Tuesday, May 20, 2025
  • ನಮ್ಮ ಬಗ್ಗೆ
  • ಸಂಪರ್ಕಿಸಿ
  • Privacy Policy
  • Disclaimer
  • Login/Register
KMS
  • Home
  • Special Story
  • ರಾಜ್ಯ
  • ರಾಷ್ಟ್ರ
  • ರಾಜಕೀಯ
  • ವಿಶ್ಲೇಷಣೆ
  • ಅಂಕಣ
  • ಶಿಕ್ಷಣ
  • ಉದ್ಯೋಗ
  • ಸಂದರ್ಶನ
Tuesday, May 20, 2025
  • ನಮ್ಮ ಬಗ್ಗೆ
  • ಸಂಪರ್ಕಿಸಿ
  • Privacy Policy
  • Disclaimer
  • Login/Register
KMS
Banner
  • Home
  • Special Story
  • ರಾಜ್ಯ
  • ರಾಷ್ಟ್ರ
  • ರಾಜಕೀಯ
  • ವಿಶ್ಲೇಷಣೆ
  • ಅಂಕಣ
  • ಶಿಕ್ಷಣ
  • ಉದ್ಯೋಗ
  • ಸಂದರ್ಶನ
KMS
KMS
  • Home
  • Special Story
  • ರಾಜ್ಯ
  • ರಾಷ್ಟ್ರ
  • ರಾಜಕೀಯ
  • ವಿಶ್ಲೇಷಣೆ
  • ಅಂಕಣ
  • ಶಿಕ್ಷಣ
  • ಉದ್ಯೋಗ
  • ಸಂದರ್ಶನ

@2022 - All Right Reserved. Designed and Developed by PenciDesign

ಅಂಕಣಶಿಕ್ಷಣ

ದೇಹದ ತೂಕದ ಸಮತೋಲನಕ್ಕೆ ಶೂನ್ಯ ಮುದ್ರೆ

by admin April 14, 2024
written by admin April 14, 2024 0 comments 2 minutes read
Share 0FacebookTwitterPinterestEmail
423

ಕಿವಿ, ಮೈಗ್ರೇನ್ ಸಮಸ್ಯೆಗಳಿಗೆ ಸೂಕ್ತ ಪರಿಹಾರ

ಆಧುನಿಕ ಜೀವನಶೈಲಿಯಿಂದ ಬದುಕಿನ ಕ್ರಮವೇ ಬದಲಾಗುತ್ತಿದೆ. ಆಹಾರ ಸೇವನೆಯಲ್ಲಿ ಬದಲಾವಣೆ, ಜೀವನ ಕ್ರಮದಲ್ಲಿ ಬದಲಾವಣೆ, ಕೆಲಸದ ವಿಧಾನದಲ್ಲಿ ಬದಲಾವಣೆಗಳಾಗಿ ಅನೇಕ ರೀತಿಯ ದೈಹಿಕ, ಮಾನಸಿಕ ಒತ್ತಡಗಳಿಗೆ ಯುವಜನರು ಒಳಗಾಗುತ್ತಿದ್ದಾರೆ. ದೇಹದ ಸೂಕ್ಷ್ಮ ರೂಪ ಮನಸ್ಸು. ಮನಸ್ಸಿನ ಸ್ಥೂಲರೂಪ ದೇಹ. ಈ ಸತ್ಯವನ್ನು ಮರೆತು ದೇಹ ಬೇರೆ, ಮನಸ್ಸು ಬೇರೆ ಎಂದು ಅನೇಕ ರೋಗಗಳಿಂದ ಬಳಲುವವರೇ ಹೆಚ್ಚು. ಮನಸ್ಸು ವೇದನೆಗೆ ಒಳಗಾದರೆ, ದೇಹದಲ್ಲಿ ಗಂಟುಗಳು ಕಾಣಿಸಿಕೊಳ್ಳುತ್ತವೆ. ಮಾನಸಿಕ ಕಾಯಿಲೆಗಳಿಗೆ ಮುಕ್ತಿ ದೊರೆಯದ ಹೊರತು ದೈಹಿಕ ನೋವುಗಳಿಗೆ ಮುಕ್ತಿ ಇಲ್ಲ.

