Thursday, July 23, 2026
  • ನಮ್ಮ ಬಗ್ಗೆ
  • ಸಂಪರ್ಕಿಸಿ
  • Privacy Policy
  • Disclaimer
  • Login/Register
KMS
  • Home
  • Special Story
  • ರಾಜ್ಯ
  • ರಾಷ್ಟ್ರ
  • ರಾಜಕೀಯ
  • ವಿಶ್ಲೇಷಣೆ
  • ಅಂಕಣ
  • ಶಿಕ್ಷಣ
  • ಉದ್ಯೋಗ
  • ಸಂದರ್ಶನ
Thursday, July 23, 2026
  • ನಮ್ಮ ಬಗ್ಗೆ
  • ಸಂಪರ್ಕಿಸಿ
  • Privacy Policy
  • Disclaimer
  • Login/Register
KMS
Banner
  • Home
  • Special Story
  • ರಾಜ್ಯ
  • ರಾಷ್ಟ್ರ
  • ರಾಜಕೀಯ
  • ವಿಶ್ಲೇಷಣೆ
  • ಅಂಕಣ
  • ಶಿಕ್ಷಣ
  • ಉದ್ಯೋಗ
  • ಸಂದರ್ಶನ
KMS
KMS
  • Home
  • Special Story
  • ರಾಜ್ಯ
  • ರಾಷ್ಟ್ರ
  • ರಾಜಕೀಯ
  • ವಿಶ್ಲೇಷಣೆ
  • ಅಂಕಣ
  • ಶಿಕ್ಷಣ
  • ಉದ್ಯೋಗ
  • ಸಂದರ್ಶನ

@2022 - All Right Reserved. Designed and Developed by PenciDesign

ಅಂಕಣಉದ್ಯೋಗವಿಶ್ಲೇಷಣೆ

ಹಲವು ರೋಗಗಳಿಗೆ ವಾಯು ಮುದ್ರೆ ರಾಮಬಾಣ

by admin March 3, 2024
written by admin March 3, 2024 0 comments 3 minutes read
3FacebookTwitterPinterestEmail
433
ವಾಯು ದೋಷ ಅತ್ಯಂತ ಹಾನಿಕಾರಕ

ಯೋಗ ವಿಜ್ಞಾನದಲ್ಲಿ ನಮ್ಮ ದೇಹವು ಗಾಳಿ, ಭೂಮಿ, ಆಕಾಶ, ನೀರು, ಅಗ್ನಿ ಎಂಬ ಪಂಚಭೂತಗಳ ಅಂಶದಿಂದ ರೂಪಿಸಲ್ಪಟ್ಟಿದೆ ಎಂದು ತಿಳಿಸುತ್ತದೆ. ಈ ಪಂಚಭೂತಗಳಲ್ಲಿನ ಒಂದು ಅಂಶವು ದೇಹದ ಒಳಗಡೆ ಅಸಮತೋಲನವಾದಾಗಲೇ ಆರೋಗ್ಯ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಈ ಎಲ್ಲಾ ದೋಷಗಳಲ್ಲಿ ವಾಯು ದೋಷ ಅತ್ಯಂತ ಹಾನಿಕಾರಕವಾದದ್ದು. ಪ್ರಾಚೀನ ಭಾರತದ ಆಯುರ್ವೇದದ ಪ್ರಕಾರ ವಾತದೋಷವನ್ನು ದೋಷಗಳ ರಾಜನೆಂದು ಕರೆಯಲಾಗುತ್ತದೆ. ವಾಯುವು ದೇಹದಲ್ಲಿನ ಜಠರ, ಕರುಳಿನ ಮೇಲೆ ತನ್ನ ಕಾರ್ಯವನ್ನು ನಿಯಂತ್ರಿಸುತ್ತದೆ. ಗ್ಯಾಸ್ಟಿಕ್ ನಂತಹ ಸಮಸ್ಯೆಗಳು ವಾಯು ದೋಷದಿಂದಲೇ ಕಾಣಿಸಿಕೊಳ್ಳುವುದು.

