Wednesday, July 29, 2026
  • ನಮ್ಮ ಬಗ್ಗೆ
  • ಸಂಪರ್ಕಿಸಿ
  • Privacy Policy
  • Disclaimer
  • Login/Register
KMS
  • Home
  • Special Story
  • ರಾಜ್ಯ
  • ರಾಷ್ಟ್ರ
  • ರಾಜಕೀಯ
  • ವಿಶ್ಲೇಷಣೆ
  • ಅಂಕಣ
  • ಶಿಕ್ಷಣ
  • ಉದ್ಯೋಗ
  • ಸಂದರ್ಶನ
Wednesday, July 29, 2026
  • ನಮ್ಮ ಬಗ್ಗೆ
  • ಸಂಪರ್ಕಿಸಿ
  • Privacy Policy
  • Disclaimer
  • Login/Register
KMS
Banner
  • Home
  • Special Story
  • ರಾಜ್ಯ
  • ರಾಷ್ಟ್ರ
  • ರಾಜಕೀಯ
  • ವಿಶ್ಲೇಷಣೆ
  • ಅಂಕಣ
  • ಶಿಕ್ಷಣ
  • ಉದ್ಯೋಗ
  • ಸಂದರ್ಶನ
KMS
KMS
  • Home
  • Special Story
  • ರಾಜ್ಯ
  • ರಾಷ್ಟ್ರ
  • ರಾಜಕೀಯ
  • ವಿಶ್ಲೇಷಣೆ
  • ಅಂಕಣ
  • ಶಿಕ್ಷಣ
  • ಉದ್ಯೋಗ
  • ಸಂದರ್ಶನ

@2022 - All Right Reserved. Designed and Developed by PenciDesign

ರಾಜಕೀಯರಾಜ್ಯರಾಷ್ಟ್ರ

ಮೇ 31ಕ್ಕೆ ಎಸ್‌ಐಟಿ ಮುಂದೆ ಪ್ರಜ್ವಲ್ ಹಾಜರಿ

by admin May 27, 2024
written by admin May 27, 2024 0 comments 2 minutes read
1FacebookTwitterPinterestEmail
196

ಬೆಂಗಳೂರು:ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ ಆರೋಪ ಹೊತ್ತಿರುವ ಸಂಸದ ಪ್ರಜ್ವಲ್ ರೇವಣ್ಣ ಇದೇ ಶುಕ್ರವಾರ ರಾಷ್ಟ್ರಕ್ಕೆ ಹಿಂತಿರುಗಲಿದ್ದಾರೆ.

ಲೋಕಸಭಾ ಚುನಾವಣಾ ಮತದಾನ ಮುಗಿಸಿಕೊಂಡು ಒಂದು ತಿಂಗಳ ಹಿಂದೆ (ಏಪ್ರಿಲ್ 26) ವಿದೇಶಕ್ಕೆ ತೆರಳಿದ್ದ ಪ್ರಜ್ವಲ್ ಬಂಧನಕ್ಕಾಗಿ ಎಸ್‌ಐಟಿ ಹಾಗೂ ರಾಜ್ಯ ಸರ್ಕಾರ ಇನ್ನಿಲ್ಲದ ಕಸರತ್ತು ನಡೆಸಿತ್ತು.

ತಾತ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹಾಗೂ ಕುಟುಂಬ ವರ್ಗದವರ ಮನವಿ ಮತ್ತು ತಮ್ಮ ಹಿರಿಯ ವಕೀಲರ ಸಲಹೆಯಂತೆ ಮೇ 31ರಂದು ಮುಂಜಾನೆ ನಗರಕ್ಕೆ ಧಾವಿಸಲಿರುವ ಅವರು, ಅಂದೇ ಬೆಳಗ್ಗೆ 10 ಗಂಟೆಗೆ ಎಸ್‌ಐಟಿ ಮುಂದೆ ಹಾಜರಾಗಲಿದ್ದಾರೆ.

