Thursday, July 23, 2026
  • ನಮ್ಮ ಬಗ್ಗೆ
  • ಸಂಪರ್ಕಿಸಿ
  • Privacy Policy
  • Disclaimer
  • Login/Register
KMS
  • Home
  • Special Story
  • ರಾಜ್ಯ
  • ರಾಷ್ಟ್ರ
  • ರಾಜಕೀಯ
  • ವಿಶ್ಲೇಷಣೆ
  • ಅಂಕಣ
  • ಶಿಕ್ಷಣ
  • ಉದ್ಯೋಗ
  • ಸಂದರ್ಶನ
Thursday, July 23, 2026
  • ನಮ್ಮ ಬಗ್ಗೆ
  • ಸಂಪರ್ಕಿಸಿ
  • Privacy Policy
  • Disclaimer
  • Login/Register
KMS
Banner
  • Home
  • Special Story
  • ರಾಜ್ಯ
  • ರಾಷ್ಟ್ರ
  • ರಾಜಕೀಯ
  • ವಿಶ್ಲೇಷಣೆ
  • ಅಂಕಣ
  • ಶಿಕ್ಷಣ
  • ಉದ್ಯೋಗ
  • ಸಂದರ್ಶನ
KMS
KMS
  • Home
  • Special Story
  • ರಾಜ್ಯ
  • ರಾಷ್ಟ್ರ
  • ರಾಜಕೀಯ
  • ವಿಶ್ಲೇಷಣೆ
  • ಅಂಕಣ
  • ಶಿಕ್ಷಣ
  • ಉದ್ಯೋಗ
  • ಸಂದರ್ಶನ

@2022 - All Right Reserved. Designed and Developed by PenciDesign

ರಾಜ್ಯರಾಷ್ಟ್ರ

ಪವಿತ್ರಾಗೌಡ ಎ1, ನಟ ದರ್ಶನ್ ಎ2

by KM Shivaraju September 4, 2024
written by KM Shivaraju September 4, 2024 0 comments 2 minutes read
0FacebookTwitterPinterestEmail
518

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ 17 ಆರೋಪಿಗಳ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಕೆ

ಬೆಂಗಳೂರು : ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ತನಿಖೆ ನಡೆಸಿದ್ದ ಪೊಲೀಸರು ನಟ ದರ್ಶನ್ ಅವರ ಆಪ್ತೆ ಪವಿತ್ರಗೌಡ ಸೇರಿದಂತೆ 17 ಮಂದಿ ವಿರುದ್ಧ ನ್ಯಾಯಾಲಯಕ್ಕೆ  ಇಂದು ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ.

ದೋಷಾರೋಪ ಪಟ್ಟಿಯಲ್ಲಿ ದರ್ಶನ್ ಅವರನ್ನು 2ನೇ ಆರೋಪಿ ಮಾಡಿದ್ದರೆ, ಪವಿತ್ರಗೌಡ ಮೊದಲ ಆರೋಪಿಯಾಗಿದ್ದು, ಉಳಿದ 15 ಆರೋಪಿಗಳ ಪಾತ್ರವನ್ನು ಉಲ್ಲೇಖಿಸಲಾಗಿದೆ.

ಸಾಕ್ಷ್ಯಧಾರ, ಸಾಂಧಾರ್ಭಿಕ, ತಾಂತ್ರಿಕ, ವೈಜ್ಞಾನಿಕ ಹಾಗೂ ಇತರೆ ಸಾಕ್ಷಾಧಾರ ಸೇರಿ 3991 ಪುಟಗಳ ಪ್ರಾಥಮಿಕ ದೋಷಾರೋಪ ಪಟ್ಟಿಯನ್ನು 24ನೇ ಎಸಿಎಂಎಂ ನ್ಯಾಯಾಲಯಕ್ಕೆ  ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು ಸಲ್ಲಿಸಿದ್ದಾರೆ.

ರೇಣುಕಾಸ್ವಾಮಿ ಕರೆತರುವುದರಿಂದ ಶರಣಾಗತಿ ಮಾಡಿಸುವ ತನಕ ಪ್ರತಿ ಹಂತದಲ್ಲಿ ದರ್ಶನ್ ಪಾತ್ರವಿದೆ ಎಂದು ಆರೋಪ ಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ.

