Saturday, March 7, 2026
  • ನಮ್ಮ ಬಗ್ಗೆ
  • ಸಂಪರ್ಕಿಸಿ
  • Privacy Policy
  • Disclaimer
  • Login/Register
KMS
  • Home
  • Special Story
  • ರಾಜ್ಯ
  • ರಾಷ್ಟ್ರ
  • ರಾಜಕೀಯ
  • ವಿಶ್ಲೇಷಣೆ
  • ಅಂಕಣ
  • ಶಿಕ್ಷಣ
  • ಉದ್ಯೋಗ
  • ಸಂದರ್ಶನ
Saturday, March 7, 2026
  • ನಮ್ಮ ಬಗ್ಗೆ
  • ಸಂಪರ್ಕಿಸಿ
  • Privacy Policy
  • Disclaimer
  • Login/Register
KMS
Banner
  • Home
  • Special Story
  • ರಾಜ್ಯ
  • ರಾಷ್ಟ್ರ
  • ರಾಜಕೀಯ
  • ವಿಶ್ಲೇಷಣೆ
  • ಅಂಕಣ
  • ಶಿಕ್ಷಣ
  • ಉದ್ಯೋಗ
  • ಸಂದರ್ಶನ
KMS
KMS
  • Home
  • Special Story
  • ರಾಜ್ಯ
  • ರಾಷ್ಟ್ರ
  • ರಾಜಕೀಯ
  • ವಿಶ್ಲೇಷಣೆ
  • ಅಂಕಣ
  • ಶಿಕ್ಷಣ
  • ಉದ್ಯೋಗ
  • ಸಂದರ್ಶನ

@2022 - All Right Reserved. Designed and Developed by PenciDesign

ಅಂಕಣಶಿಕ್ಷಣಸಂದರ್ಶನ

ಒತ್ತಡ ನಿವಾರಣೆಗೆ ಆದಿ ಮುದ್ರೆ ಸಹಕಾರಿ

by admin March 17, 2024
written by admin March 17, 2024 0 comments 2 minutes read
3FacebookTwitterPinterestEmail
581

ಮಧು ಮೇಹ, ರಕ್ತದೊತ್ತಡ ಹತೋಟಿಗೆ ಪರಿಣಾಮಕಾರಿ

ಹಳೆಯ ತಲೆಮಾರುಗಳಿಂದ ಯುವ ಪೀಳಿಗೆಯವರೆಗೂ ಜನಪ್ರಿಯವಾಗಿರುವಂಥವು ಎಂದರೆ ಯೋಗ ಮುದ್ರೆಗಳು. ಋಷಿ ಮುನಿಗಳು ಕಲಿಸಿಕೊಟ್ಟ ಪ್ರಾಚೀನ ಹಾಗೂ ಪರಿಣಾಮಕಾರಿ ಚಿಕಿತ್ಸೆಗಳೇ ಯೋಗ ಮುದ್ರೆಗಳಾಗಿವೆ. ದೇಹದ ಕಾಲಿನ ಕಿರು ಬೆರಳಿನಿಂದ ಶಿರೋಭಾಗದವರೆಗೆ ಸಕಾರಾತ್ಮಕ ಶಕ್ತಿಯನ್ನು ಚಾಲನೆಗೊಳಿಸುವಂಥವುಗಳು ಮುದ್ರೆಗಳಾಗಿವೆ. ಮುದ್ರೆಗಳು ಅತ್ಯಂತ ಸರಳವೂ ಹೌದು. ಅತ್ಯಂತ ಪರಿಣಾಮಕಾರಿಯೂ ಹೌದು.

