Thursday, July 23, 2026
  • ನಮ್ಮ ಬಗ್ಗೆ
  • ಸಂಪರ್ಕಿಸಿ
  • Privacy Policy
  • Disclaimer
  • Login/Register
KMS
  • Home
  • Special Story
  • ರಾಜ್ಯ
  • ರಾಷ್ಟ್ರ
  • ರಾಜಕೀಯ
  • ವಿಶ್ಲೇಷಣೆ
  • ಅಂಕಣ
  • ಶಿಕ್ಷಣ
  • ಉದ್ಯೋಗ
  • ಸಂದರ್ಶನ
Thursday, July 23, 2026
  • ನಮ್ಮ ಬಗ್ಗೆ
  • ಸಂಪರ್ಕಿಸಿ
  • Privacy Policy
  • Disclaimer
  • Login/Register
KMS
Banner
  • Home
  • Special Story
  • ರಾಜ್ಯ
  • ರಾಷ್ಟ್ರ
  • ರಾಜಕೀಯ
  • ವಿಶ್ಲೇಷಣೆ
  • ಅಂಕಣ
  • ಶಿಕ್ಷಣ
  • ಉದ್ಯೋಗ
  • ಸಂದರ್ಶನ
KMS
KMS
  • Home
  • Special Story
  • ರಾಜ್ಯ
  • ರಾಷ್ಟ್ರ
  • ರಾಜಕೀಯ
  • ವಿಶ್ಲೇಷಣೆ
  • ಅಂಕಣ
  • ಶಿಕ್ಷಣ
  • ಉದ್ಯೋಗ
  • ಸಂದರ್ಶನ

@2022 - All Right Reserved. Designed and Developed by PenciDesign

ಅಂಕಣಉದ್ಯೋಗದಿನ ಭವಿಷ್ಯಶಿಕ್ಷಣಸಂದರ್ಶನ

ಬೊಜ್ಜು, ಕೊಬ್ಬು ನಿಯಂತ್ರಣಕ್ಕೆ ರುದ್ರಮುದ್ರೆ ರಾಮಬಾಣ

by admin March 23, 2024
written by admin March 23, 2024 0 comments 2 minutes read
3FacebookTwitterPinterestEmail
396

ಟೈಪ್-2 ಸಕ್ಕರೆ ರೋಗ ಹತ್ತೋಟಿಗೂ ಸಹಕಾರಿ

ಜಡತ್ವದಿಂದ ಕೂಡಿದ ಜೀವನಶೈಲಿ ಮತ್ತು ಅನಾರೋಗ್ಯಕರ ಆಹಾರ ಪದ್ಧತಿಯಿಂದ ಆರೋಗ್ಯದಲ್ಲಿ ಆಗಾಗ್ಗೆ ಏರುಪೇರಾಗುವುದು ಇತ್ತೀಚೆಗೆ ಸರ್ವೇ ಸಾಮಾನ್ಯವಾಗಿದೆ. ಜೀವನ ಶೈಲಿಯ ಅಸ್ವಸ್ಥೆಯಿಂದಾಗಿ ಉಂಟಾಗಿರುವ ಬೊಜ್ಜು, ಅತಿಯಾದ ಕೊಬ್ಬಿನ ಶೇಖರಣೆ. ದೇಹದ ತೂಕದಲ್ಲಿ ಅತಿಯಾದ ಹೆಚ್ಚಳ. ಇವುಗಳನ್ನು ನಿಯಂತ್ರಿಸಲು ಪ್ರತಿನಿತ್ಯ ನಿಯಮಿತವಾಗಿ ಯೋಗಾಸನಗಳು, ಮುದ್ರೆಗಳು ಹಾಗೂ ಪ್ರಾಣಾಯಾಮಗಳನ್ನು ಅಭ್ಯಾಸ ಮಾಡುವುದು ಒಳ್ಳಿತು. ಇಂತಹ ಅಭ್ಯಾಸಗಳು ಆರೋಗ್ಯದ ಮೇಲೆ ಸಕಾರಾತ್ಮಕ ಪರಿಣಾಮ ಬೀರಬಲ್ಲವು.

