Monday, June 8, 2026
  • ನಮ್ಮ ಬಗ್ಗೆ
  • ಸಂಪರ್ಕಿಸಿ
  • Privacy Policy
  • Disclaimer
  • Login/Register
KMS
  • Home
  • Special Story
  • ರಾಜ್ಯ
  • ರಾಷ್ಟ್ರ
  • ರಾಜಕೀಯ
  • ವಿಶ್ಲೇಷಣೆ
  • ಅಂಕಣ
  • ಶಿಕ್ಷಣ
  • ಉದ್ಯೋಗ
  • ಸಂದರ್ಶನ
Monday, June 8, 2026
  • ನಮ್ಮ ಬಗ್ಗೆ
  • ಸಂಪರ್ಕಿಸಿ
  • Privacy Policy
  • Disclaimer
  • Login/Register
KMS
Banner
  • Home
  • Special Story
  • ರಾಜ್ಯ
  • ರಾಷ್ಟ್ರ
  • ರಾಜಕೀಯ
  • ವಿಶ್ಲೇಷಣೆ
  • ಅಂಕಣ
  • ಶಿಕ್ಷಣ
  • ಉದ್ಯೋಗ
  • ಸಂದರ್ಶನ
KMS
KMS
  • Home
  • Special Story
  • ರಾಜ್ಯ
  • ರಾಷ್ಟ್ರ
  • ರಾಜಕೀಯ
  • ವಿಶ್ಲೇಷಣೆ
  • ಅಂಕಣ
  • ಶಿಕ್ಷಣ
  • ಉದ್ಯೋಗ
  • ಸಂದರ್ಶನ

@2022 - All Right Reserved. Designed and Developed by PenciDesign

ಅಂಕಣಶಿಕ್ಷಣಸಂದರ್ಶನ

ದಟ್ಟ ತಲೆ ಕೂದಲಿನ ಬೆಳವಣಿಗೆಗೆ ಪೃಥ್ವಿ ಮುದ್ರೆ

by admin May 5, 2024
written by admin May 5, 2024 0 comments 3 minutes read
0FacebookTwitterPinterestEmail
570

ಕೀಲು ನೋವು ನಿವಾರಣೆಗೆ ಸಹಕಾರಿ

ಯೋಗ ಮುದ್ರೆಗಳು ಜೀವನದ ಚೈತನ್ಯವನ್ನು ಹೆಚ್ಚಿಸುವಂಥವುಗಳಾಗಿವೆ. ಶ್ರೀಕೃಷ್ಣ ಪರಮಾತ್ಮನು ಬೆರಳ ತುದಿಯಲ್ಲೇ ಜಗತ್ತನ್ನೇ ಕುಣಿಸಿದನಂತೆ. ಶ್ರೀಕೃಷ್ಣನಿಗೆ ಗೊತ್ತಿತ್ತು, ಬಲ್ಲವನಿಗೆ ಎಲ್ಲವೂ ಬೆರಳ ತುದಿಯಲ್ಲೇ ಇತ್ತೆಂದು. ದೇಹದ ತುಂಬೆಲ್ಲಾ ಹರಡಿಕೊಂಡಿರುವ ನರಗಳು ಮನುಷ್ಯನ ಶಕ್ತಿ ಸಂಚಲನಕ್ಕೆ ಪ್ರೇರಕವಾದವುಗಳಾಗಿವೆ. ಮೆದುಳಿನಿಂದ ಹೊರಟ ನರಗಳು ಕಾಲಿನ ಹಾಗೂ ಕೈಯ ಬೆರಳ ತುದಿಗಳಲ್ಲಿ ಅಂತ್ಯಗೊಳ್ಳುತ್ತವೆ.

