Monday, June 8, 2026
  • ನಮ್ಮ ಬಗ್ಗೆ
  • ಸಂಪರ್ಕಿಸಿ
  • Privacy Policy
  • Disclaimer
  • Login/Register
KMS
  • Home
  • Special Story
  • ರಾಜ್ಯ
  • ರಾಷ್ಟ್ರ
  • ರಾಜಕೀಯ
  • ವಿಶ್ಲೇಷಣೆ
  • ಅಂಕಣ
  • ಶಿಕ್ಷಣ
  • ಉದ್ಯೋಗ
  • ಸಂದರ್ಶನ
Monday, June 8, 2026
  • ನಮ್ಮ ಬಗ್ಗೆ
  • ಸಂಪರ್ಕಿಸಿ
  • Privacy Policy
  • Disclaimer
  • Login/Register
KMS
Banner
  • Home
  • Special Story
  • ರಾಜ್ಯ
  • ರಾಷ್ಟ್ರ
  • ರಾಜಕೀಯ
  • ವಿಶ್ಲೇಷಣೆ
  • ಅಂಕಣ
  • ಶಿಕ್ಷಣ
  • ಉದ್ಯೋಗ
  • ಸಂದರ್ಶನ
KMS
KMS
  • Home
  • Special Story
  • ರಾಜ್ಯ
  • ರಾಷ್ಟ್ರ
  • ರಾಜಕೀಯ
  • ವಿಶ್ಲೇಷಣೆ
  • ಅಂಕಣ
  • ಶಿಕ್ಷಣ
  • ಉದ್ಯೋಗ
  • ಸಂದರ್ಶನ

@2022 - All Right Reserved. Designed and Developed by PenciDesign

ಅಂಕಣಶಿಕ್ಷಣಸಂದರ್ಶನ

ನೆನಪಿ ಶಕ್ತಿ ವೃದ್ಧಿಗೆ ಶಾಂಭವಿ ಮುದ್ರೆ

by admin April 7, 2024
written by admin April 7, 2024 0 comments 3 minutes read
1FacebookTwitterPinterestEmail
608

ಜ್ಞಾನಾರ್ಜನೆಗೂ ಉಪಯುಕ್ತ

ಮುದ್ರೆಗಳು ದೇಹ, ಮನಸ್ಸು, ಶಕ್ತಿಯ ಮೇಲೆ ಪರಿಣಾಮ ಬೀರುತ್ತವೆ. ದೇಹದ ಶಕ್ತಿಯನ್ನು ಕಾಸ್ಮಿಕ್ ಶಕ್ತಿಯೊಂದಿಗೆ ಸಂಯೋಜನೆಗೊಳಿಸುತ್ತವೆ. ಮುದ್ರೆಗಳನ್ನು ಐದು ವಿಧಗಳಾಗಿ ವಿಂಗಡಿಸಬಹುದು. ಹಸ್ತ ಅಥವಾ ಕೈ ಮುದ್ರೆ, ಮನ ಅಥವಾ ತಲೆ ಮುದ್ರೆ, ಕಾಯ ಅಥವಾ ಭಂಗಿ ಮುದ್ರೆ, ಬಂಧ ಅಥವಾ ಬೀಗ ಮುದ್ರೆ ಮತ್ತು ಅಥಾರ ಮುದ್ರೆ. ಶಾಂಭವಿ ಎಂಬುದು ಪಾರ್ವತಿಯ ಮತ್ತೊಂದು ಹೆಸರು. ಶಿವ ಪಾರ್ವತಿಗೆ ಹೇಳಿಕೊಟ್ಟ ಮುದ್ರೆ ಇದಾಗಿದೆ.

ಇದರಲ್ಲಿ ಮನಮುದ್ರೆಯನ್ನು  ಮಾಡುವಾಗ ತುಟಿಗಳು ತಲೆ, ಕಣ್ಣು, ಕಿವಿ ಮತ್ತು ನಾಲಗೆಯನ್ನು ಬಳಸಲಾಗುವುದು. ಉದಾಹರಣೆಗೆ ಶಾಂಭವಿ ಮುದ್ರೆ. ಶಾಂಭವಿ ಮುದ್ರೆಯು ಕಣ್ಣುಗಳನ್ನು ಬಳಸಿ ಮಾಡುವ ಮುದ್ರೆಯಾಗಿದೆ. ಹಾಗಾಗಿ ಇದನ್ನು ಮನಮುದ್ರೆ ಅಥವಾ ಮುಖ ಮುದ್ರೆ ಎಂತಲೂ ಕರೆಯುತ್ತಾರೆ. ಮಾನವನ ಆಧ್ಯಾತ್ಮಿಕ ಜೀವನವನ್ನು ಸುಧಾರಿಸಲು ಶಾಂಭವಿ ಮುದ್ರೆ ಅತ್ಯಂತ ಉಪಯುಕ್ತವಾಗಿದೆ.

