Saturday, March 7, 2026
  • ನಮ್ಮ ಬಗ್ಗೆ
  • ಸಂಪರ್ಕಿಸಿ
  • Privacy Policy
  • Disclaimer
  • Login/Register
KMS
  • Home
  • Special Story
  • ರಾಜ್ಯ
  • ರಾಷ್ಟ್ರ
  • ರಾಜಕೀಯ
  • ವಿಶ್ಲೇಷಣೆ
  • ಅಂಕಣ
  • ಶಿಕ್ಷಣ
  • ಉದ್ಯೋಗ
  • ಸಂದರ್ಶನ
Saturday, March 7, 2026
  • ನಮ್ಮ ಬಗ್ಗೆ
  • ಸಂಪರ್ಕಿಸಿ
  • Privacy Policy
  • Disclaimer
  • Login/Register
KMS
Banner
  • Home
  • Special Story
  • ರಾಜ್ಯ
  • ರಾಷ್ಟ್ರ
  • ರಾಜಕೀಯ
  • ವಿಶ್ಲೇಷಣೆ
  • ಅಂಕಣ
  • ಶಿಕ್ಷಣ
  • ಉದ್ಯೋಗ
  • ಸಂದರ್ಶನ
KMS
KMS
  • Home
  • Special Story
  • ರಾಜ್ಯ
  • ರಾಷ್ಟ್ರ
  • ರಾಜಕೀಯ
  • ವಿಶ್ಲೇಷಣೆ
  • ಅಂಕಣ
  • ಶಿಕ್ಷಣ
  • ಉದ್ಯೋಗ
  • ಸಂದರ್ಶನ

@2022 - All Right Reserved. Designed and Developed by PenciDesign

ಶಿಕ್ಷಣ

ಬಹು ಉಪಯೋಗಿ ಮೂಲಂಗಿ

by admin December 25, 2023
written by admin December 25, 2023 0 comments 2 minutes read
4FacebookTwitterPinterestEmail
133

ಚಳಿಗಾಲಕ್ಕೂ ಉತ್ತಮ ತರಕಾರಿ

ಬೆಂಗಳೂರು: ದೈನಂದಿನ ಬಳಕೆಯ ಪ್ರಮುಖ ತರಕಾರಿಗಳಲ್ಲಿ ಮೂಲಂಗಿಯೂ ಒಂದು. ಬಿಳಿ ಬಣ್ಣದಿಂದ ಕೂಡಿರುವ ಇದು ತರಕಾರಿ ಮಾತ್ರವಲ್ಲದೆ, ಬಹು ಉಪಯೋಗಿ. ಮನೆಯೌಷಧಿ ಕೂಡ. ಅಲ್ಪಾವಧಿ ತರಕಾರಿ ಬೆಳೆ. ಬೆಳೆಯಲು ತಗಲುವ ಖರ್ಚು ಕಡಿಮೆ. ಇದರ ಆಯಸ್ಸು ಕೂಡ ಅಲ್ಪಾವಧಿ. ಅಂದರೆ ಸೊಪ್ಪಿನಂತೆ ಮೂಲಂಗಿ ಬೆಳೆ ಒಂದರಿಂದ ಎರಡು ತಿಂಗಳಲ್ಲಿ ಮುಗಿಯುತ್ತದೆ. 

ಬಹುತೇಕ ಕೃಷಿಕರು ನಿತ್ಯ ಬಳಕೆಗಾಗಿ ಕೈ ತೋಟದಲ್ಲಿ ಸದಾ ಬೆಳೆಯುತ್ತಾರೆ. ವಾಣಿಜ್ಯ ಉದ್ದೇಶಕ್ಕೂ ಬೆಳೆಯುವುದುಂಟು. ವರ್ಷವಿಡೀ ಸಾಧಾರಣ ಧಾರಣೆ ಹೊಂದಿರುವ ತರಕಾರಿ ಎಂದರೂ ತಪ್ಪಾಗಲಾರದು. ದುಬಾರಿಯೂ ಆಗುವುದಿಲ್ಲ; ಬೆಲೆ ಕುಸಿತವೂ ಆಗುವುದಿಲ್ಲ. ಇದಕ್ಕೆ ಕಾರಣ ಅಲ್ಪಾವಧಿಯಲ್ಲಿ ಬೆಳೆಯುವ ಅದರ ಸ್ವಭಾವ.

