳಿಕೆಗಳನ್ನು ನಮೂದಿಸಲಾಗಿದೆ.

    ಪ್ರದೋಷ್ ಮೊಬೈಲ್ ನಲ್ಲಿ ಘಟನೆಗೆ ಸಂಬಂಧಿಸಿದ ವಿಡಿಯೋ, ಪೋನ್ ಕಾಲ್, ಚಾಟಿಂಗ್ ನಲ್ಲಿ ಸಂಚಿನ ಬಗ್ಗೆ ಮಾಹಿತಿ, ಶರಣಾಗತಿ ಮನವೊಲಿಸಿದ್ದು, ದರ್ಶನ್ ಹಣ ನೀಡಿರುವ ಸಾಕ್ಷ್ಯಗಳಿವೆ.

    ನಂತರ ಶವ ಸಾಗಾಣಿಕೆಗೆ ಸೂಚನೆ ನೀಡಿರುವುದು, ಹಣ ನೀಡಿ ಪ್ರಕರಣ ಮುಚ್ಚಿ ಹಾಕಿ ತಲೆ ಮರೆಸಿಕೊಳ್ಳುವ ಪ್ರಯತ್ನ ಮಾಡಿದ್ದಲ್ಲದೆ, ಕೊಲೆ ಸಂಚು, ಅಪಹಣರಣ, ಸಾಕ್ಷ್ಯನಾಶ ಎಲ್ಲದರಲ್ಲೂ ದರ್ಶನ ಪಾತ್ರವಿದೆ ಎಂಬುದನ್ನು ಪಟ್ಟಿಯಲ್ಲಿ ಸೇರಿಸಲಾಗಿದೆ.

    ದರ್ಶನ್ ಅಷ್ಟೇ ಅಲ್ಲ, ಪವಿತ್ರಗೌಡ ಸೇರಿದಂತೆ 17 ಆರೋಪಿಗಳ ವಿರುದ್ಧವೂ ಪೂರಕ ದಾಖಲೆಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ. ಕೊಲೆಯಲ್ಲಿ ಪ್ರತಿಯೊಬ್ಬರ ಪಾತ್ರವೇನು ಎಂಬುದನ್ನು ವಿವರಿಸಲಾಗಿದೆ.

    ಈ ಕೊಲೆಗೆ ಪವಿತ್ರಗೌಡ ಮೂಲ ಕಾರಣವೆಂದು ಆಕೆಯನ್ನು ಮೊದಲ ಆರೋಪಿ ಮಾಡಲಾಗಿದೆ. ಅಷ್ಟೇ ಅಲ್ಲ, ರೇಣುಕಾಸ್ವಾಮಿ ಮೇಲೆ ಹಲ್ಲೆ ನಡೆಯುವ ಸ್ಥಳದಲ್ಲಿದ್ದು, ತನ್ನ ಚಪ್ಪಲಿಯಿಂತ ಆತನ ಮೇಲೆ ಹಲ್ಲೇ ಮಾಡಿದ್ದಾಳೆ.

    ಆಕೆ ಬಳಸುತ್ತಿದ್ದ ಮೊಬೈಲ್ ಟವರ್ ಲೋಕೇಷನ್ ನಿಂದ ಶೆಡ್ ನಲ್ಲಿ ಹಲ್ಲೇ ಮಾಡುವಾಗ ಇತರೆ ಚಲಮ-ವಲನಗಳಲ್ಲೂ ಆಕೆಯ ಪಾತ್ರವಿರುವುದು ಖಚಿತಗೊಂಡಿದೆ.

    ಈ ದೋಷಾಆರೋಪ ಪಟ್ಟಿಯು 231 ಸಾಕ್ಷಿದಾರರನ್ನು ಒಳಗೊಂಡಂತೆ ಒಟ್ಟು 3991 ಪುಟಗಳುಳ್ಳ, 7 ಸಂಪುಟಗಳ ಹತ್ತು ಕಡತಗಳನ್ನು ಒಳಗೊಂಡಿದೆ.