ಕೆಪಿಸಿಸಿ ಅಧ್ಯಕ್ಷಗಾದಿಗೆ ದೆಹಲಿಯಲ್ಲಿ ಲಾಬಿ
ವಿದೇಶದಿಂದ ವಿಡಿಯೊ ಬಿಡುಗಡೆ

ತಾವು ಈಗಿರುವ ಸ್ಥಳದಿಂದಲೇ ವಿಡಿಯೊ ಬಿಡುಗಡೆ ಮಾಡಿರುವ ಪ್ರಜ್ವಲ್, ಅದರಲ್ಲಿ ರಾಷ್ಟ್ರಕ್ಕೆ ಹಿಂತಿರುಗುತ್ತಿರುವುದನ್ನು ಖಚಿತ ಪಡಿಸಿ, ಎಸ್‌ಐಟಿ ತನಿಖೆಗೆ ಸಹಕರಿಸಿ, ತಮ್ಮ ವಿರುದ್ಧದ ಷಡ್ಯಂತ್ರವನ್ನು ಕಾನೂನು ಮೂಲಕ ಎದುರಿಸುವುದಾಗಿ ತಿಳಿಸಿದ್ದಾರೆ.

ವಿಡಿಯೊ ಆರಂಭದಲ್ಲಿ ಅವರು, ನನ್ನ ಕುಟುಂಬ ವರ್ಗಕ್ಕೆ, ತಾತ, ಕುಮಾರಣ್ಣ ಹಾಗೂ ಪಕ್ಷದ ಕಾರ್ಯಕರ್ತರು ಮತ್ತು ನಾಡಿನ ಜನತೆಗೆ ನಾನು ವಿದೇಶದಿಂದಲೇ ಕ್ಷಮೆ ಯಾಚಿಸುತ್ತೇನೆ.

ನಾನು ವಿದೇಶದಲ್ಲಿ ಎಲ್ಲಿದ್ದೇನೆ ಎಂಬ ಮಾಹಿತಿ ನೀಡದಿದ್ದಕ್ಕೆ ಇಂದು ನಿಮ್ಮೆಲ್ಲರ ಕ್ಷಮೆ ಯಾಚಿಸಿ, ಮಾಹಿತಿ ನೀಡುತ್ತಿದ್ದೇನೆ.

ನಿಗದಿತ ಕಾರ್ಯಕ್ರಮದಂತೆ ವಿದೇಶಕ್ಕೆ

ನಾನು, ನನ್ನ ಕ್ಷೇತ್ರದ ಮತದಾನ ಮುಗಿಸಿಕೊಂಡು, ಮೊದಲೇ ನಿಗದಿಯಾದ ಕಾರ್ಯಕ್ರಮದಂತೆ ಏಪ್ರಿಲ್ 26ಕ್ಕೆ ವಿದೇಶಕ್ಕೆ ತೆರಳಿದೆ.

ನಾನು ವಿದೇಶಕ್ಕೆ ತೆರಳುವ ಸಂದರ್ಭದಲ್ಲಿ ನನ್ನ ವಿರುದ್ಧ ಯಾವುದೇ ಆರೋಪಗಳಾಗಲೀ, ಮೊಕದ್ದಮೆಗಳಾಗಲೀ ದಾಖಲಾಗಿರಲಿಲ್ಲ ಹಾಗೂ ಎಸ್‌ಐಟಿಯೂ ರಚನೆಯಾಗಿರಲಿಲ್ಲ.

ನನ್ನ ವಿರುದ್ಧ ಆರೋಪ ಪ್ರಸಾರ

ವಿದೇಶಕ್ಕೆ ತೆರಳಿದ ಮೂರು-ನಾಲ್ಕು ದಿನಗಳ ನಂತರ ಯೂಟ್ಯೂಬ್ ಹಾಗೂ ಸುದ್ದಿ ವಾಹಿನಿಗಳ ಮೂಲಕ ನನ್ನ ವಿರುದ್ಧ ಪ್ರಸಾರ ಆಗುತ್ತಿರುವ ಆರೋಪಗಳ ಬಗ್ಗೆ ತಿಳಿದುಕೊಂಡೆ.