ಹಸಿ ಮೂಲಂಗಿಯನ್ನು ಬಹಳಷ್ಟು ಮಂದಿ ಸೇವಿಸುವುದುಂಟು. ತಿಂದವರ ಬಾಯಿ ಮೂಲಂಗಿ ವಾಸನೆ ಬರಲಿದೆ ಎಂಬ ಕಾರಣಕ್ಕೆ ಹಿಂಜರಿಯುತ್ತಾರೆ. ಹಸಿಯಾಗಿದ್ದಾಗ ಖಾರವಾಗಿರುವುದರಿಂದ ಇತರೆ ತರಕಾರಿ ಸಾಲಡ್ ಜತೆ ಬಳಸಲಾಗುವುದು. ರುಚಿಗೆ ತಕ್ಕಷ್ಟು ಉಪ್ಪು ಬಳಸಿದರೆ ಖಾರ ಕಡಿಮೆಯಾಗಲಿದೆ.

ಅಡುಗೆಯಲ್ಲಿ ಇದನ್ನು ಸಾಕಷ್ಟು ಪ್ರಮಾಣದಲ್ಲಿ ಬಳಸಲಾಗುತ್ತದೆ. ಮೂಲಂಗಿಯ ಮಸಾಲೆ, ಇತರೆ ತರಕಾರಿಗಳ ಮಿಶ್ರಣದೊಂದಿಗೆ ಸಾಂಬಾರ್, ಪಲ್ಯ ಮಾಡುವುದು ರೂಢಿಯಲ್ಲಿದೆ. ಮೂಲಂಗಿಯ ಸೊಪ್ಪು ಕೂಡು ಹೆಚ್ಚು ಉಪಯುಕ್ತವಾಗಿದೆ. ಸೊಪ್ಪನ್ನು ಪಲ್ಯ, ಮೊಟ್ಟೆ ಪಲ್ಯ ಹೀಗೆ ನಾನಾ ರೀತಿಯಲ್ಲಿ ಬಳಸಲಾಗುವುದು.

ಆರೋಗ್ಯ ವರ್ಧಕವಾಗಿ ಸಹಕಾರಿ

ನಿತ್ಯ ಬಳಕೆಯ ತರಕಾರಿಯಾದರೂ ಹಲವು ಆರೋಗ್ಯಕರ ಗುಣಗಳನ್ನು ಹೊಂದಿದೆ. ಜೀರಿಗೆ ಕಾಳಿನಂತೆ ಮೂಲಂಗಿ ಕೂಡ ಗ್ಯಾಸ್ಟ್ರಿಕ್ ಸಮಸ್ಯೆಯನ್ನು ಕಡಿಮೆ ಮಾಡಲಿದೆ. ಜೀರ್ಣಕ್ರಿಯೆಯನ್ನು ಹೆಚ್ಚಿಸುತ್ತದೆ. ಮಲಬದ್ಧತೆ ನಿವಾರಿಸಲಿದೆ. ಕೆಲವೊಂದು ಹೊಟ್ಟೆಯ ಸಮಸ್ಯೆಗೂ ಪರಿಹಾರ ನೀಡಲಿದೆ.

ಮೂಲವ್ಯಾಧಿಯ ತೀವ್ರತೆಯನ್ನು ಕಡಿಮೆ ಮಾಡುವ ಗುಣ ಮೂಲಂಗಿಗೆ ಇದೆ. ಬೆಳಗಿನ ವೇಳೆ ತಿಂಡಿ ತಿನ್ನುವ ಮೊದಲು ನಿಯಮಿತವಾಗಿ ನಾಲ್ಕೈದು ದಿನ ಹಸಿ ಮೂಲಂಗಿ ಸೇವಿಸಿದರೆ ನಿಯಂತ್ರಣಕ್ಕೆ ಬರಲಿದೆ. ಮೂಲಂಗಿಯನ್ನು ತೆಂಗಿನ ಕಾಯಿ ರೀತಿ ತುರಿದು ಮೊಸರಲ್ಲಿ ಸ್ವಲ್ಪ ನೆನೆಸಿದ ಬಳಿಕ ಸೇವಿಸಿದರೆ ಹೆಚ್ಚು ಫಲಿತಾಂಶ ಸಿಗಲಿದೆ. ಅಂದರೆ, ಮೊಸರೊಡೆ ರೀತಿ ಸೇವಿಸಬಹುದು.

