Thursday, July 23, 2026
  • ನಮ್ಮ ಬಗ್ಗೆ
  • ಸಂಪರ್ಕಿಸಿ
  • Privacy Policy
  • Disclaimer
  • Login/Register
KMS
  • Home
  • Special Story
  • ರಾಜ್ಯ
  • ರಾಷ್ಟ್ರ
  • ರಾಜಕೀಯ
  • ವಿಶ್ಲೇಷಣೆ
  • ಅಂಕಣ
  • ಶಿಕ್ಷಣ
  • ಉದ್ಯೋಗ
  • ಸಂದರ್ಶನ
Thursday, July 23, 2026
  • ನಮ್ಮ ಬಗ್ಗೆ
  • ಸಂಪರ್ಕಿಸಿ
  • Privacy Policy
  • Disclaimer
  • Login/Register
KMS
Banner
  • Home
  • Special Story
  • ರಾಜ್ಯ
  • ರಾಷ್ಟ್ರ
  • ರಾಜಕೀಯ
  • ವಿಶ್ಲೇಷಣೆ
  • ಅಂಕಣ
  • ಶಿಕ್ಷಣ
  • ಉದ್ಯೋಗ
  • ಸಂದರ್ಶನ
KMS
KMS
  • Home
  • Special Story
  • ರಾಜ್ಯ
  • ರಾಷ್ಟ್ರ
  • ರಾಜಕೀಯ
  • ವಿಶ್ಲೇಷಣೆ
  • ಅಂಕಣ
  • ಶಿಕ್ಷಣ
  • ಉದ್ಯೋಗ
  • ಸಂದರ್ಶನ

@2022 - All Right Reserved. Designed and Developed by PenciDesign

ಶಿಕ್ಷಣ

ಗ್ಯಾಸ್ಟ್ರಬಲ್ ಗೆ ಜೀರಿಗೆ ಕಾಳು ಪರಿಹಾರ

by KM Shivaraju December 17, 2023
written by KM Shivaraju December 17, 2023 2 comments 2 minutes read
3FacebookTwitterPinterestEmail
456
ಜೀರ್ಣ ಕ್ರಿಯೆಗೆ ಸಹಕಾರಿ

ಬೆಂಗಳೂರು: ಬದಲಾದ ಜೀವನ ಶೈಲಿ, ಆಹಾರ ಪದ್ಧತಿ, ಕಡಿಮೆಯಾದ ದೈಹಿಕ ಶ್ರಮ- ಹೀಗೆ ನಾನಾ ಕಾರಣಗಳಿಂದ ಪ್ರತಿಯೊಬ್ಬರು ಒಂದಲ್ಲ ಒಂದು ಆರೋಗ್ಯ ಸಮಸ್ಯೆಗೆ ಒಳಗಾಗಿರುವುದು ಮಾಮೂಲಾಗಿದೆ. ಆರೋಗ್ಯದ ಬಗ್ಗೆ ಕಾಳಜಿ ವಹಿಸುವವರು ಮೊದಲ ಗ್ಯಾಸ್ಟ್ರಬಲ್ ಸಮಸ್ಯೆ ಬಗ್ಗೆ ನಿಗಾವಹಿಸಬೇಕು.

ಇದು ಹಲವು ತೊಂದರೆಗಳಿಗೆ ದಾರಿ ಮಾಡಿಕೊಡುತ್ತದೆ. ಕೇವಲ ಗ್ಯಾಸ್ಟ್ರಬಲ್ ಅಲ್ಲವೇ, ಏನೂ ಆಗುವುದಿಲ್ಲ ಎಂದು ನಿರ್ಲಕ್ಷಿಸಬಾರದು. ಮಧುಮೇಹ, ಅಧಿಕ ರಕ್ತದೊತ್ತಡದಂತೆ ಗ್ಯಾಸ್ಟ್ರಬಲ್ ಕೂಡ ಸಾಮಾನ್ಯವಾಗಿದೆ. ದೀರ್ಘಾವಧಿಯವರೆಗೂ ಇರುತ್ತದೆ. ಬಹುತೇಕರು ಇದರ ಸಮಸ್ಯೆಗೆ ಸಿಲುಕಿದ್ದಾರೆ; ಈ ಸಮಸ್ಯೆಗೆ ಒಳಗಾಗದವರು ಇಲ್ಲವೆಂದರೆ ತಪ್ಪಾಗಲಾರದು.