ನಂತರ ನನಗೆ, ಇದರ ಮಾಹಿತಿ ತಿಳಿಯುವ ಜೊತೆಗೆ ಎಸ್‌ಐಟಿ ನೀಡಿದ ನೋಟಿಸ್‌ಗೆ ಎಕ್ಸ್ ಖಾತೆ ಹಾಗೂ ವಕೀಲರ ಮೂಲಕ ಉತ್ತರ ನೀಡಿ, ಒಂದು ವಾರ ಕಾಲಾವಕಾಶ ಕೋರಿದ್ದೆ.

ಈ ಸಂದೇಶ ಕಳುಹಿಸಿದ ಮರು ದಿನವೇ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸೇರಿದಂತೆ ಆ ಪಕ್ಷದ ಕೆಲವು ಮುಖಂಡರು ಸಾರ್ವಜನಿಕ ವೇದಿಕೆಗಳಲ್ಲಿ ನನ್ನ ವಿರುದ್ಧ ಅಪಪ್ರಚಾರ ನಡೆಸಿ, ರಾಜಕೀಯ ಪಿತೂರಿ ಮಾಡಿದರು.

ಏಕಾಂಗಿತನ ಮತ್ತು ಖಿನ್ನತೆ

ಇದರಿಂದ ನಾನು ಏಕಾಂಗಿತನಕ್ಕೆ ಮತ್ತು ಖಿನ್ನತೆಗೆ ಒಳಗಾದೆ, ಇದರಿಂದ ಚೇತರಿಸಿಕೊಂಡು ಹೊರಬರುವ ಮುನ್ನವೇ ಹಾಸನದಲ್ಲಿ ಕೆಲವು ದುಃಶ್ಯಕ್ತಿಗಳು ನನ್ನ ವಿರುದ್ಧ ರಾಜಕೀಯ ಪಿತೂರಿ ಮಾಡಿ, ಅಪಪ್ರಚಾರ ನಡೆಸಿದರು.

ನನ್ನನ್ನು ರಾಜಕೀಯವಾಗಿ ಕುಗ್ಗಿಸಲು ಈ ಶಕ್ತಿಗಳು ಒಂದಾಗಿ ನನ್ನ ವಿರುದ್ಧ ದೊಡ್ಡ ಷಡ್ಯಂತ್ರವನ್ನೇ ನಡೆಸಿದವು.

ಇದರಿಂದ ನಾನು ಏಕಾಂಗಿಯಾದೆ ಹಾಗೂ ನಾನು, ದೂರ ಉಳಿಯುವ ತೀರ್ಮಾನ ಕೈಗೊಂಡೆ, ನಂತರ ನಡೆದ ಬೆಳವಣಿಗೆಗಳಿಂದ ಈ ದುಷ್ಟ ಶಕ್ತಿಗಳ ವಿರುದ್ಧ ಕಾನೂನು ಹೋರಾಟ ಮಾಡುವ ನಿರ್ಧಾರ ಕೈಗೊಂಡು ರಾಷ್ಟ್ರಕ್ಕೆ ಹಿಂತಿರುಗುತ್ತಿದ್ದೇನೆ.

ಈ ಮೊದಲೇ ಕ್ಷಮೆ ಯಾಚಿಸಿದ್ದೇನೆ, ಮತ್ತೊಮ್ಮೆ ನಿಮ್ಮ ಮುಂದೆ ಕ್ಷಮೆ ಯಾಚಿಸುತ್ತಿದ್ದೇನೆ, ಇದೇ 31ರಂದು ರಾಷ್ಟ್ರಕ್ಕೆ ಹಿಂತಿರುಗಿ ತನಿಖಾ ಸಂಸ್ಥೆ ಮುಂದೆ ಹಾಜರಾಗುವುದಾಗಿ ಹೇಳಿದ್ದಾರೆ.