ಆದಿ ಮುದ್ರೆ ಎಂಬುದು ಹಸ್ತ ಮುದ್ರೆಗಳಲ್ಲಿ ಒಂದು ವಿಧ. ಅಂಗೈನಲ್ಲಿರುವ ಎಲ್ಲಾ ಬೆರಳುಗಳನ್ನು ಸೇರಿಸಿ ಆದಿಮುದ್ರೆ ಮಾಡಲಾಗುವುದು. ನೆಲದ ಮೇಲೆ ಅಥವಾ ಕುರ್ಚಿಯ ಮೇಲೆ ಯಾವುದೇ ಭಂಗಿಯಲ್ಲಿ ಕುಳಿತು ಈ ಮುದ್ರೆಯನ್ನು ಮಾಡಬಹುದು. ಆದಿ ಮುದ್ರೆಯನ್ನು ಮೂಲ ಮುದ್ರೆ ಅಥವಾ ಮಗುವಿನ ಗೆಸ್ಚರ್ ಎಂದು ಕರೆಯಲಾಗುತ್ತದೆ. ತೊಟ್ಟಿಲಲ್ಲಿ ಮಲಗಿರುವ ಮಗು ತನ್ನ ಎರಡೂ ಕೈಗಳನ್ನು ಮೇಲಕ್ಕೆ ಎತ್ತಿ ಹೆಬ್ಬೆರಳನ್ನು ಮುಷ್ಠಿಯೊಳಗೆ ಮಾಡಿ ಮಲಗಿರುವ ಭಂಗಿಯನ್ನು ಬಹುತೇಕ ಎಲ್ಲರೂ ನೋಡಿರುತ್ತೀರಿ. ಈ ಆದಿ ಮುದ್ರೆ ಆ ಹೋಲಿಕೆಯನ್ನೇ ಹೋಲುವುದರಿಂದ ಮಗುವಿನ ಗೆಸ್ಚರ್ ಎಂದು ಸಹ ಕರೆಯುವುದುಂಟು.

ಅತ್ಯಂತ ಸರಳ ಮುದ್ರೆಗಳಲ್ಲಿ ಇದು ಕೂಡ ಒಂದು. ಈ ಮುದ್ರೆ ಹಾಕಿದಂತಿರುವ ಮಗುವು ಆರಾಮವಾಗಿ ನಿದ್ರೆ ಮಾಡುವಂತೆ ವಯಸ್ಕರು ಒತ್ತಡದ ಜೀವನದಿಂದ ದೂರ ಸರಿದ ಮಗುವಿನಷ್ಠೇ ನೆಮ್ಮದಿಯಾಗಿ ನಿದ್ರೆ ಮಾಡುವರು. ಆದಿ ಎಂಬುದು ಮೊದಲು ಎಂಬರ್ಥವನ್ನು ನೀಡುವುದು. ತಾಯಿಯ ಗರ್ಭಾವಸ್ತೆಯಲ್ಲಿರುವ ಭ್ರೂಣದ ಭಂಗಿಯಿಂದ ಆದಿ ಮುದ್ರೆ ಎಂಬ ಹೆಸರು ಬಂದಿದೆ ಎಂದು ಹೇಳಲಾಗುವುದು.

ಆದಿ ಮುದ್ರೆ ಮಾಡುವ ವಿಧಾನ

ಮುದ್ರೆಗಳನ್ನು ಮಾಡುವಾಗ ಆರಾಮದಾಯಕ ಬಟ್ಟೆ ಧರಿಸುವುದು ಅಗತ್ಯ. ವಜ್ರಾಸನ, ಸುಖಾಸನ, ಪದ್ಮಾಸನದಂತಹ ಭಂಗಿಗಳಲ್ಲಿ ಕುಳಿತು ಮುದ್ರೆಯನ್ನು ಮಾಡಬಹುದು. ತಲೆ ಮತ್ತು ಎದೆಯ ಭಾಗ ನೇರವಾಗಿರುವಂತೆ ನೋಡಿಕೊಳ್ಳಿ. ಎರಡೂ ಕೈಗಳನ್ನು ನಿಮ್ಮ ತೊಡೆಯ ಮೇಲಿರಿಸಿಕೊಳ್ಳಬೇಕು. ಹೆಬ್ಬೆರಳು ಕಿರುಬೆರಳಿನ ತಳಭಾಗವನ್ನು ಸ್ಪರ್ಶಿಸುವಂತಿರಬೇಕು. ಉಳಿದ ಬೆರಳುಗಳು ಆ ಹೆಬ್ಬೆರಳುಗಳನ್ನು ಮುಚ್ಚಿಡಬೇಕು. ಉಸಿರಾಟದ ಮೇಲೆ ಗಮನವಿರಬೇಕು. ಎರಡೂ ಕೈಗಳಿಂದ ಈ ಮುದ್ರೆ ಮಾಡಬೇಕು. ಆ ಸಮಯದಲ್ಲಿ ಹಸ್ತವು ಆಕಾಶ ನೋಡುವಂತಿರಬೇಕು. ಮುದ್ರೆ ಮಾಡುವ ಸಂದರ್ಭದಲ್ಲಿ ಸಾಧ್ಯವಾದರೆ ಕಣ್ಣುಗಳನ್ನು ಮುಚ್ಚಿರವುದು ಸೂಕ್ತ.