ಈ ಕೊಲೆ ಪ್ರಕರಣವನ್ನು ಬಿಎನ್ಎಸ್ಎಸ್ ಕಾಯ್ದೆ ಪ್ರಕಾರ ತನಿಖೆ, ಮಹಜರು ಪ್ರಕ್ರಿಯೆ ನಡೆಸಲಾಗಿದೆ. ಪವನ್ ಮೂಲಕ ಚಿತ್ರದುರ್ಗದಿಂದ ರೇಣುಕಾಸ್ವಾಮಿ ಅವರನ್ನು ದರ್ಶನ್ ಕರೆಸಿರುವುದು.

 ರಾಘವೇಂದ್ರಗೆ ಹೇಳಿ ರೇಣುಕಾಸ್ವಾಮಿಯನ್ನು ಪವನ್ ಅಪಹಣ ಮಾಡಿಸಿದ್ದಾರೆ. ಅಪಹರಣಾ ನಂತರ ಆತನ ಮೇಲೆ ಹಲ್ಲೆ ಮಾಡುವಾಗ ದರ್ಶನ್ ಬಟ್ಟೆಯ ಮೇಲೆ ರೇಣುಕಾಸ್ವಾಮಿಯ ರಕ್ತದ ಕಲೆಗಳು ಪತ್ತೆಯಾಗಿದೆ.

ರೇಣುಕಾಸ್ವಾಮಿ ಮೇಲೆ ಹಲ್ಲೆ ಮಾಡುವ ಮುನ್ನ ದರ್ಶನ್ ಪಬ್ ಒಂದರಲ್ಲಿ ಕುಳಿತಿದ್ದರು. ನಂತರ ಪವಿತ್ರಾ ಮನೆಗೆ ಹೋಗಿ ಆಕೆಯನ್ನು ಕರೆದುಕೊಂಡು ಪಟ್ಟಣಗೆರೆ ಶೆಡ್ ಗೆ ತೆರಳಿದ್ದಾರೆ.

ಶೆಡ್ ನಲ್ಲಿ ರೇಣುಕಾಸ್ವಾಮಿಯ ಮೇಲೆ ಹಲ್ಲೆ ಮಾಡಿದ ದರ್ಶನ್, ನಂತರ ಪಬ್ ಗೆ ಮರಳಿದ್ದಾರೆ. ಆಗ ಇತರೆ ಹಲ್ಲೆ ಕೋರರು ರೇಣುಕಾಸ್ವಾಮಿ ಪೋಟೋಗಳನ್ನು ದರ್ಶನ್ ಮೊಬೈಲ್ ಗೆ ಕಳುಹಿಸಿದ್ದಾರೆ.

ಮತ್ತೆ ಪಬ್ ನಿಂದ ಶೆಡ್ ಗೆ ಹೋಗಿ ಅಲ್ಲಿಂದ ಆರ್ ಆರ್ ನಗರದ ತಮ್ಮ ಮನೆಗೆ ಬಂದು ಬಟ್ಟೆ ಬದಲಾಯಿಸಿದ್ದಾರೆ. ಬೆಳಿಗ್ಗೆ ಬನಶಂಕರಿಯಲ್ಲಿರುವ ತಮ್ಮ ಪತ್ನಿ ವಿಜಯಲಕ್ಷ್ಮೀ ಅವರ ಮನೆಗೆ ತೆರಳಿದ್ದು, ಅಲ್ಲಿ ಪೂಜೆ ಮುಗಿಸಿ ನಂತರ ಮೈಸೂರಿಗೆ ತೆರಳಿದ್ದಾರೆ.

    ತಮ್ಮ ಫಾರಂ ಹೌಸ್ ನಿಂದ ಹೋಟೆಲ್ ಗೆ ತೆರಳಿ, ಅಲ್ಲಿಂದ ಶೂಟಿಂಗ್ ಮುಗಿಸಿ ಮತ್ತೆ ಹೋಟೆಲ್ ಗೆ ವಾಪಾಸ್ಸಾಗಿದ್ದಾರೆ. ಇದೆಲ್ಲದರ ಸಿಸಿಟಿವಿ, ಟವರ್ ಲೋಕೇಷನ್ ದೊರೆತಿದೆ ಎಂದು ಆರೋಪ ಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ.