ಮೂಲವ್ಯಾಧಿ ಇರುವ ಹಲವರು ಇದನ್ನು ಬಳಸುವುದುಂಟು. ಹಾಗೆಯೇ ಇತರರಿಗೂ ಸಲಹೆ ಮಾಡುವುದು ಸಾಮಾನ್ಯವಾಗಿದೆ. ಚಳಿಗಾಲದಲ್ಲಿ ಶೀತ ಸಂಬಂಧಿ ಸಮಸ್ಯೆಗಳು ಹೆಚ್ಚು. ಕೆಮ್ಮು, ಕಫದಂತೆ ಸಮಸ್ಯೆ ಇರುವವರು ಮೂಲಂಗಿಯನ್ನು ಯಾವ ಸ್ವರೂಪದಲ್ಲೂ ಬಳಸಿದರೂ ಪರಿಣಾಮಕಾರಿಯಾಗಿ ನಿವಾರಿಸಲಿದೆ.

ಮಧುಮೇಹಿಗಳು, ಅಧಿಕ ರಕ್ತದೊತ್ತಡಕ್ಕೂ ಸೈ

ಅದೇ ರೀತಿ ಮೂಲಂಗಿಯ ಸೊಪ್ಪು ಕೂಡ ಕೆಮ್ಮು ಸಮಸ್ಯೆಗೆ ಪರಿಹಾರ ಒದಗಿಸಲಿದೆ. ಜಾನುವಾರುಗಳಿಗೆ ಕೆಮ್ಮು ಬಂದಾಗ ಈ ಸೊಪ್ಪು ತಿನ್ನಿಸುವುದು ರೂಢಿಯಲ್ಲಿದೆ. ಮೂಲಂಗಿ ಹೆಚ್ಚಾಗಿ ಬಳಸುವವರಲ್ಲಿ ಮಧುಮೇಹ ನಿಯಂತ್ರಣಕ್ಕೆ ಸಹಕಾರಿಯಾಗಿ ಕೆಲಸ ಮಾಡಲಿದೆ. ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ. ರಕ್ತ ಪರಿಚಲನೆ ಸರಾಗವಾಗಿರುತ್ತದೆ ಎಂಬ ಅಭಿಪ್ರಾಯವಿದೆ.  ಅಷ್ಟೇ ಅಲ್ಲ, ಹೃದಯ ಸಂಬಂಧಿ ರೋಗಿಗಳಿಗೂ ಅನುಕೂಲಕರ. ಅಲ್ಲದೆ, ಮೂತ್ರಪಿಂಡದಲ್ಲಿ ಕಲ್ಲಾಗುವುದನ್ನು ತಡೆಯುವ ಗುಣವನ್ನು ಹೊಂದಿದೆ.

ಆದರೆ, ಯಾವುದೇ ತರಕಾರಿ, ಆಹಾರ ಹಾಗೂ ಹಣ್ಣುಗಳು ಕೂಡ ಪ್ರತಿಯೊಬ್ಬರಿಗೂ ಅನುಕೂಲಕರ ಹಾಗೂ ಅಡ್ಡಪರಿಣಾಮಗಳನ್ನು ಬೀರುತ್ತವೆ. ಒಬ್ಬರಿಗೆ ವರವಾಗುವುದು ಮತ್ತೊಬ್ಬರಿಗೆ ಶಾಪವಾಗಬಹುದು. ಅವರವರ ಶರೀರ ಪ್ರಕೃತಿಗೆ ಒಗ್ಗಿದರೆ ಮಾತ್ರ ಬಳಸಬೇಕು.  ಉಪಯೋಗವಿಲ್ಲದೆ ಅಮೃತ ಬಳಸಿದರೂ ವ್ಯರ್ಥ ಎಂಬುದನ್ನು ಸದಾ ನೆನಪಿನಲ್ಲಿಡಬೇಕು.