ಗ್ಯಾಸ್ಟ್ರಬಲ್ ಸಮಸ್ಯೆ ಹೆಚ್ಚಾದವರು ನಿಯಮಿತವಾಗಿ ಔಷಧವನ್ನು ಸೇವಿಸುವುದು ಕಾಮನ್ ಆಗಿದೆ. ಆದರೂ ಪೂರ್ಣ ಪರಿಹಾರ ಮಾತ್ರ ವಿರಳ. ಗ್ಯಾಸ್ಟ್ರಬಲ್ ನಿಂದ ಹೊಟ್ಟೆ ನೋವು, ಹೊಟ್ಟೆ ಉರಿ, ಹೊಟ್ಟೆ ಕಚ್ಚು ಹಿಡಿಯುವುದು, ಜಠರದಲ್ಲಿ ಹುಣ್ಣು(ಅಲ್ಸರ್), ಗಂಟಲು ನೋವು, ಹುಳಿ ತೇಗು, ಕೆಲವರಿಗೆ ವಾಕರಿಕೆ ಹೀಗೆ ಹಲವು ಸಮಸ್ಯೆಗಳು ಉಂಟಾಗುತ್ತವೆ. ನಿಯಂತ್ರಣ ಮಾಡದಿದ್ದರೆ ಅಜೀರ್ಣತೆಗೂ ಕಾರಣವಾಗಬಹುದು. ಹೃದಯ ಸಂಬಂಧಿ ರೋಗಕ್ಕೆ ದಾರಿ ಮಾಡಿಕೊಡಬಹುದು. ಹೀಗಾಗಿ ಎಚ್ಚರ ವಹಿಸುವುದು ಅಗತ್ಯ.

ಸದಾ ಮನೆ ಊಟ ಸೇವಿಸುವವರು, ಅದರಲ್ಲೂ ಸಕಾಲಕ್ಕೆ ಊಟ, ತಿಂಡಿ ತಿನ್ನುವವರಿಗೆ ಇದರ ಸಮಸ್ಯೆ ಕಡಿಮೆ. ಆದರೆ, ದುಡಿಯುವ ವರ್ಗ, ಪದೇ ಪದೇ ಪ್ರಯಾಣ ಮಾಡುವವರು ಅಕಾಲ ಭೋಜನ ಮಾಡುವುದು ಸಹಜ. ಅಲ್ಲದೆ, ಹೊರಗಡೆ ಊಟ, ತಿಂಡಿ ಮಾಡುವ ಅನಿವಾರ್ಯತೆ ಉಂಟಾಗುತ್ತದೆ. ಅದರಲ್ಲೂ ಅವಿವಾಹಿತರು ಬೇಗ ಗ್ಯಾಸ್ಟ್ರಬಲ್ ಸಮಸ್ಯೆಗೆ ಒಳಗಾಗುತ್ತಾರೆ.

ಹೊಟ್ಟೆ ಸಮಸ್ಯೆಗೆ ಉತ್ತಮ ಉಪಶಮನ, ಬಹು ಉಪಯೋಗಿ

ಊಟ, ತಿಂಡಿಗೆ ಸದಾ ಹೋಟೆಲ್ ಗಳನ್ನೇ ಆಶ್ರಯಿಸುವ, ಔತಣ ಕೂಟಗಳು, ಎಣ್ಣೆಯಲ್ಲಿ ಕರಿದ ಪದಾರ್ಥಗಳು, ಅಡುಗೆ ಸೋಡಾ ಬಳಿಸಿದ ಆಹಾರ, ಸದಾ ಮಸಾಲೆ ಮಿಶ್ರಿತ ಆಹಾರ ಸೇವನೆ ಮಾಡುವುದು. ಹಸಿ ಮೆಣಸಿನಕಾಯಿ ಹೆಚ್ಚು ಬಳಸುವುದು. ದ್ವಿದಳ ಧಾನ್ಯಗಳು ಹೀಗೆ ಹತ್ತಾರು ರೀತಿಯಲ್ಲಿ ಕೂಡ ಗ್ಯಾಸ್ಟ್ರಬಲ್ ಗೆ ಕಾರಣವಾಗುತ್ತವೆ. ಆಗಂತ ಪೂರ್ಣ ನಿಲ್ಲಿಸಬೇಕಿಲ್ಲ. ಮಿತಿ ಮೀರದಿದ್ದರೆ ಸಾಕು.

