Thursday, July 23, 2026
  • ನಮ್ಮ ಬಗ್ಗೆ
  • ಸಂಪರ್ಕಿಸಿ
  • Privacy Policy
  • Disclaimer
  • Login/Register
KMS
  • Home
  • Special Story
  • ರಾಜ್ಯ
  • ರಾಷ್ಟ್ರ
  • ರಾಜಕೀಯ
  • ವಿಶ್ಲೇಷಣೆ
  • ಅಂಕಣ
  • ಶಿಕ್ಷಣ
  • ಉದ್ಯೋಗ
  • ಸಂದರ್ಶನ
Thursday, July 23, 2026
  • ನಮ್ಮ ಬಗ್ಗೆ
  • ಸಂಪರ್ಕಿಸಿ
  • Privacy Policy
  • Disclaimer
  • Login/Register
KMS
Banner
  • Home
  • Special Story
  • ರಾಜ್ಯ
  • ರಾಷ್ಟ್ರ
  • ರಾಜಕೀಯ
  • ವಿಶ್ಲೇಷಣೆ
  • ಅಂಕಣ
  • ಶಿಕ್ಷಣ
  • ಉದ್ಯೋಗ
  • ಸಂದರ್ಶನ
KMS
KMS
  • Home
  • Special Story
  • ರಾಜ್ಯ
  • ರಾಷ್ಟ್ರ
  • ರಾಜಕೀಯ
  • ವಿಶ್ಲೇಷಣೆ
  • ಅಂಕಣ
  • ಶಿಕ್ಷಣ
  • ಉದ್ಯೋಗ
  • ಸಂದರ್ಶನ

@2022 - All Right Reserved. Designed and Developed by PenciDesign

ರಾಜ್ಯರಾಷ್ಟ್ರಶಿಕ್ಷಣ

5000 ಬಸ್ ನಲ್ಲಿ ಕಣ್ಗಾವಲು

by KM Shivaraju November 29, 2023
written by KM Shivaraju November 29, 2023 0 comments 2 minutes read
4FacebookTwitterPinterestEmail
93
ಮಹಿಳಾ ಸುರಕ್ಷತೆಗಾಗಿ ಬಿಎಂಟಿಸಿ ಬಸ್, ನಿಲ್ದಾಣದಲ್ಲಿ ಪ್ಯಾನಿಕ್ ಬಟನ್

 ಬೆಂಗಳೂರು: ನಿರ್ಭಯಾ ಯೋಜನೆಯಡಿ ಮಹಿಳಾ ಸುರಕ್ಷತೆಯ ವೈಶಿಷ್ಟ್ಯತೆಗಾಗಿ 5,000 ಬಸ್‌ಗಳಲ್ಲಿ ಬಸ್ಸಿನಲ್ಲಿ ಕಣ್ಗಾವಲು(In-bus surveillance)ವ್ಯವಸ್ಥೆ ಮತ್ತು ಬಸ್ ನಿಲ್ಧಾಣಗಳಲ್ಲಿ  ಪ್ರಯಾಣಿಕರ ಮಾಹಿತಿ ವ್ಯವಸ್ಥೆ(PIS) ಯನ್ನು ಪ್ರದರ್ಶಿಸುವ ವ್ಯವಸ್ಥೆಗಳೊಂದಿಗೆ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು ಮೊಬೈಲ್ ಅಪ್ಲೀಕೇಶನ್ ನ್ನೊಳಗೊಂಡ ಎವಿಎಲ್ ಎಸ್ (AVLS) ಯೋಜನೆಯನ್ನು ಅನುಷ್ಠಾನಗೊಳಿಸುತ್ತಿದೆ.

ಈ ಯೋಜನೆಯಡಿ ಈಗಾಗಲೇ ಘಟಕಗಳಲ್ಲಿನ ಎಲ್ಲಾ ವಾಹನಗಳಲ್ಲಿ ಒಂದು ಎಟಿಡಿ(ATD) ಒಂದು ಪ್ಯಾನಿಕ್ ಬಟನ್ (Panic button), ಒಂದು ಎಂಎನ್ ವಿಆರ್ (MNVR) ಹಾಗೂ ಎರಡು ಸಿಸಿ ಕ್ಯಾಮರಾವನ್ನು ಅಳವಡಿಸಲಾಗಿರುತ್ತದೆ. ತಂತ್ರಾಂಶದ ಬಳಕೆಯು  ಹಂತ ಹಂತವಾಗಿ ಎಲ್ಲಾ ಘಟಕಗಳಲ್ಲೂ ಪ್ರಾರಂಭವಾಗುತ್ತಿರುತ್ತದೆ.

