Wednesday, May 21, 2025
  • ನಮ್ಮ ಬಗ್ಗೆ
  • ಸಂಪರ್ಕಿಸಿ
  • Privacy Policy
  • Disclaimer
  • Login/Register
KMS
  • Home
  • Special Story
  • ರಾಜ್ಯ
  • ರಾಷ್ಟ್ರ
  • ರಾಜಕೀಯ
  • ವಿಶ್ಲೇಷಣೆ
  • ಅಂಕಣ
  • ಶಿಕ್ಷಣ
  • ಉದ್ಯೋಗ
  • ಸಂದರ್ಶನ
Wednesday, May 21, 2025
  • ನಮ್ಮ ಬಗ್ಗೆ
  • ಸಂಪರ್ಕಿಸಿ
  • Privacy Policy
  • Disclaimer
  • Login/Register
KMS
Banner
  • Home
  • Special Story
  • ರಾಜ್ಯ
  • ರಾಷ್ಟ್ರ
  • ರಾಜಕೀಯ
  • ವಿಶ್ಲೇಷಣೆ
  • ಅಂಕಣ
  • ಶಿಕ್ಷಣ
  • ಉದ್ಯೋಗ
  • ಸಂದರ್ಶನ
KMS
KMS
  • Home
  • Special Story
  • ರಾಜ್ಯ
  • ರಾಷ್ಟ್ರ
  • ರಾಜಕೀಯ
  • ವಿಶ್ಲೇಷಣೆ
  • ಅಂಕಣ
  • ಶಿಕ್ಷಣ
  • ಉದ್ಯೋಗ
  • ಸಂದರ್ಶನ

@2022 - All Right Reserved. Designed and Developed by PenciDesign

ಅಂಕಣಶಿಕ್ಷಣ

ಆರೋಗ್ಯದಲ್ಲಿ ಯೋಗ ಮುದ್ರೆಯ ಮಹತ್ವ

by admin February 4, 2024
written by admin February 4, 2024 0 comments 2 minutes read
Share 5FacebookTwitterPinterestEmail
518

ದೇಹಾರೋಗ್ಯಕ್ಕೆ ಔಷಧ ರಹಿತ ಯೋಗ್ಯ ಚಿಕಿತ್ಸೆ

ಬೆಂಗಳೂರು: ಮುದ್ರೆಗಳು ದೈಹಿಕ ಮತ್ತು ಭಾವನಾತ್ಮಕ ಸ್ಥಿತಿಯ ಮೇಲೆ ಪ್ರಭಾವ ಬೀರುವ ಬೆರಳುಗಳ ವಿಶೇಷ ಸಂಯೋಜನೆಗಳಾಗಿವೆ. ಮುದ್ರೆಯ ಸಹಾಯದಿಂದ ನಿಮ್ಮ ಒತ್ತಡವನ್ನು ನಿವಾರಿಸಿಕೊಳ್ಳಬಹುದು.  ಆತಂಕ ಹಾಗೂ ಆಯಾಸದ ಭಾವನೆಗಳನ್ನು ತೊಡೆದು ಹಾಕಬಹುದು. ಅಲ್ಲದೆ, ಆಂತರಿಕ ಶಕ್ತಿ ಮತ್ತು ಮನಸ್ಸಿನ ಶಾಂತಿಯನ್ನು ಪಡೆಯಬಹುದಾಗಿದೆ. ಹಾಗಾದರೆ ಮುದ್ರೆ ಎಂದರೇನು? ದೈನಂದಿನ ಅಭ್ಯಾಸ ಮತ್ತು ಯೋಗದಲ್ಲಿ ಮುದ್ರೆಗಳನ್ನು ಸೇರಿಸುವುದು ಹೇಗೆ?

