ಬೆಂಗಳೂರು: ಒಂದನೇ ತರಗತಿಯ ಮಕ್ಕಳ ಪ್ರವೇಶಕ್ಕೆ ಇದ್ದ ವಯೋಮಿತಿಯನ್ನು ರಾಜ್ಯ ಸರ್ಕಾರ ಸಡಿಲಿಕೆ ಮಾಡಿ ಆದೇಶ ಹೊರಡಿಸಿದೆ.
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧುಬಂಗಾರಪ್ಪ ಅವರು, ಮಕ್ಕಳು ಮತ್ತು ಪೋಷಕರ ಹಿತದೃಷ್ಟಿಯಿಂದ ಪ್ರಸ್ತುತವಿದ್ದ 6 ವರ್ಷದ ವಯೋಮಿತಿಯನ್ನು60 ದಿನಗಳ ಮಟ್ಟಿಗೆ ಇಳಿಕೆ ಮಾಡಲಾಗಿದೆ ಎಂದು ಪ್ರಕಟಿಸಿದರು.
2026-27ನೇ ಶೈಕ್ಷಣಿಕ ಸಾಲಿನಿಂದಲೇ ವಯೋಮಿತಿ ಸಡಿಲಿಕೆಯು ಜಾರಿಗೊಳ್ಳಲಿದ್ದು, ಇದರಿಂದ ಲಕ್ಷಾಂತರ ಮಕ್ಕಳಿಗೆ ಶಾಲಾ ಪ್ರವೇಶ ಪಡೆಯಲು ಅನುಕೂಲವಾಗಲಿದೆ.
ಸರ್ಕಾರದ ಈ ನಿರ್ಧಾರದಿಂದ ಪ್ರವೇಶದ ಸನಿಹದಲ್ಲಿದ್ದ ಮಕ್ಕಳಿಗೆ ವಯೋಮಿತಿ ಕೆಲವೊಮ್ಮೆ ಅಡ್ಡ ಬರುತ್ತಿತ್ತು. ಅಂತಹವರ ಹಿತದೃಷ್ಟಿ ಹಾಗೂ ಪೋಷಕರ ಮನವಿ ಸ್ಪಂಧಿಸಿ ಈ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಹೇಳಿದರು.
ಪೂರ್ವ ಪ್ರಾಥಮಿಕವಾದ ಎಲ್ ಕೆಜಿ, ಯುಕೆಜಿಯ ವಯೋಮಿತಿ ಸಡಿಲ ಮಾಡಲಿದ್ದು, ಇದಕ್ಕೂ ಮುಂದಿನ ಅಧಿವೇಶನದಲ್ಲಿ ಕಾನೂನು ತರುವುದಾಗಿ ಪ್ರಕಟಿಸಿದರು.
ಮಹಾವೀರ ಜಯಂತಿ ರಜೆಯ ಹಿನ್ನೆಲೆಯಲ್ಲಿ ಮಾ.30 ರಂದು ನಡೆಯಬೇಕಿದ್ದ ಎಸ್ಎಸ್ಎಲ್ ಸಿ ತೃತೀಯ ಭಾಷೆ (ಹಿಂದಿ) ಪರೀಕ್ಷೆಯನ್ನು ಮಾ. 31ಕ್ಕೆ ಮುಂದೂಡಲಾಗಿದೆ.