ಈ ದೋಷ ಪರಿಹಾರಕ್ಕೆ ವಾಯು ಮುದ್ರೆ ರಾಮಬಾಣದಂತೆ ಕಾರ್ಯ ನಿರ್ವಹಿಸುತ್ತದೆ. ವಾಯು ಮುದ್ರೆಯನ್ನು ಗಾಳಿ ಮುದ್ರೆ ಎಂದು ಕರೆಯಲಾಗುತ್ತದೆ. ದೇಹದಲ್ಲಿರುವ ವಾಯುವಿನ ಅಂಶವನ್ನು ಸಮತೋಲನಕ್ಕೆ ತಂದು ಆರೋಗ್ಯವನ್ನು ಸುಧಾರಿಸಲು ಸಹಕಾರಿಯಾಗಿದೆ. ಈ ಮುದ್ರೆಯನ್ನು ಹಾಕುವುದರಿಂದ 150ಕ್ಕೂ ಹೆಚ್ಚಿನ ರೋಗಗಳು ದೇಹದಿಂದ ದೂರವಾಗುತ್ತವೆ. ಆರ್ಥರೈಟೀಸ್, ಪಾರ್ಕಿನ್ಸನ್, ಸರ್ವಿಕಲ್ ಸ್ಪಾಂಡಲೈಟೀಸ್, ಗ್ಯಾಸ್ಟ್ರಿಕ್ ಸಮಸ್ಯೆ, ಅಧಿಕ ರಕ್ತದೊತ್ತಡ, ಹೊಟ್ಟೆ ಉಬ್ಬರಿಸುವಿಕೆ, ಸೊಂಟನೋವು, ಬೆನ್ನು ನೋವು, ವಾತ, ಮೊಣಕಾಲು ಮತ್ತು ಕೀಲು ನೋವು ಸಮಸ್ಯೆ, ಪಾರ್ಶವಾಯು, ಅಸ್ತಮಾದಂತಹ ಉಸಿರಾಟ ಸಂಬಂಧಿ ಸಮಸ್ಯೆಗಳಿಗೆ ಪರಿಹಾರವಾಗಿದೆ.

ಉತ್ತಮ ಕೂದಲಿನ ಬೆಳವಣಿಗೆಗೆ ಸಹಕಾರಿ

ಕಿವಿ ಮತ್ತು ಕಣ್ಣಿಗೆ ವಾಯು ಮುದ್ರೆ ಪ್ರಯೋಜನಕಾರಿಯಾಗಿದೆ. ಕಿವಿಗಳ ಕಾರ್ಯನಿರ್ವಹಣೆಯನ್ನು ಸಾಮಾನ್ಯಗೊಳಿಸಲು ಸಹಾಯ ಮಾಡುತ್ತದೆ. ಕಣ್ಣುರೆಪ್ಪೆಗಳ ಸೆಳೆತವನ್ನು ಕಡಿಮೆ ಮಾಡುವುದರ ಜೊತೆಗೆ ಕಣ್ಣಿನ ಶುಷ್ಕತೆಯನ್ನು ಕಡಿಮೆ ಮಾಡುತ್ತದೆ. ವಾಯು ಮುದ್ರೆ ಹಾಕುವುದರಿಂದ ಶುಷ್ಕಯುತವಾದ ಚರ್ಮ ಸಹಜಸ್ಥಿತಿಗೆ ಮರಳುತ್ತದೆ. ಉಗುರಿನ ಮತ್ತು ಕೂದಲಿನ ದುರ್ಬಲತೆ ಕಡಿಮೆ ಮಾಡುವುದಲ್ಲದೆ, ಉತ್ತಮ ಕೂದಲಿನ ಬೆಳವಣಿಗೆಗೆ ಸಹಕಾರಿಯಾಗಿದೆ.