ಬೆರಳ ತುದಿಗಳನ್ನು ಸೂಕ್ಷ್ಮವಾಗಿ ಸ್ಪರ್ಶಿಸುವುದರಿಂದ ಯಾವ ನರ ಯಾವ ಕ್ರಿಯೆ ಮಂದವಾಗಿರುತ್ತದೆಯೋ ಅದನ್ನು ಪುನರ್ ಜೀವನಗೊಳಿಸಬಹುದು. ಹಾಗಾಗಿ ಎಲ್ಲವನ್ನು ಬಲ್ಲವನಿಗೆ ಬೆರಳ ತುದಿಯಲ್ಲಿ ತನ್ನ ಶಕ್ತಿಯನ್ನು ಕೇಂದ್ರೀಕರಿಸಿಕೊಂಡು; ಜಗತ್ತನ್ನು ಬೆರಳ ತುದಿಯಲ್ಲಿ ಆಡಿಸಬಲ್ಲವನಾಗಿರುತ್ತಾನೆ. ಶ್ರೀಕೃಷ್ಣನಂತೆ ಬೆರಳ ತುದಿಯಲ್ಲಿ ಜಗತ್ತನ್ನು ನಾವು ಆಡಿಸಬಲ್ಲವರಾಗಬೇಕಾದರೆ, ಮೊದಲು ನಮ್ಮನ್ನು ನಾವು ಅರಿಯಬೇಕು. ನಮ್ಮ ದೇಹ ಹಾಗೂ ಮನಸ್ಸಿನ ಆರೋಗ್ಯವನ್ನು ಸದೃಢವಾಗಿರಿಸಿಕೊಳ್ಳಬೇಕು. ಮನಸ್ಸಿನ ಯಾತನೆಗಳು ಹೆಚ್ಚಾದಂತೆ ದೇಹದಲ್ಲಿ ಗಂಟುಗಳು ಅಧಿಕವಾಗುತ್ತಾ ಹೋಗುತ್ತವೆ. ದೇಹದ ಗಂಟುಗಳಿಂದ ದೂರವಾಗಿ ಮಾನಸಿಕ ಸ್ವಾಸ್ಥ್ಯವನ್ನು ಉತ್ತಮವಾಗಿರಿಸಿಕೊಳ್ಳಲು ಯೋಗ ಮುದ್ರೆಗಳನ್ನು ಅಭ್ಯಾಸ ಮಾಡುವುದು ಉತ್ತಮವಾಗಿರುತ್ತದೆ.

ದೃಷ್ಟಿ ದೋಷ ತಡೆಗೆ ಪ್ರಾಣಮುದ್ರೆ

ಪೃಥ್ವಿ ಮುದ್ರೆಯು ಹಸ್ತ ಮುದ್ರೆಗಳಲ್ಲಿ ಒಂದಾಗಿದೆ. ಪೃಥ್ವಿ ಮುದ್ರೆಯನ್ನು ಭೂ ಮುದ್ರೆ ಎಂತಲೂ ಕರೆಯಲಾಗುತ್ತದೆ. ಇದು ಭೂಮಿಯ ಅಂಶವನ್ನು ಪ್ರತಿನಿಧಿಸುವುದು. ಮನುಷ್ಯನ ದೇಹದಲ್ಲಿ ಮೂಳೆ, ಉಗುರು, ಕೂದಲು, ಇವುಗಳನ್ನು ಪ್ರತಿನಿಧಿಸುತ್ತದೆ. ಹಾಗೆಯೇ ಇವುಗಳ ಆರೋಗ್ಯವನ್ನು ಸುಧಾರಿಸಲು ಪೃಥ್ವಿ ಮುದ್ರೆಯನ್ನು ಮಾಡಲಾಗುವುದು.

ಪೃಥ್ವಿ ಮುದ್ರೆಯನ್ನು ಮಾಡುವುದು ಹೇಗೆ?

