Monday, June 8, 2026
  • ನಮ್ಮ ಬಗ್ಗೆ
  • ಸಂಪರ್ಕಿಸಿ
  • Privacy Policy
  • Disclaimer
  • Login/Register
KMS
  • Home
  • Special Story
  • ರಾಜ್ಯ
  • ರಾಷ್ಟ್ರ
  • ರಾಜಕೀಯ
  • ವಿಶ್ಲೇಷಣೆ
  • ಅಂಕಣ
  • ಶಿಕ್ಷಣ
  • ಉದ್ಯೋಗ
  • ಸಂದರ್ಶನ
Monday, June 8, 2026
  • ನಮ್ಮ ಬಗ್ಗೆ
  • ಸಂಪರ್ಕಿಸಿ
  • Privacy Policy
  • Disclaimer
  • Login/Register
KMS
Banner
  • Home
  • Special Story
  • ರಾಜ್ಯ
  • ರಾಷ್ಟ್ರ
  • ರಾಜಕೀಯ
  • ವಿಶ್ಲೇಷಣೆ
  • ಅಂಕಣ
  • ಶಿಕ್ಷಣ
  • ಉದ್ಯೋಗ
  • ಸಂದರ್ಶನ
KMS
KMS
  • Home
  • Special Story
  • ರಾಜ್ಯ
  • ರಾಷ್ಟ್ರ
  • ರಾಜಕೀಯ
  • ವಿಶ್ಲೇಷಣೆ
  • ಅಂಕಣ
  • ಶಿಕ್ಷಣ
  • ಉದ್ಯೋಗ
  • ಸಂದರ್ಶನ

@2022 - All Right Reserved. Designed and Developed by PenciDesign

Special Storyರಾಜ್ಯರಾಷ್ಟ್ರಶಿಕ್ಷಣ

ಮಾಯವಾಗುತ್ತಿರುವ ಸಂಕ್ರಾಂತಿ ಕಿಚ್ಚು!

by KM Shivaraju January 15, 2024
written by KM Shivaraju January 15, 2024 0 comments 2 minutes read
6FacebookTwitterPinterestEmail
218
ದೇಸೀ ದನಕರು ಕಣ್ಮರೆ; ವಿದೇಶಿ ಹಸುಗಳ ಲಗ್ಗೆ…

ಬೆಂಗಳೂರು: ರೈತ ಹಾಗೂ ಜಾನುವಾರುಗಳ ನಡುವೆ ಅನಾದಿ ಕಾಲದಿಂದಲೂ ಅವಿನಾಭಾವ ಸಂಬಂಧವಿದೆ. ಆದರೆ, ಆಧುನೀಕರಣ ಒಗ್ಗಿಕೊಂಡಂತೆ, ಯಾಂತ್ರೀಕರಣವೂ ಕೃಷಿ, ತೋಟಗಾರಿಕೆಯಲ್ಲಿ ಹಾಸುಹೊಕ್ಕಾಗಿದೆ.
ರೈತನಿಲ್ಲದೆ, ದನಕರುಗಳು ಇಲ್ಲ; ದನಕರುಗಳು ಇಲ್ಲದೆ ರೈತನಿಲ್ಲ ಎಂಬ ಮಾತು ಚಿರಪರಿಚಿತವಾಗಿತ್ತು.

ಜಾನುವಾರು ರೈತರ ಪರಮ ಮಿತ್ರವಾಗಿವೆ. ಅವಿಲ್ಲದೇ ಕೃಷಿ ಇರಲಿಲ್ಲ. ಬೇಸಾಯಕ್ಕೆ ರೈತನಷ್ಟೇ ಅವು ಕೂಡ ಹೆಗಲು ಕೊಡುತ್ತಿದ್ದವು. ಎತ್ತು, ಹಸು, ಹೋರಿ, ಎಮ್ಮೆ, ಕುರಿ, ಮೇಕೆಗಳು ರೈತರ ಜೀವನದ ಭಾಗವೇ ಆಗಿದ್ದವು. ಇಂತಹ ಜಾನುವಾರು ಇಲ್ಲದೆ, ರೈತರ ಬದುಕು ಸಾಗುತ್ತಿರಲಿಲ್ಲ. ಅವುಗಳಿಂದ ಕೃಷಿ ಬೇಕಾದ ಉಪಯುಕ್ತ ಗೊಬ್ಬರವೂ ಸಿಗುತ್ತಿತ್ತು.