ಹಾರ್ಮೋನಿನ ಅಸಮತೋಲನವನ್ನು ನಿವಾರಿಸಲು ಸಹಾಯ  ಮಾಡುತ್ತದೆ. ವಿಫರೀತ ನಡುಕ, ಕೈಕಾಲು ಮತ್ತು ಬೆರಳುಗಳ ಅಲುಗಾಡುವಿಕೆಯಿಂದ ಬಳಲುತ್ತಿರುವವರು ಪ್ರತಿನಿತ್ಯ ವಾಯು ಮುದ್ರೆ ಹಾಕುವುದರಿಂದ ಮುಕ್ತಿಯನ್ನು ಕಾಣುತ್ತಾರೆ. ಕೆಲವರಿಗೆ ಮಾನಸಿಕ ಒತ್ತಡಕ್ಕೆ ಒಳಗಾದಂತೆ ಕುತ್ತಿಗೆಯ ಬಿಗಿತದ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ದೀರ್ಘಕಾಲದವರೆಗೆ ಕುತ್ತಿಗೆ ಗಟ್ಟಿಯಾಗಿದ್ದು, ಬಿಗಿತ ಸೆಳೆತ ಅಧಿಕವಾಗಿದ್ದರೂ ಸಹ  ವಾಯು ಮುದ್ರೆಯಿಂದ ಪ್ರಯೋಜನವನ್ನು ಪಡೆಯಬಹುದಾಗಿದೆ.

ಸಂಧಿವಾತದಂತಹ ಸಮಸ್ಯೆಗಳು ಕಾಣಿಸಿಕೊಂಡಾಗ ಬೆನ್ನು, ಕಾಲಿನ ಹೊರಭಾಗ, ಕೀಲುಗಳಲ್ಲಿ ಶ್ರವಿಸುವ ದ್ರವ, ಉರಿಯೂತ- ಇವೆಲ್ಲದಕ್ಕೂ ವಾತದೋಷವೇ ಕಾರಣವಾಗಿದ್ದು, ವಾಯು ಮುದ್ರೆ ಮಾಡುವುದರಿಂದ ಅತ್ಯುತ್ತಮ ಪ್ರಯೋಜನ ಪಡೆಯಬಹುದು. ಸಣ್ಣ ಸಣ್ಣ ವಿಚಾರಗಳಿಗೂ ಆತಂಕಕ್ಕೆ ಒಳಗಾಗುವವರು ಪ್ರತಿನಿತ್ಯ ವಾಯು ಮುದ್ರೆ ಹಾಕುವುದರಿಂದ ಉತ್ತಮವಾದ ಆರೋಗ್ಯ ಪಡೆಯುತ್ತಾರೆ.

ಮಾನಸಿಕ ಆರೋಗ್ಯಕ್ಕೆ ಉತ್ತಮ

ದೀರ್ಘಕಾಲದ ನಿದ್ರಾಹೀನತೆ, ಅಜ್ಞಾತ ಕಾರಣಗಳಿಂದ ತಲೆ ತಿರುಗುವಿಕೆಯಂತಹ ಸಮಸ್ಯೆಗಳು ಕೂಡ ವಾಯು ಮುದ್ರೆಯಿಂದ ನಿವಾರಿಸಬಹುದು. ಮಾನಸಿಕ ಆರೋಗ್ಯಕ್ಕೆ ಉತ್ತಮ ಪ್ರಯೋಜನಕಾರಿಯಾಗಿದೆ. ವಾಯುಮುದ್ರೆಯ ನಿಯಮಿತ ಅಭ್ಯಾಸದಿಂದ ಹೊಟ್ಟೆಯ ಉಬ್ಬಸ ನಿವಾರಣೆ ಆಗುವುದಲ್ಲದೆ, ಮಲಬದ್ಧತೆಯ ಸಮಸ್ಯೆ ಕೂಡ ದೂರವಾಗುತ್ತದೆ. ಊಟದ ನಂತರ ವಜ್ರಾಸನದಲ್ಲಿ ವಾಯುಮುದ್ರೆಯನ್ನು ಹಾಕುವುದರಿಂದ ಜೀರ್ಣಕ್ರಿಯೆಗೆ ಸಹಾಯವಾಗುತ್ತದೆ. ಹೊಟ್ಟೆಯ ಆರೋಗ್ಯದಲ್ಲಿ ಸುಧಾರಣೆ ಕಂಡುಬರುತ್ತದೆ.

ವಾಯು ಮುದ್ರೆ ಮಾಡುವುದು ಹೇಗೆ?