 ಮಹಿಳಾ ಸುರಕ್ಷತೆಯನ್ನು ಪ್ರಧಾನವಾಗಿಟ್ಟುಕೊಂಡು ಈ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿರುತ್ತದೆ. ಅದರಂತೆ, ಬಸ್ಸುಗಳಲ್ಲಿ ಪ್ಯಾನಿಕ್ ಬಟನ್ ಅನ್ನು ಅಳವಡಿಸಲಾಗಿದ್ದು, ಮೊಬೈಲ್ ಆಪ್‌ನಲ್ಲಿ ಎಸ್‌ಓಎಸ್ ಬಟನ್‌ಅನ್ನು ಅಭಿವೃದ್ಧಿಪಡಿಸಲಾಗಿರುತ್ತದೆ. ಇದರಿಂದ ಮಹಿಳಾ ಪ್ರಯಾಣಿಕರು ಬಸ್ಸಿನಲ್ಲಿ ಯಾವುದೇ ಅಹಿತಕರ ಘಟನಗಳ ಸಂದರ್ಭದಲ್ಲಿ ಬಳಸಬಹುದಾಗಿರುತ್ತದೆ.

ಪ್ಯಾನಿಕ್ ಮತ್ತು ಎಸ್ ಓಎಸ್ (SOS) ಎಚ್ಚರಿಕೆ
ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಮತ್ತು ಅಧಿಕಾರಿಗಳಿಂದ ಪ್ಯಾನಿಕ್ ಬಟನ್ ಪರಿಶೀಲನೆ

ಸಿಸಿಸಿ ಆಪರೇಟರ್ ತಂಡವು ಎವಿಎಲ್ ಎಸ್ ಅಪ್ಲಿಕೇಶನ್‌ನಲ್ಲಿ ಪ್ಯಾನಿಕ್ ಎಚ್ಚರಿಕೆ ಮತ್ತು ಪ್ರಯಾಣಿಕರ ಮೊಬೈಲ್ ಎಸ್ ಓಎಸ್ ಎಚ್ಚರಿಕೆಯನ್ನು ಮೇಲ್ವಿಚಾರಣೆ ಮಾಡುತ್ತದೆ.

ಪ್ಯಾನಿಕ್ ಮತ್ತು ಎಸ್ ಓಎಸ್ ಎಚ್ಚರಿಕೆಯ ಸಂಭಾವ್ಯ ಕಾರಣಗಳು

ಮಹಿಳಾ ಪ್ರಯಾಣಿಕರಿಗೆ ತೊಂದರೆ, ಸಂಕಷ್ಟದಲ್ಲಿರುವ ಮಹಿಳಾ ಪ್ರಯಾಣಿಕರು, ಸಿಬ್ಬಂದಿ ಮತ್ತು ಪ್ರಯಾಣಿಕರ ನಡುವೆ ಜಗಳ, ಪ್ರಯಾಣಿಕರ ನಡುವೆ ಜಗಳ, ಪ್ರಯಾಣಿಕರಿಗೆ ಯಾವುದೇ ತೊಂದರೆ, ಅಧಿಕಾರಿಗಳಿಂದ ಆಡಿಟಿಂಗ್/ಪರಿಶೀಲನೆ ಮಾಡಲಾಗುವುದು.

ಪ್ಯಾನಿಕ್ ಬಟನ್ ಅಥವಾ ಎಸ್‌ಓಎಸ್ ಬಟನ್‌ಅನ್ನು ಪ್ರಯಾಣಿಕರು ಬಳಸಿದಲ್ಲಿ/ಒತ್ತಿದಲ್ಲಿ ನಿಯಂತ್ರಣ ಕೊಠಡಿರವರು ಅನುಸರಿಸಬೇಕಾದ ಎಸ್ ಓಪಿಯು ಈ ಕೆಳಗಿನಂತಿರುತ್ತದೆ.

ಪ್ರಯಾಣಿಕರು ಎಸ್‌ಓಎಸ್/ಪ್ಯಾನಿಕ್ ಬಟನ್ ಪ್ರೆಸ್ ಮಾಡಿದಲ್ಲಿ, ಸ್ವಯಂಚಾಲಿತ ಅಲರ್ಟ್ ನಿಯಂತ್ರಣ ಕೊಠಡಿಗೆ ಹಾಗೂ  ಕಂಟ್ರೋಲ್ ರೂಂನಿಂದ ನೀಡಲಾದ ಮೊಬೈಲ್ ನಂಬರ್‌ಗಳಿಗೆ ಇಂಟಿಗ್ರೇಟ್ ಮಾಡಿದ್ದು, ಸದರಿ ಮೊಬೈಲ್ ಸಂಖ್ಯೆಗೆ ಅಲರ್ಟ್ ಬರುತ್ತದೆ.

