Saturday, May 17, 2025
  • ನಮ್ಮ ಬಗ್ಗೆ
  • ಸಂಪರ್ಕಿಸಿ
  • Privacy Policy
  • Disclaimer
  • Login/Register
KMS
  • Home
  • Special Story
  • ರಾಜ್ಯ
  • ರಾಷ್ಟ್ರ
  • ರಾಜಕೀಯ
  • ವಿಶ್ಲೇಷಣೆ
  • ಅಂಕಣ
  • ಶಿಕ್ಷಣ
  • ಉದ್ಯೋಗ
  • ಸಂದರ್ಶನ
Saturday, May 17, 2025
  • ನಮ್ಮ ಬಗ್ಗೆ
  • ಸಂಪರ್ಕಿಸಿ
  • Privacy Policy
  • Disclaimer
  • Login/Register
KMS
Banner
  • Home
  • Special Story
  • ರಾಜ್ಯ
  • ರಾಷ್ಟ್ರ
  • ರಾಜಕೀಯ
  • ವಿಶ್ಲೇಷಣೆ
  • ಅಂಕಣ
  • ಶಿಕ್ಷಣ
  • ಉದ್ಯೋಗ
  • ಸಂದರ್ಶನ
KMS
KMS
  • Home
  • Special Story
  • ರಾಜ್ಯ
  • ರಾಷ್ಟ್ರ
  • ರಾಜಕೀಯ
  • ವಿಶ್ಲೇಷಣೆ
  • ಅಂಕಣ
  • ಶಿಕ್ಷಣ
  • ಉದ್ಯೋಗ
  • ಸಂದರ್ಶನ

@2022 - All Right Reserved. Designed and Developed by PenciDesign

ಅಂಕಣ

ವಿಜಯೇಂದ್ರ ಸೇಫ್ಟಿಗೆ ನಡ್ಡಾ ಬರುತ್ತಿದ್ದಾರೆ

by admin December 23, 2024
written by admin December 23, 2024 0 comments 5 minutes read
Share 0FacebookTwitterPinterestEmail
70

ಕಳೆದ ವಾರ ದಿಲ್ಲಿಗೆ ಹೋದ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ್ದಾರೆ, ಈ ಸಂದರ್ಭದಲ್ಲಿ ಪಕ್ಷ ಸಂಘಟನೆಗಾಗಿ ತಾವು ಮಾಡುತ್ತಿರುವ ಪ್ರಯತ್ನಗಳ ಬಗ್ಗೆ ಅವರು ವಿವರಿಸಿದ್ದಾರೆ.

ಹೀಗೆ ವಿಜಯೇಂದ್ರ ಅವರು ಹೇಳಿದ್ದನ್ನು ಸಮಾಧಾನದಿಂದ ಕೇಳಿಸಿಕೊಂಡ ಪ್ರಧಾನಿ ಮೋದಿಯವರು ವೆರಿಗುಡ್ ಎಂದಿದ್ದಾರೆ.

ಕಾರಣ, ಕರ್ನಾಟಕದಲ್ಲಿ ಪಕ್ಷ ಸಂಘಟನೆಗಾಗಿ ವಿಜಯೇಂದ್ರ ಅವರು ಮಾಡುತ್ತಿರುವ ಪ್ರಯತ್ನಗಳ ಬಗ್ಗೆ ಅಷ್ಟೊತ್ತಿಗಾಗಲೇ ಮೋದಿಯವರು ಫೀಡ್ ಬ್ಯಾಕ್ ತರಿಸಿಕೊಂಡಿದ್ದರಂತೆ.

ಹೀಗಾಗಿ, ವಿಜಯೇಂದ್ರ ಅವರು ತಮ್ಮ ಪ್ರಯತ್ನಗಳ ಬಗ್ಗೆ ಹೇಳುತ್ತಿದ್ದಂತೆಯೇ, ವೆರಿ ಗುಡ್, ಪಕ್ಷ ಸಂಘಟನೆಯ ವಿಷಯದಲ್ಲಿ ನೀವು ಮಾಡಿದ ಕೆಲಸಗಳ ಬಗ್ಗೆ ನಮ್ಮ ಗಮನಕ್ಕೆ ಬಂದಿದೆ, ಈ ವಿಷಯದಲ್ಲಿ ಕರ್ನಾಟಕ ದೇಶದಲ್ಲೇ ನಾಲ್ಕನೇ ಸ್ಥಾನ ಪಡೆದಿದೆ, ಕರ್ನಾಟಕದಲ್ಲಿ ನಮಗೆ ಅಧಿಕಾರ ಇಲ್ಲದಿದ್ದರೂ, ರಾಷ್ಟ್ರಮಟ್ಟದಲ್ಲಿ ಪಕ್ಷಕ್ಕೆ ಮಾದರಿಯಾಗುವಂತೆ ಸಂಘಟನೆ ಮಾಡಿದ್ದೀರಿ, ಅದಕ್ಕಾಗಿ ನಿಮಗೆ ಅಭಿನಂದನೆ ಎಂದಿದ್ದಾರೆ.