ಸಿದ್ದು ಸಂಪುಟ ದೆಹಲಿಯತ್ತ

ಎಲ್ಲರಿಗೂ ಅಚ್ಚುಮೆಚ್ಚು ಹಾಗೂ ಎಷ್ಟು ತಿಂದರೂ ಬೇಡವೆನ್ನುವುದು ಬಡವರ ಬಾದಾಮಿ ಎಂದೇ ಕರೆಯುವ ಶೇಂಗಾ ಅಥವಾ ಕಡಲೆಕಾಯಿ ಬೀಜ. ಇದು ಅತಿಯಾದರೆ ಗ್ಯಾಸ್ಟ್ರಬಲ್ ಗೆ ಎಡೆ ಮಾಡಿಕೊಡುತ್ತದೆ. ಮಿತಿಯಾಗಿ ಯಾವುದನ್ನೂ ಬೇಕಾದರೂ ಬಳಸಬಹುದು. ಕೆಲವರಿಗೆ ಒಂದೊಂದು ಆಹಾರ ಅಲರ್ಜಿಯಾಗುತ್ತದೆ.  ಅದನ್ನು ಮಿತಿಯಾಗಿ ಬಳಸಿ ಒಗ್ಗಿಸಿಕೊಳ್ಳಬೇಕು. ಸಂಪೂರ್ಣ ದೂರ ಸರಿಯುವುದು ಪರಿಹಾರವಲ್ಲ. ಏಕೆಂದರೆ ಅದೇ ಅನಿವಾರ್ಯವಾದಾಗ ಪರಿತಪಸಬೇಕಾಗಬಹುದು.

ಅಂದರೆ, ಕಡಲೆ ಕಾಯಿ ಅವರ ದೇಹ ಪ್ರಕೃತಿಗೆ ಒಗ್ಗುವುದಿಲ್ಲ.  ಅಂಥವರು ಅದನ್ನು ಬಳಸದಿರುವುದು ಸೂಕ್ತ. ಇಲ್ಲವೆ ಆಗೊಮ್ಮೆ ಈಗೊಮ್ಮೆ ಬಳಸುವುದ ಒಳ್ಳೆಯದು. ಯಾವುದು ಶರೀರಕ್ಕೆ ಒಗ್ಗುತ್ತದೆ ಅಥವಾ ಒಗ್ಗುವುದಿಲ್ಲ ಎಂಬುದನ್ನು ಸೇವಿಸುವ ಆಹಾರ ಅದರಿಂದ ದೇಹದಲ್ಲಾಗುವ ಬದಲಾವಣೆ ಗಮನಿಸಿ ತಿಳಿಯುವುದು ಅಗತ್ಯ.