    ಪ್ರತಿ ಹಂತದಲ್ಲಿ ದರ್ಶನ್ ನೋಡಿದ್ದ ಸಾಕ್ಷಿದಾರರ ಹೇಳಿಕೆಗಳು, ನಟ ಚಿಕ್ಕಣ್ಣ ಸೇರಿದಂತೆ ಅನೇಕ ಸಾಕ್ಷಿಗಳ ಹೇಳಿಕೆಗಳನ್ನು ನಮೂದಿಸಲಾಗಿದೆ.

    ಪ್ರದೋಷ್ ಮೊಬೈಲ್ ನಲ್ಲಿ ಘಟನೆಗೆ ಸಂಬಂಧಿಸಿದ ವಿಡಿಯೋ, ಪೋನ್ ಕಾಲ್, ಚಾಟಿಂಗ್ ನಲ್ಲಿ ಸಂಚಿನ ಬಗ್ಗೆ ಮಾಹಿತಿ, ಶರಣಾಗತಿ ಮನವೊಲಿಸಿದ್ದು, ದರ್ಶನ್ ಹಣ ನೀಡಿರುವ ಸಾಕ್ಷ್ಯಗಳಿವೆ.

    ನಂತರ ಶವ ಸಾಗಾಣಿಕೆಗೆ ಸೂಚನೆ ನೀಡಿರುವುದು, ಹಣ ನೀಡಿ ಪ್ರಕರಣ ಮುಚ್ಚಿ ಹಾಕಿ ತಲೆ ಮರೆಸಿಕೊಳ್ಳುವ ಪ್ರಯತ್ನ ಮಾಡಿದ್ದಲ್ಲದೆ, ಕೊಲೆ ಸಂಚು, ಅಪಹಣರಣ, ಸಾಕ್ಷ್ಯನಾಶ ಎಲ್ಲದರಲ್ಲೂ ದರ್ಶನ ಪಾತ್ರವಿದೆ ಎಂಬುದನ್ನು ಪಟ್ಟಿಯಲ್ಲಿ ಸೇರಿಸಲಾಗಿದೆ.

    ದರ್ಶನ್ ಅಷ್ಟೇ ಅಲ್ಲ, ಪವಿತ್ರಗೌಡ ಸೇರಿದಂತೆ 17 ಆರೋಪಿಗಳ ವಿರುದ್ಧವೂ ಪೂರಕ ದಾಖಲೆಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ. ಕೊಲೆಯಲ್ಲಿ ಪ್ರತಿಯೊಬ್ಬರ ಪಾತ್ರವೇನು ಎಂಬುದನ್ನು ವಿವರಿಸಲಾಗಿದೆ.

    ಈ ಕೊಲೆಗೆ ಪವಿತ್ರಗೌಡ ಮೂಲ ಕಾರಣವೆಂದು ಆಕೆಯನ್ನು ಮೊದಲ ಆರೋಪಿ ಮಾಡಲಾಗಿದೆ. ಅಷ್ಟೇ ಅಲ್ಲ, ರೇಣುಕಾಸ್ವಾಮಿ ಮೇಲೆ ಹಲ್ಲೆ ನಡೆಯುವ ಸ್ಥಳದಲ್ಲಿದ್ದು, ತನ್ನ ಚಪ್ಪಲಿಯಿಂತ ಆತನ ಮೇಲೆ ಹಲ್ಲೇ ಮಾಡಿದ್ದಾಳೆ.

    ಆಕೆ ಬಳಸುತ್ತಿದ್ದ ಮೊಬೈಲ್ ಟವರ್ ಲೋಕೇಷನ್ ನಿಂದ ಶೆಡ್ ನಲ್ಲಿ ಹಲ್ಲೇ ಮಾಡುವಾಗ ಇತರೆ ಚಲಮ-ವಲನಗಳಲ್ಲೂ ಆಕೆಯ ಪಾತ್ರವಿರುವುದು ಖಚಿತಗೊಂಡಿದೆ.

    ಈ ದೋಷಾಆರೋಪ ಪಟ್ಟಿಯು 231 ಸಾಕ್ಷಿದಾರರನ್ನು ಒಳಗೊಂಡಂತೆ ಒಟ್ಟು 3991 ಪುಟಗಳುಳ್ಳ, 7 ಸಂಪುಟಗಳ ಹತ್ತು ಕಡತಗಳನ್ನು ಒಳಗೊಂಡಿದೆ.