ಕರ್ನಾಟಕದಲ್ಲಿ ಏಪ್ರಿಲ್ 26 – ಮೇ 7ರಂದು ಮತದಾನ

ದಿನಕ್ಕೆ 3 ಬಾರಿ 30 ನಿಮಿಷಗಳ ಕಾಲ ಅಥವಾ 10 ನಿಮಿಷವಾದರೂ ಅಭ್ಯಾಸ ಮಾಡಬೇಕು. ಮುಂಜಾನೆ ಅಥವಾ ಖಾಲಿ ಹೊಟ್ಟೆಯಲ್ಲಿ ಈ ಮುದ್ರೆ ಅಭ್ಯಾಸ ಮಾಡಬೇಕು. ಧ್ಯಾನ ಮಾಡುವಾಗ ಉಸಿರಾಟದ ಮೇಲೆ ಗಮನ ಕೇಂದ್ರೀಕೃತವಾಗಿರಬೇಕು. ಕನಿಷ್ಠ ಪಕ್ಷ ಊಟವಾದ 30 ನಿಮಿಷದ ನಂತರ ಈ ಮುದ್ರೆಯನ್ನು ಮಾಡಬಹುದು.

ವಾರ ಭವಿಷ್ಯ : ಭಾನುವಾರ, 17ಮಾರ್ಚ್ 2024
ಪ್ರಯೋಜನಗಳು

ಆದಿಮುದ್ರೆ ಹಾಕಿ ಹೊಟ್ಟೆಯ ಕೆಳಭಾಗದಲ್ಲಿ ಒತ್ತಿ ಹಿಡಿದುಕೊಂಡು ಮುಂಭಾಗಕ್ಕೆ ಬಗ್ಗಿ ದೀರ್ಘವಾದ ಉಸಿರಾಟದೊಂದಿಗೆ ಯೋಗ ಮಾಡುವುದರಿಂದ ಹೊಟ್ಟೆಯ ಬೊಜ್ಜು ಕಡಿಮೆಯಾಗಲು ಸಹಕಾರಿಯಾಗಲಿದೆ. ಶ್ವಾಸಕೋಸದ ಕಾರ್ಯವನ್ನು ಸುಧಾರಿಸಲು ಆದಿ ಮುದ್ರೆಯು ಪ್ರಯೋಜನಕಾರಿಯಾಗಿದೆ. ಅಧಿಕ ರಕ್ತದೊತ್ತಡ ನಿಯಂತ್ರಣ ಮಾಡುವುದಲ್ಲದೆ, ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ಹತ್ತೋಟಿಯಲ್ಲಿಡಲು ಆದಿ ಮುದ್ರೆಯನ್ನು ಸಮರ್ಥವಾಗಿ ಬಳಸಬಹುದು. ಮನಃಶಾಂತಿಗಾಗಿ ಕಣ್ಣುಗಳ ಮೇಲಿನ ಒತ್ತಡವನ್ನು ಕಡಿಮೆ ಮಾಡಲು, ಸಕಾರಾತ್ಮಕ ಫಲಿತಾಂಶಗಳನ್ನು ಪಡೆಯಲು ಆದಿ ಮುದ್ರೆಯನ್ನು ಮಾಡಬಹುದು. ವಿದ್ಯಾರ್ಥಿಗಳು ತಮ್ಮ ಏಕಾಗ್ರತೆ ಮತ್ತು ಅರಿವಿನ ಸಾಮರ್ಥ್ಯಗಳನ್ನು ಹೆಚ್ಚಿಸಲು ಆದಿಮುದ್ರೆಯನ್ನು ಮಾಡಬಹುದಾಗಿದೆ.