ರುದ್ರಮುದ್ರೆಯು ಹಸ್ತ ಮುದ್ರೆಗಳಲ್ಲಿ ಒಂದಾಗಿದೆ. ದೇಹ ಪಂಚಭೂತಗಳಿಂದ ನಿರ್ಮಿಸಲ್ಪಟ್ಟಿದ್ದು, ಹಸ್ತದ ಐದು ಬೆರಳುಗಳು ಪಂಚಭೂತಗಳನ್ನೇ ಪ್ರತಿನಿಧಿಸುತ್ತವೆ. ಮುದ್ರೆಗಳ ಅಭ್ಯಾಸದ ಸಮಯದಲ್ಲಿ ನಾವು ಬೆರಳುಗಳ ತುದಿಗೆ ಒತ್ತಡವನ್ನು ತಂದಾಗ ಮೆದುಳಿನ ನರಗಳು ಸಕ್ರಿಯಗೊಳ್ಳುವುದರ ಜೊತೆಗೆ ಆರೋಗ್ಯಕರ ಪ್ರಯೋಜನಗಳನ್ನು ಪಡೆಯಬಹುದಾಗಿದೆ. ಶಿವನ ಹಲವು ಹೆಸರುಗಳಲ್ಲಿ ರುದ್ರವೂ ಒಂದು. ಇದು ಶಿವನಿಗೆ ಸಮರ್ಪಿತವಾದ ಮುದ್ರೆಯಾಗಿದೆ. ದೇಹದಲ್ಲಿನ ಬೆಂಕಿ, ಗಾಳಿ ಮತ್ತು ಭೂಮಿಯ ಅಂಶಗಳನ್ನು ಸಂಕೇತಿಸುವ ಹೆಬ್ಬೆರಳು, ತೋರು ಬೆರಳು ಮತ್ತು ಉಂಗುರದ ಬೆರಳುಗಳನ್ನು ಒಳಗೊಂಡಿದೆ.

ರುದ್ರಮುದ್ರೆ ಮಾಡುವುದು ಹೀಗೆ

ಪದ್ಮಾಸನ ಅಥವಾ ವಜ್ರಾಸನ ಅಥವಾ ಸುಖಾಸನ ಭಂಗಿಗಳಲ್ಲಿ ಕುಳಿತುಕೊಳ್ಳಿ. ತಲೆ ಮತ್ತು ಬೆನ್ನು ನೇರವಾಗಿ ಇರಿಸಿಕೊಂಡಿರಬೇಕು. ಅಂಗೈಗಳನ್ನು ಮೊಣಕಾಲುಗಳ ಮೇಲೆ ಇಟ್ಟುಕೊಂಡಿರಬೇಕು. ಅಂಗೈಗಳು ಆಕಾಶವನ್ನು ನೋಡುತ್ತಿರಲಿ. ತೋರು ಬೆರಳು, ಉಂಗುರದ ಬೆರಳು ಮತ್ತು ಹೆಬ್ಬೆರಳಿನ ತುದಿಯನ್ನು ಸೇರಿಸಿಕೊಳ್ಳಬೇಕು. ಮಧ್ಯದ ಬೆರಳು ಹಾಗೂ ಕಿರುಬೆರಳು ನೇರವಾಗಿ ವಿಸ್ತರಿಸಿಕೊಂಡಿರಬೇಕು. ಮುದ್ರೆಯನ್ನು ಮಾಡುವಾಗ ಸಾಧ್ಯವಾದರೆ ಕಣ್ಣುಗಳನ್ನು ಮುಚ್ಚಿ. ಇಲ್ಲವಾದಲ್ಲಿ ಕಣ್ಣುಗಳನ್ನು ತೆರೆದೇ ಧ್ಯಾನ ಸ್ಥಿತಿಯಲ್ಲಿ ಕೂರಬಹುದು.