ಪರಿಷತ್ ಚುನಾವಣೆ: ಆಕಾಂಕ್ಷಿ ಅಭ್ಯರ್ಥಿಗಳ ಒತ್ತಡ
ಕಾಂಗ್ರೆಸ್-ಜೆಡಿಎಸ್ ವಾಕ್ ಸಮರ

ಪ್ರಜ್ವಲ್ ಪ್ರಕರಣದ ನಂತರ ಆಡಳಿತಾರೂಢ ಕಾಂಗ್ರೆಸ್ ಹಾಗೂ ಜೆಡಿಎಸ್ ನಡುವೆ ದೊಡ್ಡ ವಾಕ್ ಸಮರವೇ ನಡೆಯಿತು.

ಈ ಹಂತದಲ್ಲಿ ಕುಮಾರಸ್ವಾಮಿ, ರಾಷ್ಟ್ರಕ್ಕೆ ಹಿಂತಿರುಗಿ ಎಸ್‌ಐಟಿ ಮುಂದೆ ಹಾಜರಾಗುವಂತೆ ಸಾರ್ವಜನಿಕವಾಗಿ ಮನವಿ ಮಾಡಿದರು.

ಕುಮಾರಸ್ವಾಮಿ ಅವರ ಮನವಿಗೂ ಪ್ರಜ್ವಲ್ ಸ್ಪಂದಿಸದಿದ್ದಾಗ, ತಾತ ದೇವೇಗೌಡರು ಖಾರವಾಗಿ ತಮ್ಮ ಎಕ್ಸ್ ಖಾತೆಯಲ್ಲಿ ಮೊಮ್ಮಗನ ವಿರುದ್ಧ ಕಿಡಿ ಕಾರಿ, ರಾಷ್ಟ್ರಕ್ಕೆ ಹಿಂತಿರುಗದಿದ್ದರೆ, ತಮ್ಮ ಕುಟುಂಬದಿಂದ ಹೊರಹಾಕುವುದಾಗಿ ಎಚ್ಚರಿಕೆ ನೀಡಿದ್ದರು.

ತಾತನ ಎಚ್ಚರಿಕೆ

ತಾತನ ಎಚ್ಚರಿಕೆ ಹಾಗೂ ಪ್ರಜ್ವಲ್ ವಕೀಲರು, ಭಾರತಕ್ಕೆ ಹಿಂತಿರುಗಿ ತನಿಖಾ ಸಂಸ್ಥೆ ಮುಂದೆ ಹಾಜರಾಗುವಂತೆ ಸಲಹೆ ಮಾಡಿದರು.

ಎಷ್ಟೇ ದಿನವಾದರೂ, ನೀವು ಕಾನೂನನ್ನು ಎದುರಿಸಲೇಬೇಕು, ತಡ ಮಾಡಿದರೆ, ವಿಷಯ ಮತ್ತಷ್ಟು ಗೊಂದಲಕ್ಕೆ ಒಳಗಾಗುತ್ತೆ, ಅಲ್ಲದೆ, ಕುಟುಂಬವೂ ನೆಮ್ಮದಿಯಿಂದಿರಲು ಸಾಧ್ಯವಿಲ್ಲ.

ಭಾರತಕ್ಕೆ ಹಿಂತಿರುಗಿ ತನಿಖಾ ಸಂಸ್ಥೆ ಮುಂದೆ ಹಾಜರಾಗಿ ಕಾನೂನಿನ ಹೋರಾಟ ನಡೆಸಿ ಎಂದು ವಕೀಲರು ನೀಡಿದ ಸಲಹೆಗೆ ಪ್ರಜ್ವಲ್ ತಮ್ಮ ನಿರ್ಧಾರ ಬದಲಿಸಿ ರಾಷ್ಟ್ರಕ್ಕೆ ಹಿಂತಿರುಗುತ್ತಿದ್ದಾರೆ.

ಹಿಂತಿರುಗುವುದಕ್ಕೂ ಮುನ್ನ ವಕೀಲರು ನೀಡಿದ ಸಲಹೆಯಂತೆ 2.57 ನಿಮಿಷಗಳ ಟಿಪ್ಪಣಿಯನ್ನು ವಿಡಿಯೊ ಮೂಲಕ ಓದಿ, ಸಂದೇಶ ರವಾನಿಸಿದ್ದಾರೆ.