ಮುದ್ರೆಗಳಲ್ಲೇ ಅತ್ಯಂತ ಸೌಮ್ಯಕಾರಿಯಾದ ಮುದ್ರೆಯೆಂದರೆ ಪೃಥ್ವಿ ಮುದ್ರೆ. ದೀರ್ಘಕಾಲದವರೆಗೆ ಉತ್ತಮ ಕೂದಲಿನ ಆರೋಗ್ಯವನ್ನು ಪಡೆಯಲು ಪೃಥ್ವಿ ಮುದ್ರೆಯನ್ನು ಅಭ್ಯಾಸ ಮಾಡಬಹುದು. ಈ ಮುದ್ರೆಯನ್ನು ನಿಮ್ಮ ಉಂಗುರದ ಬೆರಳನ್ನು ಹೆಬ್ಬೆಟ್ಟಿನೊಂದಿಗೆ ಒಟ್ಟುಗೂಡಿಸುವ ಮೂಲಕ ಮಾಡಬಹುದಾಗಿದೆ. ಉಂಗುರದ ಬೆರಳು ಭೂಮಿಯ ಸಂಕೇತವಾಗಿದ್ದು, ಹೆಬ್ಬೆರಳು ಬೆಂಕಿಯ ಸಂಕೇತವಾಗಿರುತ್ತದೆ. ಹಾಗಾಗಿ ಹೆಬ್ಬೆರಳ ತುದಿ ಉಂಗುರದ ಬೆರಳ ತುದಿಯನ್ನು ಸೌಮ್ಯವಾಗಿ ಸ್ಪರ್ಶಿಸುವ ಮೂಲಕ ಪೃಥ್ವಿ ಮುದ್ರೆಯನ್ನು ರಚಿಸಬಹುದಾಗಿದೆ.

ಸುಖಾಸನ, ಪದ್ಮಾಸನ, ವಜ್ರಾಸನ, ಇತರ ಯಾವುದೇ ಭಂಗಿಗಳಲ್ಲಿ ಕುಳಿತು ಈ ಮುದ್ರೆಯನ್ನು ಮಾಡಬಹುದು. ತಾಂಡಾಸನದ ಭಂಗಿಯಲ್ಲಿ ನಿಂತಿರುವಾಗಲೂ ಈ ಮುದ್ರೆಯನ್ನು ಅಭ್ಯಾಸ ಮಾಡಬಹುದು. ನಿಮ್ಮ ಎರಡೂ ಕೈಯ ಹಸ್ತಗಳನ್ನು ತೊಡೆಯ ಮೇಲೆ ಇರಿಸಿಕೊಳ್ಳಿ. ಅಂಗೈಗಳು ಆಕಾಶವನ್ನು ನೋಡುವಂತಿರಲಿ. ಮೇಲೆ ಹೇಳಿದ ರೀತಿ ಬೆರಳುಗಳನ್ನು ವೃತ್ತಾಕಾರವಾಗಿ ರಚಿಸಿಕೊಳ್ಳಿ. ಇತರ ಬೆರಳುಗಳು ನೇರವಾಗಿರಲಿ. ನಿಮ್ಮ ಕಣ್ಣುಗಳನ್ನು ಮುಚ್ಚಿ, ಉಸಿರಾಟದ ಮೇಲೆ ಏಕಾಗ್ರತೆ ಇರಲಿ. ಕುತ್ತಿಗೆ ಹಾಗೂ ಬೆನ್ನು ನೇರವಾಗಿರಲಿ. ಆರಂಭದಲ್ಲಿ ಪೃಥ್ವಿ ಮುದ್ರೆಯನ್ನು ನಾಲ್ಕರಿಂದ ಐದು ನಿಮಿಷಗಳ ಕಾಲ ದಿನಕ್ಕೆ ಎರಡರಿಂದ ಮೂರು ಬಾರಿ ಅಭ್ಯಾಸ ಮಾಡಬೇಕು. ಕ್ರಮೇಣ 30 ರಿಂದ 45 ನಿಮಿಷಗಳವರೆಗೆ ವಿಸ್ತರಿಸಿಕೊಳ್ಳಬಹುದಾಗಿದೆ.