        Share this:

        • Share on WhatsApp (Opens in new window) WhatsApp
        • Post
        • Tweet
        • Print (Opens in new window) Print
        • Email a link to a friend (Opens in new window) Email
        17 accusedchargesheetcourtDarshan A2murder casePavitra Gowda A1Renukaswamysubmitted
        0 FacebookTwitterPinterestEmail
        KM Shivaraju

        previous post
        ಪ್ರಭಾವಿ ಸಚಿವರಿಂದ ಎನ್ ಡಿಎ ನಾಯಕರ ಭೇಟಿ
        next post
        ಚನ್ನಪಟ್ಟಣದಲ್ಲಿ ಎನ್‌ಡಿಎ ಅಭ್ಯರ್ಥಿ ಜಯಮುತ್ತು !

        You may also like

        1.32 ಲಕ್ಷ ಕೋಟಿ ರೂ. ಸಾಲದ ಸಿದ್ದರಾಮಯ್ಯ ಬಜೆಟ್

        March 6, 2026

        ಬರ ಎದುರಾಗಲಿದೆ: ಕರ್ನಾಟಕಕ್ಕೆ ಕೇಂದ್ರದ ಎಚ್ಚರಿಕೆ

        March 4, 2026

        ಯುದ್ಧ ಪ್ರದೇಶದಲ್ಲಿ ಸಿಲುಕಿದ ಸಚಿವ, ಶಾಸಕರು

        March 2, 2026

        ಜಾತಿ ವ್ಯವಸ್ಥೆಗೆ ಸಿದ್ದರಾಮಯ್ಯ ತೀವ್ರ ಕಳವಳ

        February 28, 2026

        ಶಿವಕುಮಾರ್‌ಗೆ ಪಟ್ಟ ಕಟ್ಟಲು ಹೈಕಮಾಂಡ್ ನಿರ್ಧಾರ

        February 27, 2026

        ಅಮೆರಿಕದ ಫಿಲಡೆಲ್ಫಿಯಾದಲ್ಲಿ ’ಅಕ್ಕ’ ಬೆಳ್ಳಿ ಹಬ್ಬ

        February 27, 2026

        ಭ್ರಷ್ಟಾಚಾರ ಪಠ್ಯ ನಿಷೇಧ: ಸುಪ್ರೀಂಕೋರ್ಟ್

        February 26, 2026

        ಮುಖ್ಯಮಂತ್ರಿ ರೇಸ್‌ಗೆ ಧುಮುಕಿದ ಡಾ.ಪರಮೇಶ್ವರ್

        February 25, 2026

        ಡಾ.ಮಹದೇವಪ್ಪ ಅವರಿಗೆ ನಾಯಕತ್ವ ಬದಲು ಸುಳಿವು !

        February 24, 2026

        ಮನರೇಗಾ ಮರುಸ್ಥಾಪನೆ ಹೋರಾಟ ಬೆಂಬಲಿಸಿ

        February 23, 2026

        Social Networks

        Facebook Twitter Instagram Linkedin Youtube Email Rss

        KMS Analysis

        • ಯಡಿಯೂರೋತ್ಸವಕ್ಕೆ 114 ರ ಟಾರ್ಗೆಟ್

          March 2, 2026
        • ಬಿಹಾರ ಚುನಾವಣಾ ಫಲಿತಾಂಶ ಬಳಿಕ ಸಿದ್ದರಾಮಯ್ಯ ದೆಹಲಿಗೆ

          October 25, 2025
        • ಜಾತಿಗಣತಿ ವೇಳೆ ಒಕ್ಕಲಿಗ ಎಂದೇ ಬರೆಸಲು ಶ್ರೀಗಳ ಕರೆ

          October 6, 2025
        • ಡಿ.ಕೆ. ಸುರೇಶ್ ಗೆ ಜಾರಿ ನಿರ್ದೇಶನಾಲಯದ ನೋಟಿಸ್

          June 17, 2025
        • ಕರ್ನಾಟಕದಲ್ಲಿ ಹೊಸದಾಗಿ ಜಾತಿಗಣತಿ

          June 12, 2025

        Categories

        • Special Story (404)
        • ಅಂಕಣ (108)
        • ಉದ್ಯೋಗ (315)
        • ದಿನ ಭವಿಷ್ಯ (110)
        • ರಾಜಕೀಯ (1,902)
        • ರಾಜ್ಯ (2,213)
        • ರಾಷ್ಟ್ರ (2,183)
        • ವಿಶ್ಲೇಷಣೆ (189)
        • ಶಿಕ್ಷಣ (381)
        • ಸಂದರ್ಶನ (11)

