ಬೆಂಗಳೂರು:ಕರ್ನಾಟಕ ಸಹಕಾರ ಹಾಲು ಉತ್ಪಾದಕರ ಮಹಾಮಂಡಳಿ ನಿಯಮಿತ (ಕೆಎಂಎಫ್) ನಂದಿನಿ ಹಾಲು ಹಾಗೂ ಮೊಸರು ದರದಲ್ಲಿ ಪ್ರತೀ ಲೀಟರ್ಗೆ 3 ರೂ. ಹೆಚ್ಚಳಕ್ಕೆ ರಾಜ್ಯ ಸರ್ಕಾರ ಮುಂದಾಗಿದೆ.
ಹಾಲು ಉತ್ಪಾದಕ ರೈತರ ಬೇಡಿಕೆಗೆ ಮಣಿದು ದರ ಹೆಚ್ಚಳಕ್ಕೆ ಸರ್ಕಾರ ನಿರ್ಧರಿಸಿದ್ದು, ಇದರಲ್ಲಿ ಒಂದರಿಂದ 2 ರೂ. ರೈತರಿಗೆ ನೀಡಿ ಉಳಿದದ್ದನ್ನು ಸಂಬಂಧಿತ ಒಕ್ಕೂಟಗಳಿಗೆ ಹಂಚಿಕೆ ಮಾಡಲು ತೀರ್ಮಾನಿಸಿದೆ.
ಎಲ್ಲ ಉತ್ಪನ್ನಗಳ ದರ ಹೆಚ್ಚಳ
ಹಾಲು, ಮೊಸರಿನ ಜೊತೆಗೆ ಕೆಎಂಎಫ್ ಉತ್ಪಾದಿಸುವ ಹಾಲಿನ ಪುಡಿ, ಸಿಹಿ ತಿನಿಸು ಸೇರಿದಂತೆ ಎಲ್ಲ ಉತ್ಪನ್ನಗಳ ಮೇಲೂ ಗಣನೀಯವಾಗಿ ದರ ಹೆಚ್ಚಳ ಆಗಲಿದೆ.
ದೇಶದ ವಿವಿಧ ರಾಜ್ಯಗಳಿಗೆ ಹೋಲಿಸಿದಲ್ಲಿ ಕರ್ನಾಟಕದಲ್ಲಿ ಪ್ರತೀ ಲೀಟರ್ ಹಾಲಿಗೆ 6 ರೂ. ಕಡಿಮೆ ಇದೆ.
ಕೇಂದ್ರ ಸರ್ಕಾರದ ಡೀಸೆಲ್ ಮತ್ತು ಪೆಟ್ರೋಲ್ ದರ ಹೆಚ್ಚಳದಿಂದ 13 ಹಾಲು ಒಕ್ಕೂಟಗಳು ಸಂಕಷ್ಟಕ್ಕೆ ಸಿಲುಕಿವೆ.
ಒಕ್ಕೂಟಗಳು ನಷ್ಟದಲ್ಲಿ
ಬೆಲೆ ಹೆಚ್ಚಳದಿಂದ ಹಾಲೂ ಹಾಗೂ ಇತರ ಉತ್ಪನ್ನಗಳ ಕಚ್ಚಾ ಸಾಮಗ್ರಿಗಳ ದರ ದ್ವಿಗುಣಗೊಂಡಿದ್ದು, ಒಕ್ಕೂಟಗಳು ನಷ್ಟದಲ್ಲಿವೆ.
ಇದನ್ನು ಗಮನದಲ್ಲಿ ಇಟ್ಟುಕೊಂಡು ರೈತರು ಮತ್ತು ಹಾಲು ಒಕ್ಕೂಟಗಳ ರಕ್ಷಣೆಗೆ ಸರ್ಕಾರ ಕಠಿಣ ನಿರ್ಧಾರಕ್ಕೆ ಮುಂದಾಗಿದೆ.