ಈ ಮುದ್ರೆಯನ್ನು ಮಾಡುವಂತಹ ಸಂದರ್ಭದಲ್ಲಿ ಯಾವುದೇ ಕಾರಣಕ್ಕೂ ಉಂಗುರದ ಬೆರಳು ಹಾಗೂ ಹೆಬ್ಬೆಟ್ಟನ್ನು ಬಲವಾಗಿ ಒತ್ತದಿರಿ. ಸ್ವಚ್ಛವಾದ, ಚೆನ್ನಾಗಿ ಗಾಳಿ ಇರುವ ನಿಶ್ಶಬದ್ಧವಾದ ಕೊಠಡಿಯಲ್ಲಿ ಅಭ್ಯಾಸ ಮಾಡಿ. ಇತರ ಮುದ್ರೆಗಳಂತೆ ಅಭ್ಯಾಸ ಮಾಡಲು ಉತ್ತಮ ಸಮಯವೆಂದರೆ. ಮುಂಜಾನೆ ನಾಲ್ಕರಿಂದ ಆರು ಗಂಟೆಯ ಸಮಯವಾಗಿರುತ್ತದೆ.

ಪ್ರಯೋಜನಗಳು

ಕೂದಲು ಉದುರುವಿಕೆಯಿಂದ ಬಳಲುತ್ತಿರುವ ಜನರು ಈ ಮುದ್ರೆಯನ್ನು ಪ್ರತಿನಿತ್ಯ ಅಭ್ಯಾಸ ಮಾಡುವ ಮೂಲಕ ಉತ್ತಮ ಆರೋಗ್ಯವಂಥ ದಟ್ಟ ಕೂದಲನ್ನು ಪಡೆಯಲು ಸಾಧ್ಯವಾಗುತ್ತದೆ. ಪೌಷ್ಠಿಕತೆಯ ಕೊರತೆಯಿಂದ ಅಕಾಲಿಕವಾಗಿ ನೆರೆಯುತ್ತಿರುವ ಕೂದಲನ್ನು ಮತ್ತೆ ಕಪ್ಪಾಗಿಸಲು ಪೃಥ್ವಿ ಮುದ್ರೆಯು ಸಹಕಾರಿಯಾಗಿದೆ. ರಾಸಾಯನಿಕ ಆಧಾರಿತ ಚಿಕಿತ್ಸೆ, ಕೂದಲಿನ ಬಣ್ಣಗಳ ಅತಿಯಾದ ಬಳಕೆಯಿಂದಾಗಿ ದುರ್ಬಲ ಹಾಗೂ ಬಣ್ಣ ಬಣ್ಣದ ಕೂದಲನ್ನು ಹೊಂದಿರುವ ಜನರು ಈ ಮುದ್ರೆಯನ್ನು ನಿಯಮಿತವಾಗಿ ಅಭ್ಯಾಸ ಮಾಡುವುದರಿಂದ ಆರೋಗ್ಯವಂತ ಕೂದಲನ್ನು ಪಡೆಯಲು ಸಹಾಯಕವಾಗುತ್ತದೆ. ಕೀಲು ನೋವು ಸ್ನಾಯುಗಳ ಬಿಗಿತ, ದೇಹದಲ್ಲಿ ನಿಶ್ಶಕ್ತಿ ಇರುವವರು ಈ ಮುದ್ರೆಯನ್ನು ಅಭ್ಯಾಸ ಮಾಡುವುದರಿಂದ ಪ್ರಯೋಜನ ಪಡೆಯಲಿದ್ದಾರೆ.