ನಿಯಂತ್ರಣ ಕೊಠಡಿ ರವರು ಅಲರ್ಟ್ ಬಂದಂತಹ ವಾಹನದ ಚಾಲನಾ ಸಿಬ್ಬಂದಿಗಳನ್ನು ಸಂಪರ್ಕಿಸುವುದು ಹಾಗೂ ಅಲ್ಲಿನ ಪರಿಸ್ಥಿತಿಯ ಮಾಹಿತಿಯನ್ನು ಪಡೆದುಕೊಳ್ಳುವುದು.
ಅಲರ್ಟ್‌ನ  ಸತ್ಯಾಸತ್ಯಾತೆ

ಅಲರ್ಟ್‌ನ  ಸತ್ಯಾಸತ್ಯಾತೆಯ ಬಗ್ಗೆ ತಿಳಿದು, ಒಂದು ವೇಳೆ ಅಲರ್ಟ್ ಬಂದಿರುವುದ ನಿಜವಾದ ಕಾರಣವೇನು ಎಂಬುದು ತಿಳಿದು ಬಂದಲ್ಲಿ ನಿಯಂತ್ರಣ ಕೊಠಡಿಯವರು ಅಲರ್ಟ್ ಬಂದಂತಹ ವಾಹನವನ್ನು ಟ್ರಾಕ್ ಮಾಡುವುದು ಹಾಗೂ ಸದರಿ ಮಾಹಿತಿಯನ್ನು ಹತ್ತಿರದ ಸಾರಥಿ ವಾಹನಗಳು ಆ ಸ್ಥಳವನ್ನು ತಲುಪಿ ಅಗತ್ಯ ಕ್ರಮ ಕೈಗೊಳ್ಳಲು ತಿಳಿಸುವುದು.

ಪ್ಯಾನಿಕ್ ಬಟನ್ ಅಥವಾ ಎಸ್‌ಓಎಸ್ ಬಟನ್‌ಅನ್ನು ಪ್ರಯಾಣಿಕರು ಬಳಸಿದಲ್ಲಿ ಸಾರಥಿ ಶಾಖೆಯವರು ಅನುಸರಿಸಬೇಕಾದ ಎಸ್ಓಪಿಯು ಈ ಕೆಳಗಿನಂತಿರುತ್ತದೆ.

ಪ್ರಯಾಣಿಕರು ಎಸ್‌ಓಎಸ್/ಪ್ಯಾನಿಕ್ ಬಟನ್ ಪ್ರೆಸ್ ಮಾಡಿದಲ್ಲಿ, ಸ್ವಯಂಚಾಲಿತ ಅಲರ್ಟ್ ಹತ್ತಿರದ ಸಾರಥಿ ವಾಹನಗಳಿಗೆ ರವಾನಿಸಲಾಗುವುದು.

ಸಾರಥಿ ಸಿಬ್ಬಂದಿಗಳು ಅಲರ್ಟ್ ಬಂದಂತಹ ವಾಹನದ ಚಾಲನಾ ಸಿಬ್ಬಂದಿಗಳನ್ನು ಸಂಪರ್ಕಿಸುವುದು ಹಾಗೂ ಅಲ್ಲಿನ ಪರಿಸ್ಥಿತಿಯ ಮಾಹಿತಿಯನ್ನು ಪಡೆದುಕೊಳ್ಳುವುದು.

ವಾಹನವನ್ನು ಟ್ರಾಕ್ ಮಾಡುವುದು

ಅಲರ್ಟ್ ಸತ್ಯಾಸತ್ಯಾತೆಯ ಬಗ್ಗೆ ತಿಳಿದು, ಸಾರಥಿ ಸಿಬ್ಬಂದಿಗಳು ಸದರಿ ವಾಹನವನ್ನು ಟ್ರಾಕ್ ಮಾಡುವುದು ಹಾಗೂ ಸದರಿ ಸ್ಥಳವನ್ನು ತಲುಪುವುದು.

ಸದರಿ ಸ್ಥಳವನ್ನು ತಲುಪಿ ಅಲ್ಲಿನ ಪರಿಸ್ಥಿಯನ್ನು ಅವಲೋಕಿಸಿ, ತಕ್ಷಣ ಕಾರ್ಯ ತತ್ಪರರಾಗುವುದು ಹಾಗೂ ಸದರಿ ವಿಷಯವನ್ನು ಸಂಬಂಧಿಸಿದ ಅಧಿಕಾರಿಗಳಿಗೆ ತಿಳಿಸುವುದು.