ಒತ್ತಡದ ಜೀವನಶೈಲಿಯಲ್ಲಿ ಮಾನಸಿಕ ವೇದನೆಗಳನ್ನು ಸರಿದೂಗಿಸಲಾಗದ ಸಂದರ್ಭದಲ್ಲಿ ಪ್ರಜ್ಞಾಪೂರ್ವಕವಾಗಾದರೂ ನರಮಂಡಲಗಳನ್ನು ಜಾಗೃತಿಗೊಳಿಸುವ ಮೂಲಕ ಮನಃ ಶಾಂತಿಯನ್ನು ಪಡೆಯಬೇಕಾಗುವುದು.  ನರಮಂಡಲಗಳ ಜಾಗೃತಿಗಾಗಿ ನಾವು ಪ್ರತಿದಿನ ಹಸ್ತಮುದ್ರೆಗಳನ್ನು ಮಾಡುವ ಮೂಲಕ ಮೆದುಳನ್ನು ಸಕ್ರಿಯಗೊಳಿಸಿ ದೈಹಿಕ ನೋವು ಮತ್ತು ಮಾನಸಿಕ ವೇದನೆಯಿಂದ ಮುಕ್ತಿ ಪಡೆಯಬಹುದಾಗಿದೆ. ದೇಹದೊಳಗಿನ ಆಲಸ್ಯ, ಇಂದ್ರಿಯಗಳ ಗ್ರಹಿಕೆಯ ಕೊರತೆಯನ್ನು ಅನುಭಿಸುವವರ ಸಂಖ್ಯೆ ಆಧುನಿಕ ಜೀವನಶೈಲಿಯಲ್ಲಿ ಹೆಚ್ಚಾಗುತ್ತಿದೆ.

ಬೆಂಗಳೂರಿಗೆ ಮತ್ತೆ ಹೆಸರಘಟ್ಟ ಕೆರೆಯ ನೀರು

ಇಂದ್ರಿಯಗಳ ಗ್ರಹಿಕೆಯ ಕೊರತೆಯಿಂದಾಗಿ  ದೇಹದ ಕೆಲವು ಭಾಗಗಳಲ್ಲಿ ಅತಿಯಾದ ಮರಗಟ್ಟುವಿಕೆ ಅಥವಾ ಜುಮ್ ಎನಿಸುವ ಅನುಭವವಾಗುತ್ತದೆ. ಆಧುನಿಕ ಜೀವನಶೈಲಿಯಿಂದಾಗಿ ಥೈರಾಯಿಡ್ ನಂತಹ ಸಮಸ್ಯೆಗಳು ಸ್ತ್ರೀ- ಪುರುಷರಿಬ್ಬರಲ್ಲೂ ಕಂಡುಬರುತ್ತಿವೆ. ಗಂಟಲಿನ ಸಮಸ್ಯೆ, ವಸಡಿನ ಕಾಯಿಲೆಗಳು, ಕಿವಿಗೆ ಸಂಬಂಧಿಸಿದ ಸಮಸ್ಯೆಗಳಿಗೆ ಯೋಗಶಾಸ್ತ್ರದಲ್ಲಿ ಆಕಾಶ ಮುದ್ರೆ / ಶೂನ್ಯಮುದ್ರೆ / ಶುನಿಮುದ್ರೆ ರಾಮಬಾಣದಂತೆ ಕಾರ್ಯನಿರ್ವಹಿಸುತ್ತದೆ. ಈ ಯೋಗಮುದ್ರೆಯು ಭೂಮಿಯ ಅಂಶದೊಂದಿಗೆ ಸಂಬಂಧವನ್ನು ಹೊಂದಿರುವುದರಿಂದ ತಾಳ್ಮೆಯನ್ನು ಹೆಚ್ಚಿಸುವುದು.