Share this:

  • Share on WhatsApp (Opens in new window) WhatsApp
  • Post
  • Tweet
  • Print (Opens in new window) Print
  • Email a link to a friend (Opens in new window) Email
claims to present himself before SITprajval returns on 31st Maysent video from his place
1 FacebookTwitterPinterestEmail
admin

previous post
ಪರಿಷತ್ ಚುನಾವಣೆ: ಆಕಾಂಕ್ಷಿ ಅಭ್ಯರ್ಥಿಗಳ ಒತ್ತಡ
next post
ಪರಿಷತ್ ಚುನಾವಣೆ: ನಾಳೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ

You may also like

ತಮಿಳುನಾಡಿಗೆ 4 ಟಿಎಂಸಿ ನೀರು ಹರಿಸಲು ಆದೇಶ

July 28, 2026

ಮಂತ್ರಿಸ್ಥಾನಕ್ಕೆ ಮುಸ್ಲೀಂರಿಂದಲೇ ಅಡ್ಡಿ: ಜಮೀರ್

July 28, 2026

ಬುಧವಾರ ಇಲ್ಲವೇ ಗುರುವಾರ ಡಿಕೆಶಿ ಸಂಪುಟ ವಿಸ್ತರಣೆ

July 27, 2026

ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಪಡೆದ ಯುವಶಕ್ತಿ

July 25, 2026

ಸಂಪುಟ ವಿಸ್ತರಣೆ ವಿಳಂಬ :ವಿಧಾನಮಂಡಲದ ಮುಂಗಾರು ಅಧಿವೇಶನ ಮುಂದೂಡಿಕೆ

July 24, 2026

ಡಿಕೆಶಿ ಸಂಪುಟ ವಿಸ್ತರಣೆಗೆ ನೀಟ್ ಹೋರಾಟ ಕಂಟಕ

July 22, 2026

ನಾಳೆ ಮಧ್ಯಾನ್ಹ 2-20ಕ್ಕೆ ಡಿಕೆಶಿ ಸಂಪುಟ ವಿಸ್ತರಣೆ

July 21, 2026

ಬರಪೀಡಿತ ಘೋಷಣೆಗೆ ನಾಳೆ ತುರ್ತು ಸಂಪುಟ ಸಭೆ

July 18, 2026

ಗ್ರೀನ್ ಸಿಗ್ನಲ್ ಬರುತ್ತಿದ್ದಂತೆ ಮಂತ್ರಿಮಂಡಲ ವಿಸ್ತರಣೆ

July 17, 2026

ಸಂಭಾವ್ಯ ಸಚಿವರ ಪಟ್ಟಿಗೆ ರಾಹುಲ್ ಗಾಂಧಿ ಒಪ್ಪಿಗೆ

July 16, 2026

Social Networks

Facebook Twitter Instagram Linkedin Youtube Email Rss

KMS Analysis

  • ಸಂಪುಟ ವಿಸ್ತರಣೆ ವಿಳಂಬ :ವಿಧಾನಮಂಡಲದ ಮುಂಗಾರು ಅಧಿವೇಶನ ಮುಂದೂಡಿಕೆ

    July 24, 2026
  • ವಿದ್ಯುತ್ ಲೋಡ್ ಶೆಡ್ಡಿಂಗ್ ಇಲ್ಲ

    July 9, 2026
  • ಮನಸು ಬದಲಿಸಿದ ರಾಮಲಿಂಗಾರೆಡ್ಡಿ

    June 6, 2026
  • ಸರ್ವಧರ್ಮ ಗುರುಗಳ ಸಮ್ಮುಖದಲ್ಲಿ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ‌ ಸ್ವೀಕಾರ

    June 2, 2026
  • ಮುಖ್ಯಮಂತ್ರಿ ನಿವಾಸವಾಗಿ ಬದಲಾಗಲಿದೆ ಕುಮಾರಕೃಪಾ ಅತಿಥಿ ಗೃಹ

    June 1, 2026

Categories

  • Special Story (526)
  • ಅಂಕಣ (109)
  • ಉದ್ಯೋಗ (340)
  • ದಿನ ಭವಿಷ್ಯ (110)
  • ರಾಜಕೀಯ (2,020)
  • ರಾಜ್ಯ (2,334)
  • ರಾಷ್ಟ್ರ (2,299)
  • ವಿಶ್ಲೇಷಣೆ (199)
  • ಶಿಕ್ಷಣ (403)
  • ಸಂದರ್ಶನ (11)