ಶೇ.27.5ರಷ್ಟು ರಾಜ್ಯ ಸರ್ಕಾರಿ ನೌಕರರ ವೇತನ ಹೆಚ್ಚಳಕ್ಕೆ ಶಿಫಾರಸು

ದೇಹದಲ್ಲಿ ಶುದ್ಧಗಾಳಿಯ ಹರಿವನ್ನು ಹೆಚ್ಚಿಸುವುದಲ್ಲದೆ, ತೂಕ ನಿರ್ವಹಣೆಗೂ ಪರಿಣಾಮಕಾರಿಯಾಗಿದೆ. ಗೊರಕೆಯನ್ನು ಕಡಿಮೆ ಮಾಡಲು ಸಹಾಯ ಮಾಡುವುದು. ಗಂಟಲು ಹಾಗೂ ಶಿರಭಾಗಕ್ಕೆ ಹೆಚ್ಚಿನ ಮಟ್ಟದಲ್ಲಿ ಆಮ್ಲಜನಕ ಸರಬರಾಜು ಮಾಡುವುದು. ಈ ಮೂಲಕ ಮೆದುಳನ್ನು ಉತ್ತೇಜಿಸಿ ಸಹಸ್ರಾರ ಚಕ್ರವನ್ನು ಸಕ್ರಿಯಗೊಳಿಸುತ್ತದೆ. ಆದಿಮುದ್ರೆಯು ನರಮಂಡಲದ ಮೇಲೆ ಹಿತವಾದ ಪರಿಣಾಮವನ್ನು ಬೀರುತ್ತದೆ.

ಹಾಗೆಂದ ತಕ್ಷಣ ಯಾವುದೇ ಔಷಧಿಗೆ ಪರ್ಯಾಯವಾಗಿ ಮುದ್ರೆಗಳನ್ನು ಬಳಸಬಾರದು. ಔಷಧಿಯೊಂದಿಗೆ ಮುದ್ರೆಗಳನ್ನು ನಿತ್ಯ ಮಾಡುವುದರಿಂದ ಉತ್ತಮ ಫಲಿತಾಂಶ ಬೇಗ ಪಡೆಯಬಹುದು.

ಆದಿ ಮುದ್ರೆ ಇತಿ-ಮಿತಿ

ಹೃದ್ರೋಗದ ಸಮಸ್ಯೆಯಿಂದ ಬಳಲುವವರು ಆದಿ ಮುದ್ರೆ ಮಾಡುವುದು ಒಳ್ಳೆಯದಲ್ಲ. ಗರ್ಭಿಣಿ, ಬಾಣಂತಿಯರು ಈ ಮುದ್ರೆಯಿಂದ ದೂರವಿರಬೇಕು. ಚಿಕ್ಕ ಮಕ್ಕಳು ಹಾಗೂ ವಯಸ್ಸಾದ ಹಿರಿಯರು  ಮುನ್ನೆಚ್ಚರಿಕೆ ವಹಿಸಿ ಮುದ್ರೆ ಮಾಡುವುದು ಸೂಕ್ತ.