ಸಂಸ್ಕೃತದಲ್ಲಿ “ಮುದ್ರಾ” ಎಂಬ ಪದವು ಸನ್ನೆ ಅಥವಾ ಗ್ರಹಿಕೆ ಎಂಬ ಅರ್ಥ ನೀಡುತ್ತದೆ. ಕೈ ಬೆರಳುಗಳ ಜಿಮ್ನಾಸ್ಟಿಕ್ ಎಂದರೆ ತಪ್ಪಾಗಲಾರದು. ಮುದ್ರಾ ಎಂದರೆ ಲಾಕ್ ಎಂದು ಗ್ರಹಿಸಬಹುದಾಗಿದೆ. ಮುದ್ರೆಗಳಿಗೆ ದೇಹದಲ್ಲಿನ ಶಕ್ತಿಯ ಹರಿವನ್ನು ಮರು ನಿರ್ದೇಶಿಸುವ ಸಾಮರ್ಥ್ಯವಿದೆ.  ವಿಭಿನ್ನ ಬೆರಳಿನ ಸ್ಥಾನಗಳು ಶಕ್ತಿಯ ಚಾನಲ್ ಗಳನ್ನು ತೆರೆಯುತ್ತವೆ. ಹಾಗೆಯೇ ಮುಚ್ಚುತ್ತವೆ ಕೂಡ.

ವ್ಯಕ್ತಿಯ ಮಾನಸಿಕ ಮತ್ತು ಭಾವನಾತ್ಮಕ ಸ್ಥಿತಿಯನ್ನು ಬದಲಾಯಿಸುತ್ತವೆ. ನೃತ್ಯದಲ್ಲಿ ಬಳಸಿದಾಗ ಮುದ್ರೆಗಳು ಸೌಂದರ್ಯದ ಆನಂದವನ್ನು ತರುತ್ತವೆ. ಕುಲಾರ್ಣವ ಮಂತ್ರವು , ಮುದ್ರಾ ಎಂಬ ಪದವು ಮಣ್ಣಿನ ಮೂಲದಿಂದ ಬಂದಿದೆ ಎಂದು ಹೇಳುತ್ತದೆ. ಅಂದರೆ, ಆನಂದ ಎಂಬ ಅರ್ಥವನ್ನು ನೀಡುತ್ತದೆ. ಸಾಮಾನ್ಯವಾಗಿ ಮುದ್ರೆಯನ್ನು ಶಾರ್ಟ್ ಕಟ್, ಪರಿಚಲನೆ ಅಥವಾ ಶಕ್ತಿಯ ಸೀಲಿಂಗ್ ಎನ್ನಬಹುದು.

ಅರಿವು ಮತ್ತು ಏಕಾಗ್ರತೆಯ ವೃದ್ಧಿ

ಮುದ್ರೆಯು ಸೂಕ್ಷ್ಮವಾದ ದೈಹಿಕ ಚಲನೆಯಾಗಿದ್ದು, ಮನಃಸ್ಥಿತಿಯನ್ನು ನಮ್ಮೊಳಗಿನ ಲೋಕದ ಗ್ರಹಿಕೆಯನ್ನು ಬದಲಾಯಿಸುವುದಲ್ಲದೆ, ಅರಿವು ಮತ್ತು ಏಕಾಗ್ರತೆಯನ್ನು ವೃದ್ಧಿಸುತ್ತದೆ. ಕೈನ ಪ್ರತಿಯೊಂದು ಬೆರಳು ನಿರ್ಧಿಷ್ಟ ಶಕ್ತಿಯನ್ನು ಸೂಚಿಸುತ್ತವೆ. ಹೆಬ್ಬೆರಳು ಅಹಂ, ಇಚ್ಛೆ ಮತ್ತು ವಾದವನ್ನು, ತೋರು ಬೆರಳು ಜ್ಞಾನ, ಬುದ್ಧಿವಂತಿಕೆ ಮತ್ತು ಆತ್ಮವಿಶ್ವಾಸವನ್ನು ಸೂಚಿಸಿದರೆ; ಮಧ್ಯದ ಬೆರಳು ತಾಳ್ಮೆ ಮತ್ತು ಭಾವನೆಗಳನ್ನು ನಿಯಂತ್ರಿಸುವ ಸಾಮರ್ಥ್ಯಕ್ಕೆ ಕಾರಣವಾಗಿದೆ. ಉಂಗುರದ ಬೆರಳು ಆರೋಗ್ಯ ಮತ್ತು ಚೈತನ್ಯಕ್ಕಾಗಿ, ಕಿರು ಬೆರಳು ವ್ಯಕ್ತಿತ್ವದ ಸೃಜನಶೀಲತೆಯ ಶಕ್ತಿಯನ್ನು ಸೂಚಿಸುತ್ತದೆ.