ಹೀಗೆ ವಿಜಯೇಂದ್ರ ಅವರಿಗೆ ಶಭಾಷ್‌ಗಿರಿ ಕೊಟ್ಟ ಪ್ರಧಾನಿ ಮೋದಿಯವರು, ಇನ್ನುಳಿದ ಯಾವುದೇ ವಿಷಯಗಳ ಬಗ್ಗೆ ಯೋಚಿಸಬೇಡಿ, ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ನಡ್ಡಾ ಅವರು ಆದಷ್ಟು ಬೇಗ ಕರ್ನಾಟಕಕ್ಕೆ ಬರುತ್ತಾರೆ, ಎಲ್ಲವನ್ನೂ ಸರಿ ಮಾಡುತ್ತಾರೆ ಎಂದಿದ್ದಾರೆ.

ಯಾವಾಗ ಮೋದಿಯವರು ಈ ಮಾತು ಹೇಳಿದರೋ, ಇದರಿಂದ ಖುಷಿಯಾದ ವಿಜಯೇಂದ್ರ ಸಮಾಧಾನದಿಂದ ಕರ್ನಾಟಕಕ್ಕೆ ವಾಪಸ್ದಾಗಿದ್ದಾರೆ.

ದಿಲ್ಲಿಯ ಬಿಜೆಪಿ ಮೂಲಗಳ ಪ್ತಕಾರ, ಕರ್ನಾಟಕದಲ್ಲಿ ನಡೆದ ಪಕ್ಷ ಸಂಘಟನೆಯ ಪರ್ವವನ್ನು ಹೊಗಳಿ, ವಿಜಯೇಂದ್ರ ಅವರಿಗೆ ಶಹಬ್ಬಾಸ್‌ಗಿರಿ ಕೊಡಲು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜಗತ್ ಪ್ರಕಾಶ್ ನಡ್ಡಾ ಅವರು ಡಿಸೆಂಬರ್ ೨೯ ರ ಭಾನುವಾರ ಕರ್ನಾಟಕಕ್ಕೆ ಬರಲಿದ್ದಾರೆ.

ಒಂದು ಸಲ ಅವರು ಹೀಗೆ ಬಹಿರಂಗವಾಗಿ ಶಹಬ್ಬಾಸ್‌ಗಿರಿ ಕೊಟ್ಟು ಹೋದರು ಎಂದರೆ ಕರ್ನಾಟಕದಲ್ಲಿ ವಿಜಯೇಂದ್ರ ಅಧ್ಯಾಯ ನಿರಾತಂಕವಾಗಿ ಮುಂದುವರಿಯಲಿದೆ ಎಂದೇ ಅರ್ಥ, ಮತ್ತದೇ ಕಾಲಕ್ಕೆ ವಿಜಯೇಂದ್ರ ವಿರುದ್ಧ ಅಪಸ್ವರ ಎತ್ತುತ್ತಿರುವ ಯತ್ನಾಳ್ ಅಂಡ್ ಟೀಮಿಗೆ ಹಿನ್ನಡೆಯಾಗಲಿದೆ ಎಂಬುದು ನಿಸ್ಸಂಶಯ.

ರವಿ ಎಪಿಸೋಡು ತಂದ ಒಗ್ಗಟ್ಟು

ಇನ್ನು ವಿಧಾನಪರಿಷತ್ತಿನಲ್ಲಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಕುರಿತು ಬಿಜೆಪಿ ನಾಯಕ ಸಿ.ಟಿ.ರವಿ ಆಡಿದರೆನ್ನಲಾದ ಮಾತುಗಳು ಭಾರೀ ವಿವಾದಕ್ಕೆ ಕಾರಣವಾಗಿದೆ.

ಇಲ್ಲ, ನಾನು ಅಂತಹ ಮಾತನಾಡಿಲ್ಲ ಅಂತ ಸಿ.ಟಿ.ರವಿ ಹೇಳುತ್ತಿದ್ದಾರಾದರೂ, ಖಾಸಗಿ ಟಿವಿ ಚಾನೆಲ್ಲುಗಳಲ್ಲಿ ಪ್ರಸಾರವಾದ ಘಟನೆಯ ವಿವರಗಳು ಸಿ.ಟಿ.ರವಿಯವರ ಮೇಲಿನ ಆರೋಪವನ್ನು ಜೀವಂತವಾಗಿಟ್ಟಿದೆ.

ಅಂದ ಹಾಗೆ ಈ ಪ್ರಕರಣದ ಬಗೆಗಿನ ವ್ಯಾಖ್ಯಾನಗಳು ಏನೇ ಇರಲಿ, ಆದರೆ ಈ ಎಪಿಸೋಡಿನ ಮೂಲಕ ರಾಜ್ಯ ಬಿಜೆಪಿಯ ಆಂತರಿಕ ಬಿಕ್ಕಟ್ಟಿಗೆ ತಾತ್ಕಾಲಿಕ ಬ್ರೇಕ್ ಅಂತೂ ಬಿದ್ದಿದೆ.

ವಸ್ತುಸ್ಥಿತಿ ಎಂದರೆ ಯತ್ನಾಳ್ ಅಂಡ್ ಟೀಮಿಗೆ ಶಕ್ತಿ ತುಂಬುವಂತೆ ಮಾತನಾಡುತ್ತಿದ್ದ ಸಿ.ಟಿ.ರವಿ ಅವರು ವಿಜಯೇಂದ್ರ ಪಾಳಯಕ್ಕೆ ಮುಜುಗರವಾಗುವಂತೆ ಮಾಡಿದವರು.