ಕೇಂದ್ರದ ವಿರುದ್ಧ ತೊಡೆ ತಟ್ಟಿದ ಸಿದ್ದರಾಮಯ್ಯ

ನಿಧಾನವಾಗಿ ಉಸಿರಾಡಿ ಮತ್ತು ಹೆಬ್ಬೆರಳು, ತೋರು ಬೆರಳು ಮತ್ತು ಉಂಗುರದ ಬೆರಳಿನ ಮೇಲೆ ಸ್ವಲ್ಪ ಒತ್ತಡವನ್ನು ಹಾಕಿರಬೇಕು. ಜೊತೆಗೆ ಉಸಿರಾಟದ ಮೇಲೆ ಗಮನ ಕೇಂದ್ರೀಕೃತವಾಗಿರಲಿ. ಮುಖ್ಯವಾಗಿ ಯಾವುದೇ ಮುದ್ರೆಯನ್ನು ಮಾಡುವಾಗ ಶಾಂತ ಮನಸ್ಸಿನಿಂದ ಕೂರುವುದು ಒಳ್ಳೆಯದು. ಪ್ರತಿದಿನ 20 ರಿಂದ 30 ನಿಮಿಷಗಳ ಕಾಲ ಈ ಮುದ್ರೆ ಮಾಡಬೇಕು. ಪೂರ್ಣ ಪ್ರಯೋಜನ ಪಡೆದ ನಂತರ ಮುದ್ರೆ ಮಾಡುವುದನ್ನು ನಿಲ್ಲಿಸಬೇಕು.

ಈ ಮುದ್ರೆಯನ್ನು ಹೆಚ್ಚು ಮಾಡುವುದರಿಂದ ಏಕಾಗ್ರತೆಯಲ್ಲಿ ಸುಧಾರಣೆ ಕಂಡುಬರುತ್ತದೆ. ಈ ಮುದ್ರೆಯು ಭಗವಾನ್ ಶಿವ ಮತ್ತು ಋಗ್ವೇದ ದೇವತೆಗೆ ಸಮರ್ಪಿತವಾಗಿದೆ. ರುದ್ರಮುದ್ರೆಯು ಶಿವನಿಗೆ ಸಮರ್ಪಿತವಾಗಿರುವುದರಿಂದ ಇದನ್ನು ಶಕ್ತಿಯ ಸೂಚಕವೆಂದು ಕರೆಯುವುದುಂಟು. ರುದ್ರಮುದ್ರೆಯು ಮಣಿಪುರ ಚಕ್ರವನ್ನು ಸಕ್ರಿಯಗೊಳಿಸುವುದು.

ರುದ್ರಮುದ್ರೆಯ ಪ್ರಯೋಜನಗಳು

ಈ ಮುದ್ರೆಯನ್ನು ಅಭ್ಯಾಸ ಮಾಡುವುದರಿಂದ ದೃಷ್ಟಿಯ ಮೇಲೆ ಸಕಾರಾತ್ಮಕ ಪರಿಣಾಮ ಬೀರುವುದಲ್ಲದೆ, ನಿರಂತರವಾಗಿ ಅಭ್ಯಾಸ ಮಾಡುವುದರಿಂದ ಮಂದ ದೃಷ್ಟಿಯೂ ಸರಿ ಹೋಗುವ ಸಾಧ್ಯತೆಗಳಿವೆ. ರುದ್ರಮುದ್ರೆಯ ಅಭ್ಯಾಸವು ಅಧಿಕ ರಕ್ತದೊತ್ತಡವನ್ನು ನಿಯಂತ್ರಿಸುವುದು. ಬೊಜ್ಜಿನ ಸಮಸ್ಯೆ ನಿಯಂತ್ರಿಸುವುದರ ಜೊತೆಗೆ ಆರೋಗ್ಯದಲ್ಲಿ ಸುಧಾರಣೆ ಕಂಡುಬರುವುದು. ಈ ಮುದ್ರೆಯ ಅಭ್ಯಾಸದಿಂದ ಮಣಿಪುರ ಚಕ್ರ ಉತ್ತೇಜನಗೊಂಡು ಆಹಾರ ಮತ್ತು ಜೀರ್ಣಕ್ರಿಯೆಯಲ್ಲಿ ಸುಧಾರಣೆ ಕಾಣಬಹುದು.