About Us

ನೈಜ ಹಾಗೂ ವಿಶ್ವಾಸಾರ್ಹತೆಯ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರವಾದ ಸುದ್ದಿ, ಅಭಿಪ್ರಾಯಗಳ ಪ್ರಕಟಣೆಯ ವೆಬ್ ತಾಣ. ಕರ್ನಾಟಕ ರಾಜ್ಯದ ಪ್ರಚಲಿತ ವಿದ್ಯಮಾನಗಳು, ರಾಜಕೀಯ, ನಾಡು, ನುಡಿ, ಜಲ ವಿಚಾರಗಳಲ್ಲದೆ, ದೈನಂದಿನ ಆಗು-ಹೋಗುಗಳು, ವಿವಿಧ ಜಿಲ್ಲೆಗಳ ಪ್ರಮುಖ ವಿಚಾರಗಳ ಭಿತ್ತರಕ್ಕೆ ಹೆಚ್ಚು ಒತ್ತು ನೀಡುವುದು. ನಮ್ಮ ಕುರಿತು ಹೆಚ್ಚಿನ ವಿವರ ಪಡೆಯಲು ಇಲ್ಲಿ ಇಲ್ಲಿಕ್ಲಿಕ್‌ ಮಾಡಿ

Facebook Twitter Linkedin Youtube Email Vimeo Rss

Politics

  • ತಮಿಳುನಾಡಿಗೆ 4 ಟಿಎಂಸಿ ನೀರು ಹರಿಸಲು ಆದೇಶ

    July 28, 2026
  • ಮಂತ್ರಿಸ್ಥಾನಕ್ಕೆ ಮುಸ್ಲೀಂರಿಂದಲೇ ಅಡ್ಡಿ: ಜಮೀರ್

    July 28, 2026
  • ಬುಧವಾರ ಇಲ್ಲವೇ ಗುರುವಾರ ಡಿಕೆಶಿ ಸಂಪುಟ ವಿಸ್ತರಣೆ

    July 27, 2026

KMS Special

  • ತಮಿಳುನಾಡಿಗೆ 4 ಟಿಎಂಸಿ ನೀರು ಹರಿಸಲು ಆದೇಶ

    July 28, 2026
  • ಮಂತ್ರಿಸ್ಥಾನಕ್ಕೆ ಮುಸ್ಲೀಂರಿಂದಲೇ ಅಡ್ಡಿ: ಜಮೀರ್

    July 28, 2026
  • ಬುಧವಾರ ಇಲ್ಲವೇ ಗುರುವಾರ ಡಿಕೆಶಿ ಸಂಪುಟ ವಿಸ್ತರಣೆ

    July 27, 2026
  • Facebook
  • Twitter
  • Linkedin
  • Youtube
  • Email
  • Telegram

@2020 - All Right Reserved. Designed and Developed by Karnatakabest.com

KMS
  • Home
  • Special Story
  • ರಾಜ್ಯ
  • ರಾಷ್ಟ್ರ
  • ರಾಜಕೀಯ
  • ವಿಶ್ಲೇಷಣೆ
  • ಅಂಕಣ
  • ಶಿಕ್ಷಣ
  • ಉದ್ಯೋಗ
  • ಸಂದರ್ಶನ

Read alsox

ತಮಿಳುನಾಡಿಗೆ 4 ಟಿಎಂಸಿ ನೀರು ಹರಿಸಲು ಆದೇಶ

July 28, 2026
Sign In

Keep me signed in until I sign out

Forgot your password?

Password Recovery

A new password will be emailed to you.

Have received a new password? Login here

ಕೆಎಂಎಸ್‌ ಕನ್ನಡ ವಾಟ್ಸಪ್‌ ಗ್ರೂಪ್‌ಗೆ ಸೇರಿ