ಆದರೆ ಯಾವಾಗ ವಿಧಾನಪರಿಷತ್ತಿನಲ್ಲಿ ಸಿ.ಟಿ.ರವಿ ಎಪಿಸೋಡು ನಡೆಯಿತೋ, ಇದಾದ ನಂತರ ಪಕ್ಷದ ರಾಜ್ಯಾಧ್ಯಕ್ಷ ವಿಜಯೇಂದ್ರ ಮತ್ತವರ ಬ್ರಿಗೇಡ್ ಮಿಂಚಿನಂತೆ ಬೀದಿಗಿಳಿಯಿತು.

ಒಂದು ಕಡೆಯಿಂದ ಸಂಘ ಪರಿವಾರದ ಪಡೆ ಸಿ.ಟಿ.ರವಿ ಬೆನ್ನಿಗೆ ನಿಂತು ಮಿಡತೆಗಳ ಪಡೆಯಂತೆ ಆವರಿಸಿದರೆ, ಮತ್ತೊಂದೆಡೆ ವಿಜಯೇಂದ್ರ ಪಡೆ ಕೂಡಾ ಸಿ.ಟಿ.ರವಿ ರಕ್ಷಣೆಗೆ ಧಾವಿಸಿತು.

ಗಮನಿಸಬೇಕಾದ ಸಂಗತಿ ಎಂದರೆ, ಈ ಸಂದರ್ಭದಲ್ಲಿ ಯತ್ನಾಳ್, ಅರವಿಂದ ಬೆಲ್ಲದ್ ಅವರಂತಹ ನಾಯಕರು ಹೆಚ್ಚು ಪ್ರತಿಕ್ರಿಯಿಸಲಾಗದ ಸ್ಥಿತಿಯಲ್ಲಿದ್ದರೆ ವಿಜಯೇಂದ್ರ ಬ್ರಿಗೇಡ್ ಮಾತ್ರ ಎಲ್ಲ ಕೋನಗಳಿಂದಲೂ ಸಿ.ಟಿ.ರವಿ ಅವರ ರಕ್ಷಣೆಗೆ ಧಾವಿಸಿತು.

ಅಂದ ಹಾಗೆ ಯತ್ನಾಳ್, ಬೆಲ್ಲದ್ ಅವರಂತಹ ನಾಯಕರಿಗೆ ಈ ಎಪಿಸೋಡು ಪಂಚಮಸಾಲಿ ರಾಜಕಾರಣದ ಧರ್ಮ ಸಂಕಟವಾದರೆ ವಿಜಯೇಂದ್ರ ಪಡೆಗೆ ಅದು ಬಾಧಿಸಲಿಲ್ಲ.

ನಿಜ ಹೇಳಬೇಕೆಂದರೆ, ಆರೆಸ್ಸೆಸ್ ಪಡೆ ಮತ್ತು ವಿಜಯೇಂದ್ರ ಟೀಮಿನ ಅಬ್ಬರವಿಲ್ಲದಿದ್ದರೆ ಸಿ.ಟಿ.ರವಿ ಮತ್ತಷ್ಟು ಸಂಕಟ ಎದುರಿಸುವುದು ನಿಶ್ಚಿತವಾಗಿತ್ತು.

ಪರಿಣಾಮ, ಸಿ.ಟಿ.ರವಿ ಎಪಿಸೋಡು ತನಗರಿವಿಲ್ಲದಂತೆಯೇ ರಾಜ್ಯ ಬಿಜೆಪಿಯ ಬಣ ಬಡಿದಾಟಕ್ಕೆ ತತ್ಕಾಲದ ಬ್ರೇಕ್ ಹಾಕಿ ಒಂದು ಬಗೆಯ ಒಗ್ಗಟ್ಟು ಮೂಡಿಸಿರುವುದು ನಿಜ.

ಸಂಘ ಪರಿವಾರಕ್ಕೆ ಸಮಾಧಾನವಿಲ್ಲ

ಈ ಮಧ್ಯೆ ವಿಧಾನಪರಿಷತ್ತಿನ ಎಪಿಸೋಡಿನಲ್ಲಿ ಸಿ.ಟಿ.ರವಿ ಅವರನ್ನು ಬಂಧಿಸಿದ ರೀತಿ ಸಂಘ ಪರಿವಾರದ ನಾಯಕರಿಗೆ ಇಷ್ಟವಾಗಿಲ್ಲ ಎಂಬುದು ನಿಜವಾದರೂ, ಅದೇ ಕಾಲಕ್ಕೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಬಗ್ಗೆ ಸಿ.ಟಿ.ರವಿ ಆಡಿದರೆನ್ನಲಾದ ಮಾತುಗಳೂ ಪಥ್ಯವಾಗಿಲ್ಲ.

ತಾವು ಅಂತಹ ಮಾತುಗಳನ್ನಾಡಿಲ್ಲ ಅಂತ ಸಿ.ಟಿ.ರವಿ ಈ ಕ್ಷಣದವರೆಗೆ ವಾದಿಸುತ್ತಿದ್ದರೂ ಸಂಘ ಪರಿವಾರದ ಬಹುತೇಕ ನಾಯಕರಲ್ಲಿ ಸಮಾಧಾನ ಕಾಣಿಸುತ್ತಿಲ್ಲ.