ಒತ್ತಡ ನಿವಾರಣೆಗೆ ಆದಿ ಮುದ್ರೆ ಸಹಕಾರಿ

ಅತಿಯಾದ ಖಿನ್ನತೆ, ಮಾನಸಿಕ ಅಸ್ವಸ್ಥತೆ, ದುಃಖದ ಭಾವನೆಯಿಂದ ಬಳಲುತ್ತಿರುವವರು ಪ್ರತಿದಿನ ನಿಯಮಿತ ಅಭ್ಯಾಸ ಮಾಡುವುದರಿಂದ ಬೇಗ ಗುಣಮುಖರಾಗಬಹುದು. ಟೈಪ್-2  ಮಧುಮೇಹವನ್ನು ರುದ್ರಮುದ್ರೆ ಅಭ್ಯಾಸದಿಂದ ನಿಯಂತ್ರಿಸಬಹುದಾಗಿದೆ. ಇನ್ಸುಲಿನ್, ಹಾರ್ಮೋನ್ ನಲ್ಲಿನ ಕೊರತೆ, ರಕ್ತದಲ್ಲಿನ ಗ್ಲೂಕೋಸ್ ಮಟ್ಟ ಇವೆಲ್ಲವನ್ನು ನಿಯಂತ್ರಿಸುತ್ತದೆ. ದೋಷಪೂರಿತ ಭಂಗಿ ದೀರ್ಘಕಾಲದವರೆಗೆ ಕಾಡುವ ಕುತ್ತಿಗೆ ಹಾಗೂ ಬೆನ್ನು ನೋವಿನ ಸಮಸ್ಯೆಯನ್ನು ನಿವಾರಿಸಲು ರುದ್ರಮುದ್ರೆಯು ಸಹಾಯ ಮಾಡುತ್ತದೆ. ದೇಹದಲ್ಲಿನ ರಕ್ತದ ಪರಿಚಲನೆಯನ್ನು ಸುಧಾರಿಸಲು ಉಸಿರಾಟದ ಕ್ರಿಯೆಯನ್ನು ಸುಧಾರಿಸಲು ಮತ್ತು ತಲೆ ತಿರುಗುವಿಕೆಯಂತಹ ಸಮಸ್ಯೆಗಳ ನಿವಾರಣೆಗೆ ಈ ಮುದ್ರೆ ಸಹಕಾರಿಯಾಗಿದೆ.

ರುದ್ರಮುದ್ರೆಯ ಮೇಲೆ ವೈದ್ಯರು ಅತಿ ಹೆಚ್ಚಿನ ಸಂಶೋಧನೆಗಳನ್ನು ನಡೆಸುತ್ತಿದ್ದು, ಮೇಲೆ ಹೇಳಿದ ಹಲವು ಫಲಿತಾಂಶಗಳ ಬಗ್ಗೆ ಹೆಚ್ಚು ಬೆಳಕು ಚೆಲ್ಲಲಾಗಿದೆ. ಯಾವುದೇ ರೋಗದ ಲಕ್ಷಣಗಳು ಕೊನೆಯ ಹಂತವನ್ನು ತಲುಪಿದ ಸಮಯದಲ್ಲಿ ಮುದ್ರೆಗಳು ಗರಿಷ್ಠ ಅಥವಾ ಪೂರ್ಣ ಫಲಿತಾಂಶವನ್ನು ನೀಡಲು ಸಾಧ್ಯವಾಗುವುದಿಲ್ಲ. ಹಾಗಾಗಿ ವೈದ್ಯರ ಸಲಹೆ ಪಡೆಯುವುದು ಅತ್ಯಾವಶ್ಯಕ. ಆದರೆ, ನಿಯಮಿತವಾಗಿ ಮುದ್ರೆಗಳ ಅಭ್ಯಾಸದಿಂದ ಆರೋಗ್ಯದಲ್ಲಿ ಲವಲವಿಕೆಯನ್ನು ಕಾಣಬಹುದು.