ಅಷ್ಟೇ ಅಲ್ಲದೆ, ಮುದ್ರೆಗಳು ದೇಹದ ವಿವಿಧ ಭಾಗಗಳು ಮತ್ತು ದೇಹದ ಆಂತರಿಕ ಅಂಗಗಳೊಂದಿಗೆ ಸಂಪರ್ಕವನ್ನು ಹೊಂದಿರುತ್ತವೆ. ಉದಾಹರಣೆಗೆ ಹೆಬ್ಬೆರಳಿನ ಮೇಲಿನ ತುದಿಯು ತಲೆಯ ಮುಂಭಾಗವನ್ನು ಸೂಚಿಸುತ್ತದೆ. ಉಂಗುರದ ಬೆರಳು ಮತ್ತು ಮಧ್ಯದ ಬೆರಳುಗಳು ಕ್ರಮವಾಗಿ ಬಲ ಮತ್ತು ಎಡಪಾದಗಳಿಗೆ ಸಂಬಂಧಿಸಿವೆ. ಕಿರು ಬೆರಳು ಮತ್ತು ತೋರು ಬೆರಳು ಬಲ ಮತ್ತು ಎಡ ಕೈಗಳಿಗೆ ಸಂಬಂಧಿಸಿವೆ.

ಮುದ್ರೆಗಳನ್ನು ಮಾಡುವುದು ಹೇಗೆ?

ಮೊದಲಿಗೆ ಒಂದು ಪ್ರಯೋಗ ಮಾಡೋಣ. ನಿಮ್ಮ ಹೆಬ್ಬೆರಳು ಮತ್ತು ತೋರು ಬೆರಳನ್ನು ಒಟ್ಟಿಗೆ ಇರಿಸಿ ಕೆಲವು ನಿಮಿಷಗಳ ಕಾಲ ಆನಂದವಾಗಿರುವಂತೆ ಯೋಚಿಸಿ, ತೋರು ಬೆರಳಿನಿಂದ ಹೆಬ್ಬೆರಳಿಗೆ ಶಕ್ತಿಯು ಹರಿಯುವುದನ್ನು ಅನುಭವಿಸುತ್ತೀರಿ. ಬೆಳಿಗ್ಗೆ ಎದ್ದೇಳುವ ಸಂದರ್ಭದಲ್ಲಿ ಮತ್ತು ಊಟ ಮುಗಿಸಿ ಮಲಗುವ ಮುನ್ನ ಮುದ್ರೆಗಳನ್ನು ಮಾಡಬಹುದು. ಒಂದೇ ಸಮಯದಲ್ಲಿ ಅನೇಕ ಮುದ್ರೆಗಳನ್ನು ಕರಗತ ಮಾಡಿಕೊಳ್ಳಲು ಪ್ರಯತ್ನಿಸುವುದರಲ್ಲಿ ಯಾವುದೇ ಅರ್ಥವಿಲ್ಲ. ನಿಮ್ಮ ಸಮಸ್ಯೆಯನ್ನು ಪರಿಹರಿಸಲು ಸಹಾಯ ಮಾಡುವ ಮುದ್ರೆಯನ್ನು ಹಾಕುವುದು ಉತ್ತಮ. 21 ದಿನಗಳವರೆಗೆ ಆ ಮುದ್ರೆಯನ್ನು ಪುನಾರಾವರ್ತಿಸಬೇಕು. ಸಮಸ್ಯೆ ಅಧಿಕವಿದ್ದಾಗ ದಿನಕ್ಕೆ ಮೂರು ಬಾರಿ ಮುದ್ರೆಯನ್ನು ಅಭ್ಯಾಸ ಮಾಡಲು ಶಿಫಾರಸ್ಸು ಮಾಡಲಾಗುತ್ತದೆ.