ಹೀಗಾಗಿಯೇ, ಇಂತಹ ಮಾತುಗಳು ನಾವು ನಂಬಿದ ತತ್ವಕ್ಕೆ ತಕ್ಕುದಲ್ಲ ಅಂತ ಹೇಳುತ್ತಿರುವ ಪರಿವಾರದ ಹಲವು ನಾಯಕರು ಮುಂದೇನು ಅಂತ ಕಾದು ನೋಡುತ್ತಿದ್ದಾರೆ.

ಇಷ್ಟಾದರೂ ಸಂಘ ಪರಿವಾರ ಸಾಲಿಡ್ಡಾಗಿ ಸಿ.ಟಿ.ರವಿ ರಕ್ಷಣೆಗೆ ನಿಲ್ಲಲು ಆಡಳಿತಾರೂಢ ಕಾಂಗ್ರೆಸ್ಸಿನ ಧೋರಣೆ ಕಾರಣ.

ಸಿ.ಟಿ.ರವಿ ವಿಧಾನಪರಿಷತ್ತಿನಲ್ಲಿ ಆಡಿದರೆನ್ನಲಾದ ಮಾತುಗಳು ಸಭಾಪತಿಯವರ ಅಂಗಳದಲ್ಲಿ ಪ್ರಶ್ನಿತವಾಗುವ ಮುನ್ನ ಪೋಲೀಸರು ಮಧ್ಯೆ ಪ್ರವೇಶಿಸಿದ್ದು, ರವಿಯವರನ್ನು ಬಂಧಿಸಿದ್ದು ಪರಿವಾರಕ್ಕೆ ಪಥ್ಯವಾಗಿಲ್ಲ.

ನಿಯಮಾವಳಿಗಳ ಪ್ರಕಾರ ವಿಧಾನಸಭೆ, ವಿಧಾನಪರಿಷತ್ತಿನ ಪ್ರತಿನಿಧಿಗಳಿಗೆ ಸಭಾಧ್ಯಕ್ಷರು ಮತ್ತು ಸಭಾಪತಿಗಳ ಸುಭದ್ರ ರಕ್ಷಣೆಯಿದೆ.

ಆದರೆ, ಇಂತಹ ರಕ್ಷಣೆಯ ಕತೆಯನ್ನು ಬದಿಗಿಟ್ಟು ಸಿ.ಟಿ.ರವಿಯವರನ್ನು ಬಂಧಿಸಿದ ಬೆಳವಣಿಗೆಯನ್ನು ಪರಿವಾರದ ನಾಯಕರು ಸಹಿಸಿಕೊಳ್ಳುತ್ತಿಲ್ಲ.

ಹೀಗಾಗಿ, ಈ ಎಪಿಸೋಡನ್ನು ಇಲ್ಲಿಗೆ ಕೈ ಬಿಡದಿರಲು ಬಯಸಿರುವ ಪರಿವಾರದ ನಾಯಕರು ಎಲ್ಲವನ್ನೂ ಹದ್ದುಗಣ್ಣುಗಳಿಂದ ನೋಡುತ್ತಿದ್ದಾರೆ.

ಸಚಿವ ಪರಮೇಶ್ವರ್ ಕುಪಿತರಾಗಿದ್ದಾರಾ?

ಈ ಮಧ್ಯೆ ಸಿ.ಟಿ.ರವಿ ಎಪಿಸೋಡಿನ ಕೆಲ ಬೆಳವಣಿಗೆಗಳ ಬಗ್ಗೆ ಗೃಹ ಸಚಿವರಾದ ಡಾ.ಜಿ.ಪರಮೇಶ್ವರ್ ಕುಪಿತರಾಗಿದ್ದಾರೆ ಎಂಬ ಮಾತು ಕಾಂಗ್ರೆಸ್ ಪಾಳಯದಿಂದ ಕೇಳಿ ಬರುತ್ತಿದೆ.

ಅಂದ ಹಾಗೆ ಸಿ.ಟಿ.ರವಿ ಅವರು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಬಗ್ಗೆ ಆಡಿದರೆನ್ನಲಾದ ಮಾತುಗಳ ಹಿನ್ನೆಲೆಯಲ್ಲಿ ಪೋಲಿಸರು ಧಿಡೀರ್ ಕ್ರಮ ತೆಗೆದುಕೊಂಡರಲ್ಲ, ಹೀಗೆ ಕ್ರಮ ತೆಗೆದುಕೊಂಡವರು ಸಿ.ಟಿ.ರವಿ ಅವರನ್ನು ರಾತ್ರಿಯಿಡೀ ಅಲೆದಾಡಿಸಿದರು, ಹೀಗೆ ರವಿಯವರನ್ನು ಪೋಲೀಸರು ಅಲೆದಾಡಿಸಿದ ರೀತಿ ಪರಮೇಶ್ವರ್ ಅವರಿಗೆ ಇಷ್ಟವಾಗಿಲ್ಲವಂತೆ.

ತಮ್ಮ ಗಮನಕ್ಕೆ ತಾರದೆ ಈ ಎಪಿಸೋಡಿನಲ್ಲಿ ಪೋಲೀಸರನ್ನು ಬಳಸಿಕೊಳ್ಳಲಾಗಿದೆ, ಹೀಗೆ ಗೃಹ ಸಚಿವರ ಗಮನಕ್ಕೆ ತಾರದೆ ಒಂದು ಎಪಿಸೋಡನ್ನು ನಿರ್ವಹಿಸುವುದು ಎಂದರೆ ಏನರ್ಥ ಎಂಬ ಅಸಮಾಧಾನ ಪರಮೇಶ್ವರ್ ಅವರಲ್ಲಿದೆ ಎಂಬುದು ಕಾಂಗ್ರೆಸ್ ಪಾಳಯದ ಮಾತು.