ರುದ್ರಮುದ್ರೆಯ ಇತಿ-ಮಿತಿಗಳು

ಗರ್ಭಿಣಿ ಹಾಗೂ ಬಾಣಂತಿಯರು, ಚಿಕ್ಕಮಕ್ಕಳು ಮತ್ತು ಹಿರಿಯರು ಈ ಮುದ್ರೆ ಮಾಡದಿರುವುದು ಒಳ್ಳೆಯದು. ಊಟದ ನಂತರ ರುದ್ರಮುದ್ರೆಯನ್ನು ಯಾವುದೇ ಕಾರಣಕ್ಕೂ ಮಾಡಬಾರದು. ದೇಹದ ಮೇಲೆ ಆಭರಣಗಳನ್ನು ಧರಿಸಿರುವಂತಹ ಸಂದರ್ಭದಲ್ಲಿ, ಕನ್ನಡ ಧರಿಸಿರುವ ಸಂದರ್ಭದಲ್ಲಿ ರುದ್ರಮುದ್ರೆಯನ್ನು ಮಾಡಕೂಡದು. ಶಸ್ತ್ರ ಚಿಕಿತ್ಸೆಗಳಿಗೆ ಒಳಪಟ್ಟವರು ಹಾಗೂ ಮೂಳೆ ಮುರಿತಗಳಾದ ಸಂದರ್ಭದಲ್ಲಿ ರುದ್ರಮುದ್ರೆಯನ್ನು ಮಾಡಬಾರದು. ಹಾಗೆಯೇ ಆಯಾಸ ಹಾಗೂ ಅನಾರೋಗ್ಯದ ಸ್ಥಿತಿಯಲ್ಲಿ ಮುದ್ರೆಯನ್ನು ಅಭ್ಯಾಸ ಮಾಡದಿರುವುದು ಒಳ್ಳೆಯದು.

ಅತಿಯಾದ ಶೀತ ಸಂದರ್ಭದಲ್ಲಿ ಅತಿಯಾದ ಬಿಸಿಲಿನ ಸಂದರ್ಭದಲ್ಲಿ ರುದ್ರಮುದ್ರೆಯಿಂದ ದೂರವಿರುವುದು ಒಳ್ಳೆಯದು. ಮನೆಯಲ್ಲಿ ಸಾಕಷ್ಟು ಶಾಂತ ವಾತಾವರಣವಿಲ್ಲದೆ, ಅಧಿಕ ಶಬ್ದವಿದ್ದಾಗಲೂ ಈ ಮುದ್ರೆ ಮಾಡುವುದು ಅಸಾಧ್ಯವಾಗಲಿದೆ. ಯಾವುದೇ ಮುದ್ರೆ ಮಾಡುವ ಮುನ್ನ ನುರಿತ ತರಬೇತುದಾರರಿಂದ ಸಲಹೆ ಪಡೆಯುವುದು ಸೂಕ್ತ. ಏಕಾಏಕಿ ಮುದ್ರೆ ಅಭ್ಯಾಸ ಮಾಡುವುದು ಕೂಡ ಒಳ್ಳೆಯದಲ್ಲ.