ಬೆಳಿಗ್ಗೆ, ಮಧ್ಯಾಹ್ನ ಮತ್ತು ಸಂಜೆ. ನೀವು ಕುಳಿತುಕೊಳ್ಳುವಾಗ, ಮಲಗುವಾಗ, ಸಾರ್ವಜನಿಕ ಸಾರಿಗೆಯಲ್ಲಿ ಪ್ರಯಾಣಿಸುವಾಗ ಅಥವಾ ಕೆಲಸದ ವಿರಾಮಗಳಲ್ಲಿ ಮುದ್ರೆಗಳನ್ನು ಮಾಡಬಹುದು. ಕನಿಷ್ಠ ಎರಡರಿಂದ ಮೂರು ನಿಮಿಷಗಳ ಕಾಲ ಮುದ್ರೆಯನ್ನು ಮಾಡಬೇಕಾಗುತ್ತದೆ. ಪ್ರಾರಂಭಿಸುವ ಮುನ್ನ ಕೈಗಳಿಂದ ಆಭರಣಗಳನ್ನು ತೆಗೆದು ಹಾಕಬೇಕು. ಪದ್ಮಾಸನ ಭಂಗಿ ಅಥವಾ ಸುಖಾಸನ ಹಾಗೂ ಇತರ ಆಸನದಲ್ಲಿ ಕುಳಿತು ಮುದ್ರೆಗಳನ್ನು ಮಾಡಬಹುದು.

ಮುದ್ರೆ ಮಾಡುವ ಸಂದರ್ಭದಲ್ಲಿ ಆರಾಮದಾಯಕ ಮನಃಸ್ಥಿತಿಯಲ್ಲಿರಬೇಕು. ಯಾವುದೇ ಮುದ್ರೆಯಾದರೂ ಆಂತರಿಕ ಶಕ್ತಿಯನ್ನು ಪುನಃ ತುಂಬಲು ಇರುವ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡಿಕೊಡುತ್ತದೆ. ಮುದ್ರೆಗಳು ಧ್ವನಿ ಮತ್ತು ಬೆಳಕಿನ ತರಂಗಗಳನ್ನು ಕುಶಲತೆಯಿಂದ ದೇಹದಲ್ಲಿ ಮರು ಸೃಷ್ಟಿಸುತ್ತವೆ ಮತ್ತು ದೇಹದಲ್ಲಿನ ಅಡೆತಡೆಗಳನ್ನು ನಿವಾರಿಸಿ, ಶಕ್ತಿಯನ್ನು ದೇಹದಲ್ಲಿ ಮರು ನಿರ್ದೇಶಿಸುತ್ತವೆ.

ವೈಜ್ಞಾನಿಕವಾಗಿಯೂ ಮುದ್ರೆಗಳು ಮೆದುಳಿನ ಗೋಳಾರ್ಧದ ಸುತ್ತಲೂ ಹುಟ್ಟುವ ಪ್ರಜ್ಞೆಯನ್ನು ಜಾಗೃತಿಗೊಳಿಸುತ್ತವೆ ಹಾಗೂ ಭೂತಕಾಲದ ತಪ್ಪುಗಳು ಮರುಕಳಿಸದಂತೆ ಭವಿಷ್ಯತ್ತನ್ನು ಸುಂದರಗೊಳಿಸುತ್ತವೆ.

ಮೊದಲಿಗೆ 9 ಇದ್ದ ಮುದ್ರೆಗಳು ಈಗ 180 ಮುದ್ರೆಗಳಾಗಿವೆ

 ಸ್ಮರಣಾಶಕ್ತಿಯು ವೃದ್ಧಿಸುತ್ತದೆ. ಮನುಷ್ಯನ ದೇಹ ಮತ್ತು ಮನಸ್ಸಿನ ಅಸಮತೋಲನವನ್ನು ಸರಿಪಡಿಸಿ ಸಹಜವಾದ ನಡವಳಿಕೆಯನ್ನು ರೂಪಿಸುತ್ತದೆ. ಮೊದಲಿಗೆ 9 ಇದ್ದ ಮುದ್ರೆಗಳು ಈಗ 180 ಮುದ್ರೆಗಳಾಗಿದ್ದು, ಪ್ರತಿಯೊಂದು ಮುದ್ರೆಯು ತನ್ನದೇ ಆದ ಚಾನಲ್ ಅನ್ನು ಹೊಂದಿದೆ. ಅದರಿಂದ ದೇಹ ಮನಸ್ಸು ಮತ್ತು ಪ್ರಾಣದ ಮೇಲೆ ವಿಶಿಷ್ಟವಾದ ಪರಿಣಾಮವನ್ನು ಬೀರುತ್ತದೆ.

ಮುಂದಿನ ಸಂಚಿಕೆಯಲ್ಲಿ ಪ್ರತಿಯೊಂದು ಮುದ್ರೆಗಳನ್ನು ಅದರ ಭಂಗಿ, ಪ್ರಯೋಜನ ಕುರಿತು ವಿವರವಾಗಿ ನೋಡೋಣ.