ಅಂದ ಹಾಗೆ, ಈ ಎಪಿಸೋಡಿನ ಬಗ್ಗೆ ಪ್ರತಿಕ್ರಿಯಿಸಿರುವ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಕೂಡಾ, ರವಿಯವರನ್ನು ಬಂಧಿಸಿದ ತಕ್ಷಣ ನ್ಯಾಯಾಧೀಶರ ಮುಂದೆ ಹಾಜರುಪಡಿಸಬೇಕಿತ್ತು ಎಂದಿದ್ದಾರೆ.

ಅರ್ಥಾತ್, ಸಿ.ಟಿ.ರವಿಯವರನ್ನು ಬಂಧಿಸಿ, ನಡೆಸಿಕೊಂಡ ರೀತಿ ಕಾಂಗ್ರೆಸ್ ಪಾಳಯದಲ್ಲಿ ಮಿಶ್ರಭಾವನೆ ಮೂಡಿಸಿದೆ.

ಕಾಂಗ್ರೆಸ್ಸಿಗೆ ಸಾಧ್ಯವಾದರೆ ಬಿಜೆಪಿಗೇಕೆ ಸಾಧ್ಯವಿಲ್ಲ?

ಇನ್ನು ಸಿ.ಟಿ.ರವಿ ಎಪಿಸೋಡಿನಲ್ಲಿ ಕಾಂಗ್ರೆಸ್ಸಿಗೆ ಸಾಧ್ಯವಾಗಿರುವುದು ರಾಹುಲ್ ಗಾಂಧಿ ಎಪಿಸೋಡಿನಲ್ಲಿ ಬಿಜೆಪಿಗೇಕೆ ಸಾಧ್ಯವಾಗಿಲ್ಲ ಎಂಬ ಪ್ರಶ್ನೆ ಕಮಲ ಪಾಳಯದಲ್ಲಿ ಕಾಣಿಸಿಕೊಂಡಿದೆ.

ಇಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಬಗ್ಗೆ ಸಿ.ಟಿ.ರವಿ ಆಕ್ಷೇಪಾರ್ಹ ಮಾತುಗಳನ್ನಾಡಿದ ಆರೋಪ ಎದ್ದ ತಕ್ಷಣ ಅವರನ್ನು ಪೋಲೀಸರು ಬಂಧಿಸುತ್ತಾರೆ.

ಹೀಗೆ ಒಬ್ಬ ಜನಪ್ರತಿನಿಧಿಯನ್ನು ಎತ್ತಾಕಿಕೊಂಡು ಹೋಗಲು ಪೋಲೀಸರಿಗೆ ನಿಯಮಾವಳಿಗಳ ಅಡ್ಡಿಯೇ ಆಗುವುದಿಲ್ಲ.

ಆದರೆ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಬಿಜೆಪಿಯ ಸಂಸದರನ್ನು ತಳ್ಳಿ ಬೀಳಿಸುತ್ತಾರೆ, ಬಿದ್ದವರು ಗಾಯಗೊಂಡು ಆಸ್ಪತ್ರೆ ಸೇರುತ್ತಾರೆ, ಆದರೆ, ಈ ಎಪಿಸೋಡಿನಲ್ಲಿ ಇದುವರೆಗೆ ರಾಹುಲ್ ಗಾಂಧಿಯವರ ಮೇಲೆ ಕ್ರಮ ಕೈಗೊಳ್ಳಲಾಗಿಲ್ಲ, ಕ್ರಮವಿರಲಿ, ಕನಿಷ್ಟ ಪಕ್ಷ ಸರಿಯಾದ ವಿಚಾರಣೆ ನಡೆಸಲೂ ಆಗಿಲ್ಲ.

ಕರ್ನಾಟಕದಲ್ಲಿ ನಿಯಮಬಾಹಿರವಾಗಿ ರವಿಯವರನ್ನು ಬಂಧಿಸಲು ಕಾಂಗ್ರೆಸ್ ಸರ್ಕಾರಕ್ಕೆ ಸಾಧ್ಯವಾಗಿದೆ, ಆದರೆ, ನಿಯಮಪ್ರಕಾರವಾಗಿ ದಿಲ್ಲಿಯಲ್ಲಿ ರಾಹುಲ್ ಗಾಂಧಿ ಅವರ ವಿರುದ್ದ ಕ್ರಮ ಕೈಗೊಳ್ಳುವ ಕೆಲಸವಾಗಿಲ್ಲ ಎಂದರೆ ಏನರ್ಥ, ಅಗ್ರೆಸಿವ್ ರಾಜಕಾರಣದಲ್ಲಿ ಕಾಂಗ್ರೆಸ್‌ಗಿರುವ ವೇಗ ಬಿಜೆಪಿಗಿಲ್ಲ ಎಂಬುದು ಕಮಲ ಪಾಳಯದ ಲೇಟೆಸ್ಟ್ ಫೀಲಿಂಗು.

ಲಾಸ್ಟ್ ಸಿಪ್

ಅಂದ ಹಾಗೆ ಮೊನ್ನೆ ಜಾತ್ಯತೀತ ಜನತಾದಳದ ಇಬ್ಬರು ನಾಯಕರು ಗಂಭೀರ ಚರ್ಚೆಯಲ್ಲಿ ತೊಡಗಿದ್ದರು.