ಶಾಂಭವಿ ಮುದ್ರೆಯನ್ನು ಭ್ರೂಮಧ್ಯ ದೃಷ್ಟಿ ಭಂಗಿ ಅಥವಾ ಹುಬ್ಬು ಕೇಂದ್ರಿತ ಭಂಗಿ ಎಂಬ ಹೆಸರುಗಳಿಂದಲೂ ಕರೆಯಲಾಗುತ್ತದೆ. ಹಸ್ತಮುದ್ರೆಗಳನ್ನು ಮಾಡುವಂತಹ ಸಂದರ್ಭದಲ್ಲಿ ಕಣ್ಣನ್ನು ಮುಚ್ಚಿ ಭಂಗಿಗಳನ್ನು ಮಾಡಲಾಗುವುದು. ಆದರೆ, ಶಾಂಭವಿ ಮುದ್ರೆಯನ್ನು ತೆರದ ಕಣ್ಣುಗಳಿಂದ ಮಾಡಬೇಕು.

ಶಾಂಭವಿ ಮುದ್ರೆ ಮಾಡುವುದು ಹೇಗೆ?

ಮೊದಲಿಗೆ ಯಾವುದಾದರೊಂದು ಧ್ಯಾನಭಂಗಿಯಲ್ಲಿ ಆರಾಮವಾಗಿ ಕುಳಿತುಕೊಳ್ಳಿ. ತಲೆ ಮತ್ತು ಬೆನ್ನು ನೇರವಾಗಿ ಇರಲಿ. ನಿಮ್ಮ ಮೊಣಕಾಲುಗಳ ಮೇಲೆ ಹಸ್ತ ಆಕಾಶವನ್ನು ನೋಡುವಂತೆ ಇರಿಸಿಕೊಳ್ಳಿ. ಎರಡೂ ಕೈಗಳಿಂದ ಜ್ಞಾನ ಮುದ್ರೆಯನ್ನು ರಚಿಸಿಕೊಂಡು ಇತರ ಬೆರಳುಗಳನ್ನು ನೇರವಾಗಿ ಇರಿಸಿಕೊಳ್ಳಿ. ಕಣ್ಣುಗಳನ್ನು ಮುಚ್ಚಿ ವಿಶ್ರಾಂತಿ ಪಡೆಯಿರಿ. ಮುಖದ ಸ್ನಾಯುಗಳಿಗೆ ವಿಶ್ರಾಂತಿ ನೀಡಿ. ನಿಧಾನವಾಗಿ ಕಣ್ಣುಗಳನ್ನು ತೆರೆಯಿರಿ. ಮನಸ್ಸು ಮತ್ತು ಶರೀರವನ್ನು ಶಾಂತವಾಗಿ ಇರಿಸಿಕೊಳ್ಳಿ. ನಿಮ್ಮ ದೃಷ್ಟಿಯನ್ನು ಎರಡೂ ಹುಬ್ಬುಗಳ ನಡುವೆ ಕೇಂದ್ರೀಕರಿಸಿ.

ನಿಮ್ಮ ಕಣ್ಣಿನ ದೃಷ್ಟಿಯನ್ನು ನಿಧಾನವಾಗಿ ಮೇಲಕ್ಕೆತ್ತಿ, ಉಸಿರಾಟದ ಮೇಲೆ ಗಮನವಿರಲಿ. ಹೊಟ್ಟೆಯ ಭಾಗದಿಂದ ಉಸಿರಾಟವನ್ನು ಪ್ರಾರಂಭಿಸಿ. ತಲೆಯನ್ನು ಅಲುಗಾಡಿಸದಿರಿ. ಹುಬ್ಬುಗಳ ಮಧ್ಯೆ ದೃಷ್ಟಿಯನ್ನು ಕೇಂದ್ರೀಕರಿಸಿರುವುದರಿಂದ ಹುಬ್ಬುಗಳು ಇಂಗ್ಲೀಷ್ ನ ‘ವಿ’ (v) ಆಕಾರವನ್ನು ಹೊಂದಿರುತ್ತವೆ.  ಒಂದು ವೇಳೆ ವಿ ಆಕಾರ ಬಂದಿಲ್ಲವಾದಲ್ಲಿ ಕಣ್ಣುಗಳ ದೃಷ್ಟಿಯನ್ನು ಸರಿಯಾಗಿ ಕೇಂದ್ರೀಕರಿಸಿಲ್ಲವೆಂದು ತಿಳಿಯುತ್ತದೆ.