Share this:

  • WhatsApp
  • Post
  • Tweet
  • Print
  • Email
9 mudrasAwarenessconcentrationfree treatmentgood drugInitiallynow 180 mudrasphysical health
Share 5 FacebookTwitterPinterestEmail
admin

previous post
ನಿಖಿಲ್ ಗೆ ಸೂಚನೆ ಕೊಟ್ಟ ದೊಡ್ಡಗೌಡರು
next post
ದಿನ ಭವಿಷ್ಯ : ಸೋಮವಾರ, 05 ಫೆಬ್ರವರಿ 2024

You may also like

ಶುರುವಾಗಲಿದೆ ನಿಖಿಲ್ ಪಟ್ಟಾಭಿಷೇಕ ಯಾತ್ರೆ

May 19, 2025

ಅತಿಥಿ ಶಿಕ್ಷಕರು ಮತ್ತು ಉಪನ್ಯಾಸಕರ ಗೌರವ ಸಂಭಾವನೆ ಪರಿಷ್ಕರಣೆ

May 15, 2025

ಸಕಾರದಿಂದ 108 ಆಂಬುಲೆನ್ಸ್ ಸೇವೆ

May 14, 2025

ಎಸ್‌ಎಸ್‌ಎಲ್‌ಸಿ ಫಲಿತಾಂಶ: ಬಾಲಕಿಯರೇ ಮೇಲುಗೈ

May 2, 2025

ಕರ್ನಾಟಕದಲ್ಲಿ ಮೇ 4 ರಂದು ನೀಟ್ ಪರೀಕ್ಷೆ

April 30, 2025

ವೃತ್ತಿ ಶಿಕ್ಷಣ: ಮೇ 20ರ ವೇಳೆಗೆ ಸಿಇಟಿ ಫಲಿತಾಂಶ

April 26, 2025

ಕನ್ನಡಿಗನ ಮೇಲೆ ಹಲ್ಲೆ: ಕ್ರಮಕ್ಕೆ ಸಿದ್ದರಾಮಯ್ಯ ಆದೇಶ

April 22, 2025

ಇತಿಹಾಸ ಮರೆಯದ ಕೌತುಕದ ಕ್ಷಣಗಳು..

April 21, 2025

ಜಾತಿ ಗಣತಿ : ನಿರ್ಧಾರ ಕೈಗೊಳ್ಳದ ಸರ್ಕಾರ

April 17, 2025

ಮೀಸಲಾತಿ: ಸಿದ್ದರಾಮಯ್ಯ ಸಮುದಾಯಕ್ಕೆ ಸಿಂಹಪಾಲು

April 16, 2025

Leave a Comment Cancel Reply

Save my name, email, and website in this browser for the next time I comment.

Social Networks

Facebook Twitter Instagram Linkedin Youtube Email Rss

KMS Analysis

  • ಶತ್ರು ದೇಶದ ಕ್ಷೇಮಕ್ಕಾಗಿ ಕಾಂಗ್ರೆಸ್ ಮಿಡಿಯುತ್ತಿದೆ : ಹೆಚ್ ಡಿಕೆ ಟೀಕೆ

    May 16, 2025
  • ಮೇ 20ಕ್ಕೆ ಕಾಂಗ್ರೆಸ್ ಸರ್ಕಾರದ ಸಾಧನಾ ಸಮಾವೇಶ

    May 15, 2025
  • ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ವರದಿ ಅನುಷ್ಠಾನಕ್ಕೆ ಸಿದ್ದರಾಮಯ್ಯ ಕಸರತ್ತು

    May 8, 2025
  • ಭಯೋತ್ಪಾದನೆ ನಿಗ್ರಹ: ಪ್ರಧಾನಿ ಮೋದಿಗೆ ಸಂಪೂರ್ಣ ಬೆಂಬಲ ಘೋಷಿಸಿದ ದೇವೇಗೌಡರು