ದೇಹದ ತೂಕದ ಸಮತೋಲನಕ್ಕೆ ಶೂನ್ಯ ಮುದ್ರೆ

ಸ್ನಾಯುಗಳ ಸೆಳೆತದಿಂದ ಅಸ್ವಸ್ಥರಾದವರ ನಡಿಗೆಯು ಸಮತೋಲನ ಅಥವಾ ಸ್ಥಿರತೆಯನ್ನು ಪಡೆಯಬಹುದು. ಅಧಿಕ ಒತ್ತಡ ಮತ್ತು ಆತಂಕದಿಂದ ಬಳಲುತ್ತಿರುವವರು ಪೃಥ್ವಿ ಮುದ್ರೆಯನ್ನು ಅಭ್ಯಾಸ ಮಾಡುವುದು ಸಹಕಾರಿಯಾಗಲಿದೆ. ಬಡಕಲು ದೇಹ ಹೊಂದಿರುವಂಥವರು ಪೃಥ್ವಿ ಮುದ್ರೆಯನ್ನು ಅಭ್ಯಾಸ ಮಾಡುವುದರಿಂದ ಹೊಟ್ಟೆಯ ಹಸಿವು ಹೆಚ್ಚಾಗಿ ಉತ್ತಮ ಆಹಾರ ಸೇವನೆ ಮಾಡುವಂತಾಗಿ ಸದೃಢ ಮೈಕಟ್ಟನ್ನು ಪಡೆಯಲಿದ್ದಾರೆ.

ಈ ಮುದ್ರೆಯು ರಕ್ತ ಪರಿಚಲನೆಯನ್ನು ಸುಧಾರಿಸುವುದರಿಂದ ಕೂದಲು ಉದುರುವಿಕೆಯನ್ನು ಕಡಿಮೆ ಮಾಡುತ್ತದೆ. ಹೊಸ ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುತ್ತದೆ. ಒಣ ಚರ್ಮದಿಂದ ಬಳಲುತಿರುವವರು, ಉಗುರುಗಳ ಸ್ವಾಸ್ಥ್ಯತೆಯನ್ನು ಕಳೆದುಕೊಂಡಿರುವವರು, ಉತ್ತಮ ಕಾಂತಿಯನ್ನು ಮರಳಿ ಪಡೆಯಲು ಈ ಮುದ್ರೆಯನ್ನು ಅಭ್ಯಾಸ ಮಾಡಬಹುದು. ಸೋಮಾರಿತನದಿಂದ ಬಳಲುತಿರುವವರು ಈ ಮುದ್ರೆಯನ್ನು ಅಭ್ಯಾಸ ಮಾಡುವುದರಿಂದ ಚೈತನ್ಯಶೀಲರಾಗಿ ವ್ಯಾಯಾಮದಲ್ಲಿ ಹೆಚ್ಚು ತೊಡಗಿಸಿಕೊಂಡು ದಡೂತಿ ದೇಹವನ್ನು ಕರಗಿಸಿ ಉತ್ತಮ ಮೈಕಟ್ಟನ್ನು ಹೊಂದಲು ಸಹಾಯಕವಾಗುತ್ತದೆ.

ಶ್ರೀಕೃಷ್ಣನಂತಾಗಲು ಶಂಖಮುದ್ರೆ

ಅತಿಯಾದ ದೇಹದ ಉಷ್ಣತೆಯಿಂದ ಬಳಲುವವರು, ಹುಣ್ಣು ಹಾಗೂ ಜ್ವರದಿಂದ ನರಳುತ್ತಿರುವವರು ಪೃಥ್ವಿ ಮುದ್ರೆಯಿಂದ ಪ್ರಯೋಜನ ಪಡೆಯಬಹುದು. ಪೃಥ್ವಿಯ ಅಂಶವು, ನೇರವಾಗಿ ಸ್ನಾಯು ಹಾಗೂ ಅಂಗಾಂಶಗಳಿಗೆ ಸಂಬಂಧವನ್ನು ಹೊಂದಿರುವುದರಿಂದ ಕೀಲು ನೋವು ಹಾಗೂ ಉರಿಯೂತದಂತಹ ಸಮಸ್ಯೆಗಳನ್ನು ಈ ಮುದ್ರೆಯು ಸುಧಾರಿಸಲಿದೆ. ಧ್ಯಾನದೊಂದಿಗೆ ಈ ಮುದ್ರೆಯನ್ನು ಅಭ್ಯಾಸ ಮಾಡುವುದರಿಂದ ಆತ್ಮವಿಶ್ವಾಸ ಭದ್ರತೆಯ ಭಾವನೆ ಮೂಡಲಿದೆ. ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚು ಮಾಡಲು ಈ ಮುದ್ರೆಯನ್ನು ಅಭ್ಯಾಸ ಮಾಡಿಸಬಹುದು. ನಿಮ್ಮಲ್ಲಿನ ವಿಪರೀತ ಕೋಪವನ್ನು ಕಡಿಮೆ ಮಾಡಲಿದೆ.