ಆಕಾಶ ಮುದ್ರೆ ಮಾಡುವ ವಿಧಾನ

ಮಧ್ಯದ ಬೆರಳಿನ ತುದಿಯನ್ನು ಹೆಬ್ಬೆರಳಿನ ತುದಿಗೆ ಒತ್ತುವ ಮೂಲಕ ಶುನಿಮುದ್ರೆ ರೂಪಗೊಳ್ಳುವುದು. ಇತರ ಬೆರಳುಗಳು ನೇರವಾಗಿ ಇರಬೇಕು. ಈ ಮುದ್ರೆಯನ್ನು ಮಾಡುವಾಗ ಸುಖಾಸನ, ಪದ್ಮಾಸನ ಅಥವಾ ವಜ್ರಾಸನದ ಭಂಗಿಯಲ್ಲಿ ಕುಳಿತುಕೊಳ್ಳಿ. ಬೆನ್ನು ಮತ್ತು ಕುತ್ತಿಗೆ ನೇರವಾಗಿರಲಿ. ನಿಮ್ಮ ಕೈಗಳನ್ನು ಮೊಣಕಾಲುಗಳ ಮೇಲೆ ಇರಿಸಿಕೊಂಡು ಅಂಗೈ ಆಕಾಶವನ್ನು ನೋಡುವಂತೆ ಇಟ್ಟುಕೊಳ್ಳಿ. ಎರಡೂ ಕೈಗಳಿಂದ ಈ ಮುದ್ರೆಯನ್ನು ಮಾಡಬೇಕಾಗುತ್ತದೆ.

ಮುದ್ರೆ ಮಾಡುವಂತಹ ಸಂದರ್ಭದಲ್ಲಿ ಉಸಿರಾಟದ ಮೇಲೆ ಏಕಾಗ್ರತೆ ಇರಲಿ. ನಿಧಾನವಾಗಿ ಉಸಿರಾಡಿ. ದೇಹದ ಒತ್ತಡಗಳಿಂದ ಹೊರಬರುತ್ತೀರಿ. ಧ್ಯಾನ ಮಾಡುವ ಸಂದರ್ಭದಲ್ಲಿ, ಪ್ರಾಣಾಯಾಮ ಮತ್ತು ಯೋಗಾಸನದ ಸಂದರ್ಭದಲ್ಲಿ ಈ ಮುದ್ರೆಯನ್ನು ಅಭ್ಯಾಸ ಮಾಡಬಹುದು. ಬ್ರಾಹ್ಮಿ ಮುಹೂರ್ತ ಅಥವಾ ರಾತ್ರಿ ಮಲಗುವ ಮುಂಚೆ ಪ್ರತಿದಿನ 20 ನಿಮಿಷಗಳ ಕಾಲ ಅಭ್ಯಾಸ ಮಾಡುವ ಮೂಲಕ ದೇಹದೊಳಗಿನ ಒತ್ತಡಗಳಿಂದ ಹೊರಬರಲಿದ್ದೀರಿ.

ಶೂನ್ಯ ಅಥವಾ ಆಕಾಶ ಮುದ್ರೆ ಎಂದು ಕರೆಯಲ್ಪಡುವ ಶುನಿಮುದ್ರೆಯು ಭಾರತೀಯ ಪ್ರಾಚೀನ ಜೀವನಶೈಲಿಯಲ್ಲಿ ತನ್ನ ಅಸ್ಥಿತ್ವವನ್ನು ಉಳಿಸಿಕೊಂಡು ಬಂದಿದೆ. ಶೂನ್ಯ ಎಂದರೆ ಬ್ರಹ್ಮಾಂಡ. ಬ್ರಹ್ಮಾಂಡವನ್ನು ಜಯಿಸುವ ಶಕ್ತಿ ಈ ಮುದ್ರೆಯಿಂದ ಲಭಿಸುವುದು. ಅಗ್ನಿತತ್ವ ಮತ್ತು ಬಾಹ್ಯಾಕಾಶ ತತ್ವಗಳೆರಡೂ ಸ್ಪರ್ಶಿಸುವ ಮೂಲಕ ದೇಹದ ಒಳಗೆ ಶೂನ್ಯತ್ವವನ್ನು ಉಂಟು ಮಾಡುವುದು. ನೋಡಲು ಎಷ್ಟು ಸರಳವೆಂದು ತೋರುವ ಈ ಮುದ್ರೆಯು ಪ್ರಜ್ಞಾಪೂರ್ವಕವಾಗಿ ಅಭ್ಯಾಸ ಮಾಡಿದಾಗ ನಿಮ್ಮೊಳಗೆ ಸ್ಥಿರವಾದ ಶಕ್ತಿಯ ಭಾವ ನೆಲೆಸುವಂತೆ ಮಾಡುತ್ತದೆ.