’ಅಲ್ಲಾ, ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಕುಮಾರಸ್ವಾಮಿ ಅವರನ್ನು ಪಕ್ಷದ ರಾಜ್ಯಾಧ್ಯಕ್ಷ ಸ್ಥಾನಕ್ಕೆ ತರಲು ನಮ್ಮ ನಾಯಕರು ಹೊರಟಿದ್ದಾರಲ್ಲ, ಇದು ಸಕ್ಸಸ್ ಆಗುತ್ತದಾ, ಅಂತ ಒಬ್ಬ ನಾಯಕರು ಪ್ರಶ್ನಿಸಿದ್ದಾರೆ.

ಇದಕ್ಕೆ ಪ್ರತಿಯಾಗಿ ಮತ್ತೊಬ್ಬ ನಾಯಕರು, ಯಾಕಾಗಲ್ಲ, ಇವತ್ತಿನ ಸ್ಥಿತಿಯಲ್ಲಿ ನಿಖಿಲ್ ಕುಮಾರಸ್ವಾಮಿ ಅಧ್ಯಕ್ಷರಾಗುವುದೇ ಪಕ್ಷಕ್ಕೆ ಸೇಫು ಎಂದಿದ್ದಾರೆ.

’ಅಲ್ಲಣ್ಣ, ಅಷ್ಟು ಚಿಕ್ಕವರು, ಅನುಭವವೂ ಕಡಿಮೆ, ಅಂತವರು ಪಕ್ಷದ ರಾಜ್ಯಾಧ್ಯಕ್ಷರಾದರೆ ಸೀನಿಯರುಗಳಿಗೆ ಅಸಮಾಧಾನವಾಗುವುದಿಲ್ಲವೇ’ ಅಂತ ಮೊದಲನೆಯವರು ಕೇಳಿದರೆ ಯಥಾ ಪ್ರಕಾರ ಇನ್ನೊಬ್ಬರು ಉತ್ತರಿಸಿದರಂತೆ.

’ಅಲ್ರೀ, ಸೀನಿಯರುಗಳಿಗೆ ಬೇಸರವಾಗುವುದಿಲ್ಲವೇ, ಅಂತ ಕೇಳುತ್ತಿದ್ದೀರಲ್ಲ, ಅ ಸೀನಿಯರುಗಳು ಯಾರು, ಅವರ ಪೈಕಿ ಯಾರಾದರೊಬ್ಬರಿಗೆ ಅಧ್ಯಕ್ಷ ಸ್ಥಾನ ಕೊಟ್ಟರೆ ನಿರ್ವಹಿಸುತ್ತಾರಾ, ಇವತ್ತು ಪಕ್ಷವನ್ನು ನಿರ್ವಹಿಸುವುದು ಎಂದರೆ ತಮಾಷೆಯಲ್ಲ, ಎಲ್ಲಕ್ಕಿಂತ ಮುಖ್ಯವಾಗಿ ಅಧ್ಯಕ್ಷರಾಗುವವರಿಗೆ ಒಂದು ಹಿನ್ನೆಲೆ ಇರಬೇಕು, ಅದೇ ರೀತಿ ಪಾರ್ಟಿ ಫಂಡು ಹಾಕುವ ಶಕ್ತಿ ಇರಬೇಕು.

ಈ ವಿಷಯದಲ್ಲಿ ನಿಖಿಲ್ ಕುಮಾರಸ್ವಾಮಿ ಅವರಿಗಿರುವಷ್ಟು ಪ್ಲಸ್ ಪಾಯಿಂಟು ಬೇರೆ ಯಾರಿಗಿದೆ, ಅವರ ಹಿನ್ನೆಲೆಯಲ್ಲಿ ಅಜ್ಜ ದೇವೇಗೌಡರು, ತಂದೆ ಕುಮಾರಸ್ವಾಮಿ ಅವರಿದ್ದಾರೆ, ಯಾರೇನೇ ಹೇಳಲಿ, ಆದರೆ, ಇವತ್ತಿಗೂ ಹಳೆ ಮೈಸೂರು ಭಾಗದಲ್ಲಿ ಒಕ್ಕಲಿಗರ ಅರವತ್ತು ಪರ್ಸೆಂಟ್ ಮತಗಳು ಗೌಡರ ಕುಟುಂಬದ ಜತೆಗಿವೆ.

ನೆನಪಿಡಿ, ಇವತ್ತು ನಾವು ಚನ್ನಪಟ್ಟಣದಲ್ಲಿ ಸೋತಿರಬಹುದು, ಅದರೆ ಮುಂದಿನ ಚುನಾವಣೆಯಲ್ಲಿ ರಾಮನಗರ, ಚನ್ನಪಟ್ಟಣ ಮತ್ತು ಮಾಗಡಿ ಸೇರಿದಂತೆ ಬಹುತೇಕ ಕ್ಷೇತ್ರಗಳಲ್ಲಿ ಗೆಲ್ಲುತ್ತೇವೆ, ಇದಕ್ಕೆ ಗೌಡರ ಕುಟುಂಬದ ಬಗ್ಗೆ ಬಹುಸಂಖ್ಯಾತ ಒಕ್ಕಲಿಗರಿಗಿರುವ ಅಭಿಮಾನ ಕಾರಣ.