Share this:

  • Share on WhatsApp (Opens in new window) WhatsApp
  • Post
  • Tweet
  • Print (Opens in new window) Print
  • Email a link to a friend (Opens in new window) Email
diabetesfat controlhelpfulobesitypanaceaRudramudreType-2
3 FacebookTwitterPinterestEmail
admin

previous post
ಕೇಂದ್ರದ ವಿರುದ್ಧ ತೊಡೆ ತಟ್ಟಿದ ಸಿದ್ದರಾಮಯ್ಯ
next post
ವಾರ ಭವಿಷ್ಯ : ಭಾನುವಾರ, 24ಮಾರ್ಚ್ 2024

You may also like

ನಾಳೆ ಮಧ್ಯಾನ್ಹ 2-20ಕ್ಕೆ ಡಿಕೆಶಿ ಸಂಪುಟ ವಿಸ್ತರಣೆ

July 21, 2026

ವರ್ಚಸ್ಸುಳ್ಳ ಪಕ್ಷನಿಷ್ಠ ಶಾಸಕರಿಗೆ ಮಂತ್ರಿ ಭಾಗ್ಯ

July 20, 2026

ಅಕ್ಟೋಬರ್-ನವೆಂಬರ್‌ಗೆ ಪಂಚಾಯತ್ ಚುನಾವಣೆ

July 11, 2026

ಹೆಚ್ಚು ಆಸ್ತಿ ಗಳಿಕೆ: ಮಾಜಿ ಸಚಿವ ಜಮೀರ್‌ಗೆ ಸಂಕಷ್ಟ

July 11, 2026

ನಂದಿನಿ ಹಾಲು, ಮೊಸರು ಲೀಟರ್‌ಗೆ 3 ರೂ. ಹೆಚ್ಚಳ

July 8, 2026

ಸಿದ್ದರಾಮಯ್ಯ ಮೊಮ್ಮಗನಿಗೆ ರಾಜಕೀಯ ತಾಲೀಮು

July 6, 2026

ನ್ಯಾಯಾಂಗದಲ್ಲಿ ಇನ್ನಷ್ಟು ಸುಧಾರಣೆ ಅಗತ್ಯವಿದೆ

July 4, 2026

ಗೃಹಜ್ಯೋತಿ ಸೇರಿದಂತೆ 5 ಗ್ಯಾರಂಟಿಗಳಿಗೂ ಕಡಿವಾಣ

July 1, 2026

ವಿದ್ಯುತ್ ಸರಬರಾಜು ವ್ಯವಸ್ಥೆ ಖಾಸಗೀಕರಣ ಇಲ್ಲ

June 29, 2026

ಸರ್ಕಾರಿ ನೌಕರರ ಶಿಸ್ತುಪಾಲನೆ ಕಳ್ಳಾಟಕ್ಕೆ ಬ್ರೇಕ್

June 23, 2026

Social Networks

Facebook Twitter Instagram Linkedin Youtube Email Rss

KMS Analysis

  • ವಿದ್ಯುತ್ ಲೋಡ್ ಶೆಡ್ಡಿಂಗ್ ಇಲ್ಲ

    July 9, 2026
  • ಮನಸು ಬದಲಿಸಿದ ರಾಮಲಿಂಗಾರೆಡ್ಡಿ

    June 6, 2026
  • ಸರ್ವಧರ್ಮ ಗುರುಗಳ ಸಮ್ಮುಖದಲ್ಲಿ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ‌ ಸ್ವೀಕಾರ

    June 2, 2026
  • ಮುಖ್ಯಮಂತ್ರಿ ನಿವಾಸವಾಗಿ ಬದಲಾಗಲಿದೆ ಕುಮಾರಕೃಪಾ ಅತಿಥಿ ಗೃಹ

    June 1, 2026
  • ಮೇ 28 ರಂದು ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ

    May 27, 2026

Categories

  • Special Story (521)
  • ಅಂಕಣ (109)
  • ಉದ್ಯೋಗ (340)
  • ದಿನ ಭವಿಷ್ಯ (110)
  • ರಾಜಕೀಯ (2,015)
  • ರಾಜ್ಯ (2,329)
  • ರಾಷ್ಟ್ರ (2,294)
  • ವಿಶ್ಲೇಷಣೆ (198)
  • ಶಿಕ್ಷಣ (401)
  • ಸಂದರ್ಶನ (11)