ಯಾವುದೇ ಭಂಗಿಯಲ್ಲಿ ನಿಮ್ಮನ್ನು ಆರಾಮದಾಯಕವಾಗಿರಿಸಿಕೊಂಡು ಕುಳಿತಿರುವಾಗ, ನಿಂತಿರುವಾಗ, ಪ್ರಾಣಯಾಮ ಮಾಡುವಾಗ, ಅಥವಾ ನಡೆಯುವಾಗಲೂ ಸಹ ವಾಯು ಮುದ್ರೆಯನ್ನು ಮಾಡಬಹುದು. ತೋರು ಬೆರಳಿನ ತುದಿಯನ್ನು ನಿಮ್ಮ ಹೆಬ್ಬೆರಳಿನ ತಳದಲ್ಲಿ ಒತ್ತಿರಿ. ಮತ್ತು ತೋರು ಬೆರಳಿನ ಮೇಲೆ ನಿಮ್ಮ ಹೆಬ್ಬೆರಳನ್ನು ನಿಧಾನವಾಗಿ ಒತ್ತಿರಿ ಇತರ ಬೆರಳುಗಳನ್ನು ನೇರವಾಗಿ ಇರಿಸಿ. ಇದು ಭರತ ನಾಟ್ಯದಲ್ಲಿನ ಹಂಸ ಹಸ್ತವನ್ನು ಹೋಲುತ್ತದೆ. ಧ್ಯಾನ ಮಾಡುವಾಗ ಸಾಮಾನ್ಯವಾಗಿ ಬಳಸುವ ಮುದ್ರೆ ಇದಾಗಿದೆ.

ದಿನಕ್ಕೆ 45 ನಿಮಿಷದಂತೆ ಈ ಮುದ್ರೆಯನ್ನು ಅಭ್ಯಾಸ ಮಾಡಬೇಕು. ಕನಿಷ್ಠಪಕ್ಷ ಹತ್ತರಿಂದ ಇಪ್ಪತ್ತು ನಿಮಿಷ ವಾಯು ಮುದ್ರೆ ಮಾಡುವುದರಿಂದ ದೇಹದಲ್ಲಿನ ವಾಯು ಸಮತೋಲನಗೊಳ್ಳುತ್ತದೆ. ಅತಿಯಾದ ಬಿಕ್ಕಳಿಕೆಯಂತಹ ಸಂದರ್ಭದಲ್ಲಿ ವಾಯುಮುದ್ರೆ ಹಾಕಿದರೆ ಬಿಕ್ಕಳಿಕೆ ಕಡಿಮೆಯಾಗುವುದು.

ದೀರ್ಘ ಕಾಲ ವಾಯು ಮುದ್ರೆ ಅಭ್ಯಾಸ ಮಾಡಬಾರದು

ನೀವು ದೀರ್ಘ ಕಾಲದವರೆಗೆ ವಾಯು ಮುದ್ರೆಯನ್ನು ಅಭ್ಯಾಸ ಮಾಡಬಾರದು. ನೋವು ಅಥವಾ ರೋಗ ಲಕ್ಷಣಗಳು ದೂರವಾದ ನಂತರ ಈ ಮುದ್ರೆ ಮಾಡುವುದನ್ನು ನಿಲ್ಲಿಸಬೇಕು. ಆ ನಂತರವೂ ಈ ಮುದ್ರೆ ಮುಂದುವರೆಸಿದರೆ, ಪೋಷಕ ಗಾಳಿಯ ಕೊರತೆಯನ್ನು ದೇಹವು ಎದುರಿಸಬೇಕಾಗುತ್ತದೆ. ಶುದ್ಧಗಾಳಿಯ ಅಸಮತೋಲನದಿಂದ ಅನೇಕ ಕಾಯಿಲೆಗಳಿಗೆ ತುತ್ತಾಗುವ ಅಪಾಯಗಳಿವೆ. ಅಭ್ಯಾಸದ ಸಮಯದಲ್ಲಿ ತೋರು ಬೆರಳಿನ ಮೇಲೆ ಹೆಚ್ಚು ಒತ್ತಡ ಹೇರಬೇಡಿ.