ಇಂತಹ ಸಂದರ್ಭದಲ್ಲಿ ದೇವೇಗೌಡರ ಕುಟುಂಬದ ನಿಖಿಲ್‌ಕುಮಾರಸ್ವಾಮಿ ಅಧ್ಯಕ್ಷರಾದರೆ ಬೂಸ್ಟರ್ ಡೋಸು ಕೊಟ್ಟಂತೆ.

ಇದೇ ರೀತಿ ನಿಖಿಲ್ ಕುಮಾರಸ್ವಾಮಿ ಅಧ್ಯಕ್ಷರಾದರೆ ಪಾರ್ಟಿ ಫಂಡು ಸಹಜವಾಗಿಯೇ ಬರುತ್ತದೆ, ಹೀಗಿರುವಾಗ ಸೀನಿಯರುಗಳಿಗೆ ಛಾನ್ಸು ಕೊಡಬೇಕು ಅನ್ನುವುದೆಲ್ಲ ಪ್ರಾಕ್ಟಿಕಲ್ ಅಲ್ಲ.

ಇನ್ನು ನಿಖಿಲ್ ಕುಮಾರಸ್ವಾಮಿ ಅವರಿಗೆ ಅನುಭವ ಇಲ್ಲ ಅಂತ ನೀವು ಹೇಳುತ್ತೀರಿ, ಆದರೆ, ಚುನಾವಣೆಯಲ್ಲಿ ಗೆದ್ದವರಿಗಿಂತ ಪದೇ ಪದೇ ಸೋಲು ಕಂಡವರು ಹೆಚ್ಚು ಅನುಭವಿಗಳು, ಅಂತವರಿಗೆ ಕಷ್ಟ ಕಾಲದಲ್ಲಿ ಹೇಗೆ ನಡೆದುಕೊಳ್ಳಬೇಕು ಎಂಬುದರ ಅರಿವು ಇರುತ್ತದೆ, ಸಹನೆ ಇರುತ್ತದೆ ಅಂತ ಈ ನಾಯಕರು ವಿವರಿಸಿದಾಗ ಎದುರಿಗಿದ್ದ ನಾಯಕರು, ನೀವು ಹೇಳಿದ್ದೂ ಸರಿ ಬಿಡ್ರಣ್ಣ’ ಎಂದರಂತೆ.

ಆರ್.ಟಿ.ವಿಠ್ಠಲಮೂರ್ತಿ

Share this:

  • WhatsApp
  • Post
  • Tweet
  • Print
  • Email
b y vijayendrabjpc t ravicongresdr.g.parameshwarh d devegowdah d kumara swamyj p naddajdsnikhil kumaraswamypm narendra modi
Share 0 FacebookTwitterPinterestEmail
admin

previous post
ಬೆಳಗಾವಿ ಘಟನಾವಳಿ ನ್ಯಾಯಾಂಗ ತನಿಖೆ ಆಗಲಿ
next post
ಕುಮಾರಸ್ವಾಮಿ ಟೀಕೆಗೆ ಚನ್ನಪಟ್ಟಣದಲ್ಲಿ ಉತ್ತರಿಸುವೆ

You may also like

ಇತಿಹಾಸ ಮರೆಯದ ಕೌತುಕದ ಕ್ಷಣಗಳು..

April 21, 2025

ಕೇಂದ್ರ ಮಂತ್ರಿ ಕುಮಾರಣ್ಣನ ಲೇಟೆಸ್ಟು ಸಂಕಟ

February 17, 2025

ಅಮಿತ್ ಷಾ ಆಟ ಬಲ್ಲವರಾರು?

February 3, 2025

ಬಿಜೆಪಿ ಭಿನ್ನರಿಗೆ ಚುನಾವಣೆಯ ಕನಸು?

January 27, 2025

ನಿಖಿಲ್ ಇಲ್ಲಿಗೆ ಕುಮಾರಣ್ಣ ದಿಲ್ಲಿಗೆ

January 20, 2025

ಕೊತ ಕೊತ ಕುದಿಯುತ್ತಿದ್ದಾರೆ ಜಾರ್ಕಿಹೊಳಿ

January 6, 2025

ಕಾಂಗ್ರೆಸ್ ಹಡಗಿಗೆ ಕೃಷ್ಣ ಹತ್ತಿದ ಕತೆ

December 10, 2024

ಬಿಜೆಪಿ ಬೆಕ್ಕಿಗೆ ಗಂಟೆ ಕಟ್ಟುವುದು ಹೇಗೆ?

December 9, 2024

ಯಡಿಯೂರಪ್ಪ ನೋವು ಷಾ ಕಿವಿಗೆ ಬಿತ್ತು

December 2, 2024

ಜೆಡಿಎಸ್ ಸಾರಥಿಯಾಗಲು ನಿಖಿಲ್ ರೆಡಿ

November 18, 2024

Leave a Comment Cancel Reply

Save my name, email, and website in this browser for the next time I comment.