ಹೃದಯದ ಶಕ್ತಿ ಹೆಚ್ಚಳಕ್ಕೆ ಅಂಜಲಿ ಮುದ್ರೆ

ಸ್ವಲ್ಪ ಸಮಯದವರೆಗೆ ಮಾತ್ರ ಗಮನವನ್ನು ಕೇಂದ್ರೀಕರಿಸಿ. ಹೀಗೆ ಹುಬ್ಬುಗಳ ಮಧ್ಯೆ ಗಮನವನ್ನು ಕೇಂದ್ರೀಕರಿಸುವುದರಿಂದ ಆಜ್ಞಾಚಕ್ರವನ್ನು ಅಂದರೆ ಮೂರನೇ ಕಣ್ಣನ್ನು ಜಾಗೃತಿಗೊಳಿಸಬಹುದು. ಮೂರನೇ ಕಣ್ಣಿನ ಚಕ್ರ ತೆರೆದಾಗ ನಿಮ್ಮ ಅಂತಃಪ್ರಜ್ಞೆ ಜಾಗೃತವಾಗುತ್ತದೆ. ಕಣ್ಣುಗಳನ್ನು ಮೇಲಕ್ಕೆ ಮತ್ತು ಒಳಕ್ಕೆ ತಿರುಗಿಸುವಾಗ ಹುಬ್ಬುಗಳ ಮಧ್ಯೆದಲ್ಲಿ ಗಮನ ಕೇಂದ್ರೀಕರಿಸುವುದರಿಂದ ಕಣ್ಣುಗಳು ಅರ್ಧ ತೆರೆದಿರುತ್ತವೆ ಮತ್ತು ಕಣ್ಣುಗಳು ಒಳಗೆ ಸ್ಥಿರವಾಗಿರುತ್ತವೆ.

ವ್ಯಕ್ತಿಯು ಎಲ್ಲವನ್ನೂ ನೋಡುವಂತೆ ಕಾಣಿಸಿದರೂ ವಾಸ್ತವವಾಗಿ ಹೊರಗಿನ ಯಾವುದನ್ನು ಗ್ರಹಿಸಲು ಸಾಧ್ಯವಾಗುವುದಿಲ್ಲ. ಈ ಮುದ್ರೆಯನ್ನು ಪ್ರಾರಂಭದಲ್ಲಿ ಕೇವಲ ಐದು ನಿಮಿಷಗಳ ಕಾಲ ಮಾತ್ರ ಮಾಡಬೇಕು. ಅಭ್ಯಾಸ ಹೆಚ್ಚಿದಂತೆ 21 ನಿಮಿಷಗಳ ಕಾಲ ಮಾತ್ರ ಅಭ್ಯಾಸ ಮಾಡಬೇಕು. ಆರಂಭದಲ್ಲಿ ನೋವು ಕಂಡುಬಂದಲ್ಲಿ ತಕ್ಷಣ ಮುದ್ರೆ ಮಾಡುವುದನ್ನು ನಿಲ್ಲಿಸಬೇಕು. ನಿಧಾನವಾಗಿ ಅಭ್ಯಾಸ ಮಾಡಬೇಕು. ಮುದ್ರೆ ಮಾಡಿದ ನಂತರ ಕಣ್ಣುಗಳನ್ನು ಮುಚ್ಚಿ ವಿಶ್ರಾಂತಿ ಪಡೆಯಬೇಕು. ನಿಧಾನವಾಗಿ ಮೂಲ ಸ್ಥಾನಕ್ಕೆ ಬಂದು ನಿಮ್ಮ ಕಣ್ಣುಗಳನ್ನು ತೆರೆಯಬೇಕು. ಸರಿಯಾದ ಕ್ರಮದಲ್ಲಿ ಶಾಂಭವಿ ಮುದ್ರೆಯನ್ನು ಮಾಡದಿದ್ದಲ್ಲಿ ನಿಮ್ಮ ಆರೋಗ್ಯದಲ್ಲಿನ ಸುಧಾರಣೆಗಿಂತ ಹೆಚ್ಚಿನ ಹಾನಿಯನ್ನು ಅನುಭವಿಸಬೇಕಾಗುತ್ತದೆ. ತಲೆ ನೋವಿಗೆ ಮೂಲ ಕಾರಣವಾಗಬಹುದು.