ಬಿಜೆಪಿ ರಾಜಕೀಯ

ಮನೆಯ ಮದ್ದು ಜೀರಿಗೆ; ಸಮಸ್ಯೆಗಳಿಗೆ ರಾಮಬಾಣ

ನಾನಾ ರೀತಿಯಲ್ಲಿ ರೂಢಿಸಿಕೊಳ್ಳುವ ಹಲವು ರೀತಿಯ ತೊಂದರೆಗೆ ಕಾರಣವಾಗುವ ಗ್ಯಾಸ್ಟ್ರಬಲ್ ಸಮಸ್ಯೆಗೆ ಸರಳ ಮದ್ದು ಎಂದರೆ ಜೀರಿಗೆ! ಇದು ಬಹು ಉಪಯೋಗಿ ಕೂಡ. ನಮ್ಮಲ್ಲಿ ಬಹಳ ಹಿಂದಿನಿಂದಲೂ ಇದನ್ನು ಅಡುಗೆಯಲ್ಲಿ ಬಳಸುತ್ತಾರೆ. ಜೀರ್ಣಕ್ರಿಯೆಗೆ ಸಹಕಾರಿ ಎಂಬುದರಿಂದ. ಮಸಾಲೆ ಪದಾರ್ಥಗಳ ಜತೆ ಬೆರೆಸಿ ಅಡುಗೆ ಮಾಡುತ್ತಾರೆ. ಜೀರಿಗೆ ಅನ್ನ, ಜೀರಿಗೆ ಸಾಂಬಾರ್ ಈಗಲೂ ಬಹಳಷ್ಟು ಜನರ ಮನೆಗಳಲ್ಲಿ ಮಾಡಲಾಗುತ್ತದೆ. ಹೋಟೆಲ್ ಗಳಲ್ಲೂ ಲಭ್ಯವಿದೆ.

ಅದೇ ಕಾರಣಕ್ಕೆ ಬಹುತೇಕ ಹೋಟೆಲ್ ನಲ್ಲಿ ಬಿಲ್ ಜತೆ ಜೀರಿಗೆ ಕಾಳು, ಸೋಂಪು ಕಾಳು ಕೊಡುತ್ತಾರೆ. ಇತ್ತೀಚೆಗೆ ಸಿಹಿಮಿಶ್ರಿತವಾದ ಸೋಂಪು ಕಾಳು ಹೆಚ್ಚು ಬಳಕೆಯಲ್ಲಿವೆ. ತಾಜಾ ಜೀರಿಗೆ ಕಾಳು ಆರೋಗ್ಯ ವರ್ಧಕ  ಎಂದರೆ ಅಚ್ಚರಿ ಪಡಬೇಕಿಲ್ಲ.

ಗ್ಯಾಸ್ಟ್ರಬಲ್ ಸಮಸ್ಯೆಯಿಂದ ಬಳಲುವವರು ಊಟದ ನಂತರ ನಾಲ್ಕು ಕಾಳು ಜೀರಿಗೆ ಜಗಿದು ತಿಂದರೆ ಹತೋಟಿಗೆ ಬರುತ್ತದೆ. ಅಜೀರ್ಣ ಸಮಸ್ಯೆ ಇರುವವರು ಇದನ್ನು ಮಾಡಬಹುದು. ಅತಿಯಾದ ಸಮಸ್ಯೆ ಉಂಟಾದ ಸಂದರ್ಭದಲ್ಲಿ ಕುದಿಯುವ ನೀರಿಗೆ ಜೀರಿಗೆ ಹಾಕಿ ತಣ್ಣಗಾದ ಬಳಿಕ ನೀರು ಕುಡಿದರೆ ತಕ್ಷಣ ಉಪಶಮನವಾಗಲಿದೆ. ಈ ಪ್ರವೃತ್ತಿಯನ್ನು ರೂಢಿಸಿಕೊಂಡರೆ ಜೊತೆಗೆ ಸಾಕಷ್ಟು ನೀರು ಕುಡಿಯುತ್ತಿದ್ದರೆ ಗ್ಯಾಸ್ಟ್ರಬಲ್ ನಿಯಂತ್ರಣದಲ್ಲಿಟ್ಟುಕೊಳ್ಳಬಹುದು.