ಹೈಬ್ರಿಡ್ ತಳಿಗಳ ಹಾವಳಿ; ರೈತ ಪರಾವಲಂಬಿ

ಅನಾದಿ ಕಾಲದಿಂದಲೂ ಬಳಕೆಯಲ್ಲಿದ್ದ ಮೂಲ ತಳಿಗಳ ವಿವಿಧ ಬೆಳೆಯನ್ನು ಹೈಬ್ರೀಡ್ ತಳಿಗಳು ಈಗಾಗಲೇ ಆಪೋಷನ ತೆಗೆದುಕೊಂಡಿವೆ. ಅಧಿಕ ಇಳುವರಿಯ ಆಸೆಯಿಂದ ಮೂಲತಳಿಯನ್ನೇ ಕೈ ಚೆಲ್ಲಿ ಪರಾವಲಂಬಿ ಆಗಿದ್ದೇವೆ.

ಇದರ ಜತೆಜತೆಗೆ ರಸಗೊಬ್ಬರ, ಕೀಟನಾಶಕಗಳು ಕೃಷಿಯಲ್ಲಿ ಬೆರತು ಹೋಗಿವೆ. ಇವಿಲ್ಲದೇ ಬೇಸಾಯವೇ ಇಲ್ಲ ಎಂಬ ಪರಿಸ್ಥಿತಿ ಇದೆ. ಜಾನುವಾರುಗಳ ಸೆಗಣಿ, ಗಂಜಲವನ್ನು ಗೊಬ್ಬರವಾಗಿ ಬಳಸಲಾಗುತ್ತಿತ್ತು. ಆರೋಗ್ಯಕರ ಆಹಾರ ಧಾನ್ಯಗಳನ್ನು ಬೆಳೆಯಲಾಗುತ್ತಿತ್ತು. ಈಗ ತಳಿಯೂ ಬದಲಾಗಿದೆ, ಗೊಬ್ಬರವೂ ಬದಲಾಗಿ ವಿಷಯುಕ್ತ ಬೆಳೆ ಬೆಳೆಯುವ ಪರಿಸ್ಥಿತಿಗೆ ತಲುಪಿದ್ದೇವೆ. ಇದಕ್ಕೆ ಪ್ರಕೃತಿಯ ವಿರುದ್ಧದ ಮಾನವನ ಅವಿರತ ಪ್ರಯತ್ನ ಫಲವೆಂದರೆ ತಪ್ಪಾಗಲಾರದು.

ಕೃಷಿ ಚಟುವಟಿಕೆಗಳಲ್ಲಿ ಜಾನುವಾರು ಬದಲಿಗೆ ಯಂತ್ರೋಪಕರಣಗಳದ್ದೇ ಕಾರುಬಾರು. ನೇಗಿಲು, ಕುಂಟೆ, ಹಲುಬೆ, ನೋಗ ಮೊದಲಾದ ಪರಿಕರಗಳು ಮೂಲೆ ಸೇರಿವೆ. ಅವುಗಳ ಬಳಕೆಯ ಸ್ಥಾನದಲ್ಲಿ ಟ್ರಾಕ್ಟರ್, ಟಿಲ್ಲರ್, ಜೆಸಿಬಿ ಸೇರಿದಂತೆ ನಾನಾ ರೀತಿಯ ಯಂತ್ರೋಪಕರಣಗಳ ಬಳಕೆ ಅನಿವಾರ್ಯ ಎನಿಸಿದೆ. ಹೀಗಾಗಿ ಜಾನುವಾರು ಅವಲಂಬನೆ ಕಡಿಮೆ ಆಗಿದೆ. ಉಳುಮೆಯಿಂದ ಒಕ್ಕಣೆಯವರೆಗೂ ಬಹುತೇಕ ರೈತರು ಯಂತ್ರಗಳನ್ನು ಅವಲಂಬಿಸಿದ್ದಾರೆ.