ಶಾಂಭವಿ ಮುದ್ರೆಯ ಪ್ರಯೋಜನಗಳು

ಕಣ್ಣಿನ ಸ್ನಾಯುಗಳನ್ನು ಬಲಪಡಿಸುವುದು ಮತ್ತು ಹಣೆಯ ಒತ್ತಡದ ಸ್ನಾಯುಗಳನ್ನು ವಿಶ್ರಾಂತಗೊಳಿಸುತ್ತದೆ. ಕಣ್ಣುಗಳ ಚಲನೆಯಿಂದ ಹೃದಯ, ಯಕೃತ್ ಮತ್ತು ಮೂತ್ರ ಕೋಶಕ್ಕೆ ಪ್ರಯೋಜನವನ್ನು ನೀಡುತ್ತದೆ. ಶಾಂಭವಿ ಮುದ್ರೆಯಿಂದ ದೈಹಿಕವಾಗಿ ಮತ್ತು ಮಾನಸಿಕವಾಗಿ ಶುದ್ಧರಾಗುತ್ತೀರಿ. ಸುಪ್ತಾವಸ್ಥೆಯಲ್ಲಿನ ವಿಚಾರಗಳನ್ನು ಶುದ್ದೀಕರಿಸುತ್ತದೆ. ಇತರರ ವಿಚಾರಗಳನ್ನು ಅರ್ಥ ಮಾಡಿಕೊಳ್ಳುವ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ಪೀನಲ್ ಗ್ರಂಥಿಯನ್ನು ಉತ್ತೇಜಿಸುತ್ತದೆ. ನಿದ್ರೆಯ ಚಕ್ರಗಳನ್ನು ನಿಯಂತ್ರಿಸುವುದಲ್ಲದೆ, ವಾಸ್ತವ ಗ್ರಹಿಕೆಯನ್ನು ಅರ್ಥ ಮಾಡಿಸುತ್ತದೆ.  ಮೆದುಳಿನಲ್ಲಿರುವ ಥೀಟಾ ಮತ್ತು ಡೆಲ್ಟಾ ಎಂಬ ಮೆದುಳಿನ ಅಲೆಗಳನ್ನು ಉತ್ತೇಜಿಸುತ್ತದೆ.

ಆಧ್ಯಾತ್ಮಿಕ ಶಕ್ತಿಗೆ ಹತ್ತಿರವಾಗಲು ಬಯಸುವವರು ಮಾತ್ರ ಈ ಮುದ್ರೆಯನ್ನು ಮಾಡಬೇಕು. ನಿಮ್ಮ ದೇಹ ಮತ್ತು ಮನಸ್ಸಿನ ಕಂಪನವನ್ನು ಸುಧಾರಿಸುವುದರ ಜೊತೆಗೆ ಶಾಂತಗೊಳಿಸುತ್ತದೆ. ಇದರಿಂದಾಗಿ ಒಟ್ಟು ಆಲೋಚನೆಗಳಿಂದ ಮುಕ್ತರಾಗುತ್ತೀರಿ. ಹುಬ್ಬುಗಳ ಮಧ್ಯೆ ದೃಷ್ಟಿಯನ್ನು ಕೇಂದ್ರೀಕರಿಸುವುದರಿಂದ ಹೃದಯವು ಹಗುರವಾಗಿ ಹೃದಯದ ಭಾಗದಿಂದ ಬ್ರಹ್ಮಾಂಡ ತೆರೆದುಕೊಂಡಂತೆ ಭಾಸವಾಗುವುದು.