ಕೆಎಸ್‌ಆರ್‌ಟಿಸಿ ಕಾರ್ಗೋ ಸೇವೆ

ಮಾರುಕಟ್ಟೆಯಲ್ಲಿ ಜೀರಿಗೆಯ ಪಾನೀಯಗಳು ಕೂಡ ದೊರೆಯುತ್ತವೆ. ಬಿಸಿಲಿನಿಂದ ಬಳಲಿದವರು, ಅಜೀರ್ಣ ಸಮಸ್ಯೆಯಲ್ಲಿರುವವರು ಆಲೋಪತಿ ಔಷಧಿ ಬಳಕೆಗಿಂತ ಜೀರಿಗೆ ರಸ ಬಳಸುವುದು ಯೋಗ್ಯ ಎಂಬ ಅಭಿಪ್ರಾಯ ಹಲವರಲ್ಲಿದೆ. ಬಹಳಷ್ಟು ಜನರು ಪರಿಹಾರ ಕಂಡುಕೊಂಡಿದ್ದು, ಸ್ನೇಹಿತರು ಸಂಬಂಧಿಕರೊಂದಿಗೆ ಅಭಿಪ್ರಾಯ ಹಂಚಿಕೊಳ್ಳುವುದು ಉಂಟು. ಖರ್ಚು ಕಡಿಮೆ; ಪ್ರಯೋಜನ ಹೆಚ್ಚು. ಮನೆಯ ಮದ್ದು ಕೂಡ.

ಅನಾದಿ ಕಾಲದಿಂದಲೂ ಬಳಕೆ

ಜೀರಿಗೆ ಸಸ್ಯದ ವೈಜ್ಞಾನಿಕ ಹೆಸರು ಕಮಿನಮ್ ಚಿಮಿನಮ್ ಆಗಿದೆ. ಇದನ್ನು ಇ೦ಗ್ಲೀಷ್ ನಲ್ಲಿ ಕಮಿನ್ ಸೀಡ್, ಸಂಸ್ಕೃತದಲ್ಲಿ ಜೀಕರ, ಅಜಾಜೀ ಹಾಗೂ ಹಿಂದಿಯಲ್ಲಿ ಜೀರ, ಸಫೇದ್ ಜೀರಾ ಎಂದೆಲ್ಲಾ ಕರೆಯಲಾಗುವುದು.

ಕಾನೂನು-ಸುವ್ಯವಸ್ಥೆ ಹದಗೆಟ್ಟಿದೆ

ಮಸಾಲೆಗಳೊಂದಿಗೆ ಮನುಷ್ಯ ಬಳಸುತ್ತಾ ಬಂದಿರುವ ವಸ್ತುಗಳಲ್ಲಿ ಜೀರಿಗೆಯೂ ಒಂದು. ಹುರಿದ ಜೀರಿಗೆಯು ಜೀರ್ಣಶಕ್ತಿ ವೃದ್ಧಿಸುವುದಲ್ಲದೆ, ಹೊಟ್ಟೆಯ ಸಮಸ್ಯೆ ಪರಿಹರಿಸಲಿದೆ. ಅನಾದಿ ಕಾಲದಿಂದಲೂ ಮಾನವರ ಬಳಕೆಯಲಿದೆ.

ಭಾರತದಲ್ಲಿ ಮಾತ್ರವಲ್ಲದೆ, ವಿದೇಶಗಳಲ್ಲೂ ಇದರ ಉಪಯೋಗವಿದೆ. ಮದುವೆ ಸಂದರ್ಭದಲ್ಲಿ ಜೀರಿಗೆ ಬಳಸುವುದನ್ನು ಎಲ್ಲರೂ ಗಮನಿಸಿರುತ್ತಾರೆ. ಸುವಾಸನೆಯುವುಳ್ಳ ಜೀರಿಗೆ ಬಹು ಉಪಯೋಗಿ ಎಂದರೆ ತಪ್ಪಾಗಲಾರದು. ಇದಕ್ಕೂ ಸುದೀರ್ಘ ಇತಿಹಾಸವಿದೆ.ಇದು ಸಾಮಾಜಿಕ ಮಾಧ್ಯಮ ಹಾಗೂ ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿ ಆಧರಿಸಿದೆ.