    May 6, 2025
  • ಜಾತಿಗಣತಿ ವರದಿ ದತ್ತಾಂಶ ಮರುಪರಿಶೀಲನೆಗೆ ನಿರ್ಧಾರ

    April 18, 2025

Categories

  • Special Story (180)
  • ಅಂಕಣ (102)
  • ಉದ್ಯೋಗ (237)
  • ದಿನ ಭವಿಷ್ಯ (110)
  • ರಾಜಕೀಯ (1,583)
  • ರಾಜ್ಯ (1,872)
  • ರಾಷ್ಟ್ರ (1,844)
  • ವಿಶ್ಲೇಷಣೆ (183)
  • ಶಿಕ್ಷಣ (318)
  • ಸಂದರ್ಶನ (11)

About Us

ನೈಜ ಹಾಗೂ ವಿಶ್ವಾಸಾರ್ಹತೆಯ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರವಾದ ಸುದ್ದಿ, ಅಭಿಪ್ರಾಯಗಳ ಪ್ರಕಟಣೆಯ ವೆಬ್ ತಾಣ. ಕರ್ನಾಟಕ ರಾಜ್ಯದ ಪ್ರಚಲಿತ ವಿದ್ಯಮಾನಗಳು, ರಾಜಕೀಯ, ನಾಡು, ನುಡಿ, ಜಲ ವಿಚಾರಗಳಲ್ಲದೆ, ದೈನಂದಿನ ಆಗು-ಹೋಗುಗಳು, ವಿವಿಧ ಜಿಲ್ಲೆಗಳ ಪ್ರಮುಖ ವಿಚಾರಗಳ ಭಿತ್ತರಕ್ಕೆ ಹೆಚ್ಚು ಒತ್ತು ನೀಡುವುದು. ನಮ್ಮ ಕುರಿತು ಹೆಚ್ಚಿನ ವಿವರ ಪಡೆಯಲು ಇಲ್ಲಿ ಇಲ್ಲಿಕ್ಲಿಕ್‌ ಮಾಡಿ

Facebook Twitter Linkedin Youtube Email Vimeo Rss

Politics

  • ಮುಖ್ಯಮಂತ್ರಿ ಗಾದಿಗೆ ಶಿವಕುಮಾರ್ ತಂತ್ರಗಾರಿಕೆ ಆರಂಭ

    May 19, 2025
  • ಶುರುವಾಗಲಿದೆ ನಿಖಿಲ್ ಪಟ್ಟಾಭಿಷೇಕ ಯಾತ್ರೆ

    May 19, 2025
  • 93ನೇ ವರ್ಷಕ್ಕೆ ಕಾಲಿಟ್ಟಿ ದೇವೇಗೌಡರು, ಶುಭ ಕೋರಿದ ಪ್ರಧಾನಿ ಮೋದಿ, ಅಮಿತ್ ಶಾ

    May 18, 2025

KMS Special

  • ಮುಖ್ಯಮಂತ್ರಿ ಗಾದಿಗೆ ಶಿವಕುಮಾರ್ ತಂತ್ರಗಾರಿಕೆ ಆರಂಭ

    May 19, 2025
  • ಮೇ 20ಕ್ಕೆ ಕಾಂಗ್ರೆಸ್ ಸರ್ಕಾರದ ಸಾಧನಾ ಸಮಾವೇಶ

    May 15, 2025
  • ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ವರದಿ ಅನುಷ್ಠಾನಕ್ಕೆ ಸಿದ್ದರಾಮಯ್ಯ ಕಸರತ್ತು

    May 8, 2025
  • Facebook
  • Twitter
  • Linkedin
  • Youtube
  • Email
  • Telegram
KMS
  • Home
  • Special Story
  • ರಾಜ್ಯ
  • ರಾಷ್ಟ್ರ
  • ರಾಜಕೀಯ
  • ವಿಶ್ಲೇಷಣೆ
  • ಅಂಕಣ
  • ಶಿಕ್ಷಣ
  • ಉದ್ಯೋಗ
  • ಸಂದರ್ಶನ

Read alsox

ಶುರುವಾಗಲಿದೆ ನಿಖಿಲ್ ಪಟ್ಟಾಭಿಷೇಕ ಯಾತ್ರೆ

May 19, 2025
Sign In

Keep me signed in until I sign out

Forgot your password?

Password Recovery

A new password will be emailed to you.

Have received a new password? Login here

ಕೆಎಂಎಸ್‌ ಕನ್ನಡ ವಾಟ್ಸಪ್‌ ಗ್ರೂಪ್‌ಗೆ ಸೇರಿ