ಬೆಂಗಳೂರು:ಪೆಟ್ರೋಲ್, ಡೀಸೆಲ್ ಮೇಲಿನ ತೆರಿಗೆ ಇಳಿಕೆ ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದಿಲ್ಲಿ ಸ್ಪಷ್ಟಪಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರ ತೈಲ ದರಗಳನ್ನು ಹೆಚ್ಚಿಸಿದರೆ ನಾವ್ಯಾಕೆ ಕಡಿಮೆ ಮಾಡಬೇಕು ಎಂದು ಪ್ರಶ್ನಿಸಿದ್ದಾರೆ.
ಮೋದಿ ಪ್ರಧಾನಿ ಆಗುವುದಕ್ಕೆ ಮುನ್ನ
ನರೇಂದ್ರ ಮೋದಿ ಪ್ರಧಾನಿ ಆಗುವುದಕ್ಕೂ ಮುನ್ನ ಡೀಸೆಲ್ 40 ರೂ., ಪೆಟ್ರೋಲ್ 70 ರೂ., ಅಡುಗೆ ಅನಿಲ ದರ 414 ರೂ. ಇತ್ತು.
ಅಧಿಕಾರಕ್ಕೆ ಬಂದ ನಂತರ ಅಚ್ಚೇದಿನ್, ಅಚ್ಚೇದಿನ್ ಎಂಬುದಾಗಿ ಹೇಳಿಕೊಂಡೇ ಸಾಮಾನ್ಯ ಜನರ ಮೇಲೆ ಹೊರೆ ಹಾಕುತ್ತಿದ್ದಾರೆ.
ನಮ್ಮನ್ನು ಪ್ರಶ್ನಿಸುತ್ತೀರಿ
ಕೇಂದ್ರದವರು ಬೆಲೆ ಜಾಸ್ತಿ ಮಾಡಿದರೆ, ನೀವು, ಮಾಧ್ಯಮದವರು, ನಮ್ಮನ್ನು ಕಡಿಮೆ ಮಾಡುತ್ತೀರಾ ಎಂಬುದಾಗಿ ಪ್ರಶ್ನಿಸುತ್ತೀರಿ, ಆದರೆ, ಅವರನ್ನು ಮಾತ್ರ ಕೇಳುವುದಿಲ್ಲ.
ಪೆಟ್ರೋಲ್, ಡೀಸೆಲ್ ಮೇಲೆ ರಾಜ್ಯ ಸರ್ಕಾರ ಹೆಚ್ಚಿನ ತೆರಿಗೆ ವಿಧಿಸುತ್ತಿದೆ ಎಂಬ ಸುದ್ದಿಗಾರರ ಪ್ರಶ್ನೆಗೆ ಕೇಳಿಯೂ ಕೇಳಿಸದಂತೆ ಮುನ್ನಡೆದರು.