 ಮುದ್ರೆ ಮಾಡುವ ಮುಂಚೆ ನಿಮ್ಮ ಮನಸ್ಸನ್ನು ಶಾಂತಗೊಳಿಸಿ ಮತ್ತು ನಿಮ್ಮ ಉಸಿರಾಟವನ್ನು ಸರಾಗಗೊಳಿಸಿಕೊಳ್ಳಿ. ನಿಮ್ಮ ಕೈಗಳನ್ನು ಮೊಣಕಾಲುಗಳ ಇರಿಸಿ ಮತ್ತು ಅಂಗೈಗಳನ್ನು ಆಕಾಶ ನೋಡುವಂತೆ ಮೇಲ್ಮುಖ ಮಾಡಿ. ನೀವು ಆರಂಭದಲ್ಲಿ ಅಹಿತಕರ ಒತ್ತಡ ಕಾಣಬಹುದು. ಆದರೆ, ಅದು ಸಮಯದೊಂದಿಗೆ ಸುಲಭಗೊಳ್ಳುತ್ತದೆ.

ವಯಸ್ಕರು ದಿನಕ್ಕೆ ಸುಮಾರು 45 ನಿಮಿಷಗಳ ಕಾಲ ಈ ಮುದ್ರೆಯನ್ನು ಮಾಡಬಹುದು. ಕಿರಿಯರು 15 ನಿಮಿಷಗಳ ಕಾಲ ಈ ಮುದ್ರೆಯನ್ನು ಮಾಡಿದರೆ ಉಪಯುಕ್ತ. ಬ್ರಹ್ಮ ಮುಹೂರ್ತ, ಮುಂಜಾನೆ ಸಮಯದಲ್ಲಿ ಈ ಮುದ್ರೆ ಮಾಡುವುದರಿಂದ ಹೆಚ್ಚಿನ ಪ್ರಯೋಜನ ಪಡೆಯಬಹುದು. ಇಷ್ಟೇ ಅಲ್ಲದೆ, ವಾಯು ಮುದ್ರೆಯು ಕೆಲವೊಂದು ಅಧ್ಯಯನದ ಪ್ರಕಾರ ತೂಕ ನಷ್ಟವಾಗಲು ಪ್ರಯೋಜನಕಾರಿಯಾಗಿದೆ ಎಂದು ತಿಳಿದುಬಂದಿದೆ.

ಉಳುಕು ನೋವು ನಿವಾರಣೆಗೆ ಸಹಕಾರಿ

ಭಾರವಾದ ವಸ್ತುಗಳನ್ನು ಎತ್ತಿದ ನಂತರ ತಕ್ಷಣವೇ ಐದು ನಿಮಿಷಗಳ ಕಾಲ ವಾಯು ಮುದ್ರೆಯನ್ನು ಅಭ್ಯಾಸ ಮಾಡಬೇಕು. ಹಾಗೆಯೇ ಉಳುಕು ಇದ್ದಾಗ ಈ ಮುದ್ರೆಯನ್ನು ಅಭ್ಯಾಸ ಮಾಡುವುದರಿಂದ ನೋವು ನಿವಾರಣೆಯಾಗಲಿದೆ.

ಜ್ವರ, ಶೀತದಿಂದ ಬಳಲುವವರು ವಾಯು ಮುದ್ರೆ ಮಾಡುವುದನ್ನು ನಿಲ್ಲಿಸಬೇಕು. ಮಣಿಕಟ್ಟು, ತೋಳು ಹಾಗೂ ಬೆರಳುಗಳಲ್ಲಿ ಗಾಯವಿದ್ದರೆ, ಇದರ ಅಭ್ಯಾಸದಿಂದ ದೂರವಿರುವುದು ಒಳ್ಳೆಯದು.  ಈ ಮುದ್ರೆ ಮಾಡುವ ಸಂದರ್ಭದಲ್ಲಿ ಶಾಂತ ಮತ್ತು ಆಳವಾದ ಉಸಿರಾಟದೊಂದಿಗೆ “ಓಂ” ಪಠಣ ಮಾಡುವುದರೊಂದಿಗೆ ಮುದ್ರೆಯನ್ನು ಮಾಡುವುದರಿಂದ ಹೆಚ್ಚು ಪ್ರಯೋಜನ ಪಡೆಯಬಹುದು.