ದೇಹದೊಳಗಿನ ವಾಯು ತತ್ವ ಮತ್ತು ಬೆಂಕಿಯ ಅಂಶಗಳು ಬಲಗೊಳ್ಳುವುದರಿಂದ ಜೀರ್ಣಕ್ರಿಯೆ ಉತ್ತಮಗೊಳ್ಳುವುದು ಹಾಗೂ ದೇಹದ ಉಷ್ಣತೆಯಲ್ಲಿ ಸಮತೋಲನ ಕಾಯ್ದುಕೊಳ್ಳುವುದು. ದೇಹದ ತೂಕ ಸಮತೋಲಗೊಳ್ಳುತ್ತದೆ. ಜೀರ್ಣಕ್ರಿಯೆ ಉತ್ತಮಗೊಳ್ಳುವುದರಿಂದ ಅತಿಸಣ್ಣ ಇರುವವರು ಆರೋಗ್ಯಕರ ತೂಕಕ್ಕೆ ಬರುತ್ತಾರೆ. ಧಡೂತಿ ದೇಹವುಳ್ಳವರು ದೇಹದ ತೂಕ ತಗ್ಗಿಸಿಕೊಂಡು ಆರೋಗ್ಯವಂತರಾಗುತ್ತಾರೆ. ದೈಹಿಕ, ಮಾನಸಿಕ ಲಾಭಗಳನ್ನು ಮೀರಿದ ಶುನಿ ಮುದ್ರೆಯು ಆಧ್ಯಾತ್ಮಿಕ ಬೆಳವಣಿಗೆಯನ್ನು ಉತ್ತೇಜಿಸುವುದು. ಈ ಮುದ್ರೆಯನ್ನು ನಿಯಮಿತವಾಗಿ ಅಭ್ಯಾಸ ಮಾಡುವುದರಿಂದಾಗಿ ಏಕಾಗ್ರತೆಯ ಮಟ್ಟವನ್ನು ಹೆಚ್ಚಿಸುವುದು. ಒತ್ತಡದ ಮಾನಸಿಕ ಸ್ಥಿತಿ ಕಳೆದು ತಾಳ್ಮೆಯ ಜೀವನಶೈಲಿ ಈ ಮುದ್ರೆಯನ್ನು ಅಭ್ಯಾಸ ಮಾಡುವವರಿಗೆ ಲಭಿಸುವುದು.

ಪ್ರಯೋಜನಗಳು

ಆಕಾಶ ಮುದ್ರೆಯು ಕಿವಿ ಸಂಬಂಧಿತ ರೋಗಗಳಿಗೆ ಪರಿಹಾರವನ್ನು ನೀಡುತ್ತದೆ. ಹೃದ್ರೋಗಗಳನ್ನು ತಡೆಗಟ್ಟಲು ಸಹಕಾರಿಯಾಗುತ್ತದೆ. ಥೈರಾಯಿಡ್ ನಂತಹ ಸಮಸ್ಯೆಗಳನ್ನು ನಿವಾರಿಸುವುದಲ್ಲದೆ, ಚಲನೆಯನ್ನು ಕಳೆದುಕೊಂಡು ಮರಗಟ್ಟಿರುವ ದೇಹದ ಭಾಗಗಳನ್ನು ಸರಿಪಡಿಸುವುದು. ದೈಹಿಕ ಮತ್ತು ಮಾನಸಿಕ ಆರೋಗ್ಯದ ಅಂತರವನ್ನು ಕಡಿಮೆ ಮಾಡುತ್ತದೆ. ಜೀವನದಲ್ಲಿ ಎಷ್ಟೇ ಸೋಲುಗಳನ್ನು ಅನುಭವಿಸಿ ಹತಾಶರಾದವರು ಶುನಿ ಮುದ್ರೆಯನ್ನು ಪ್ರತಿದಿನ ಅಭ್ಯಾಸ ಮಾಡುವುದರಿಂದ ಜ್ಞಾನೋದಯ ಮಾರ್ಗದಲ್ಲಿ ನಡೆಯುವರು.