        Share this:

        • Share on WhatsApp (Opens in new window) WhatsApp
        • Post
        • Tweet
        • Print (Opens in new window) Print
        • Email a link to a friend (Opens in new window) Email
        17 accusedchargesheetcourtDarshan A2murder casePavitra Gowda A1Renukaswamysubmitted
        0 FacebookTwitterPinterestEmail
        KM Shivaraju

        previous post
        ಪ್ರಭಾವಿ ಸಚಿವರಿಂದ ಎನ್ ಡಿಎ ನಾಯಕರ ಭೇಟಿ
        next post
        ಚನ್ನಪಟ್ಟಣದಲ್ಲಿ ಎನ್‌ಡಿಎ ಅಭ್ಯರ್ಥಿ ಜಯಮುತ್ತು !

        You may also like

        ಡಿಕೆಶಿ ಸಂಪುಟ ವಿಸ್ತರಣೆಗೆ ನೀಟ್ ಹೋರಾಟ ಕಂಟಕ

        July 22, 2026

        ನಾಳೆ ಮಧ್ಯಾನ್ಹ 2-20ಕ್ಕೆ ಡಿಕೆಶಿ ಸಂಪುಟ ವಿಸ್ತರಣೆ

        July 21, 2026

        ಬರಪೀಡಿತ ಘೋಷಣೆಗೆ ನಾಳೆ ತುರ್ತು ಸಂಪುಟ ಸಭೆ

        July 18, 2026

        ಗ್ರೀನ್ ಸಿಗ್ನಲ್ ಬರುತ್ತಿದ್ದಂತೆ ಮಂತ್ರಿಮಂಡಲ ವಿಸ್ತರಣೆ

        July 17, 2026

        ಸಂಭಾವ್ಯ ಸಚಿವರ ಪಟ್ಟಿಗೆ ರಾಹುಲ್ ಗಾಂಧಿ ಒಪ್ಪಿಗೆ

        July 16, 2026

        ರೈತರ ಹೋರಾಟಕ್ಕೆ ಮಣಿದ ಮುಖ್ಯಮಂತ್ರಿ ಶಿವಕುಮಾರ್

        July 15, 2026

        ಬಿಡದಿ ಟೌನ್‌ಶಿಪ್ ಯೋಜನೆ ಕೈಬಿಡದಿದ್ದರೆ ಸತ್ಯಾಗ್ರಹ

        July 14, 2026

        ಅಧಿವೇಶನಕ್ಕೆ ಮುನ್ನ ಡಿಕೆಶಿ ಮಂತ್ರಿಮಂಡಲ ವಿಸ್ತರಣೆ

        July 13, 2026

        ಅಕ್ಟೋಬರ್-ನವೆಂಬರ್‌ಗೆ ಪಂಚಾಯತ್ ಚುನಾವಣೆ

        July 11, 2026

        ಹೆಚ್ಚು ಆಸ್ತಿ ಗಳಿಕೆ: ಮಾಜಿ ಸಚಿವ ಜಮೀರ್‌ಗೆ ಸಂಕಷ್ಟ

        July 11, 2026

        Social Networks

        Facebook Twitter Instagram Linkedin Youtube Email Rss

        KMS Analysis

        • ವಿದ್ಯುತ್ ಲೋಡ್ ಶೆಡ್ಡಿಂಗ್ ಇಲ್ಲ

          July 9, 2026
        • ಮನಸು ಬದಲಿಸಿದ ರಾಮಲಿಂಗಾರೆಡ್ಡಿ

          June 6, 2026
        • ಸರ್ವಧರ್ಮ ಗುರುಗಳ ಸಮ್ಮುಖದಲ್ಲಿ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ‌ ಸ್ವೀಕಾರ

          June 2, 2026
        • ಮುಖ್ಯಮಂತ್ರಿ ನಿವಾಸವಾಗಿ ಬದಲಾಗಲಿದೆ ಕುಮಾರಕೃಪಾ ಅತಿಥಿ ಗೃಹ

          June 1, 2026
        • ಮೇ 28 ರಂದು ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ

          May 27, 2026

        Categories

        • Special Story (521)
        • ಅಂಕಣ (109)
        • ಉದ್ಯೋಗ (340)
        • ದಿನ ಭವಿಷ್ಯ (110)
        • ರಾಜಕೀಯ (2,015)
        • ರಾಜ್ಯ (2,329)
        • ರಾಷ್ಟ್ರ (2,294)
        • ವಿಶ್ಲೇಷಣೆ (198)
        • ಶಿಕ್ಷಣ (401)
        • ಸಂದರ್ಶನ (11)

        About Us

        ನೈಜ ಹಾಗೂ ವಿಶ್ವಾಸಾರ್ಹತೆಯ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರವಾದ ಸುದ್ದಿ, ಅಭಿಪ್ರಾಯಗಳ ಪ್ರಕಟಣೆಯ ವೆಬ್ ತಾಣ. ಕರ್ನಾಟಕ ರಾಜ್ಯದ ಪ್ರಚಲಿತ ವಿದ್ಯಮಾನಗಳು, ರಾಜಕೀಯ, ನಾಡು, ನುಡಿ, ಜಲ ವಿಚಾರಗಳಲ್ಲದೆ, ದೈನಂದಿನ ಆಗು-ಹೋಗುಗಳು, ವಿವಿಧ ಜಿಲ್ಲೆಗಳ ಪ್ರಮುಖ ವಿಚಾರಗಳ ಭಿತ್ತರಕ್ಕೆ ಹೆಚ್ಚು ಒತ್ತು ನೀಡುವುದು. ನಮ್ಮ ಕುರಿತು ಹೆಚ್ಚಿನ ವಿವರ ಪಡೆಯಲು ಇಲ್ಲಿ ಇಲ್ಲಿಕ್ಲಿಕ್‌ ಮಾಡಿ

        Facebook Twitter Linkedin Youtube Email Vimeo Rss

        Politics

        • ಡಿಕೆಶಿ ಸಂಪುಟ ವಿಸ್ತರಣೆಗೆ ನೀಟ್ ಹೋರಾಟ ಕಂಟಕ

          July 22, 2026
        • ನಾಳೆ ಮಧ್ಯಾನ್ಹ 2-20ಕ್ಕೆ ಡಿಕೆಶಿ ಸಂಪುಟ ವಿಸ್ತರಣೆ

          July 21, 2026
        • ವರ್ಚಸ್ಸುಳ್ಳ ಪಕ್ಷನಿಷ್ಠ ಶಾಸಕರಿಗೆ ಮಂತ್ರಿ ಭಾಗ್ಯ

          July 20, 2026

        KMS Special

        • ಡಿಕೆಶಿ ಸಂಪುಟ ವಿಸ್ತರಣೆಗೆ ನೀಟ್ ಹೋರಾಟ ಕಂಟಕ

          July 22, 2026
        • ನಾಳೆ ಮಧ್ಯಾನ್ಹ 2-20ಕ್ಕೆ ಡಿಕೆಶಿ ಸಂಪುಟ ವಿಸ್ತರಣೆ

          July 21, 2026
        • ಬರಪೀಡಿತ ಘೋಷಣೆಗೆ ನಾಳೆ ತುರ್ತು ಸಂಪುಟ ಸಭೆ

          July 18, 2026
        • Facebook
        • Twitter
        • Linkedin
        • Youtube
        • Email
        • Telegram

        @2020 - All Right Reserved. Designed and Developed by Karnatakabest.com

        KMS
        • Home
        • Special Story
        • ರಾಜ್ಯ
        • ರಾಷ್ಟ್ರ
        • ರಾಜಕೀಯ
        • ವಿಶ್ಲೇಷಣೆ
        • ಅಂಕಣ
        • ಶಿಕ್ಷಣ
        • ಉದ್ಯೋಗ
        • ಸಂದರ್ಶನ

        Read alsox

        ಡಿಕೆಶಿ ಸಂಪುಟ ವಿಸ್ತರಣೆಗೆ ನೀಟ್ ಹೋರಾಟ ಕಂಟಕ

        July 22, 2026
        Sign In

        Keep me signed in until I sign out

        Forgot your password?

        Password Recovery

        A new password will be emailed to you.

        Have received a new password? Login here

        ಕೆಎಂಎಸ್‌ ಕನ್ನಡ ವಾಟ್ಸಪ್‌ ಗ್ರೂಪ್‌ಗೆ ಸೇರಿ