Share this:

  • Share on WhatsApp (Opens in new window) WhatsApp
  • Post
  • Tweet
  • Print (Opens in new window) Print
  • Email a link to a friend (Opens in new window) Email
3 FacebookTwitterPinterestEmail
admin

previous post
ವಾರ ಭವಿಷ್ಯ : ಭಾನುವಾರ, 03 ಮಾರ್ಚ್ 2024
next post
ದಿನ ಭವಿಷ್ಯ : ಸೋಮವಾರ, 4 ಮಾರ್ಚ್ 2024

You may also like

ನಾಳೆ ಮಧ್ಯಾನ್ಹ 2-20ಕ್ಕೆ ಡಿಕೆಶಿ ಸಂಪುಟ ವಿಸ್ತರಣೆ

July 21, 2026

ಅಕ್ಟೋಬರ್-ನವೆಂಬರ್‌ಗೆ ಪಂಚಾಯತ್ ಚುನಾವಣೆ

July 11, 2026

ವಿದ್ಯುತ್ ಲೋಡ್ ಶೆಡ್ಡಿಂಗ್ ಇಲ್ಲ

July 9, 2026

ನಂದಿನಿ ಹಾಲು, ಮೊಸರು ಲೀಟರ್‌ಗೆ 3 ರೂ. ಹೆಚ್ಚಳ

July 8, 2026

ನ್ಯಾಯಾಂಗದಲ್ಲಿ ಇನ್ನಷ್ಟು ಸುಧಾರಣೆ ಅಗತ್ಯವಿದೆ

July 4, 2026

ಗೃಹಜ್ಯೋತಿ ಸೇರಿದಂತೆ 5 ಗ್ಯಾರಂಟಿಗಳಿಗೂ ಕಡಿವಾಣ

July 1, 2026

ವಿದ್ಯುತ್ ಸರಬರಾಜು ವ್ಯವಸ್ಥೆ ಖಾಸಗೀಕರಣ ಇಲ್ಲ

June 29, 2026

ಸರ್ಕಾರಿ ನೌಕರರ ಶಿಸ್ತುಪಾಲನೆ ಕಳ್ಳಾಟಕ್ಕೆ ಬ್ರೇಕ್

June 23, 2026

ಜೂನ್ ಅಂತ್ಯಕ್ಕೆ ಶಿವಕುಮಾರ್ ಸಂಪುಟ ವಿಸ್ತರಣೆ

June 12, 2026

ಮನಸು ಬದಲಿಸಿದ ರಾಮಲಿಂಗಾರೆಡ್ಡಿ

June 6, 2026

Social Networks

Facebook Twitter Instagram Linkedin Youtube Email Rss

KMS Analysis

  • ವಿದ್ಯುತ್ ಲೋಡ್ ಶೆಡ್ಡಿಂಗ್ ಇಲ್ಲ

    July 9, 2026
  • ಮನಸು ಬದಲಿಸಿದ ರಾಮಲಿಂಗಾರೆಡ್ಡಿ

    June 6, 2026
  • ಸರ್ವಧರ್ಮ ಗುರುಗಳ ಸಮ್ಮುಖದಲ್ಲಿ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ‌ ಸ್ವೀಕಾರ

    June 2, 2026
  • ಮುಖ್ಯಮಂತ್ರಿ ನಿವಾಸವಾಗಿ ಬದಲಾಗಲಿದೆ ಕುಮಾರಕೃಪಾ ಅತಿಥಿ ಗೃಹ

    June 1, 2026
  • ಮೇ 28 ರಂದು ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ

    May 27, 2026

Categories

  • Special Story (521)
  • ಅಂಕಣ (109)
  • ಉದ್ಯೋಗ (340)
  • ದಿನ ಭವಿಷ್ಯ (110)
  • ರಾಜಕೀಯ (2,015)
  • ರಾಜ್ಯ (2,329)
  • ರಾಷ್ಟ್ರ (2,294)
  • ವಿಶ್ಲೇಷಣೆ (198)
  • ಶಿಕ್ಷಣ (401)
  • ಸಂದರ್ಶನ (11)