Social Networks

Facebook Twitter Instagram Linkedin Youtube Email Rss

KMS Analysis

  • ಶತ್ರು ದೇಶದ ಕ್ಷೇಮಕ್ಕಾಗಿ ಕಾಂಗ್ರೆಸ್ ಮಿಡಿಯುತ್ತಿದೆ : ಹೆಚ್ ಡಿಕೆ ಟೀಕೆ

    May 16, 2025
  • ಮೇ 20ಕ್ಕೆ ಕಾಂಗ್ರೆಸ್ ಸರ್ಕಾರದ ಸಾಧನಾ ಸಮಾವೇಶ

    May 15, 2025
  • ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ವರದಿ ಅನುಷ್ಠಾನಕ್ಕೆ ಸಿದ್ದರಾಮಯ್ಯ ಕಸರತ್ತು

    May 8, 2025
  • ಭಯೋತ್ಪಾದನೆ ನಿಗ್ರಹ: ಪ್ರಧಾನಿ ಮೋದಿಗೆ ಸಂಪೂರ್ಣ ಬೆಂಬಲ ಘೋಷಿಸಿದ ದೇವೇಗೌಡರು

    May 6, 2025
  • ಜಾತಿಗಣತಿ ವರದಿ ದತ್ತಾಂಶ ಮರುಪರಿಶೀಲನೆಗೆ ನಿರ್ಧಾರ

    April 18, 2025

Categories

  • Special Story (179)
  • ಅಂಕಣ (101)
  • ಉದ್ಯೋಗ (237)
  • ದಿನ ಭವಿಷ್ಯ (110)
  • ರಾಜಕೀಯ (1,581)
  • ರಾಜ್ಯ (1,870)
  • ರಾಷ್ಟ್ರ (1,842)
  • ವಿಶ್ಲೇಷಣೆ (183)
  • ಶಿಕ್ಷಣ (318)
  • ಸಂದರ್ಶನ (11)

About Us

ನೈಜ ಹಾಗೂ ವಿಶ್ವಾಸಾರ್ಹತೆಯ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರವಾದ ಸುದ್ದಿ, ಅಭಿಪ್ರಾಯಗಳ ಪ್ರಕಟಣೆಯ ವೆಬ್ ತಾಣ. ಕರ್ನಾಟಕ ರಾಜ್ಯದ ಪ್ರಚಲಿತ ವಿದ್ಯಮಾನಗಳು, ರಾಜಕೀಯ, ನಾಡು, ನುಡಿ, ಜಲ ವಿಚಾರಗಳಲ್ಲದೆ, ದೈನಂದಿನ ಆಗು-ಹೋಗುಗಳು, ವಿವಿಧ ಜಿಲ್ಲೆಗಳ ಪ್ರಮುಖ ವಿಚಾರಗಳ ಭಿತ್ತರಕ್ಕೆ ಹೆಚ್ಚು ಒತ್ತು ನೀಡುವುದು. ನಮ್ಮ ಕುರಿತು ಹೆಚ್ಚಿನ ವಿವರ ಪಡೆಯಲು ಇಲ್ಲಿ ಇಲ್ಲಿಕ್ಲಿಕ್‌ ಮಾಡಿ

Facebook Twitter Linkedin Youtube Email Vimeo Rss

Politics

  • ಶತ್ರು ದೇಶದ ಕ್ಷೇಮಕ್ಕಾಗಿ ಕಾಂಗ್ರೆಸ್ ಮಿಡಿಯುತ್ತಿದೆ : ಹೆಚ್ ಡಿಕೆ ಟೀಕೆ

    May 16, 2025
  • ಮೇ 20ಕ್ಕೆ ಕಾಂಗ್ರೆಸ್ ಸರ್ಕಾರದ ಸಾಧನಾ ಸಮಾವೇಶ

    May 15, 2025
  • ಅತಿಥಿ ಶಿಕ್ಷಕರು ಮತ್ತು ಉಪನ್ಯಾಸಕರ ಗೌರವ ಸಂಭಾವನೆ ಪರಿಷ್ಕರಣೆ

    May 15, 2025

KMS Special

  • ಮೇ 20ಕ್ಕೆ ಕಾಂಗ್ರೆಸ್ ಸರ್ಕಾರದ ಸಾಧನಾ ಸಮಾವೇಶ

    May 15, 2025
  • ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ವರದಿ ಅನುಷ್ಠಾನಕ್ಕೆ ಸಿದ್ದರಾಮಯ್ಯ ಕಸರತ್ತು

    May 8, 2025
  • ‘ಗಂಗಾರತಿ’ ಮಾದರಿ ಕೆಆರ್‌ಎಸ್ ಬಳಿ ‘ಕಾವೇರಿ ಆರತಿ’

    May 3, 2025
  • Facebook
  • Twitter
  • Linkedin
  • Youtube
  • Email
  • Telegram
KMS
  • Home
  • Special Story
  • ರಾಜ್ಯ
  • ರಾಷ್ಟ್ರ
  • ರಾಜಕೀಯ
  • ವಿಶ್ಲೇಷಣೆ
  • ಅಂಕಣ
  • ಶಿಕ್ಷಣ
  • ಉದ್ಯೋಗ
  • ಸಂದರ್ಶನ

Read alsox

ಇತಿಹಾಸ ಮರೆಯದ ಕೌತುಕದ ಕ್ಷಣಗಳು..

April 21, 2025
Sign In

Keep me signed in until I sign out

Forgot your password?

Password Recovery

A new password will be emailed to you.

Have received a new password? Login here

ಕೆಎಂಎಸ್‌ ಕನ್ನಡ ವಾಟ್ಸಪ್‌ ಗ್ರೂಪ್‌ಗೆ ಸೇರಿ