ಮಧ್ಯದ ಬೆರಳು ಆಕಾಶ ತತ್ವವನ್ನು ಪ್ರತಿನಿಧಿಸುವುದರಿಂದ ನಮ್ಮೊಳಗಿನ ಶೂನ್ಯತ್ವವನ್ನು ಸಮತೋಲಗೊಳಿಸಿಕೊಳ್ಳುವ  ಮನಸ್ಥಿತಿಯನ್ನು ಪಡೆಯುತ್ತಾರೆ. ವಾತದೋಷ ಹೊಂದಿರುವವರಿಗೆ ಈ ಮುದ್ರೆ ಸಹಕಾರಿಯಾಗಲಿದೆ. ದೇಹದೊಳಗಿನ ಗಂಟುಗಳನ್ನು ಕರಗಿಸುವ ಅಂಶವನ್ನು ಈ ಮುದ್ರೆ ಮಾಡುತ್ತದೆ. ಮೂಳೆ ಸಂಬಂಧಿತ ಕಾಯಿಲೆಗಳಿಗೆ ಹಾಗೂ ದೇಹದಲ್ಲಿ ಕ್ಯಾಲ್ಸಿಯಂ ಹೆಚ್ಚಿಸಲು ಸಹಕಾರಿಯಾಗಿದೆ.

ಹಲ್ಲುಗಳನ್ನು ಬಲಪಡಿಸುವುದಲ್ಲದೆ, ತಲೆ ತಿರುಗುವಿಕೆಯಂತಹ ಸಮಸ್ಯೆಗಳಿಗೆ ಔಷಧದಂತೆ ಕೆಲಸ ಮಾಡುತ್ತದೆ. ಸ್ಟಿರಾಯಿಡ್ ನಂತಹ ಔಷಧಿಯ ಸೇವನೆಯಿಂದ ಉಂಟಾಗಬಹುದಾದ ಅಡ್ಡಪರಿಣಾಮಗಳನ್ನು ಆಕಾಶ ಮುದ್ರೆಯನ್ನು ಅಭ್ಯಾಸ ಮಾಡುವ ಮೂಲಕ ಸರಿಪಡಿಸಿಕೊಳ್ಳಬಹುದಾಗಿದೆ. ಅತಿಯಾದ ಗೊರಕೆ ಸಮಸ್ಯೆ ಇರುವವರು ಈ ಮುದ್ರೆಯನ್ನು ಅಭ್ಯಾಸ ಮಾಡುವ ಮೂಲಕ ಸುಖ ನಿದ್ರೆಗೆ ಜಾರಬಹುದಾಗಿದೆ. ಮೈಗ್ರೇನ್ ನಂತಹ ಸಮಸ್ಯೆಗಳಿಗೆ ತಕ್ಷಣದ ಪರಿಹಾರವನ್ನು ಸೂಚಿಸುವುದು.

ಮುದ್ರೆಯ ಮಿತಿಗಳು

ಬುದ್ಧನ ಹೆಚ್ಚು ಪ್ರತಿಮೆಗಳಲ್ಲಿ ಈ ಆಕಾಶ ಮುದ್ರೆ ಇರುವುದನ್ನು ಗಮನಿಸಬಹುದು. ವಾತ ಪ್ರಕೃತಿ ಸಮಸ್ಯೆ ಇದ್ದವರು ಈ ಮುದ್ರೆಯನ್ನು ಅತಿ ಹೆಚ್ಚು ಅಭ್ಯಾಸ ಮಾಡಬಾರದು. ಹೆಬ್ಬೆರಳು ಮತ್ತು ಮಧ್ಯದ ಬೆರಳಿನ ತುದಿಯನ್ನು ಬಲವಾಗಿ ಸ್ಪರ್ಶಿಸಬಾರದು. ಆರಾಮದಾಯಕವಾದ ಉಡುಪು ಧರಿಸಿರಬೇಕು. ಗಟ್ಟಿಯಾದ ನೆಲದ ಮೇಲೆ ಅಭ್ಯಾಸ ಮಾಡುವುದು ಒಳ್ಳೆಯದಲ್ಲ.