ಬೆಳಗಾವಿಗೆ ಬಿಜೆಪಿ ಸತ್ಯಶೋಧನಾ ಸಮಿತಿ ಆಗಮನ

Share this:

  • Share on WhatsApp (Opens in new window) WhatsApp
  • Post
  • Tweet
  • Print (Opens in new window) Print
  • Email a link to a friend (Opens in new window) Email
Cumin seedgood reliefhelpful digestionmulti-purposeremedy gastricstomach problem
3 FacebookTwitterPinterestEmail
KM Shivaraju

previous post
ಸಿದ್ದು ಸಂಪುಟ ದೆಹಲಿಯತ್ತ
next post
ಕರಾರಸಾ ನಿಗಮದಲ್ಲಿ ತಾಂತ್ರಿಕ ಸಹಾಯಕರ ನೇಮಕಾತಿ

You may also like

ವರ್ಚಸ್ಸುಳ್ಳ ಪಕ್ಷನಿಷ್ಠ ಶಾಸಕರಿಗೆ ಮಂತ್ರಿ ಭಾಗ್ಯ

July 20, 2026

ಹೆಚ್ಚು ಆಸ್ತಿ ಗಳಿಕೆ: ಮಾಜಿ ಸಚಿವ ಜಮೀರ್‌ಗೆ ಸಂಕಷ್ಟ

July 11, 2026

ಸಿದ್ದರಾಮಯ್ಯ ಮೊಮ್ಮಗನಿಗೆ ರಾಜಕೀಯ ತಾಲೀಮು

July 6, 2026

ನ್ಯಾಯಾಂಗದಲ್ಲಿ ಇನ್ನಷ್ಟು ಸುಧಾರಣೆ ಅಗತ್ಯವಿದೆ

July 4, 2026

ಗೃಹಜ್ಯೋತಿ ಸೇರಿದಂತೆ 5 ಗ್ಯಾರಂಟಿಗಳಿಗೂ ಕಡಿವಾಣ

July 1, 2026

ಮುಖ್ಯಮಂತ್ರಿ ನಿವಾಸವಾಗಿ ಬದಲಾಗಲಿದೆ ಕುಮಾರಕೃಪಾ ಅತಿಥಿ ಗೃಹ

June 1, 2026

ಅಧಿಕಾರ ತ್ಯಾಗಕ್ಕೆ ಸಿದ್ದರಾಗಲು‌ ಸಿದ್ದರಾಮಯ್ಯ ಅವರಿಗೆ ಹೈಕಮಾಂಡ್ ಸೂಚನೆ

May 26, 2026

ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ: ಮೇ 3ರ ಪರೀಕ್ಷೆ ರದ್ದು

May 12, 2026

ಎಸ್‌ಎಸ್‌ಎಲ್‌ಸಿ ತೇರ್ಗಡೆಯಲ್ಲಿ ಐತಿಹಾಸಿಕ ದಾಖಲೆ

April 23, 2026

ಎಸ್‌ಎಸ್‌ಎಲ್‌ಸಿ ಅಂಕ ಪದ್ಧತಿ ಮುಂದುವರೆಸಿ

April 21, 2026

Social Networks

Facebook Twitter Instagram Linkedin Youtube Email Rss

KMS Analysis

  • ವಿದ್ಯುತ್ ಲೋಡ್ ಶೆಡ್ಡಿಂಗ್ ಇಲ್ಲ

    July 9, 2026
  • ಮನಸು ಬದಲಿಸಿದ ರಾಮಲಿಂಗಾರೆಡ್ಡಿ

    June 6, 2026
  • ಸರ್ವಧರ್ಮ ಗುರುಗಳ ಸಮ್ಮುಖದಲ್ಲಿ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ‌ ಸ್ವೀಕಾರ

    June 2, 2026
  • ಮುಖ್ಯಮಂತ್ರಿ ನಿವಾಸವಾಗಿ ಬದಲಾಗಲಿದೆ ಕುಮಾರಕೃಪಾ ಅತಿಥಿ ಗೃಹ

    June 1, 2026
  • ಮೇ 28 ರಂದು ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ

    May 27, 2026

Categories

  • Special Story (521)
  • ಅಂಕಣ (109)
  • ಉದ್ಯೋಗ (340)
  • ದಿನ ಭವಿಷ್ಯ (110)
  • ರಾಜಕೀಯ (2,015)
  • ರಾಜ್ಯ (2,329)
  • ರಾಷ್ಟ್ರ (2,294)
  • ವಿಶ್ಲೇಷಣೆ (198)
  • ಶಿಕ್ಷಣ (401)
  • ಸಂದರ್ಶನ (11)