        About Us

        ನೈಜ ಹಾಗೂ ವಿಶ್ವಾಸಾರ್ಹತೆಯ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರವಾದ ಸುದ್ದಿ, ಅಭಿಪ್ರಾಯಗಳ ಪ್ರಕಟಣೆಯ ವೆಬ್ ತಾಣ. ಕರ್ನಾಟಕ ರಾಜ್ಯದ ಪ್ರಚಲಿತ ವಿದ್ಯಮಾನಗಳು, ರಾಜಕೀಯ, ನಾಡು, ನುಡಿ, ಜಲ ವಿಚಾರಗಳಲ್ಲದೆ, ದೈನಂದಿನ ಆಗು-ಹೋಗುಗಳು, ವಿವಿಧ ಜಿಲ್ಲೆಗಳ ಪ್ರಮುಖ ವಿಚಾರಗಳ ಭಿತ್ತರಕ್ಕೆ ಹೆಚ್ಚು ಒತ್ತು ನೀಡುವುದು. ನಮ್ಮ ಕುರಿತು ಹೆಚ್ಚಿನ ವಿವರ ಪಡೆಯಲು ಇಲ್ಲಿ ಇಲ್ಲಿಕ್ಲಿಕ್‌ ಮಾಡಿ

        Facebook Twitter Linkedin Youtube Email Vimeo Rss

        Politics

        • 1.32 ಲಕ್ಷ ಕೋಟಿ ರೂ. ಸಾಲದ ಸಿದ್ದರಾಮಯ್ಯ ಬಜೆಟ್

          March 6, 2026
        • ಬರ ಎದುರಾಗಲಿದೆ: ಕರ್ನಾಟಕಕ್ಕೆ ಕೇಂದ್ರದ ಎಚ್ಚರಿಕೆ

          March 4, 2026
        • ಯುದ್ಧ ಪ್ರದೇಶದಲ್ಲಿ ಸಿಲುಕಿದ ಸಚಿವ, ಶಾಸಕರು

          March 2, 2026

        KMS Special

        • 1.32 ಲಕ್ಷ ಕೋಟಿ ರೂ. ಸಾಲದ ಸಿದ್ದರಾಮಯ್ಯ ಬಜೆಟ್

          March 6, 2026
        • ಬರ ಎದುರಾಗಲಿದೆ: ಕರ್ನಾಟಕಕ್ಕೆ ಕೇಂದ್ರದ ಎಚ್ಚರಿಕೆ

          March 4, 2026
        • ಯುದ್ಧ ಪ್ರದೇಶದಲ್ಲಿ ಸಿಲುಕಿದ ಸಚಿವ, ಶಾಸಕರು

          March 2, 2026
        • Facebook
        • Twitter
        • Linkedin
        • Youtube
        • Email
        • Telegram

        @2020 - All Right Reserved. Designed and Developed by Karnatakabest.com

        KMS
        • Home
        • Special Story
        • ರಾಜ್ಯ
        • ರಾಷ್ಟ್ರ
        • ರಾಜಕೀಯ
        • ವಿಶ್ಲೇಷಣೆ
        • ಅಂಕಣ
        • ಶಿಕ್ಷಣ
        • ಉದ್ಯೋಗ
        • ಸಂದರ್ಶನ

        Read alsox

        1.32 ಲಕ್ಷ ಕೋಟಿ ರೂ. ಸಾಲದ ಸಿದ್ದರಾಮಯ್ಯ...

        March 6, 2026
        Sign In

        Keep me signed in until I sign out

        Forgot your password?

        Password Recovery

        A new password will be emailed to you.

        Have received a new password? Login here

        ಕೆಎಂಎಸ್‌ ಕನ್ನಡ ವಾಟ್ಸಪ್‌ ಗ್ರೂಪ್‌ಗೆ ಸೇರಿ