ನೆನಪಿ ಶಕ್ತಿ ವೃದ್ಧಿಗೆ ಶಾಂಭವಿ ಮುದ್ರೆ

Share this:

  • WhatsApp
  • Post
  • Tweet
  • Print
  • Email
balancebody weightIdeal solutionmigraineproblemsr earshunyamudraZero seal
Share 0 FacebookTwitterPinterestEmail
admin

previous post
ಬೆಂಗಳೂರಿಗೆ ಮತ್ತೆ ಹೆಸರಘಟ್ಟ ಕೆರೆಯ ನೀರು
next post
ದಿನ ಭವಿಷ್ಯ : ಸೋಮವಾರ, 15 ಏಪ್ರಿಲ್ 2024

You may also like

ಶುರುವಾಗಲಿದೆ ನಿಖಿಲ್ ಪಟ್ಟಾಭಿಷೇಕ ಯಾತ್ರೆ

May 19, 2025

ಅತಿಥಿ ಶಿಕ್ಷಕರು ಮತ್ತು ಉಪನ್ಯಾಸಕರ ಗೌರವ ಸಂಭಾವನೆ ಪರಿಷ್ಕರಣೆ

May 15, 2025

ಸಕಾರದಿಂದ 108 ಆಂಬುಲೆನ್ಸ್ ಸೇವೆ

May 14, 2025

ಎಸ್‌ಎಸ್‌ಎಲ್‌ಸಿ ಫಲಿತಾಂಶ: ಬಾಲಕಿಯರೇ ಮೇಲುಗೈ

May 2, 2025

ಕರ್ನಾಟಕದಲ್ಲಿ ಮೇ 4 ರಂದು ನೀಟ್ ಪರೀಕ್ಷೆ

April 30, 2025

ವೃತ್ತಿ ಶಿಕ್ಷಣ: ಮೇ 20ರ ವೇಳೆಗೆ ಸಿಇಟಿ ಫಲಿತಾಂಶ

April 26, 2025

ಕನ್ನಡಿಗನ ಮೇಲೆ ಹಲ್ಲೆ: ಕ್ರಮಕ್ಕೆ ಸಿದ್ದರಾಮಯ್ಯ ಆದೇಶ

April 22, 2025

ಇತಿಹಾಸ ಮರೆಯದ ಕೌತುಕದ ಕ್ಷಣಗಳು..

April 21, 2025

ಜಾತಿ ಗಣತಿ : ನಿರ್ಧಾರ ಕೈಗೊಳ್ಳದ ಸರ್ಕಾರ

April 17, 2025

ಮೀಸಲಾತಿ: ಸಿದ್ದರಾಮಯ್ಯ ಸಮುದಾಯಕ್ಕೆ ಸಿಂಹಪಾಲು

April 16, 2025

Leave a Comment Cancel Reply

Save my name, email, and website in this browser for the next time I comment.

Social Networks

Facebook Twitter Instagram Linkedin Youtube Email Rss

KMS Analysis

  • ಶತ್ರು ದೇಶದ ಕ್ಷೇಮಕ್ಕಾಗಿ ಕಾಂಗ್ರೆಸ್ ಮಿಡಿಯುತ್ತಿದೆ : ಹೆಚ್ ಡಿಕೆ ಟೀಕೆ

    May 16, 2025
  • ಮೇ 20ಕ್ಕೆ ಕಾಂಗ್ರೆಸ್ ಸರ್ಕಾರದ ಸಾಧನಾ ಸಮಾವೇಶ

    May 15, 2025
  • ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ವರದಿ ಅನುಷ್ಠಾನಕ್ಕೆ ಸಿದ್ದರಾಮಯ್ಯ ಕಸರತ್ತು

    May 8, 2025
  • ಭಯೋತ್ಪಾದನೆ ನಿಗ್ರಹ: ಪ್ರಧಾನಿ ಮೋದಿಗೆ ಸಂಪೂರ್ಣ ಬೆಂಬಲ ಘೋಷಿಸಿದ ದೇವೇಗೌಡರು