About Us

ನೈಜ ಹಾಗೂ ವಿಶ್ವಾಸಾರ್ಹತೆಯ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರವಾದ ಸುದ್ದಿ, ಅಭಿಪ್ರಾಯಗಳ ಪ್ರಕಟಣೆಯ ವೆಬ್ ತಾಣ. ಕರ್ನಾಟಕ ರಾಜ್ಯದ ಪ್ರಚಲಿತ ವಿದ್ಯಮಾನಗಳು, ರಾಜಕೀಯ, ನಾಡು, ನುಡಿ, ಜಲ ವಿಚಾರಗಳಲ್ಲದೆ, ದೈನಂದಿನ ಆಗು-ಹೋಗುಗಳು, ವಿವಿಧ ಜಿಲ್ಲೆಗಳ ಪ್ರಮುಖ ವಿಚಾರಗಳ ಭಿತ್ತರಕ್ಕೆ ಹೆಚ್ಚು ಒತ್ತು ನೀಡುವುದು. ನಮ್ಮ ಕುರಿತು ಹೆಚ್ಚಿನ ವಿವರ ಪಡೆಯಲು ಇಲ್ಲಿ ಇಲ್ಲಿಕ್ಲಿಕ್‌ ಮಾಡಿ

Facebook Twitter Linkedin Youtube Email Vimeo Rss

Politics

  • ಡಿಕೆಶಿ ಸಂಪುಟ ವಿಸ್ತರಣೆಗೆ ನೀಟ್ ಹೋರಾಟ ಕಂಟಕ

    July 22, 2026
  • ನಾಳೆ ಮಧ್ಯಾನ್ಹ 2-20ಕ್ಕೆ ಡಿಕೆಶಿ ಸಂಪುಟ ವಿಸ್ತರಣೆ

    July 21, 2026
  • ವರ್ಚಸ್ಸುಳ್ಳ ಪಕ್ಷನಿಷ್ಠ ಶಾಸಕರಿಗೆ ಮಂತ್ರಿ ಭಾಗ್ಯ

    July 20, 2026

KMS Special

  • ಡಿಕೆಶಿ ಸಂಪುಟ ವಿಸ್ತರಣೆಗೆ ನೀಟ್ ಹೋರಾಟ ಕಂಟಕ

    July 22, 2026
  • ನಾಳೆ ಮಧ್ಯಾನ್ಹ 2-20ಕ್ಕೆ ಡಿಕೆಶಿ ಸಂಪುಟ ವಿಸ್ತರಣೆ

    July 21, 2026
  • ಬರಪೀಡಿತ ಘೋಷಣೆಗೆ ನಾಳೆ ತುರ್ತು ಸಂಪುಟ ಸಭೆ

    July 18, 2026
  • Facebook
  • Twitter
  • Linkedin
  • Youtube
  • Email
  • Telegram

@2020 - All Right Reserved. Designed and Developed by Karnatakabest.com

KMS
  • Home
  • Special Story
  • ರಾಜ್ಯ
  • ರಾಷ್ಟ್ರ
  • ರಾಜಕೀಯ
  • ವಿಶ್ಲೇಷಣೆ
  • ಅಂಕಣ
  • ಶಿಕ್ಷಣ
  • ಉದ್ಯೋಗ
  • ಸಂದರ್ಶನ

Read alsox

ವರ್ಚಸ್ಸುಳ್ಳ ಪಕ್ಷನಿಷ್ಠ ಶಾಸಕರಿಗೆ ಮಂತ್ರಿ ಭಾಗ್ಯ

July 20, 2026
Sign In

Keep me signed in until I sign out

Forgot your password?

Password Recovery

A new password will be emailed to you.

Have received a new password? Login here

ಕೆಎಂಎಸ್‌ ಕನ್ನಡ ವಾಟ್ಸಪ್‌ ಗ್ರೂಪ್‌ಗೆ ಸೇರಿ