ಅವಶ್ಯಕತೆ ಬಂದಲ್ಲಿ, ತಕ್ಷಣವೇ ಹತ್ತಿರದ ಪೋಲೀಸ್ ಠಾಣೆಗೆ ಮಾಹಿತಿಯನ್ನು ತಲುಪಿಸಿ, ವಾಹನವನ್ನು ಪೊಲೀಸ್ ಠಾಣೆಗೆ ಕರೆದೊಯ್ಯುವುದು.  ಇಂತಹ ಸೌಲಭ್ಯವನ್ನು ಕಲ್ಪಿಸಲಾಗಿದೆ ಎಂದು ಬಿಎಂಟಿಸಿ ಪ್ರಕಟಣೆ ತಿಳಿಸಿದೆ.

Share this:

  • Share on WhatsApp (Opens in new window) WhatsApp
  • Post
  • Tweet
  • Print (Opens in new window) Print
  • Email a link to a friend (Opens in new window) Email
5000 busautomatedbmtcin-bus surveillancekmskmskannadapanic button
4 FacebookTwitterPinterestEmail
KM Shivaraju

previous post
ಚೀನಾ ನ್ಯೂಮೋನಿಯಾ ಬಗ್ಗೆ ಎಚ್ಚರವಿರಲಿ
next post
ಬಿಬಿಎಂಪಿ ವ್ಯಾಪ್ತಿಯ 255 ಕಡೆಗಳಲ್ಲಿ ಮಹಿಳಾ ಶೌಚಾಲಯ

You may also like

ಡಿಕೆಶಿ ಸಂಪುಟ ವಿಸ್ತರಣೆಗೆ ನೀಟ್ ಹೋರಾಟ ಕಂಟಕ

July 22, 2026

ನಾಳೆ ಮಧ್ಯಾನ್ಹ 2-20ಕ್ಕೆ ಡಿಕೆಶಿ ಸಂಪುಟ ವಿಸ್ತರಣೆ

July 21, 2026

ವರ್ಚಸ್ಸುಳ್ಳ ಪಕ್ಷನಿಷ್ಠ ಶಾಸಕರಿಗೆ ಮಂತ್ರಿ ಭಾಗ್ಯ

July 20, 2026

ಬರಪೀಡಿತ ಘೋಷಣೆಗೆ ನಾಳೆ ತುರ್ತು ಸಂಪುಟ ಸಭೆ

July 18, 2026

ಗ್ರೀನ್ ಸಿಗ್ನಲ್ ಬರುತ್ತಿದ್ದಂತೆ ಮಂತ್ರಿಮಂಡಲ ವಿಸ್ತರಣೆ

July 17, 2026

ಸಂಭಾವ್ಯ ಸಚಿವರ ಪಟ್ಟಿಗೆ ರಾಹುಲ್ ಗಾಂಧಿ ಒಪ್ಪಿಗೆ

July 16, 2026

ರೈತರ ಹೋರಾಟಕ್ಕೆ ಮಣಿದ ಮುಖ್ಯಮಂತ್ರಿ ಶಿವಕುಮಾರ್

July 15, 2026

ಬಿಡದಿ ಟೌನ್‌ಶಿಪ್ ಯೋಜನೆ ಕೈಬಿಡದಿದ್ದರೆ ಸತ್ಯಾಗ್ರಹ

July 14, 2026

ಅಧಿವೇಶನಕ್ಕೆ ಮುನ್ನ ಡಿಕೆಶಿ ಮಂತ್ರಿಮಂಡಲ ವಿಸ್ತರಣೆ

July 13, 2026

ಅಕ್ಟೋಬರ್-ನವೆಂಬರ್‌ಗೆ ಪಂಚಾಯತ್ ಚುನಾವಣೆ

July 11, 2026

Social Networks

Facebook Twitter Instagram Linkedin Youtube Email Rss

KMS Analysis

  • ವಿದ್ಯುತ್ ಲೋಡ್ ಶೆಡ್ಡಿಂಗ್ ಇಲ್ಲ

    July 9, 2026
  • ಮನಸು ಬದಲಿಸಿದ ರಾಮಲಿಂಗಾರೆಡ್ಡಿ

    June 6, 2026
  • ಸರ್ವಧರ್ಮ ಗುರುಗಳ ಸಮ್ಮುಖದಲ್ಲಿ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ‌ ಸ್ವೀಕಾರ