    May 6, 2025
  • ಜಾತಿಗಣತಿ ವರದಿ ದತ್ತಾಂಶ ಮರುಪರಿಶೀಲನೆಗೆ ನಿರ್ಧಾರ

    April 18, 2025

Categories

  • Special Story (180)
  • ಅಂಕಣ (102)
  • ಉದ್ಯೋಗ (237)
  • ದಿನ ಭವಿಷ್ಯ (110)
  • ರಾಜಕೀಯ (1,583)
  • ರಾಜ್ಯ (1,872)
  • ರಾಷ್ಟ್ರ (1,844)
  • ವಿಶ್ಲೇಷಣೆ (183)
  • ಶಿಕ್ಷಣ (318)
  • ಸಂದರ್ಶನ (11)

About Us

ನೈಜ ಹಾಗೂ ವಿಶ್ವಾಸಾರ್ಹತೆಯ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರವಾದ ಸುದ್ದಿ, ಅಭಿಪ್ರಾಯಗಳ ಪ್ರಕಟಣೆಯ ವೆಬ್ ತಾಣ. ಕರ್ನಾಟಕ ರಾಜ್ಯದ ಪ್ರಚಲಿತ ವಿದ್ಯಮಾನಗಳು, ರಾಜಕೀಯ, ನಾಡು, ನುಡಿ, ಜಲ ವಿಚಾರಗಳಲ್ಲದೆ, ದೈನಂದಿನ ಆಗು-ಹೋಗುಗಳು, ವಿವಿಧ ಜಿಲ್ಲೆಗಳ ಪ್ರಮುಖ ವಿಚಾರಗಳ ಭಿತ್ತರಕ್ಕೆ ಹೆಚ್ಚು ಒತ್ತು ನೀಡುವುದು. ನಮ್ಮ ಕುರಿತು ಹೆಚ್ಚಿನ ವಿವರ ಪಡೆಯಲು ಇಲ್ಲಿ ಇಲ್ಲಿಕ್ಲಿಕ್‌ ಮಾಡಿ

Facebook Twitter Linkedin Youtube Email Vimeo Rss

Politics

  • ಮುಖ್ಯಮಂತ್ರಿ ಗಾದಿಗೆ ಶಿವಕುಮಾರ್ ತಂತ್ರಗಾರಿಕೆ ಆರಂಭ

    May 19, 2025
  • ಶುರುವಾಗಲಿದೆ ನಿಖಿಲ್ ಪಟ್ಟಾಭಿಷೇಕ ಯಾತ್ರೆ

    May 19, 2025
  • 93ನೇ ವರ್ಷಕ್ಕೆ ಕಾಲಿಟ್ಟಿ ದೇವೇಗೌಡರು, ಶುಭ ಕೋರಿದ ಪ್ರಧಾನಿ ಮೋದಿ, ಅಮಿತ್ ಶಾ

    May 18, 2025

KMS Special

  • ಮುಖ್ಯಮಂತ್ರಿ ಗಾದಿಗೆ ಶಿವಕುಮಾರ್ ತಂತ್ರಗಾರಿಕೆ ಆರಂಭ

    May 19, 2025
  • ಮೇ 20ಕ್ಕೆ ಕಾಂಗ್ರೆಸ್ ಸರ್ಕಾರದ ಸಾಧನಾ ಸಮಾವೇಶ

    May 15, 2025
  • ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ವರದಿ ಅನುಷ್ಠಾನಕ್ಕೆ ಸಿದ್ದರಾಮಯ್ಯ ಕಸರತ್ತು

    May 8, 2025
  • Facebook
  • Twitter
  • Linkedin
  • Youtube
  • Email
  • Telegram
KMS
  • Home
  • Special Story
  • ರಾಜ್ಯ
  • ರಾಷ್ಟ್ರ
  • ರಾಜಕೀಯ
  • ವಿಶ್ಲೇಷಣೆ
  • ಅಂಕಣ
  • ಶಿಕ್ಷಣ
  • ಉದ್ಯೋಗ
  • ಸಂದರ್ಶನ

Read alsox

ಶುರುವಾಗಲಿದೆ ನಿಖಿಲ್ ಪಟ್ಟಾಭಿಷೇಕ ಯಾತ್ರೆ

May 19, 2025
Sign In

Keep me signed in until I sign out

Forgot your password?

Password Recovery

A new password will be emailed to you.

Have received a new password? Login here

ಕೆಎಂಎಸ್‌ ಕನ್ನಡ ವಾಟ್ಸಪ್‌ ಗ್ರೂಪ್‌ಗೆ ಸೇರಿ