ಸಮೃದ್ಧ ಜೀವಸತ್ವವುಳ್ಳ ತರಕಾರಿ

ಬಹು ಉಪಯೋಗಿಯಾಗಿರುವಂತೆ ಹಲವು ಜೀವಸತ್ವಗಳನ್ನು ಹೊಂದಿರುವ ತರಕಾರಿ ಮೂಲಂಗಿ. ಅಂದರೆ, ಸೋಡಿಯಂ, ಪ್ರೋಟೀನ್, ವಿಟಮಿನ್-ಎ, ಬಿ, ಸಿ, ಅಯೋಡಿನ್, ಕ್ಯಾಲ್ಸಿಯಂ, ಕಬ್ಬಿಣ, ರಂಜಕ, ಕ್ಲೋರಿನ್ ಮತ್ತು ಮೆಗ್ನೀಸಿಯಮ್ ಮೊದಲಾದ ಸತ್ವಗಳು ಹೇರಳವಾಗಿ ಮೂಲಂಗಿಯಲ್ಲಿ ದೊರೆಯುತ್ತವೆ.

ಜಠರದ ಕಲ್ಮಶಗಳನ್ನು ನಿವಾರಿಸುವುದಲ್ಲದೆ, ಕಾಮಾಲೆ ಅಥವಾ ಜಾಂಡೀಸ್ ತುತ್ತಾದವರಿಗೆ ಸಿದ್ಧೌಷಧವಾಗಿ ಕಾರ್ಯ ನಿರ್ವಹಿಸಲಿದೆ. ಇದರಿಂದಲೇ ಹೆಚ್ಚು ಬಳಸಲು ಸಲಹೆ ಮಾಡುತ್ತಾರೆ. ಪ್ರಾಚೀನ ಚಿಕಿತ್ಸಾ ಪದ್ಧತಿಗಳಲ್ಲಿ ಇದರಲ್ಲಿರುವ ಔಷಧಗುಣವನ್ನು ಅರಿತು ಬಳಸುತ್ತಾ ಬರಲಾಗಿದೆ.

 ರಕ್ತ ಶುದ್ಧೀಕರಣಗೊಳಿಸಲು, ಥೈರಾಯ್ಡ್ ಗ್ರಂಥಿಯ ಸರಿಪಡಿಸುವುದರಲ್ಲೂ ಮೂಲಂಗಿಯ ಪಾತ್ರ ಪ್ರಮುಖವಾಗಿದೆ.  ಮೂಲಂಗಿಯಲ್ಲಿ ಸಾಮಾನ್ಯವಾಗಿ ಹೆಚ್ಚು ಬಳಕೆಯಲ್ಲಿರುವುದು ಬಿಳಿ ಬಣ್ಣದ್ದು, ಕೆಂಪು ಮೂಲಂಗಿ, ಉದ್ದವಾದ ಕೆಂಪು ಬಣ್ಣದ, ದುಂಡಾದ ಮೂಲಂಗಿಗಳು ಇವೆ.  ಯಾವುದೇ ರೀತಿಯ ಪಥ್ಯವಿರುವ ಔಷಧ ಬಳಸುವವರಿಗೂ ಮೂಲಂಗಿ ಬೇಡ ಎಂದು ಸಲಹೆ ಮಾಡುವುದಿಲ್ಲ.

ಮೂಲಂಗಿಯ ಬಗ್ಗೆ ಅಸಡ್ಡೆ ತೋರದೇ ತಿನ್ನುವುದರಲ್ಲೇ ಇದೆ ಆರೋಗ್ಯದ ಗುಟ್ಟು. ಅನಾದಿಕಾಲದಿಂದಲ್ಲೂ ಭಾರತ ಮಾತ್ರವಲ್ಲ ಜಗತ್ತಿನಾದ್ಯಂತ ತರಕಾರಿ ಮತ್ತು ಆಹಾರವಾಗಿ ಬಳಸುವುದು ಚಾಲ್ತಿಯಲ್ಲಿದೆ. ಈ ಮೇಲಿನ ವಿಚಾರವೂ ಅಂತರ್ಜಾಲ ಹಾಗೂ ಸಾಮಾಜಿಕ ಮಾಧ್ಯಮಗಳಲ್ಲಿ ದೊರೆಯುವ ಮಾಹಿತಿಯನ್ನು ಅವಲಂಭಿಸಿದೆ.