ವರ್ಷದ ಮೊದಲ ಹಬ್ಬ ಮಕರ ಸಂಕ್ರಾಂತಿ

ವರ್ಷದ ಮೊದಲ ಹಬ್ಬ ಮಕರ ಸಂಕ್ರಾಂತಿ ಸಡಗರದಲ್ಲಿ ಗತಕಾಲದ ವೈಭವವನ್ನು ಮರೆತಿದ್ದೇವೆ. ಸುಗ್ಗಿಯ ಹಬ್ಬ ಸಂಕ್ರಾಂತಿ. ಇದಕ್ಕಿರುವ ವಿಶೇಷವಾದ ವೈಶಿಷ್ಟ್ಯ ಮತ್ಯಾವುದೇ ಹಬ್ಬದಲ್ಲಿ ಕಾಣುವುದಿಲ್ಲ.

ಬೇರೆ ಯಾವುದೇ ಹಬ್ಬದಲ್ಲಿ ಜನ-ಜಾನುವಾರುಗಳು ಒಟ್ಟಾಗಿ ಹಬ್ಬ ಆಚರಿಸುವುದಿಲ್ಲ. ಗ್ರಾಮೀಣ ಭಾಗದಲ್ಲಿ ಜನರಿಗಿಂತ ಜಾನುವಾರುಗಳಿಗೆ ಮೀಸಲಿಟ್ಟ ಹಬ್ಬವಾಗಿತ್ತು.

ಆದರೆ, ಯಾಂತ್ರಿಕರಣದ ಮಹಿಮೆಯ ಫಲವಾಗಿ ಜಾನುವಾರು ಮಾಯವಾಗಿವೆ. ಹಳ್ಳಿಕಾರ್ (ನಾಟಿ), ಅಮೃತ್ ಮಹಲ್ ಮೊದಲಾದ ನೆಲಮೂಲದ ತಳಿಯ ದನಕರು, ಎತ್ತು, ಹೋರಿಗಳು ದಿನಕ್ರಮೇಣ ಕಡಿಮೆಯಾಗಿವೆ. ಊರಿನ ಪ್ರತಿಮನೆಯಲ್ಲಿ ಸಾಮಾನ್ಯವಾಗಿದ್ದ ಇವು ಈಗ ಪ್ರತಿ ಗ್ರಾಮದಲ್ಲೂ ಬೆರಳೆಣಿಕೆಯಷ್ಟು ಇವೆ. ಮುಂದೆ ಅವು ಇಲ್ಲವಾಗಬಹುದು ಎಂಬ ಆತಂಕ ಮನೆ ಮಾಡಿದೆ.

ಲಾಭದಾಯಕ ಹೈನುಗಾರಿಕೆಗೆ, ತೋಟಗಾರಿಕೆ, ವಾಣಿಜ್ಯ ಬೆಳೆಗಳತ್ತ ರೈತರು ವಾಲಿದ್ದಾರೆ. ಇದರ ಪರಿಣಾಮವಾಗಿ ಅಧಿಕ ಹಾಲು ನೀಡುವ ವಿದೇಶಿ ತಳಿಯ ಹಸುಗಳು ನಗರ, ಗ್ರಾಮೀಣ ಎಂಬ ಬೇಧವಿಲ್ಲದೆ ನೋಡಬಹುದು.

ಹಿಂದೆಲ್ಲಾ ಸಂಕ್ರಾಂತಿ ಹಬ್ಬದ ಸಂದರ್ಭದಲ್ಲಿ ಜಾನುವಾರುಗಳನ್ನು ಶುಚಿಗೊಳಿಸಿ, ಬಣ್ಣದ ಕಾಗದ, ಬಲೂನ್, ಟೇಪು, ಬಣ್ಣಗಳಿಂದ ತರಾವೇರಿ ಸಿಂಗರಿಸಿ ಊರ ಮುಂದೆ ಎಲ್ಲರೂ ತಮ್ಮ‌‌ ತಮ್ಮ‌ ಜಾನುವಾರುಗಳೊಂದಿಗೆ ಒಂದೆಡೆ ಸೇರಿತ್ತಿದ್ದರು.