ಪೃಥ್ವಿ ಮುದ್ರೆಯ ಅಡ್ಡಪರಿಣಾಮಗಳು

ಯಾವುದೇ ವಿದ್ಯೆಯನ್ನು ಗುರುಗಳ ಮೂಲಕವೇ ಕಲಿತರೆ ಸಿದ್ಧಿ ಪಡೆಯಲು ಸಾಧ್ಯವಾಗುತ್ತದೆ. ಅನುಭವಿ ತರಬೇತುದಾರರಿಂದ ಈ ಮುದ್ರೆಯನ್ನು ಅಭ್ಯಾಸ ಮಾಡಿ. ಮುದ್ರೆಯನ್ನು ಮಾಡಲು ಮನಸ್ಸನ್ನು ಒತ್ತಾಯಿಸಿಕೊಳ್ಳಬೇಡಿ. ನಿಧಾನವಾಗಿ ಪ್ರಾರಂಭಿಸಿ ನಂತರ ಅಭ್ಯಾಸ ಮಾಡಿ. ಕೈ, ತೋಳು, ಕುತ್ತಿಗೆ ಭಾಗಗಳಲ್ಲಿ ಗಾಯಗಳಾಗಿದ್ದಾಗ, ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದಾಗ ಈ ಮುದ್ರೆ ಅಭ್ಯಾಸ ಮಾಡಬೇಡಿ. ಶೀತ ಸಂಬಂಧಿ ಕಾಯಿಲೆಗಳಿಂದ ಬಳಲುತ್ತಿರುವಾಗ ಈ ಮುದ್ರೆಯಿಂದ ದೂರವಿರಿ. ಗರ್ಭಿಣಿಯರು ವೈದ್ಯರ ಸಲಹೆಯ ನಂತರ ಮುದ್ರೆಯನ್ನು ಅಭ್ಯಾಸ ಮಾಡಿ.

ಒಟ್ಟಿನಲ್ಲಿ ಪೃಥ್ವಿ ಮುದ್ರೆಯನ್ನು ಅಭ್ಯಾಸ ಮಾಡುವುದರಿಂದ ದೇಹದಲ್ಲಿ ಕಡಿಮೆಯಾದ ಪೌಷ್ಠಿಕಾಂಶಗಳು ವಿಟಮಿನ್ ಗಳು, ಹೆಚ್ಚಾಗಲಿವೆ. ಆದರೆ, ಮುದ್ರೆಯನ್ನು ಅಭ್ಯಾಸ ಮಾಡುವಂಥವರು ಧೂಮಪಾನ, ಮದ್ಯಪಾನ ಹಾಗೂ ಇತರ ಮಾದಕ ವ್ಯಸನಗಳನ್ನು ತ್ಯಜಿಸುವುದು ಒಳ್ಳೆಯದು. ಪೌಷ್ಠಿಕ ಆಹಾರ ಸೇವನೆಯ ಜೊತೆಗೆ ಆರೋಗ್ಯಕರ ಅಭ್ಯಾಸವನ್ನು ರೂಢಿಸಿಕೊಳ್ಳವುದರಿಂದ ಉತ್ತಮ ಪ್ರಯೋಜನ ಪಡೆಯಬಹುದು.

Share this:

  • Share on WhatsApp (Opens in new window) WhatsApp
  • Post
  • Tweet
  • Print (Opens in new window) Print
  • Email a link to a friend (Opens in new window) Email
anxietybody temperaturefeverhair growthhelpfulhigh stressjoint painmuscle spasmsPrithvi mudrasufferingulcers
0 FacebookTwitterPinterestEmail
admin

previous post
ವಾರ ಭವಿಷ್ಯ : ಭಾನುವಾರ, 05 ಮೇ 2024
next post
ಸಿದ್ದು ಕಿವಿಗೆ ಬಿದ್ದ ರಹಸ್ಯವೇನು?