ಈ ಮುದ್ರೆಯು ಐದು ಜ್ಞಾನೇಂದ್ರೀಯಗಳು, ಐದು ಕರ್ಮೇಂದ್ರೀಯಗಳು ಮತ್ತು ಮನಸ್ಸು, ಬುದ್ಧಿ, ಚಿತ್ತ ಮತ್ತು ಅಹಂಕಾರವೆಂಬ ನಾಲ್ಕು ರೀತಿಯ ಮನಸ್ಸಿನ ಏಜೆಂಟ್ ಗಳನ್ನು ಆಳುತ್ತದೆ. ಈ ಮುದ್ರೆಯನ್ನು ಅಭ್ಯಾಸ ಮಾಡುವುದರಿಂದ ತೃಪ್ತಿದಾಯಕ ಮನಸ್ಥಿತಿ ಹೊಂದುವುದಲ್ಲದೆ, ಉತ್ತಮ ನಿದ್ರೆಯನ್ನು ಅನುಭವಿಸಬಹುದು. ಇಹ ಲೋಕದ ಪ್ರಚೋದನೆಗಳಿಗೆ ಒಳಗಾಗುವುದಿಲ್ಲ.

ಒತ್ತಡ ನಿವಾರಣೆಗೆ ಆದಿ ಮುದ್ರೆ ಸಹಕಾರಿ

ಪ್ರತಿನಿತ್ಯ ಈ ಮುದ್ರೆ ಅಭ್ಯಾಸ ಮಾಡುವುದರಿಂದ ಒಂದೇ ಸಮಯದಲ್ಲಿ ಮೂರರಿಂದ ನಾಲ್ಕು ಕೆಲಸಗಳನ್ನು ಪೂರ್ಣಗೊಳಿಸುವ ಸಾಮರ್ಥ್ಯ ವೃದ್ಧಿಯಾಗುವುದು. ಅದರಲ್ಲೂ ಮುಖ್ಯವಾಗಿ ಹೆಣ್ಣು ಮಕ್ಕಳಿಗೆ ಮುಟ್ಟಿನ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ. ಮಕ್ಕಳು ಈ ಮುದ್ರೆಯನ್ನು ಅಭ್ಯಾಸ ಮಾಡುವುದರಿಂದ ಹಾರ್ಮೋನ್ ಸಮತೋಲನವನ್ನು ಕಾಪಾಡಿಕೊಳ್ಳಬಹುದು.

ಶಾಂಭವಿ ಮುದ್ರೆಯ ಅಡ್ಡಪರಿಣಾಮಗಳು

ದೇಹದ ಸೂಕ್ಷ್ಮ ಭಾಗವಾದ ಕಣ್ಣುಗಳಿಗೆ ಸಂಬಂಧಿಸಿದ್ದರಿಂದ ಕಣ್ಣು ಅಥವಾ ತಲೆನೋವಿನ ಸಮಸ್ಯೆ ಉಂಟಾಗಬಹುದು. ಗ್ಲುಕೋಮಾ ಮತ್ತು ಡಯಾಬಿಟಿಕ್ ರೆಟಿನೋಪತಿ ಇರುವವರು ಶಾಂಭವಿ ಮುದ್ರೆ ಮಾಡದಿರುವುದು ಉತ್ತಮ. ಕಣ್ಣಿನ ಶಸ್ತ್ರಚಿಕಿತ್ಸೆ, ಲೆನ್ಸ್ ಇನ್ ಪ್ಲಾಂಟ್ ಮಾಡಿಸಿಕೊಂಡಿರುವವರು ಈ ಮುದ್ರೆಯಿಂದ ದೂರ ಉಳಿಯುವುದು ಒಳ್ಳೆಯದು.

ಬೊಜ್ಜು, ಕೊಬ್ಬು ನಿಯಂತ್ರಣಕ್ಕೆ ರುದ್ರಮುದ್ರೆ ರಾಮಬಾಣ

ಒಟ್ಟಿನಲ್ಲಿ ಭಯ, ಹತಾಶೆ ಮತ್ತು ಚಿಂತನೆಯಂತಹ ನಕಾರಾತ್ಮಕ ಭಾವನೆಗಳು ಕಡಿಮೆಯಾಗುತ್ತವೆ. ಮಾನಸಿಕ ಶಾಂತಿ ವೃದ್ಧಿಸುತ್ತದೆ. ಸಮಸ್ಯೆಗಳನ್ನು ಸವಾಲಾಗಿ ಸ್ವೀಕರಿಸಿ ಕಷ್ಟಕರ ಸಂದರ್ಭಗಳನ್ನು ಜಯಿಸಲು ಸಿದ್ಧರಾಗುತ್ತೀರಿ. ಜ್ಞಾಪಕಶಕ್ತಿ, ಆತ್ಮವಿಶ್ವಾಸ, ಮಾನಸಿಕ ಸ್ಪಷ್ಟತೆ, ಇಚ್ಛಾಶಕ್ತಿಯನ್ನು ಹೆಚ್ಚು ಮಾಡುವುದು.