    June 2, 2026
  • ಮುಖ್ಯಮಂತ್ರಿ ನಿವಾಸವಾಗಿ ಬದಲಾಗಲಿದೆ ಕುಮಾರಕೃಪಾ ಅತಿಥಿ ಗೃಹ

    June 1, 2026
  • ಮೇ 28 ರಂದು ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ

    May 27, 2026

Categories

  • Special Story (521)
  • ಅಂಕಣ (109)
  • ಉದ್ಯೋಗ (340)
  • ದಿನ ಭವಿಷ್ಯ (110)
  • ರಾಜಕೀಯ (2,015)
  • ರಾಜ್ಯ (2,329)
  • ರಾಷ್ಟ್ರ (2,294)
  • ವಿಶ್ಲೇಷಣೆ (198)
  • ಶಿಕ್ಷಣ (401)
  • ಸಂದರ್ಶನ (11)

About Us

ನೈಜ ಹಾಗೂ ವಿಶ್ವಾಸಾರ್ಹತೆಯ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರವಾದ ಸುದ್ದಿ, ಅಭಿಪ್ರಾಯಗಳ ಪ್ರಕಟಣೆಯ ವೆಬ್ ತಾಣ. ಕರ್ನಾಟಕ ರಾಜ್ಯದ ಪ್ರಚಲಿತ ವಿದ್ಯಮಾನಗಳು, ರಾಜಕೀಯ, ನಾಡು, ನುಡಿ, ಜಲ ವಿಚಾರಗಳಲ್ಲದೆ, ದೈನಂದಿನ ಆಗು-ಹೋಗುಗಳು, ವಿವಿಧ ಜಿಲ್ಲೆಗಳ ಪ್ರಮುಖ ವಿಚಾರಗಳ ಭಿತ್ತರಕ್ಕೆ ಹೆಚ್ಚು ಒತ್ತು ನೀಡುವುದು. ನಮ್ಮ ಕುರಿತು ಹೆಚ್ಚಿನ ವಿವರ ಪಡೆಯಲು ಇಲ್ಲಿ ಇಲ್ಲಿಕ್ಲಿಕ್‌ ಮಾಡಿ

Facebook Twitter Linkedin Youtube Email Vimeo Rss

Politics

  • ಡಿಕೆಶಿ ಸಂಪುಟ ವಿಸ್ತರಣೆಗೆ ನೀಟ್ ಹೋರಾಟ ಕಂಟಕ

    July 22, 2026
  • ನಾಳೆ ಮಧ್ಯಾನ್ಹ 2-20ಕ್ಕೆ ಡಿಕೆಶಿ ಸಂಪುಟ ವಿಸ್ತರಣೆ

    July 21, 2026
  • ವರ್ಚಸ್ಸುಳ್ಳ ಪಕ್ಷನಿಷ್ಠ ಶಾಸಕರಿಗೆ ಮಂತ್ರಿ ಭಾಗ್ಯ

    July 20, 2026

KMS Special

  • ಡಿಕೆಶಿ ಸಂಪುಟ ವಿಸ್ತರಣೆಗೆ ನೀಟ್ ಹೋರಾಟ ಕಂಟಕ

    July 22, 2026
  • ನಾಳೆ ಮಧ್ಯಾನ್ಹ 2-20ಕ್ಕೆ ಡಿಕೆಶಿ ಸಂಪುಟ ವಿಸ್ತರಣೆ

    July 21, 2026
  • ಬರಪೀಡಿತ ಘೋಷಣೆಗೆ ನಾಳೆ ತುರ್ತು ಸಂಪುಟ ಸಭೆ

    July 18, 2026
  • Facebook
  • Twitter
  • Linkedin
  • Youtube
  • Email
  • Telegram

@2020 - All Right Reserved. Designed and Developed by Karnatakabest.com

KMS
  • Home
  • Special Story
  • ರಾಜ್ಯ
  • ರಾಷ್ಟ್ರ
  • ರಾಜಕೀಯ
  • ವಿಶ್ಲೇಷಣೆ
  • ಅಂಕಣ
  • ಶಿಕ್ಷಣ
  • ಉದ್ಯೋಗ
  • ಸಂದರ್ಶನ

Read alsox

ಡಿಕೆಶಿ ಸಂಪುಟ ವಿಸ್ತರಣೆಗೆ ನೀಟ್ ಹೋರಾಟ ಕಂಟಕ

July 22, 2026
Sign In

Keep me signed in until I sign out

Forgot your password?

Password Recovery

A new password will be emailed to you.

Have received a new password? Login here

ಕೆಎಂಎಸ್‌ ಕನ್ನಡ ವಾಟ್ಸಪ್‌ ಗ್ರೂಪ್‌ಗೆ ಸೇರಿ