Share this:

  • Share on WhatsApp (Opens in new window) WhatsApp
  • Post
  • Tweet
  • Print (Opens in new window) Print
  • Email a link to a friend (Opens in new window) Email
Adi mudrablood pressureBlood sugareffective controllinghelpfulstress relief
3 FacebookTwitterPinterestEmail
admin

previous post
ವಾರ ಭವಿಷ್ಯ : ಭಾನುವಾರ, 17ಮಾರ್ಚ್ 2024
next post
ರಾಜಕೀಯ ಪಕ್ಷಗಳ ಪ್ರತಿನಿಧಿಗಳೊಂದಿಗೆ ಸಭೆ

You may also like

1.32 ಲಕ್ಷ ಕೋಟಿ ರೂ. ಸಾಲದ ಸಿದ್ದರಾಮಯ್ಯ ಬಜೆಟ್

March 6, 2026

ಯಡಿಯೂರೋತ್ಸವಕ್ಕೆ 114 ರ ಟಾರ್ಗೆಟ್

March 2, 2026

ಜಾತಿ ವ್ಯವಸ್ಥೆಗೆ ಸಿದ್ದರಾಮಯ್ಯ ತೀವ್ರ ಕಳವಳ

February 28, 2026

ಅಮೆರಿಕದ ಫಿಲಡೆಲ್ಫಿಯಾದಲ್ಲಿ ’ಅಕ್ಕ’ ಬೆಳ್ಳಿ ಹಬ್ಬ

February 27, 2026

ಭ್ರಷ್ಟಾಚಾರ ಪಠ್ಯ ನಿಷೇಧ: ಸುಪ್ರೀಂಕೋರ್ಟ್

February 26, 2026

ಮನರೇಗಾ ಮರುಸ್ಥಾಪನೆ ಹೋರಾಟ ಬೆಂಬಲಿಸಿ

February 23, 2026

ಉಚಿತ ಗ್ಯಾರಂಟಿಗಳು ದೇಶದ ಅಭಿವೃದ್ಧಿಗೆ ಮಾರಕ

February 19, 2026

ಗ್ಯಾರಂಟಿ ಉಳಿಕೆ ಹಣ ಎಂಎಸ್‌ಐಎಲ್ ಚಿಟ್ಸ್‌ನಲ್ಲಿ ಹೂಡಿ

February 7, 2026

ವಿಬಿ-ಜಿ-ರಾಮ್-ಜಿ ಕಾಯ್ದೆ ಕುತಂತ್ರ ವಿರೋಧಿಸಿ

February 6, 2026

ಡ್ರಗ್ಸ್ ಮುಕ್ತ ಕರ್ನಾಟಕ ನಿರ್ಮಾಣ ಸರ್ಕಾರದ ಗುರಿ

February 5, 2026

Social Networks

Facebook Twitter Instagram Linkedin Youtube Email Rss

KMS Analysis

  • ಯಡಿಯೂರೋತ್ಸವಕ್ಕೆ 114 ರ ಟಾರ್ಗೆಟ್

    March 2, 2026
  • ಬಿಹಾರ ಚುನಾವಣಾ ಫಲಿತಾಂಶ ಬಳಿಕ ಸಿದ್ದರಾಮಯ್ಯ ದೆಹಲಿಗೆ

    October 25, 2025
  • ಜಾತಿಗಣತಿ ವೇಳೆ ಒಕ್ಕಲಿಗ ಎಂದೇ ಬರೆಸಲು ಶ್ರೀಗಳ ಕರೆ

    October 6, 2025
  • ಡಿ.ಕೆ. ಸುರೇಶ್ ಗೆ ಜಾರಿ ನಿರ್ದೇಶನಾಲಯದ ನೋಟಿಸ್

    June 17, 2025
  • ಕರ್ನಾಟಕದಲ್ಲಿ ಹೊಸದಾಗಿ ಜಾತಿಗಣತಿ

    June 12, 2025

Categories

  • Special Story (404)
  • ಅಂಕಣ (108)
  • ಉದ್ಯೋಗ (315)
  • ದಿನ ಭವಿಷ್ಯ (110)
  • ರಾಜಕೀಯ (1,902)
  • ರಾಜ್ಯ (2,213)
  • ರಾಷ್ಟ್ರ (2,183)
  • ವಿಶ್ಲೇಷಣೆ (189)
  • ಶಿಕ್ಷಣ (381)
  • ಸಂದರ್ಶನ (11)