Share this:

  • Share on WhatsApp (Opens in new window) WhatsApp
  • Post
  • Tweet
  • Print (Opens in new window) Print
  • Email a link to a friend (Opens in new window) Email
good healthgood vegetableMultipurposePiles controlRadishwinter
4 FacebookTwitterPinterestEmail
admin

previous post
ಕಾಂಗ್ರೆಸ್‌ ವಿರುದ್ಧ ಕಿಡಿಕಾರಿದ ಜೆಡಿಎಸ್
next post
ಸಚಿವರಿಂದ ರೈತರಿಗೆ ಅವಮಾನ

You may also like

1.32 ಲಕ್ಷ ಕೋಟಿ ರೂ. ಸಾಲದ ಸಿದ್ದರಾಮಯ್ಯ ಬಜೆಟ್

March 6, 2026

ಜಾತಿ ವ್ಯವಸ್ಥೆಗೆ ಸಿದ್ದರಾಮಯ್ಯ ತೀವ್ರ ಕಳವಳ

February 28, 2026

ಅಮೆರಿಕದ ಫಿಲಡೆಲ್ಫಿಯಾದಲ್ಲಿ ’ಅಕ್ಕ’ ಬೆಳ್ಳಿ ಹಬ್ಬ

February 27, 2026

ಭ್ರಷ್ಟಾಚಾರ ಪಠ್ಯ ನಿಷೇಧ: ಸುಪ್ರೀಂಕೋರ್ಟ್

February 26, 2026

ಮನರೇಗಾ ಮರುಸ್ಥಾಪನೆ ಹೋರಾಟ ಬೆಂಬಲಿಸಿ

February 23, 2026

ಉಚಿತ ಗ್ಯಾರಂಟಿಗಳು ದೇಶದ ಅಭಿವೃದ್ಧಿಗೆ ಮಾರಕ

February 19, 2026

ಗ್ಯಾರಂಟಿ ಉಳಿಕೆ ಹಣ ಎಂಎಸ್‌ಐಎಲ್ ಚಿಟ್ಸ್‌ನಲ್ಲಿ ಹೂಡಿ

February 7, 2026

ವಿಬಿ-ಜಿ-ರಾಮ್-ಜಿ ಕಾಯ್ದೆ ಕುತಂತ್ರ ವಿರೋಧಿಸಿ

February 6, 2026

ಡ್ರಗ್ಸ್ ಮುಕ್ತ ಕರ್ನಾಟಕ ನಿರ್ಮಾಣ ಸರ್ಕಾರದ ಗುರಿ

February 5, 2026

ಡ್ರಗ್ಸ್: ಡಾ.ಪರಮೇಶ್ವರ್ ರಾಜೀನಾಮೆಗೆ ಬಿಜೆಪಿ ಆಗ್ರಹ

January 31, 2026

Social Networks

Facebook Twitter Instagram Linkedin Youtube Email Rss

KMS Analysis

  • ಯಡಿಯೂರೋತ್ಸವಕ್ಕೆ 114 ರ ಟಾರ್ಗೆಟ್

    March 2, 2026
  • ಬಿಹಾರ ಚುನಾವಣಾ ಫಲಿತಾಂಶ ಬಳಿಕ ಸಿದ್ದರಾಮಯ್ಯ ದೆಹಲಿಗೆ

    October 25, 2025
  • ಜಾತಿಗಣತಿ ವೇಳೆ ಒಕ್ಕಲಿಗ ಎಂದೇ ಬರೆಸಲು ಶ್ರೀಗಳ ಕರೆ

    October 6, 2025
  • ಡಿ.ಕೆ. ಸುರೇಶ್ ಗೆ ಜಾರಿ ನಿರ್ದೇಶನಾಲಯದ ನೋಟಿಸ್

    June 17, 2025
  • ಕರ್ನಾಟಕದಲ್ಲಿ ಹೊಸದಾಗಿ ಜಾತಿಗಣತಿ

    June 12, 2025

Categories

  • Special Story (404)
  • ಅಂಕಣ (108)
  • ಉದ್ಯೋಗ (315)
  • ದಿನ ಭವಿಷ್ಯ (110)
  • ರಾಜಕೀಯ (1,902)
  • ರಾಜ್ಯ (2,213)
  • ರಾಷ್ಟ್ರ (2,183)
  • ವಿಶ್ಲೇಷಣೆ (189)
  • ಶಿಕ್ಷಣ (381)
  • ಸಂದರ್ಶನ (11)