About Us

ನೈಜ ಹಾಗೂ ವಿಶ್ವಾಸಾರ್ಹತೆಯ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರವಾದ ಸುದ್ದಿ, ಅಭಿಪ್ರಾಯಗಳ ಪ್ರಕಟಣೆಯ ವೆಬ್ ತಾಣ. ಕರ್ನಾಟಕ ರಾಜ್ಯದ ಪ್ರಚಲಿತ ವಿದ್ಯಮಾನಗಳು, ರಾಜಕೀಯ, ನಾಡು, ನುಡಿ, ಜಲ ವಿಚಾರಗಳಲ್ಲದೆ, ದೈನಂದಿನ ಆಗು-ಹೋಗುಗಳು, ವಿವಿಧ ಜಿಲ್ಲೆಗಳ ಪ್ರಮುಖ ವಿಚಾರಗಳ ಭಿತ್ತರಕ್ಕೆ ಹೆಚ್ಚು ಒತ್ತು ನೀಡುವುದು. ನಮ್ಮ ಕುರಿತು ಹೆಚ್ಚಿನ ವಿವರ ಪಡೆಯಲು ಇಲ್ಲಿ ಇಲ್ಲಿಕ್ಲಿಕ್‌ ಮಾಡಿ

Facebook Twitter Linkedin Youtube Email Vimeo Rss

Politics

  • ಡಿಕೆಶಿ ಸಂಪುಟ ವಿಸ್ತರಣೆಗೆ ನೀಟ್ ಹೋರಾಟ ಕಂಟಕ

    July 22, 2026
  • ನಾಳೆ ಮಧ್ಯಾನ್ಹ 2-20ಕ್ಕೆ ಡಿಕೆಶಿ ಸಂಪುಟ ವಿಸ್ತರಣೆ

    July 21, 2026
  • ವರ್ಚಸ್ಸುಳ್ಳ ಪಕ್ಷನಿಷ್ಠ ಶಾಸಕರಿಗೆ ಮಂತ್ರಿ ಭಾಗ್ಯ

    July 20, 2026

KMS Special

  • ಡಿಕೆಶಿ ಸಂಪುಟ ವಿಸ್ತರಣೆಗೆ ನೀಟ್ ಹೋರಾಟ ಕಂಟಕ

    July 22, 2026
  • ನಾಳೆ ಮಧ್ಯಾನ್ಹ 2-20ಕ್ಕೆ ಡಿಕೆಶಿ ಸಂಪುಟ ವಿಸ್ತರಣೆ

    July 21, 2026
  • ಬರಪೀಡಿತ ಘೋಷಣೆಗೆ ನಾಳೆ ತುರ್ತು ಸಂಪುಟ ಸಭೆ

    July 18, 2026
  • Facebook
  • Twitter
  • Linkedin
  • Youtube
  • Email
  • Telegram

@2020 - All Right Reserved. Designed and Developed by Karnatakabest.com

KMS
  • Home
  • Special Story
  • ರಾಜ್ಯ
  • ರಾಷ್ಟ್ರ
  • ರಾಜಕೀಯ
  • ವಿಶ್ಲೇಷಣೆ
  • ಅಂಕಣ
  • ಶಿಕ್ಷಣ
  • ಉದ್ಯೋಗ
  • ಸಂದರ್ಶನ

Read alsox

ನಾಳೆ ಮಧ್ಯಾನ್ಹ 2-20ಕ್ಕೆ ಡಿಕೆಶಿ ಸಂಪುಟ ವಿಸ್ತರಣೆ

July 21, 2026
Sign In

Keep me signed in until I sign out

Forgot your password?

Password Recovery

A new password will be emailed to you.

Have received a new password? Login here

ಕೆಎಂಎಸ್‌ ಕನ್ನಡ ವಾಟ್ಸಪ್‌ ಗ್ರೂಪ್‌ಗೆ ಸೇರಿ