About Us

ನೈಜ ಹಾಗೂ ವಿಶ್ವಾಸಾರ್ಹತೆಯ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರವಾದ ಸುದ್ದಿ, ಅಭಿಪ್ರಾಯಗಳ ಪ್ರಕಟಣೆಯ ವೆಬ್ ತಾಣ. ಕರ್ನಾಟಕ ರಾಜ್ಯದ ಪ್ರಚಲಿತ ವಿದ್ಯಮಾನಗಳು, ರಾಜಕೀಯ, ನಾಡು, ನುಡಿ, ಜಲ ವಿಚಾರಗಳಲ್ಲದೆ, ದೈನಂದಿನ ಆಗು-ಹೋಗುಗಳು, ವಿವಿಧ ಜಿಲ್ಲೆಗಳ ಪ್ರಮುಖ ವಿಚಾರಗಳ ಭಿತ್ತರಕ್ಕೆ ಹೆಚ್ಚು ಒತ್ತು ನೀಡುವುದು. ನಮ್ಮ ಕುರಿತು ಹೆಚ್ಚಿನ ವಿವರ ಪಡೆಯಲು ಇಲ್ಲಿ ಇಲ್ಲಿಕ್ಲಿಕ್‌ ಮಾಡಿ

Facebook Twitter Linkedin Youtube Email Vimeo Rss

Politics

  • 1.32 ಲಕ್ಷ ಕೋಟಿ ರೂ. ಸಾಲದ ಸಿದ್ದರಾಮಯ್ಯ ಬಜೆಟ್

    March 6, 2026
  • ಬರ ಎದುರಾಗಲಿದೆ: ಕರ್ನಾಟಕಕ್ಕೆ ಕೇಂದ್ರದ ಎಚ್ಚರಿಕೆ

    March 4, 2026
  • ಯುದ್ಧ ಪ್ರದೇಶದಲ್ಲಿ ಸಿಲುಕಿದ ಸಚಿವ, ಶಾಸಕರು

    March 2, 2026

KMS Special

  • 1.32 ಲಕ್ಷ ಕೋಟಿ ರೂ. ಸಾಲದ ಸಿದ್ದರಾಮಯ್ಯ ಬಜೆಟ್

    March 6, 2026
  • ಬರ ಎದುರಾಗಲಿದೆ: ಕರ್ನಾಟಕಕ್ಕೆ ಕೇಂದ್ರದ ಎಚ್ಚರಿಕೆ

    March 4, 2026
  • ಯುದ್ಧ ಪ್ರದೇಶದಲ್ಲಿ ಸಿಲುಕಿದ ಸಚಿವ, ಶಾಸಕರು

    March 2, 2026
  • Facebook
  • Twitter
  • Linkedin
  • Youtube
  • Email
  • Telegram

@2020 - All Right Reserved. Designed and Developed by Karnatakabest.com

KMS
  • Home
  • Special Story
  • ರಾಜ್ಯ
  • ರಾಷ್ಟ್ರ
  • ರಾಜಕೀಯ
  • ವಿಶ್ಲೇಷಣೆ
  • ಅಂಕಣ
  • ಶಿಕ್ಷಣ
  • ಉದ್ಯೋಗ
  • ಸಂದರ್ಶನ

Read alsox

1.32 ಲಕ್ಷ ಕೋಟಿ ರೂ. ಸಾಲದ ಸಿದ್ದರಾಮಯ್ಯ...

March 6, 2026
Sign In

Keep me signed in until I sign out

Forgot your password?

Password Recovery

A new password will be emailed to you.

Have received a new password? Login here

ಕೆಎಂಎಸ್‌ ಕನ್ನಡ ವಾಟ್ಸಪ್‌ ಗ್ರೂಪ್‌ಗೆ ಸೇರಿ