You may also like

ಮುಖ್ಯಮಂತ್ರಿ ನಿವಾಸವಾಗಿ ಬದಲಾಗಲಿದೆ ಕುಮಾರಕೃಪಾ ಅತಿಥಿ ಗೃಹ

June 1, 2026

ಅಧಿಕಾರ ತ್ಯಾಗಕ್ಕೆ ಸಿದ್ದರಾಗಲು‌ ಸಿದ್ದರಾಮಯ್ಯ ಅವರಿಗೆ ಹೈಕಮಾಂಡ್ ಸೂಚನೆ

May 26, 2026

ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ: ಮೇ 3ರ ಪರೀಕ್ಷೆ ರದ್ದು

May 12, 2026

ಎಸ್‌ಎಸ್‌ಎಲ್‌ಸಿ ತೇರ್ಗಡೆಯಲ್ಲಿ ಐತಿಹಾಸಿಕ ದಾಖಲೆ

April 23, 2026

ಎಸ್‌ಎಸ್‌ಎಲ್‌ಸಿ ಅಂಕ ಪದ್ಧತಿ ಮುಂದುವರೆಸಿ

April 21, 2026

ಬದಲಾಗದ ಮಹಿಳಾ ವಿರೋಧಿ ಕಾಂಗ್ರೆಸ್ ಮನಸ್ಥಿತಿ

April 18, 2026

ಕನ್ನಡಿಗರಿಗೆ ಕನ್ನಡದಲ್ಲೇ ರೈಲ್ವೆ ನೇಮಕಾತಿ ಪರೀಕ್ಷೆ

April 9, 2026

ಆನೆ, ಹುಲಿ, ಚಿರತೆ ಹಾವಳಿ ತಡೆಗೆ ಸಂತಾನಹರಣ ಚಿಕಿತ್ಸೆ

April 8, 2026

ಏಪ್ರಿಲ್ 7ಕ್ಕೆ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ

April 4, 2026

ಸೈಬರ್ ಅಪರಾಧ : ಕರ್ನಾಟಕದಲ್ಲಿ ರಾಷ್ಟ್ರೀಯ ಸರಾಸರಿಗಿಂತ ಹೆಚ್ಚು

April 2, 2026

Social Networks

Facebook Twitter Instagram Linkedin Youtube Email Rss

KMS Analysis

  • ಮನಸು ಬದಲಿಸಿದ ರಾಮಲಿಂಗಾರೆಡ್ಡಿ

    June 6, 2026
  • ಸರ್ವಧರ್ಮ ಗುರುಗಳ ಸಮ್ಮುಖದಲ್ಲಿ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ‌ ಸ್ವೀಕಾರ

    June 2, 2026
  • ಮುಖ್ಯಮಂತ್ರಿ ನಿವಾಸವಾಗಿ ಬದಲಾಗಲಿದೆ ಕುಮಾರಕೃಪಾ ಅತಿಥಿ ಗೃಹ

    June 1, 2026
  • ಮೇ 28 ರಂದು ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ

    May 27, 2026
  • ಅಧಿಕಾರ ತ್ಯಾಗಕ್ಕೆ ಸಿದ್ದರಾಗಲು‌ ಸಿದ್ದರಾಮಯ್ಯ ಅವರಿಗೆ ಹೈಕಮಾಂಡ್ ಸೂಚನೆ

    May 26, 2026

Categories

  • Special Story (483)
  • ಅಂಕಣ (109)
  • ಉದ್ಯೋಗ (332)
  • ದಿನ ಭವಿಷ್ಯ (110)
  • ರಾಜಕೀಯ (1,977)
  • ರಾಜ್ಯ (2,291)
  • ರಾಷ್ಟ್ರ (2,259)
  • ವಿಶ್ಲೇಷಣೆ (197)
  • ಶಿಕ್ಷಣ (396)
  • ಸಂದರ್ಶನ (11)