ವೈವಿಧ್ಯಮಯ ಅಲಂಕಾರದಿಂದ ಕಣ್ಮನ ಸೆಳೆಯುತ್ತಿದ್ದವು ಜಾನುವಾರು. ಕೊಟ್ಟಿಗಳನ್ನೂ ಸಹ ರಂಗೋಲಿ ಹಾಕಿ ಸಿಂಗರಿಸಲಾಗುತ್ತಿತ್ತು. ಹೀಗಾಗಿ ಮನೆ ಮಂದಿ, ಜಾನುವಾರುಗಳ ಸಂಭ್ರಮದ ಹಬ್ಬವಾಗಿತ್ತು.

ವಿದೇಶಿ ಹಸುಗಳ ಮಹಿಮೆ,; ಸಂಭ್ರಮವಿಲ್ಲದ ಸಂಕ್ರಾಂತಿ

ವಿದೇಶಿ ತಳಿಯ ಸೀಮೆ ಹಸುಗಳು ಮನೆಯಲ್ಲೇ ಸಾಕಾಣೆ ಮಾಡುವುದು ಹೆಚ್ಚು‌. ಇವುಗಳನ್ನು ಕಿಚ್ಚು ಹಾಯಿಸಲು ಕರೆದೊಯ್ಯವುದು ವಿರಳ.

ಸಂಕ್ರಾಂತಿ ಮೂರ್ತಿಯನ್ನು ಪ್ರತಿವರ್ಷ ಹೊಸದಾಗಿ ಮಣ್ಣಿನಲ್ಲಿ ನಿರ್ಮಿಸಿ ಅಲಂಕರಿಸಿ, ಪೊಂಗಲ್ ನೈವೇದ್ಯ ಮಾಡಿ ಪರಸ್ಪರ ಹಂಚಿ ಸಂಭ್ರಮಿಸುತ್ತಿದ್ದರು.
ಸಂಕ್ರಾಂತಿ ಹಬ್ಬದಲ್ಲಿ ಒಂದೆಡೆಯಲ್ಲಿ ಸೇರುವ ಜಾನುವಾರು ಕಿಚ್ಚು (ಬೆಂಕಿ ದಾಟಿ) ಹಾಯ್ದು ಮನೆಗೆ ಬರಬೇಕಿತ್ತು. ( ಈ ರೀತಿ ಮಾಡುವುದರಿಂದ ಹುನ್ನಿಗಳು ಬೆಂಕಿಯ ಬಿಸಿಗೆ ನಾಶವಾಗುತ್ತವೆ ಎಂಬ ಪ್ರತೀತಿ ) ಕಿಚ್ಚು ಹಾಯುವುದರಲ್ಲೂ ಸ್ಪರ್ಧೆ, ಸಂಭ್ರಮ ಇರುತ್ತಿತ್ತು.

ಈಗ ಅದೆಲ್ಲವೂ ಮಾಯವಾಗುತ್ತಿದೆ. ಮಣಿನ ಸಂಕ್ರಾಂತಿ ಮೂರ್ತಿ ಬದಲು ಬಹುತೇಕ ಗ್ರಾಮಗಳಲ್ಲಿ ಸಿಮೆಂಟ್ ಮೂರ್ತಿ ನಿರ್ಮಾಣ ಆಗಿವೆ. ಅದೇ ರೀತಿ ಜಾನುವಾರು ಇಲ್ಲದ ಸಂಕ್ರಾಂತಿ ಆಗಿದೆ. ಸಾಂಪ್ರದಾಯಿಕ ಹಬ್ಬವಾಗಿದೆ ಅಷ್ಟೇ.

ನಗರ, ಪಟ್ಟಣಗಳಲ್ಲಿ ಹೆಚ್ಚಾಗಿದ್ದ ಎಳ್ಳು ಬೀರುವುದು ಹಳ್ಳಿಯಲ್ಲೂ ಶುರುವಾಗಿದೆ. ಎಳ್ಳು, ಬೆಲ್ಲ, ಕಬ್ಬು, ಗೆಣಸು, ಕಡಲೆಕಾಯಿ ಮುನ್ನೆಲೆಗೆ ಬಂದಿವೆ. ಹೀಗೆ ಜನ-ಜಾನುವಾರುಗಳ ಸುಗ್ಗಿ ಜನರಿಗೆ ಮಾತ್ರ ಹುಗ್ಗಿ ಎಂಬಂತಾಗಿದೆ.