About Us

ನೈಜ ಹಾಗೂ ವಿಶ್ವಾಸಾರ್ಹತೆಯ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರವಾದ ಸುದ್ದಿ, ಅಭಿಪ್ರಾಯಗಳ ಪ್ರಕಟಣೆಯ ವೆಬ್ ತಾಣ. ಕರ್ನಾಟಕ ರಾಜ್ಯದ ಪ್ರಚಲಿತ ವಿದ್ಯಮಾನಗಳು, ರಾಜಕೀಯ, ನಾಡು, ನುಡಿ, ಜಲ ವಿಚಾರಗಳಲ್ಲದೆ, ದೈನಂದಿನ ಆಗು-ಹೋಗುಗಳು, ವಿವಿಧ ಜಿಲ್ಲೆಗಳ ಪ್ರಮುಖ ವಿಚಾರಗಳ ಭಿತ್ತರಕ್ಕೆ ಹೆಚ್ಚು ಒತ್ತು ನೀಡುವುದು. ನಮ್ಮ ಕುರಿತು ಹೆಚ್ಚಿನ ವಿವರ ಪಡೆಯಲು ಇಲ್ಲಿ ಇಲ್ಲಿಕ್ಲಿಕ್‌ ಮಾಡಿ

Facebook Twitter Linkedin Youtube Email Vimeo Rss

Politics

  • 1.32 ಲಕ್ಷ ಕೋಟಿ ರೂ. ಸಾಲದ ಸಿದ್ದರಾಮಯ್ಯ ಬಜೆಟ್

    March 6, 2026
  • ಬರ ಎದುರಾಗಲಿದೆ: ಕರ್ನಾಟಕಕ್ಕೆ ಕೇಂದ್ರದ ಎಚ್ಚರಿಕೆ

    March 4, 2026
  • ಯುದ್ಧ ಪ್ರದೇಶದಲ್ಲಿ ಸಿಲುಕಿದ ಸಚಿವ, ಶಾಸಕರು

    March 2, 2026

KMS Special

  • 1.32 ಲಕ್ಷ ಕೋಟಿ ರೂ. ಸಾಲದ ಸಿದ್ದರಾಮಯ್ಯ ಬಜೆಟ್

    March 6, 2026
  • ಬರ ಎದುರಾಗಲಿದೆ: ಕರ್ನಾಟಕಕ್ಕೆ ಕೇಂದ್ರದ ಎಚ್ಚರಿಕೆ

    March 4, 2026
  • ಯುದ್ಧ ಪ್ರದೇಶದಲ್ಲಿ ಸಿಲುಕಿದ ಸಚಿವ, ಶಾಸಕರು

    March 2, 2026
  • Facebook
  • Twitter
  • Linkedin
  • Youtube
  • Email
  • Telegram

@2020 - All Right Reserved. Designed and Developed by Karnatakabest.com

KMS
  • Home
  • Special Story
  • ರಾಜ್ಯ
  • ರಾಷ್ಟ್ರ
  • ರಾಜಕೀಯ
  • ವಿಶ್ಲೇಷಣೆ
  • ಅಂಕಣ
  • ಶಿಕ್ಷಣ
  • ಉದ್ಯೋಗ
  • ಸಂದರ್ಶನ

Read alsox

1.32 ಲಕ್ಷ ಕೋಟಿ ರೂ. ಸಾಲದ ಸಿದ್ದರಾಮಯ್ಯ...

March 6, 2026
Sign In

Keep me signed in until I sign out

Forgot your password?

Password Recovery

A new password will be emailed to you.

Have received a new password? Login here

ಕೆಎಂಎಸ್‌ ಕನ್ನಡ ವಾಟ್ಸಪ್‌ ಗ್ರೂಪ್‌ಗೆ ಸೇರಿ