About Us

ನೈಜ ಹಾಗೂ ವಿಶ್ವಾಸಾರ್ಹತೆಯ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರವಾದ ಸುದ್ದಿ, ಅಭಿಪ್ರಾಯಗಳ ಪ್ರಕಟಣೆಯ ವೆಬ್ ತಾಣ. ಕರ್ನಾಟಕ ರಾಜ್ಯದ ಪ್ರಚಲಿತ ವಿದ್ಯಮಾನಗಳು, ರಾಜಕೀಯ, ನಾಡು, ನುಡಿ, ಜಲ ವಿಚಾರಗಳಲ್ಲದೆ, ದೈನಂದಿನ ಆಗು-ಹೋಗುಗಳು, ವಿವಿಧ ಜಿಲ್ಲೆಗಳ ಪ್ರಮುಖ ವಿಚಾರಗಳ ಭಿತ್ತರಕ್ಕೆ ಹೆಚ್ಚು ಒತ್ತು ನೀಡುವುದು. ನಮ್ಮ ಕುರಿತು ಹೆಚ್ಚಿನ ವಿವರ ಪಡೆಯಲು ಇಲ್ಲಿ ಇಲ್ಲಿಕ್ಲಿಕ್‌ ಮಾಡಿ

Facebook Twitter Linkedin Youtube Email Vimeo Rss

Politics

  • ಡಿಕೆಶಿ ಸಂಪುಟ ವಿಸ್ತರಣೆಗೆ ನೀಟ್ ಹೋರಾಟ ಕಂಟಕ

    July 22, 2026
  • ನಾಳೆ ಮಧ್ಯಾನ್ಹ 2-20ಕ್ಕೆ ಡಿಕೆಶಿ ಸಂಪುಟ ವಿಸ್ತರಣೆ

    July 21, 2026
  • ವರ್ಚಸ್ಸುಳ್ಳ ಪಕ್ಷನಿಷ್ಠ ಶಾಸಕರಿಗೆ ಮಂತ್ರಿ ಭಾಗ್ಯ

    July 20, 2026

KMS Special

  • ಡಿಕೆಶಿ ಸಂಪುಟ ವಿಸ್ತರಣೆಗೆ ನೀಟ್ ಹೋರಾಟ ಕಂಟಕ

    July 22, 2026
  • ನಾಳೆ ಮಧ್ಯಾನ್ಹ 2-20ಕ್ಕೆ ಡಿಕೆಶಿ ಸಂಪುಟ ವಿಸ್ತರಣೆ

    July 21, 2026
  • ಬರಪೀಡಿತ ಘೋಷಣೆಗೆ ನಾಳೆ ತುರ್ತು ಸಂಪುಟ ಸಭೆ

    July 18, 2026
  • Facebook
  • Twitter
  • Linkedin
  • Youtube
  • Email
  • Telegram

@2020 - All Right Reserved. Designed and Developed by Karnatakabest.com

KMS
  • Home
  • Special Story
  • ರಾಜ್ಯ
  • ರಾಷ್ಟ್ರ
  • ರಾಜಕೀಯ
  • ವಿಶ್ಲೇಷಣೆ
  • ಅಂಕಣ
  • ಶಿಕ್ಷಣ
  • ಉದ್ಯೋಗ
  • ಸಂದರ್ಶನ

Read alsox

ನಾಳೆ ಮಧ್ಯಾನ್ಹ 2-20ಕ್ಕೆ ಡಿಕೆಶಿ ಸಂಪುಟ ವಿಸ್ತರಣೆ

July 21, 2026
Sign In

Keep me signed in until I sign out

Forgot your password?

Password Recovery

A new password will be emailed to you.

Have received a new password? Login here

ಕೆಎಂಎಸ್‌ ಕನ್ನಡ ವಾಟ್ಸಪ್‌ ಗ್ರೂಪ್‌ಗೆ ಸೇರಿ