Share this:

  • Share on WhatsApp (Opens in new window) WhatsApp
  • Post
  • Tweet
  • Print (Opens in new window) Print
  • Email a link to a friend (Opens in new window) Email
girlsimproving memoryknowledgemenstrual problemsmudraReducesShambhaviUseful
1 FacebookTwitterPinterestEmail
admin

previous post
ವಾರ ಭವಿಷ್ಯ : ಭಾನುವಾರ, 07 ಏಪ್ರಿಲ್ 2024
next post
ಬರ ಪರಿಹಾರದಲ್ಲಿ ರಾಜ್ಯಕ್ಕೆ ಆಗಿರುವ ಅನ್ಯಾಯ ಒಪ್ಪಿಕೊಂಡ ನಿರ್ಮಲಾ ಸೀತಾರಾಮನ್

You may also like

ಮುಖ್ಯಮಂತ್ರಿ ನಿವಾಸವಾಗಿ ಬದಲಾಗಲಿದೆ ಕುಮಾರಕೃಪಾ ಅತಿಥಿ ಗೃಹ

June 1, 2026

ಅಧಿಕಾರ ತ್ಯಾಗಕ್ಕೆ ಸಿದ್ದರಾಗಲು‌ ಸಿದ್ದರಾಮಯ್ಯ ಅವರಿಗೆ ಹೈಕಮಾಂಡ್ ಸೂಚನೆ

May 26, 2026

ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ: ಮೇ 3ರ ಪರೀಕ್ಷೆ ರದ್ದು

May 12, 2026

ಎಸ್‌ಎಸ್‌ಎಲ್‌ಸಿ ತೇರ್ಗಡೆಯಲ್ಲಿ ಐತಿಹಾಸಿಕ ದಾಖಲೆ

April 23, 2026

ಎಸ್‌ಎಸ್‌ಎಲ್‌ಸಿ ಅಂಕ ಪದ್ಧತಿ ಮುಂದುವರೆಸಿ

April 21, 2026

ಬದಲಾಗದ ಮಹಿಳಾ ವಿರೋಧಿ ಕಾಂಗ್ರೆಸ್ ಮನಸ್ಥಿತಿ

April 18, 2026

ಕನ್ನಡಿಗರಿಗೆ ಕನ್ನಡದಲ್ಲೇ ರೈಲ್ವೆ ನೇಮಕಾತಿ ಪರೀಕ್ಷೆ

April 9, 2026

ಆನೆ, ಹುಲಿ, ಚಿರತೆ ಹಾವಳಿ ತಡೆಗೆ ಸಂತಾನಹರಣ ಚಿಕಿತ್ಸೆ

April 8, 2026

ಏಪ್ರಿಲ್ 7ಕ್ಕೆ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ

April 4, 2026

ಸೈಬರ್ ಅಪರಾಧ : ಕರ್ನಾಟಕದಲ್ಲಿ ರಾಷ್ಟ್ರೀಯ ಸರಾಸರಿಗಿಂತ ಹೆಚ್ಚು

April 2, 2026

Social Networks

Facebook Twitter Instagram Linkedin Youtube Email Rss

KMS Analysis

  • ಮನಸು ಬದಲಿಸಿದ ರಾಮಲಿಂಗಾರೆಡ್ಡಿ

    June 6, 2026
  • ಸರ್ವಧರ್ಮ ಗುರುಗಳ ಸಮ್ಮುಖದಲ್ಲಿ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ‌ ಸ್ವೀಕಾರ

    June 2, 2026
  • ಮುಖ್ಯಮಂತ್ರಿ ನಿವಾಸವಾಗಿ ಬದಲಾಗಲಿದೆ ಕುಮಾರಕೃಪಾ ಅತಿಥಿ ಗೃಹ

    June 1, 2026
  • ಮೇ 28 ರಂದು ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ

    May 27, 2026
  • ಅಧಿಕಾರ ತ್ಯಾಗಕ್ಕೆ ಸಿದ್ದರಾಗಲು‌ ಸಿದ್ದರಾಮಯ್ಯ ಅವರಿಗೆ ಹೈಕಮಾಂಡ್ ಸೂಚನೆ

    May 26, 2026

Categories

  • Special Story (483)
  • ಅಂಕಣ (109)
  • ಉದ್ಯೋಗ (332)
  • ದಿನ ಭವಿಷ್ಯ (110)
  • ರಾಜಕೀಯ (1,977)
  • ರಾಜ್ಯ (2,291)
  • ರಾಷ್ಟ್ರ (2,259)
  • ವಿಶ್ಲೇಷಣೆ (197)
  • ಶಿಕ್ಷಣ (396)
  • ಸಂದರ್ಶನ (11)

About Us

ನೈಜ ಹಾಗೂ ವಿಶ್ವಾಸಾರ್ಹತೆಯ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರವಾದ ಸುದ್ದಿ, ಅಭಿಪ್ರಾಯಗಳ ಪ್ರಕಟಣೆಯ ವೆಬ್ ತಾಣ. ಕರ್ನಾಟಕ ರಾಜ್ಯದ ಪ್ರಚಲಿತ ವಿದ್ಯಮಾನಗಳು, ರಾಜಕೀಯ, ನಾಡು, ನುಡಿ, ಜಲ ವಿಚಾರಗಳಲ್ಲದೆ, ದೈನಂದಿನ ಆಗು-ಹೋಗುಗಳು, ವಿವಿಧ ಜಿಲ್ಲೆಗಳ ಪ್ರಮುಖ ವಿಚಾರಗಳ ಭಿತ್ತರಕ್ಕೆ ಹೆಚ್ಚು ಒತ್ತು ನೀಡುವುದು. ನಮ್ಮ ಕುರಿತು ಹೆಚ್ಚಿನ ವಿವರ ಪಡೆಯಲು ಇಲ್ಲಿ ಇಲ್ಲಿಕ್ಲಿಕ್‌ ಮಾಡಿ

Facebook Twitter Linkedin Youtube Email Vimeo Rss

Politics

  • ಮನಸು ಬದಲಿಸಿದ ರಾಮಲಿಂಗಾರೆಡ್ಡಿ

    June 6, 2026
  • ರಾಮಲಿಂಗಾ ರೆಡ್ಡಿ ರಾಜೀನಾಮೆ ಅಂಗೀಕರಿಸುವುದಿಲ್ಲ

    June 6, 2026
  • ರಾಮಲಿಂಗಾ ರೆಡ್ಡಿ ರಾಜೀನಾಮೆ ಅಂಗೀಕಾರಕ್ಕೆ ಸೂಚನೆ

    June 5, 2026

KMS Special

  • ಮನಸು ಬದಲಿಸಿದ ರಾಮಲಿಂಗಾರೆಡ್ಡಿ

    June 6, 2026
  • ರಾಮಲಿಂಗಾ ರೆಡ್ಡಿ ರಾಜೀನಾಮೆ ಅಂಗೀಕರಿಸುವುದಿಲ್ಲ

    June 6, 2026
  • ರಾಮಲಿಂಗಾ ರೆಡ್ಡಿ ರಾಜೀನಾಮೆ ಅಂಗೀಕಾರಕ್ಕೆ ಸೂಚನೆ

    June 5, 2026
  • Facebook
  • Twitter
  • Linkedin
  • Youtube
  • Email
  • Telegram

@2020 - All Right Reserved. Designed and Developed by Karnatakabest.com

KMS
  • Home
  • Special Story
  • ರಾಜ್ಯ
  • ರಾಷ್ಟ್ರ
  • ರಾಜಕೀಯ
  • ವಿಶ್ಲೇಷಣೆ
  • ಅಂಕಣ
  • ಶಿಕ್ಷಣ
  • ಉದ್ಯೋಗ
  • ಸಂದರ್ಶನ

Read alsox

ಮುಖ್ಯಮಂತ್ರಿ ನಿವಾಸವಾಗಿ ಬದಲಾಗಲಿದೆ ಕುಮಾರಕೃಪಾ ಅತಿಥಿ ಗೃಹ

June 1, 2026
Sign In

Keep me signed in until I sign out

Forgot your password?

Password Recovery

A new password will be emailed to you.

Have received a new password? Login here

ಕೆಎಂಎಸ್‌ ಕನ್ನಡ ವಾಟ್ಸಪ್‌ ಗ್ರೂಪ್‌ಗೆ ಸೇರಿ