About Us

ನೈಜ ಹಾಗೂ ವಿಶ್ವಾಸಾರ್ಹತೆಯ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರವಾದ ಸುದ್ದಿ, ಅಭಿಪ್ರಾಯಗಳ ಪ್ರಕಟಣೆಯ ವೆಬ್ ತಾಣ. ಕರ್ನಾಟಕ ರಾಜ್ಯದ ಪ್ರಚಲಿತ ವಿದ್ಯಮಾನಗಳು, ರಾಜಕೀಯ, ನಾಡು, ನುಡಿ, ಜಲ ವಿಚಾರಗಳಲ್ಲದೆ, ದೈನಂದಿನ ಆಗು-ಹೋಗುಗಳು, ವಿವಿಧ ಜಿಲ್ಲೆಗಳ ಪ್ರಮುಖ ವಿಚಾರಗಳ ಭಿತ್ತರಕ್ಕೆ ಹೆಚ್ಚು ಒತ್ತು ನೀಡುವುದು. ನಮ್ಮ ಕುರಿತು ಹೆಚ್ಚಿನ ವಿವರ ಪಡೆಯಲು ಇಲ್ಲಿ ಇಲ್ಲಿಕ್ಲಿಕ್‌ ಮಾಡಿ

Facebook Twitter Linkedin Youtube Email Vimeo Rss

Politics

  • ಮನಸು ಬದಲಿಸಿದ ರಾಮಲಿಂಗಾರೆಡ್ಡಿ

    June 6, 2026
  • ರಾಮಲಿಂಗಾ ರೆಡ್ಡಿ ರಾಜೀನಾಮೆ ಅಂಗೀಕರಿಸುವುದಿಲ್ಲ

    June 6, 2026
  • ರಾಮಲಿಂಗಾ ರೆಡ್ಡಿ ರಾಜೀನಾಮೆ ಅಂಗೀಕಾರಕ್ಕೆ ಸೂಚನೆ

    June 5, 2026

KMS Special

  • ಮನಸು ಬದಲಿಸಿದ ರಾಮಲಿಂಗಾರೆಡ್ಡಿ

    June 6, 2026
  • ರಾಮಲಿಂಗಾ ರೆಡ್ಡಿ ರಾಜೀನಾಮೆ ಅಂಗೀಕರಿಸುವುದಿಲ್ಲ

    June 6, 2026
  • ರಾಮಲಿಂಗಾ ರೆಡ್ಡಿ ರಾಜೀನಾಮೆ ಅಂಗೀಕಾರಕ್ಕೆ ಸೂಚನೆ

    June 5, 2026
  • Facebook
  • Twitter
  • Linkedin
  • Youtube
  • Email
  • Telegram

@2020 - All Right Reserved. Designed and Developed by Karnatakabest.com

KMS
  • Home
  • Special Story
  • ರಾಜ್ಯ
  • ರಾಷ್ಟ್ರ
  • ರಾಜಕೀಯ
  • ವಿಶ್ಲೇಷಣೆ
  • ಅಂಕಣ
  • ಶಿಕ್ಷಣ
  • ಉದ್ಯೋಗ
  • ಸಂದರ್ಶನ

Read alsox

ಮುಖ್ಯಮಂತ್ರಿ ನಿವಾಸವಾಗಿ ಬದಲಾಗಲಿದೆ ಕುಮಾರಕೃಪಾ ಅತಿಥಿ ಗೃಹ

June 1, 2026
Sign In

Keep me signed in until I sign out

Forgot your password?

Password Recovery

A new password will be emailed to you.

Have received a new password? Login here

ಕೆಎಂಎಸ್‌ ಕನ್ನಡ ವಾಟ್ಸಪ್‌ ಗ್ರೂಪ್‌ಗೆ ಸೇರಿ