Share this:

  • Share on WhatsApp (Opens in new window) WhatsApp
  • Post
  • Tweet
  • Print (Opens in new window) Print
  • Email a link to a friend (Opens in new window) Email
Disappearance Native CattleDisappearing Sankranti Kitchufire jumpForeign Cowskarnataka
6 FacebookTwitterPinterestEmail
KM Shivaraju

previous post
ಮಾಶಾಸನಕ್ಕಾಗಿ 5 ಕಿ.ಮೀ. ದೂರ ತೆವಳಿದ ವೃದ್ಧೆ
next post
ವಿಜಯೇಂದ್ರ ಇಲ್ಲಿಗೆ; ಯತ್ನಾಳ್‌ ದಿಲ್ಲಿಗೆ

You may also like

ಮನಸು ಬದಲಿಸಿದ ರಾಮಲಿಂಗಾರೆಡ್ಡಿ

June 6, 2026

ರಾಮಲಿಂಗಾ ರೆಡ್ಡಿ ರಾಜೀನಾಮೆ ಅಂಗೀಕರಿಸುವುದಿಲ್ಲ

June 6, 2026

ರಾಮಲಿಂಗಾ ರೆಡ್ಡಿ ರಾಜೀನಾಮೆ ಅಂಗೀಕಾರಕ್ಕೆ ಸೂಚನೆ

June 5, 2026

ಅಕ್ರಮ ತಡೆಯದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ

June 4, 2026

ಡಿ.ಕೆ.ಶಿವಕುಮಾರ್ ಕರ್ನಾಟಕದ ನೂತನ ಮುಖ್ಯಮಂತ್ರಿ

June 3, 2026

ಸರ್ವಧರ್ಮ ಗುರುಗಳ ಸಮ್ಮುಖದಲ್ಲಿ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ‌ ಸ್ವೀಕಾರ

June 2, 2026

ಮುಖ್ಯಮಂತ್ರಿ ನಿವಾಸವಾಗಿ ಬದಲಾಗಲಿದೆ ಕುಮಾರಕೃಪಾ ಅತಿಥಿ ಗೃಹ

June 1, 2026

ಸಿಎಲ್‌ಪಿ ನಾಯಕನಾಗಿ ಡಿಕೆಶಿ ಸರ್ವಾನುಮತ ಆಯ್ಕೆ

May 30, 2026

ಸಿಎಲ್‌ಪಿ ನಾಯಕನಾಗಿ ನಾಳೆ ಶಿವಕುಮಾರ್ ಆಯ್ಕೆ

May 29, 2026

ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ

May 28, 2026

Social Networks

Facebook Twitter Instagram Linkedin Youtube Email Rss

KMS Analysis

  • ಮನಸು ಬದಲಿಸಿದ ರಾಮಲಿಂಗಾರೆಡ್ಡಿ

    June 6, 2026
  • ಸರ್ವಧರ್ಮ ಗುರುಗಳ ಸಮ್ಮುಖದಲ್ಲಿ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ‌ ಸ್ವೀಕಾರ

    June 2, 2026
  • ಮುಖ್ಯಮಂತ್ರಿ ನಿವಾಸವಾಗಿ ಬದಲಾಗಲಿದೆ ಕುಮಾರಕೃಪಾ ಅತಿಥಿ ಗೃಹ

    June 1, 2026
  • ಮೇ 28 ರಂದು ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ

    May 27, 2026
  • ಅಧಿಕಾರ ತ್ಯಾಗಕ್ಕೆ ಸಿದ್ದರಾಗಲು‌ ಸಿದ್ದರಾಮಯ್ಯ ಅವರಿಗೆ ಹೈಕಮಾಂಡ್ ಸೂಚನೆ

    May 26, 2026

Categories

  • Special Story (483)
  • ಅಂಕಣ (109)
  • ಉದ್ಯೋಗ (332)
  • ದಿನ ಭವಿಷ್ಯ (110)
  • ರಾಜಕೀಯ (1,977)
  • ರಾಜ್ಯ (2,291)
  • ರಾಷ್ಟ್ರ (2,259)
  • ವಿಶ್ಲೇಷಣೆ (197)
  • ಶಿಕ್ಷಣ (396)
  • ಸಂದರ್ಶನ (11)

About Us

ನೈಜ ಹಾಗೂ ವಿಶ್ವಾಸಾರ್ಹತೆಯ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರವಾದ ಸುದ್ದಿ, ಅಭಿಪ್ರಾಯಗಳ ಪ್ರಕಟಣೆಯ ವೆಬ್ ತಾಣ. ಕರ್ನಾಟಕ ರಾಜ್ಯದ ಪ್ರಚಲಿತ ವಿದ್ಯಮಾನಗಳು, ರಾಜಕೀಯ, ನಾಡು, ನುಡಿ, ಜಲ ವಿಚಾರಗಳಲ್ಲದೆ, ದೈನಂದಿನ ಆಗು-ಹೋಗುಗಳು, ವಿವಿಧ ಜಿಲ್ಲೆಗಳ ಪ್ರಮುಖ ವಿಚಾರಗಳ ಭಿತ್ತರಕ್ಕೆ ಹೆಚ್ಚು ಒತ್ತು ನೀಡುವುದು. ನಮ್ಮ ಕುರಿತು ಹೆಚ್ಚಿನ ವಿವರ ಪಡೆಯಲು ಇಲ್ಲಿ ಇಲ್ಲಿಕ್ಲಿಕ್‌ ಮಾಡಿ

Facebook Twitter Linkedin Youtube Email Vimeo Rss

Politics

  • ಮನಸು ಬದಲಿಸಿದ ರಾಮಲಿಂಗಾರೆಡ್ಡಿ

    June 6, 2026
  • ರಾಮಲಿಂಗಾ ರೆಡ್ಡಿ ರಾಜೀನಾಮೆ ಅಂಗೀಕರಿಸುವುದಿಲ್ಲ

    June 6, 2026
  • ರಾಮಲಿಂಗಾ ರೆಡ್ಡಿ ರಾಜೀನಾಮೆ ಅಂಗೀಕಾರಕ್ಕೆ ಸೂಚನೆ

    June 5, 2026

KMS Special

  • ಮನಸು ಬದಲಿಸಿದ ರಾಮಲಿಂಗಾರೆಡ್ಡಿ

    June 6, 2026
  • ರಾಮಲಿಂಗಾ ರೆಡ್ಡಿ ರಾಜೀನಾಮೆ ಅಂಗೀಕರಿಸುವುದಿಲ್ಲ

    June 6, 2026
  • ರಾಮಲಿಂಗಾ ರೆಡ್ಡಿ ರಾಜೀನಾಮೆ ಅಂಗೀಕಾರಕ್ಕೆ ಸೂಚನೆ

    June 5, 2026
  • Facebook
  • Twitter
  • Linkedin
  • Youtube
  • Email
  • Telegram

@2020 - All Right Reserved. Designed and Developed by Karnatakabest.com

KMS
  • Home
  • Special Story
  • ರಾಜ್ಯ
  • ರಾಷ್ಟ್ರ
  • ರಾಜಕೀಯ
  • ವಿಶ್ಲೇಷಣೆ
  • ಅಂಕಣ
  • ಶಿಕ್ಷಣ
  • ಉದ್ಯೋಗ
  • ಸಂದರ್ಶನ

Read alsox

ಮನಸು ಬದಲಿಸಿದ ರಾಮಲಿಂಗಾರೆಡ್ಡಿ

June 6, 2026
Sign In

Keep me signed in until I sign out

Forgot your password?

Password Recovery

A new password will be emailed to you.

Have received a new password? Login here

ಕೆಎಂಎಸ್‌ ಕನ್ನಡ ವಾಟ್ಸಪ್‌ ಗ್ರೂಪ್‌ಗೆ ಸೇರಿ